11:08 PM (IST) Oct 29

Karnataka Latest News Live 29 October 2025ಈ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ವಿದೇಶದಿಂದ 64 ಟನ್‌ ಚಿನ್ನ ವಾಪಾಸ್‌ ತಂದ ಆರ್‌ಬಿಐ!

RBI Repatriates 64 Tonnes of Gold in H1 FY ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಚಿನ್ನದ ನಿಕ್ಷೇಪಗಳ ದೊಡ್ಡ ಭಾಗವನ್ನು ವಿದೇಶದಿಂದ ಭಾರತಕ್ಕೆ ಮರಳಿ ತರುತ್ತಿದೆ. ಪ್ರಸ್ತುತ, ಶೇ. 65ಕ್ಕೂ ಹೆಚ್ಚು ಚಿನ್ನವನ್ನು ದೇಶೀಯವಾಗಿ ಸಂಗ್ರಹಿಸಲಾಗಿದೆ.

Read Full Story
10:29 PM (IST) Oct 29

Karnataka Latest News Live 29 October 2025ತಾವೇ ಕೊಟ್ಟ ಕೇಸ್ ರದ್ದುಕೋರಿ ಬುರುಡೆ ಗ್ಯಾಂಗ್ ಹೈಕೋರ್ಟ್‌ಗೆ ಅರ್ಜಿ, ಅರೆಸ್ಟ್ ತಪ್ಪಿಸಲು ಕೊನೆ ಪ್ರಯತ್ನ

ತಾವೇ ಕೊಟ್ಟ ಕೇಸ್ ರದ್ದುಕೋರಿ ಬುರುಡೆ ಗ್ಯಾಂಗ್ ಹೈಕೋರ್ಟ್‌ಗೆ ಅರ್ಜಿ, ಅರೆಸ್ಟ್ ತಪ್ಪಿಸಲು ಕೊನೆ ಪ್ರಯತ್ನ ನಡೆಸಿದೆ. ಈ ಮೂಲಕ ಧರ್ಮಸ್ಥಳ ವಿರುದ್ದ ಮಾಡಿದ ಷಡ್ಯಂತ್ರ ಬಯಲಾಗುತ್ತಿದ್ದಂತೆ ಬುರುಡೆ ಗ್ಯಾಂಗ್ ಇದೀಗ ಮೆಲ್ಲನೆ ಪ್ರಕರಣದಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ.

Read Full Story
09:37 PM (IST) Oct 29

Karnataka Latest News Live 29 October 2025Karna Serial - ನಿತ್ಯಾ ಮತ್ತು ಕರ್ಣ ಹ್ಯಾಪಿ ಹ್ಯಾಪಿಯಾಗೋ ನ್ಯೂಸ್ ನೀಡಿದ ಅಮ್ಮ ಮಾಲತಿ

ಜೀ ಕನ್ನಡದ ಕರ್ಣ ಸೀರಿಯಲ್‌ನಲ್ಲಿ, ತೇಜಸ್ ಅಪಹರಣದ ಹಿಂದೆ ತನ್ನ ಗಂಡ ರಮೇಶ್‌ನ ಕೈವಾಡವಿದೆ ಎಂಬ ಸತ್ಯ ಮಾಲತಿಗೆ ತಿಳಿಯುತ್ತದೆ. ಚಿಕ್ಕಮಗಳೂರಿನಲ್ಲಿ ತೇಜಸ್ ಇರುವ ಸುಳಿವನ್ನು ಮಾಲತಿ ಮಗ ಕರ್ಣನಿಗೆ ನೀಡಿದ್ದು, ಕರ್ಣ ಮತ್ತು ನಿತ್ಯಾ ಮುಂದಿನ ನಡೆ ಕುತೂಹಲ ಕೆರಳಿಸಿದೆ.
Read Full Story
08:38 PM (IST) Oct 29

Karnataka Latest News Live 29 October 2025ನ.28ಕ್ಕೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ, ಬೃಹತ್ ಗೀತೋತ್ಸವದಲ್ಲೂ ಭಾಗಿ

ನ.28ಕ್ಕೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ, ಬೃಹತ್ ಗೀತೋತ್ಸವದಲ್ಲೂ ಭಾಗಿ, ಶ್ರೀಕೃಷ್ಣನ ದರ್ಶನ ಪಡೆಯಲಿರುವ ಪ್ರಧಾನಿ ಮೋದಿ ಪ್ರಸಾದ ಸ್ವೀಕರಿಸಲಿದ್ದಾರೆ. ಗೀತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Read Full Story
08:38 PM (IST) Oct 29

Karnataka Latest News Live 29 October 2025ಪಾಸಿಂಗ್‌ ಮಾರ್ಕ್ಸ್‌ 33ಕ್ಕೆ ಇಳಿಕೆ, ಶಿಕ್ಷಣ ಸಚಿವರಿಗೆ ಕ್ಲಾಸ್‌ ತೆಗೆದುಕೊಂಡ ಸಭಾಪತಿ ಬಸವರಾಜ್‌ ಹೊರಟ್ಟಿ!

Basavaraj Horatti Slams Madhu Bangarappa Over Reducing Pass Marks to 33 ಪ್ರೌಢಶಾಲೆ ಮತ್ತು ಪಿಯು ವಿದ್ಯಾರ್ಥಿಗಳ ಪಾಸಿಂಗ್ ಮಾರ್ಕ್ಸ್ ಅನ್ನು 35 ರಿಂದ 33ಕ್ಕೆ ಇಳಿಸುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನಿರ್ಧಾರಕ್ಕೆ ಸಭಾಪತಿ ಬಸವರಾಜ್ ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Read Full Story
08:35 PM (IST) Oct 29

Karnataka Latest News Live 29 October 2025ದೀಪಿಕಾ ಪಡುಕೋಣೆ ಭಾರೀ ಟ್ರೋಲ್ ಆದ್ರು, ಬಿಗ್ ಸಿನಿಮಾ ಕೈತಪ್ಪಿ ಹೋಯ್ತು; ಆದ್ರೂ ಗ್ರೇಟ್ ಯಾಕೆ?

ದೀಪಿಕಾ ಪಡುಕೋಣೆ, ತೆರೆಯ ಮೇಲೆ ತಮ್ಮ ನಟನೆಯಿಂದ ಮಾತ್ರವಲ್ಲ, ತೆರೆಯ ಹಿಂದೆ ತಮ್ಮ ಮೌಲ್ಯಯುತ ನಿಲುವುಗಳಿಂದಲೂ ಗಮನ ಸೆಳೆಯುತ್ತಾರೆ. ಅವರು ಕೇವಲ ಸ್ಟಾರ್ ಆಗಿ ಉಳಿಯದೆ, ಬದಲಾವಣೆಗೆ ನಾಂದಿ ಹಾಡುವ ಪ್ರಭಾವಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಇದಕ್ಕೆ ನೀವೇನಂತೀರಾ?

Read Full Story
07:05 PM (IST) Oct 29

Karnataka Latest News Live 29 October 2025ಗೋವಾ ಭೀಕರ ಅಪಘಾತದಲ್ಲಿ ಕಾರವಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸಾವು, ಮತ್ತೊರ್ವ ಗಂಭೀರ

ಗೋವಾ ಭೀಕರ ಅಪಘಾತದಲ್ಲಿ ಕಾರವಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸಾವು, ಮತ್ತೊರ್ವ ಗಂಭೀರ, ಗೋವಾದ ಕಾನಕೋನದಿಂದ ಕಾರವಾರದತ್ತ ಬೈಕ್‌ನಲ್ಲಿ ಮರಳುತ್ತಿರುವ ವೇಳೆ ಎಮ್ಮೆ ಅಡ್ಡಬಂದು ಅಪಘಾತ ಸಂಭವಿಸಿದೆ. 

Read Full Story
06:23 PM (IST) Oct 29

Karnataka Latest News Live 29 October 2025ಕಾವ್ಯಾ, ಗಗನ, ಯಶು... ಯಾರು Bigg Boss ಗಿಲ್ಲಿ ಹೆಂಡ್ತಿಯಾಗ್ಬೇಕು ಕೇಳಿದಾಗ ಚಿಕ್ಕಪ್ಪ ಹೇಳಿದ್ದೇನು?

ಬಿಗ್​ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ನಡುವಿನ ಸ್ನೇಹ ಎಲ್ಲರ ಗಮನ ಸೆಳೆಯುತ್ತಿದೆ. ಕಾವ್ಯಾಗೆ ಸದಾ ಬೆಂಬಲವಾಗಿ ನಿಲ್ಲುವ ಗಿಲ್ಲಿಯನ್ನು ಸುದೀಪ್ ಕೂಡ ತಮಾಷೆ ಮಾಡುತ್ತಾರೆ. ಇದೀಗ, ಗಿಲ್ಲಿಯವರ ಚಿಕ್ಕಪ್ಪ, ತಮ್ಮ ಮನೆಗೆ ಸೊಸೆಯಾಗಿ ಕಾವ್ಯಾ ಬರಲಿ ಎಂದು ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ.
Read Full Story
06:08 PM (IST) Oct 29

Karnataka Latest News Live 29 October 2025(J)ಜೆಡಿಎಸ್, (C)ಕಾಂಗ್ರೆಸ್, (B)ಬಿಜೆಪಿಯಲ್ಲಿ ನೊಂದವರಿಗೆ ಹೊಸ ಪಕ್ಷ ಜೆಸಿಬಿ, ಯತ್ನಾಳ್ ಸೂಚನೆ

(J)ಜೆಡಿಎಸ್, (C)ಕಾಂಗ್ರೆಸ್, (B)ಬಿಜೆಪಿಯಲ್ಲಿ ನೊಂದವರಿಗೆ ಹೊಸ ಪಕ್ಷ ಜೆಸಿಬಿ, ಯತ್ನಾಳ್ ಸೂಚನೆ, ವಿಜಯೇಂದ್ರರನ್ನು ಅಧ್ಯಕ್ಷ ಮಾಡಿದರೆ ಯತ್ನಾಳ್ ಹೊಸ ಪಕ್ಷ ಅಧಿಕೃತವಾಗಿ ಘೋಷಣೆಯಾಗಲಿದೆ. ಹೊಸ ಪಕ್ಷ ಕುರಿತು ಯತ್ನಾಳ್ ಸೂಚನೆ ಸಂಚಲನ ಸೃಷ್ಟಿಸಿದೆ

Read Full Story
05:32 PM (IST) Oct 29

Karnataka Latest News Live 29 October 2025Amruthadhaare ವಠಾರದವರ ಕಣ್ಣಿಗೆ ಬಿತ್ತು ಗೌತಮ್​- ಭೂಮಿಕಾ ಕುಚುಕುಚು - ಶುರುವಾಯ್ತು ಬೆಟ್ಟಿಂಗ್​!

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾ ನಡುವಿನ ಸಂಬಂಧದ ಬಗ್ಗೆ ವಠಾರದ ಜನರಿಗೆ ಅನುಮಾನ ಶುರುವಾಗಿದೆ. ಇವರಿಬ್ಬರ ಬಗ್ಗೆಯೇ ಬೆಟ್ಟಿಂಗ್ ನಡೆಯುತ್ತಿರುವಾಗ, ಗೌತಮ್‌ಗೆ ಬಂದ ಕ್ಯಾಬ್ ಬುಕಿಂಗ್ ಭೂಮಿಕಾಳದ್ದೇ ಆಗಿದ್ದು, ಇದು ವಠಾರದವರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.
Read Full Story
05:05 PM (IST) Oct 29

Karnataka Latest News Live 29 October 2025Lakshmi Nivasa - ವಿಶ್ವನ ತಲೆಗೆ ಪಿಸ್ತೂಲ್​​ನಿಂದ ಗುರಿ ಇಟ್ಟ ಜಯಂತ್​- ಮುಂದಾಗಿದ್ದು ಯಾರೂ ಊಹಿಸದ ಟ್ವಿಸ್ಟ್​!

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ಜಾಹ್ನವಿ ಬದುಕಿರುವ ಸತ್ಯ ಸೈಕೋ ಜಯಂತ್‌ಗೆ ತಿಳಿದಿದೆ. ಶ್ರದ್ಧಾಂಜಲಿ ಸಭೆಯ ನೆಪದಲ್ಲಿ ವಿಶ್ವನನ್ನು ಕರೆದು, ಪಿಸ್ತೂಲ್ ತೋರಿಸಿ ಜಾಹ್ನವಿ ಎಲ್ಲಿದ್ದಾಳೆ ಎಂದು ಬೆದರಿಸುತ್ತಾನೆ. ವಿಶ್ವ ಆಕೆ ಎಲ್ಲಿದ್ದಾಳೆಂದು ಹೇಳದೆ, ಸಾಧ್ಯವಾದರೆ ಜಯಂತ್‌ಗೆ ಸವಾಲು ಹಾಕುತ್ತಾನೆ.

Read Full Story
04:57 PM (IST) Oct 29

Karnataka Latest News Live 29 October 2025'ಬೆಂಗಳೂರಿನ ಅರಾಜಕತೆಗೆ ಕೊನೆ ಎಂದು?' ಮಗಳ ಸಾವಿನಲ್ಲೂ ನಿಲ್ಲದ ಭ್ರಷ್ಟಾಚಾರಕ್ಕೆ ಬಿಪಿಸಿಎಲ್‌ ಮಾಜಿ ಸಿಎಫ್‌ಓ ಆಕ್ರೋಶ

Ex BPCL CFO K Shivakumar Exposes Systemic Corruption in Bengaluru After Daughter Tragic Death ಬಿಪಿಸಿಎಲ್‌ನ ಮಾಜಿ ಸಿಎಫ್‌ಒ ಕೆ. ಶಿವಕುಮಾರ್, ತಮ್ಮ ಮಗಳು ಅಕ್ಷಯಾ ಸಾವಿನ ನಂತರ ಬೆಂಗಳೂರಿನಲ್ಲಿ ಎದುರಿಸಿದ ಭ್ರಷ್ಟಾಚಾರದ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ. 

Read Full Story
03:48 PM (IST) Oct 29

Karnataka Latest News Live 29 October 2025'ಕನ್ನಡದ ರಿಯಲ್‌ ಹೀರೋ' Puneeth Rajkumar ನಟನೆಯ ಟಾಪ್‌ 10 ಸೂಪರ್‌ ಹಿಟ್‌ ಸಿನಿಮಾಗಳಿವು!

Actor Puneeth Rajkumar Movies: ಇಂದು ಪುನೀತ್‌ ರಾಜ್‌ಕುಮಾರ್‌ ಅವರು ನಿಧನರಾಗಿ ನಾಲ್ಕು ವರ್ಷಗಳು ಕಳೆದಿವೆ. ಹೃದಯಾಘಾತದಿಂದ ಅವರು ನಿಧನರಾದರು. ನಟನೆಯ ಹೊರತಾಗಿ ಪುನೀತ್‌ ಅವರ ಸಾಮಾಜಿಕ ಕೆಲಸಗಳು ಜನರ ಮನಸ್ಸಿನಲ್ಲಿ ಉಳಿದಿವೆ. ಇವರ ಸೂಪರ್‌ ಹಿಟ್‌ ಸಿನಿಮಾಗಳ ಲಿಸ್ಟ್‌ ಇಲ್ಲಿದೆ. 

Read Full Story
03:25 PM (IST) Oct 29

Karnataka Latest News Live 29 October 2025ಡಿಕೆಶಿ ಆಗಲ್ಲ, ಜಾರಕಿಹೊಳಿಗೆ ಸಿಗಲ್ಲ, ಬ್ಲ್ಯಾಕ್ ಹಾರ್ಸ್‌ಗೆ ಸಿಎಂ ಪಟ್ಟ, ಯತ್ನಾಳ್ ಸ್ಫೋಟಕ ಭವಿಷ್ಯ

ಡಿಕೆಶಿ ಆಗಲ್ಲ, ಜಾರಕಿಹೊಳಿಗೆ ಸಿಗಲ್ಲ, ಬ್ಲ್ಯಾಕ್ ಹಾರ್ಸ್‌ಗೆ ಸಿಎಂ ಪಟ್ಟ, ಯತ್ನಾಳ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.ಕಾಂಗ್ರೆಸ್ ಅಧಿಕಾರ ಬದಲಾವಣೆಯಲ್ಲಿ ಸಿದ್ದರಾಮಯ್ಯ ಕುರ್ಚಿ ಮೇಲೆ ಕಣ್ಣಿಟ್ಟಿರುವ, ರೇಸ್‌ನಲ್ಲಿರುವ ಯಾವ ನಾಯಕರು ಸಿಎಂ ಆಗಲ್ಲ ಎಂದಿದ್ದಾರೆ.

Read Full Story
03:15 PM (IST) Oct 29

Karnataka Latest News Live 29 October 2025BBK 12 - ರಕ್ಷಿತಾರನ್ನ ಮನೆ ಕೆಲಸದವ್ರು ಎಂದ್ಕೊಂಡ್ರು; ಹುಟ್ಟೋ ಚಾಳಿ ಘಟ್ಟ ಹತ್ತಿದ್ರೂ ಹೋಗಲ್ಲ ಅಶ್ವಿನಿ ಅವ್ರೇ!

Bigg Boss Kannada Season 12: ಬಿಗ್‌ ಬಾಸ್‌ ಮನೆಯಲ್ಲಿ ಈ ಹಿಂದೆ ರಕ್ಷಿತಾ ಮೇಲೆ ಅಶ್ವಿನಿ ವಾಗ್ದಾಳಿ ಮಾಡಿದ್ದರು. ಈಗ ಮತ್ತೆ ಅಶ್ವಿನಿ, ರಿಷಾ ಗೌಡ, ರಾಶಿಕಾ ಸೇರಿಕೊಂಡು ರಕ್ಷಿತಾ ಮೇಲೆ ಹರಿಹಾಯ್ದಿದ್ದಾರೆ. ಅಡುಗೆ ವಿಚಾರಕ್ಕೆ ಜಗಳ ಶುರುವಾಗಿದೆ. ಆ ವೇಳೆ ಅಶ್ವಿನಿ ಏನು ಹೇಳಿದ್ರು? 

Read Full Story
02:03 PM (IST) Oct 29

Karnataka Latest News Live 29 October 2025ಹಳ್ಳಿ ಶಾಲೆ, ಗಾಳಿಪಟ ಸ್ಪರ್ಧೆ, ಮಕ್ಕಳ ಕನಸು - ನ.14ರಂದು 'ಕೈಟ್‌ ಬ್ರದರ್ಸ್‌' ತೆರೆಗೆ

ಮಕ್ಕಳ ದಿನಾಚರಣೆಯ ಪ್ರಯುಕ್ತ ನವೆಂಬರ್‌ 14ರಂದು ಮಕ್ಕಳ ಜೊತೆಗೆ ಪೋಷಕರು ಕೂಡ ನೋಡುವಂತಹ ಸಿನಿಮಾವೊಂದು ಚಿತ್ರಮಂದಿರಗಳಿಗೆ ಬರುತ್ತಿದೆ. ಚಿತ್ರದ ಹೆಸರು ‘ಕೈಟ್‌ ಬ್ರದರ್ಸ್‌’. ವಿರೇನ್‌ ಸಾಗರ್‌ ಬಗಾಡೆ ನಿರ್ದೇಶನದ ಚಿತ್ರವಿದು.

Read Full Story
01:50 PM (IST) Oct 29

Karnataka Latest News Live 29 October 2025Bigg Boss ಮನೆಗೆ ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟ ಕನ್ನಡದ 'ಸೀತೆ' ಧಾರಾವಾಹಿ ನಟ; ಯಾರದು?

ಕನ್ನಡದಲ್ಲಿ ದಶಕದ ಹಿಂದೆ ಸೀತೆ ಧಾರಾವಾಹಿ ಪ್ರಸಾರ ಆಗುತ್ತಿತ್ತು. ಸೀತೆ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರದಲ್ಲಿ ಅಮಿತ್‌ ಭಾರ್ಗವ ನಟಿಸುತ್ತಿದ್ದರು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಈ ಸೀರಿಯಲ್‌ನ್ನು ನೋಡುತ್ತಿದ್ದರು. ಈಗ ಈ ಸೀರಿಯಲ್‌ ನಟ ಬಿಗ್‌ ಬಾಸ್‌ ಮನೆ ಪ್ರವೇಶ ಮಾಡಿದ್ದಾರೆ.

