MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ನಿತ್ಯಾ ಮತ್ತು ಕರ್ಣ ಹ್ಯಾಪಿ ಹ್ಯಾಪಿಯಾಗೋ ನ್ಯೂಸ್ ನೀಡಿದ ಅಮ್ಮ ಮಾಲತಿ

Karna Serial: ನಿತ್ಯಾ ಮತ್ತು ಕರ್ಣ ಹ್ಯಾಪಿ ಹ್ಯಾಪಿಯಾಗೋ ನ್ಯೂಸ್ ನೀಡಿದ ಅಮ್ಮ ಮಾಲತಿ

ಜೀ ಕನ್ನಡದ ಕರ್ಣ ಸೀರಿಯಲ್‌ನಲ್ಲಿ, ತೇಜಸ್ ಅಪಹರಣದ ಹಿಂದೆ ತನ್ನ ಗಂಡ ರಮೇಶ್‌ನ ಕೈವಾಡವಿದೆ ಎಂಬ ಸತ್ಯ ಮಾಲತಿಗೆ ತಿಳಿಯುತ್ತದೆ. ಚಿಕ್ಕಮಗಳೂರಿನಲ್ಲಿ ತೇಜಸ್ ಇರುವ ಸುಳಿವನ್ನು ಮಾಲತಿ ಮಗ ಕರ್ಣನಿಗೆ ನೀಡಿದ್ದು, ಕರ್ಣ ಮತ್ತು ನಿತ್ಯಾ ಮುಂದಿನ ನಡೆ ಕುತೂಹಲ ಕೆರಳಿಸಿದೆ.

1 Min read
Mahmad Rafik
Published : Oct 29 2025, 09:37 PM IST
Share this Photo Gallery
  • FB
  • TW
  • Linkdin
  • Whatsapp
15
ಕರ್ಣ ಸೀರಿಯಲ್‌
Image Credit : Zee Kannada

ಕರ್ಣ ಸೀರಿಯಲ್‌

ಜೀ ಕನ್ನಡದಲ್ಲಿ ಪ್ರಸಾರವಾಗುವ ಕರ್ಣ ಸೀರಿಯಲ್‌ನಲ್ಲಿ ಸಂಚಿಕೆಯಿಂದ ಸಂಚಿಕೆಗೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕರ್ಣನಷ್ಟೇ ನೋವು ಪಡುತ್ತಿರುವ ಜೀವ ಅಂದ್ರೆ ಅದು ಅಮ್ಮ ಮಾಲತಿ. ತನ್ನ ಮುಂದೆಯೇ ಗಂಡ ರಮೇಶ್‌ನ ಚಕ್ರವ್ಯೂಹಕ್ಕೆ ಸಿಲುಕಿ ಮಗ ಕರ್ಣ ನೋವು ಅನುಭವಿಸುತ್ತಿರೋದನ್ನು ನೋಡಿ ಮಾಲತಿ ಸಹ ಕಣ್ಣೀರು ಹಾಕುತ್ತಿದ್ದಾಳೆ. ಇದೀಗ ನಿತ್ಯಾ ಮತ್ತು ಕರ್ಣ ಖುಷಿಯಾಗುವ ವಿಷಯವೊಂದು ಮಾಲತಿ ಹೇಳಿದ್ದಾಳೆ.

25
ಮದುವೆಯಿಂದ ಮಾಯವಾದ ತೇಜಸ್
Image Credit : Instagram

ಮದುವೆಯಿಂದ ಮಾಯವಾದ ತೇಜಸ್

ಮದುವೆಯಿಂದ ಮಾಯವಾದ ತೇಜಸ್ ಚಿಕ್ಕಮಗಳೂರಿನಲ್ಲಿರುವ ವಿಷಯ ಮಾಲತಿಗೆ ಗೊತ್ತಾಗಿದೆ. ನೀಚ ರಮೇಶ್‌ನ ಜೊತೆಯಲ್ಲಿ ತೇಜಸ್ ತಂದೆ-ತಾಯಿ ಸೇರಿಕೊಂಡಿರೋದ ಸತ್ಯ ಬಯಲಾಗಿದೆ. ಈ ಹಿಂದೆ ಕೋಣೆಯೊಂದರಲ್ಲಿ ತೇಜಸ್ ಮತ್ತು ಅವರ ತಂದೆ-ತಾಯಿಯನ್ನು ಬಂಧಿಸಿಟ್ಟಿರೋದನ್ನು ತೋರಿಸಲಾಗಿತ್ತು. ಇದೀಗ ಇದರ ಮುಂದುವರಿದ ಭಾಗವನ್ನು ತೋರಿಸಲಾಗಿದೆ.

