ಕೇಂದ್ರ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವಂತೆ ರೈತರು ನಡೆಸಿದ ಟ್ರಾಕ್ಟರ್ ರ್ಯಾಲಿ ಶಾಂತಿಯುತವಾಗಿ ಮುಕ್ತಾಯವಾಗಬೇಕಿತ್ತು. ಆದರೆ ಕಂಡು ಕೇಳರಿಯದ ಅಹಿತಕರ ಘಟನೆಗೆ ದೆಹಲಿ ಸಾಕ್ಷಿಯಾಗಿದೆ.
India Jan 27, 2021, 3:18 PM IST
ಕೆಂಪುಕೋಟೆ ಮೇಲೆ ಉದ್ರಿಕ್ತರು ಹಾರಿಸಿದ್ದು ಖಲಿಸ್ತಾನಿ ಧ್ವಜವಲ್ಲ, ನಿಶಾನ್ ಸಾಹೆಬ್| ಸೇನೆಯಲ್ಲೂ ಗೌರವಿಸಲಾಗುತ್ತೆ ನಿಶಾನ್ ಸಾಹೆಬ್| ಅಷ್ಟಕ್ಕೂ ಏನಿದರ ಮಹತ್ವ? ಇಲ್ಲಿದೆ ವಿವರ
India Jan 27, 2021, 2:14 PM IST
ದೆಹಲಿಯ ಕೆಂಪುಕೋಟೆಯಲ್ಲಿ ಈ ಬಾರಿ ಅತ್ಯಂತ ಸರಳವಾಗಿ ಗಣರಾಜ್ಯೋತ್ಸವ ಆಚರಿಸಲಾಗಿತ್ತು. ಕೊರೋನಾ ಮಹಾಮಾರಿ ಒಂದೆಡೆಯಾದರೆ, ಇತ್ತ ರೈತರ ಪ್ರತಿಭಟನೆಯ ಕಿಚ್ಚು ಇದಕ್ಕೆ ಕಾರಣವಾಗಿತ್ತು. ಇನ್ನು ದೆಹಲಿ ಪೊಲೀಸರು ರೈತರಿಗೆ ಟ್ರಾಕ್ಟರ್ ಪರೇಡ್ ನಡೆಸುವ ಅವಕಾಶ ನೀಡಿದ್ದರಾದರೂ ಷರತ್ತುಗಳನ್ನು ವಿಧಿಸಿದ್ದರು. ಆದರೆ ರೈತರ ಆಕ್ರೋಶಕ್ಕೆ ಎಲ್ಲವೂ ತಲೆ ಕೆಳಗಾಗಿದೆ.
India Jan 27, 2021, 1:08 PM IST
ರೈತರ ದಂಗೆಯಿಂದ ಪ್ರಕ್ಷುಬ್ಧಗೊಂಡಿದ್ದ ಗಾಜೀಪುರ ಬಾರ್ಡರ್ ಇಂದು ಸಹಜ ಸ್ಥಿತಿಗೆ ಮರಳಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
India Jan 27, 2021, 10:49 AM IST
ದಿಲ್ಲಿಯಲ್ಲಿ ಹೆಚ್ಚುವರಿ 20 ಅರೆಸೇನಾ ತುಕಡಿ ನಿಯೋಜನೆ| ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ
India Jan 27, 2021, 9:14 AM IST
ದೆಹಲಿ ಹಿಂಸಾಚಾರ ಪೂರ್ವನಿಯೋಜಿತವೇ?| ರೈತರ ನಡುವೆ ಖಲಿಸ್ತಾನ್ ಉಗ್ರರ ಸೇರ್ಪಡೆ ಬಗ್ಗೆ ಸರ್ಕಾರದ ಸುಳಿವು| ರಾರಯಲಿ ಹೈಜಾಕ್ಗೆ ಪಾಕ್ನ 300ಕ್ಕೂ ಹೆಚ್ಚು ಟ್ವೀಟರ್ ಹ್ಯಾಂಡ್ಲರ್ಗಳ ಸಂಚು| ಪ್ರತಿಭಟನಾ ಸ್ಥಳದಲ್ಲಿ ಸಿಕ್ಕ ಮುಸುಕುಧಾರಿಯಿಂದ ಹಿಂಸಾಚಾರದ ಮಾಹಿತಿ
India Jan 27, 2021, 8:17 AM IST
ಕೆಂಪು ಕೋಟೆಯಲ್ಲಿ ತ್ರಿವರ್ಣಧ್ವಜ ಹಾರಾಡುವ ಜಾಗದಲ್ಲಿ ಪ್ರತ್ಯೇಕ ರಾಷ್ಟ್ರದ ಧ್ವಜ ಹಾರಿಸಲಾಗಿದೆ. ಟ್ರಾಕ್ಟರ್ ರ್ಯಾಲಿ ಮಾಡಿದ ರೈತರು ಭಾರತದ ಮಾನ ಹರಾಜಿಗಿಟ್ಟಿದ್ದಾರೆ. ಕೆಂಪು ಕೋಟೆಯಲ್ಲಿ ಪ್ರತಿಭಟನಾ ನಿರತ ರೈತರು ಧ್ವಜ ಹಾರಿಸಿದ ಘಟನೆಗೆ ಪಾಕಿಸ್ತಾನದಲ್ಲಿ ಸಂಭ್ರಮ ಆರಂಭಗೊಂಡಿದೆ. ರೈತ ಪ್ರತಿಭಟನೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
India Jan 26, 2021, 11:57 PM IST
ದೆಹಲಿಯಲ್ಲಿ ರೈತರು ಅಡ್ಡಾದಿಡ್ಡಿ ಟ್ರಾಕ್ಟರ್ ರ್ಯಾಲಿ ನಡೆಸಿ ದಂಗೆ ಎಬ್ಬಿಸಿದ್ದಾರೆ. ಈ ದಂಗೆಯಿಂದ 100ಕ್ಕೂ ಹೆಚ್ಚಿನ ಪೊಲೀಸರು ಗಾಯಗೊಂಡಿದ್ದಾರೆ. ಇನ್ನು ಟ್ರಾಕ್ಟರ್ ಸಮೇತ ಬ್ಯಾರಿಕೇಡ್ ದಾಟಿ ಬರುವ ಪ್ರಯತ್ನದಲ್ಲಿದ್ದ ರೈತ, ಟ್ರಾಕ್ಟರ್ ಮಗುಚಿ ಬಿದ್ದು ಸಾವನ್ನಪ್ಪಿದ್ದಾನೆ. ಆದರೆ ರೈತರು ಪೊಲೀಸರ ಫೈರ್ ಮಾಡಿದ ಕಾರಣ ಸಾವನ್ನಪ್ಪಿದ್ದಾರೆ ಎಂದು ಶವ ಮುಂದಿಟ್ಟು ಪ್ರತಿಭಟನೆ ಮಾಡಿದ್ದರು. ರೈತ ಸಾವಿಗೆ ಅಸಲಿ ಕಾರಣವೇನು ಅನ್ನೋದನ್ನು ದೆಹಲಿ ಪೊಲೀಸರು ವಿಡಿಯೋ ಸಹಿತ ಬಹಿರಂಗ ಪಡಿಸಿದ್ದಾರೆ.
India Jan 26, 2021, 10:20 PM IST
ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತರು ಗಣತಂತ್ರ ದಿನ ನಡೆಸಿದ ಟ್ರಾಕ್ಟರ್ ರ್ಯಾಲಿ ಹಿಂಸಾರೂಪ ಪಡೆದುಕೊಂಡಿದೆ. ರೈತ ಸಂಘಟನೆ ಟ್ರಾಕ್ಟರ್ ರ್ಯಾಲಿ ಹಿಂಪಡೆದರು ಎಲ್ಲಾ ರೈತರು ಹಿಂದುರಿಗಿಲ್ಲ. ಸಿಕ್ಕ ಸಿಕ್ಕ ಪೊಲೀಸರ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ. ರೈತ ಪ್ರತಿಭಟನೆಯ ಸದ್ಯದ ಮಾಹಿತಿ ಇಲ್ಲಿದೆ.
India Jan 26, 2021, 9:47 PM IST
ಪ್ರಧಾನಿ ಜವಾಹರ್ಲಾಲ್ ನೆಹರೂನಿಂದ ನರೇಂದ್ರ ಮೋದಿ ವರೆಗೆ ಧ್ವಜಾರೋಹಣ ಮಾಡಿದ್ದ ದೆಹಲಿ ಕೆಂಪು ಕೋಟೆ ಮೇಲೆ ಇಂದು ರೈತರ ಮುತ್ತಿಗೆ ಹಾಕಿ ದೇಶದ ಹೆಮ್ಮೆಯ ಪ್ರತೀಕದ ಮೇಲೆ ವಿಕೃತಿ ಮೆರೆದಿದ್ದಾರೆ. ರಾಷ್ಟ್ರ ಧ್ವಜ ಹಾರುತ್ತಿದ್ದ ಸ್ಥಳದಲ್ಲಿ ಸಿಖ್ ಧ್ವಜ ಹಾರಾಡಿದೆ. ಪೊಲೀಸರ ಮೇಲೆ ದಾಳಿ, ಸಾರ್ವಜನಿಕ ವಾಹನ ಜಖಂ ಸೇರಿದಂತೆ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಿ, ಇದೀಗ ಟ್ರಾಕ್ಟರ್ ರ್ಯಾಲಿಯನ್ನು ಹಿಂಪಡೆದಿದ್ದಾರೆ.
India Jan 26, 2021, 8:55 PM IST
ದೆಹಲಿಯಲ್ಲಿ ರೈತರು ನಡೆಸಿದ ಪ್ರತಿಭಟೆ ಉಗ್ರ ಸ್ವರೂಪ ಪಡೆದುಕೊಂಡಿದೆ. ಹಿಂಸಾಚಾರ ಮಾರ್ಗ ಹಿಡಿದಿರುವ ಪ್ರತಿಭಟನೆ ನಿಯಂತ್ರಣಕ್ಕೆ ದೆಹಲಿಯಲ್ಲಿ ಹಲವು ಸೇವೆಗಳು ಸ್ಥಗಿತಗೊಳಿಸಲಾಗುತ್ತಿದೆ. ಪ್ರತಿಭಟನೆ ಗಾಳಿ ಸುದ್ದಿ ಹಬ್ಬದಂತೆ ತಡೆಯಲು ದೆಹಲಿಯ ಹಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಎಷ್ಟು ದಿನ? ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
India Jan 26, 2021, 7:44 PM IST
ರೈತ ಸಂಘಟನೆಗಳ ಪ್ರತಿಭಟನೆ ಇದೀಗ ದಂಗೆ ಸ್ವರೂಪ ಪಡೆದುಕೊಂಡಿದೆ. ದೆಹಲಿ ಕೆಂಪು ಕೋಟೆಗೆ ಮುತ್ತಿಗೆ ಹಾಕಿ, ರಾಷ್ಟ್ರಧ್ವಜ ಹಾರುವ ಜಾಗದಲ್ಲಿ ಖಲ್ಸಾ ಧ್ವಜ ಹಾರಿಸಲಾಗಿದೆ. ಈ ಘಟನೆಯನ್ನು ಪಾಕಿಸ್ತಾನದ ಕೆಲ ಸಂಘಟನೆಗಳು ಐತಿಹಾಸಿಕ ಎಂದು ಬಣ್ಣಿಸಿದೆ. ಆದರೆ ಭಾರತದ ಮಾನ ದಂಗೆಯಿಂದ ಹರಾಜಾಗಿದೆ. ರೈತರ ದಂಗೆ ತೀವ್ರಗೊಂಡಿರುವ ಕಾರಣ ಗೃಹ ಮಂತ್ರಿ ಅಮಿತ್ ಶಾ ತುರ್ತು ಸಭೆ ನಡೆಸಿದ್ದಾರೆ.
India Jan 26, 2021, 7:19 PM IST
ರೈತ ಪ್ರತಿಭಟನೆ ಹೋರಾಟ ದಂಗೆಯಾಗಿ ಮಾರ್ಪಟ್ಟಿದೆ. ನಿಗದಿತ ಮಾರ್ಗಗಳಲ್ಲಿ ಟ್ರಾಕ್ಟರ್ ರ್ಯಾಲಿ ಆಯೋಜಿಸಲು ನಿರಾಕರಿಸಿದ ರೈತರು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ತ್ರಿವರ್ಣ ಧ್ವಜ ಹಾರಬೇಕಿದ್ದ