Read Full Story
01:42 PM (IST) Oct 29

Karnataka Latest News Live 29 October 2025ಐ ಯಾಮ್‌ ಗಾಡ್‌ ಶೀರ್ಷಿಕೆ ಇಡುವುದಕ್ಕೆ ಧೈರ್ಯ ಬೇಕು - ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೇನು?

ಐ ಯಾಮ್‌ ಗಾಡ್‌ ಶೀರ್ಷಿಕೆ ಇಡುವುದಕ್ಕೆ ಧೈರ್ಯ ಬೇಕು. ಮೊದಲ ನಿರ್ದೇಶನದ ಸಿನಿಮಾಗೆ ಈ ಶೀರ್ಷಿಕೆ ಇಟ್ಟಿದ್ದಾರೆ ಅಂದ್ರೆ ಸಿನಿಮಾ ಚೆನ್ನಾಗಿ ಮಾಡಿದ್ದಾರೆ ಅಂತರ್ಥ. ರವಿ ಒಳ್ಳೆಯ ಸಿನಿಮಾ ಮೇಕರ್, ಟ್ರೇಲರ್‌ ಚೆನ್ನಾಗಿದೆ ಎಂದು ಉಪೇಂದ್ರ ಹೇಳಿದ್ದಾರೆ.

Read Full Story
01:25 PM (IST) Oct 29

Karnataka Latest News Live 29 October 2025ಆಪಲ್ ಕಂಪನಿಯ ಸಂಕಷ್ಟದಿಂದ ಮೇಲೆತ್ತಿದ್ದ ಐಫೋನ್ 17, ಐಫೋನ್ ಏರ್‌ ಗ್ರಾಹಕರು - ಸಂಸ್ಥೆಗೆ ಭಾರಿ ಲಾಭ

Apple stock value increase: ಐಫೋನ್ ಮೇಲಿನ ಜನರ ಅಪಾರ ಕ್ರೇಜ್‌ನಿಂದಾಗಿ, ಆಪಲ್ ಸಂಸ್ಥೆಯು ಇದೇ ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ದಾಟಿದೆ. ಇತ್ತೀಚೆಗೆ ಬಿಡುಗಡೆಯಾದ ಐಫೋನ್ 17 ಮತ್ತು ಐಫೋನ್ ಏರ್ ಮಾದರಿಗಳ ಭರ್ಜರಿ ಮಾರಾಟವು ಕಂಪನಿಯ ಷೇರು ಮೌಲ್ಯವನ್ನು ಹೆಚ್ಚಿಸಿದೆ.

Read Full Story
01:24 PM (IST) Oct 29

Karnataka Latest News Live 29 October 2025ಕಂಟೆಂಟ್‌ ಜೊತೆಗೆ ಫ್ಯಾಂಟಸಿ, ಹಾರರ್‌ ಹ್ಯೂಮರ್‌ ಇರೋ ಸಿನಿಮಾ ಕೋಣ - ನಟ ಕೋಮಲ್‌

ಕೋಣ ಕತೆ ತುಂಬಾ ಸರಳ. ಕೋಣವನ್ನು ಬಲಿಕೊಡುವ ಆಚರಣೆಯನ್ನು ಮಾಡುವ ಊರಿಗೆ ಚಿತ್ರದ ನಾಯಕ ಹೋಗುತ್ತಾನೆ. ಬಲಿ ಆಗಬೇಕಾದ ಕೋಣದ ಜತೆಗೆ ಹೀರೋ ಕೂಡ ಲಾಕ್‌ ಆಗುತ್ತಾನೆ. ನಂತರ ಆ ಊರಿನಿಂದ ಹೇಗೆ ಹೊರಗೆ ಬರುತ್ತಾನೆ.

Read Full Story