Related Articles

Related image1
Karna Serial: ನಿತ್ಯಾ- ಕರ್ಣ ಜೋಡಿನ ಮೆಚ್ಚಿಕೊಂಡ ಜನ… ಮಿಲನ ಚಿತ್ರದ ಅಂಜಲಿ-ಆಕಾಶ್ ನೆನಪಾಗ್ತಾರಂತೆ!
Related image2
Karna Serial: ಹೆಣ್ಣಿಗೆ ಹೆಣ್ಣೇ ಶತ್ರು ಅಂತ ಸಾಬೀತಾಯ್ತು! ಗ್ರಹಚಾರ ಬಿಡಿಸಿದ ಡಾಕ್ಟರ್ ಕರ್ಣ!
35
ಮಾಲತಿ ಶಾಕ್
Image Credit : Instagram

ಮಾಲತಿ ಶಾಕ್

ತೇಜಸ್ ಕಣ್ತಪ್ಪಿಸಿ ಹೊರಗೆ ಬಂದಿರುವ ಆತನ ಪೋಷಕರು ರಮೇಶ್‌ನಿಗೆ ಕಾಲ್ ಮಾಡಿದ್ದಾರೆ. ತೇಜಸ್ ಪೋಷಕರೊಂದಿಗೆ ರಮೇಶ್ ಮಾತನಾಡುತ್ತಿರೋದನ್ನು ಮಾಲತಿ ಕೇಳಿಸಿಕೊಂಡಿದ್ದಾಳೆ. ತೇಜಸ್ ಅಪಹರಣ ಹಿಂದೆಯೂ ಗಂಡನ ಕೈವಾಡವಿರೊ ವಿಷಯ ಕೇಳಿ ಮಾಲತಿ ಶಾಕ್ ಆಗಿದ್ದಾಳೆ. ಕೂಡಲೇ ಮಗನ ಬಳಿ ತೆರಳಿ ತೇಜಜ್ ಚಿಕ್ಕಮಗಳೂರಿನಲ್ಲಿರುವ ವಿಷಯ ತಿಳಿಸಿದ್ದಾಳೆ.

45
ಚಿಕ್ಕಮಗಳೂರಿಗೆ ಹೋಗ್ತಾರಾ?
Image Credit : Zee Kannada

ಚಿಕ್ಕಮಗಳೂರಿಗೆ ಹೋಗ್ತಾರಾ?

ಇತ್ತ ಕರ್ಣ ಸಹ ಖುಷಿಯಿಂದ ನಿತ್ಯಾಗೂ ವಿಷಯ ತಿಳಿಸಿದ್ದಾನೆ. ಮುಂದೆ ತೇಜಸ್‌ನನ್ನು ಹುಡುಕಿಕೊಂಡು ಕರ್ಣ ಮತ್ತು ನಿತ್ಯಾ ಚಿಕ್ಕಮಗಳೂರಿಗೆ ಹೋಗ್ತಾರಾ? ಅನ್ನೋದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ನಿನ್ನ ಪ್ರೀತಿ ಸಿಗಬೇಕಾದ್ರೆ ಮೊದಲು ನೀನು ತೇಜಸ್‌ನನ್ನು ಹುಡುಕಬೇಕೆಂದು ಮಗನಿಗೆ ಮಾಲತಿ ಸಲಹೆ ಹೇಳಿದ್ದಾಳೆ.

ಇದನ್ನೂ  ಓದಿ: Karna Serial: ತ್ಯಾಗಮಯಿ ಕರ್ಣನ ಮೇಲೆ ಮತ್ತೊಂದು ಅಪವಾದ; ನೀಚನ ದುಷ್ಟತನಕ್ಕೆ ವೀಕ್ಷಕರ ಹಿಡಿಶಾಪ

55
ರಮೇಶ್‌ನಿಂದ ಅವಮಾನ ಮಾಡುವ ಕೆಲಸ
Image Credit : Zee Kannada

ರಮೇಶ್‌ನಿಂದ ಅವಮಾನ ಮಾಡುವ ಕೆಲಸ

ನಿರಾಶ್ರಿತರಾಗಿರುವ ನಿಧಿ ಮತ್ತು ಶಾಂತಿ ಅಜ್ಜಿಯ ಸ್ವಾಭಿಮಾನಕ್ಕೆ ಪದೇ ಪದೇ ದಕ್ಕೆಯುಂಟಾಗುತ್ತಿರೋದರಿಂದ ಕರ್ಣನ ಮನೆಯಿಂದ ಹೊರಗೆ ಹೋಗಲು ನಿರ್ಧರಿಸಿದ್ದಾರೆ. ಇತ್ತ ನಿತ್ಯಾಗೆ ಮಾವ ರಮೇಶ್‌ನಿಂದ ಅವಮಾನ ಮಾಡುವ ಕೆಲಸ ಶುರುವಾಗಿದೆ.

ಇದನ್ನೂ ಓದಿ: Karna Serial: ರಮೇಶ್‌ನಿಗೆ ಮತ್ತೊಂದು ಶಾಕ್; ಗಾಯಗೊಂಡ ಹಾವಿನಂತಾದ ಕರ್ಣನ ನೀಚ ತಂದೆ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕರ್ಣ ಧಾರಾವಾಹಿ
ಜೀ ಕನ್ನಡ
ಕಿರಣ್ ರಾಜ್
ನಮ್ರತಾ ಗೌಡ
ಭವ್ಯಾ ಗೌಡ
ಮನರಂಜನಾ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved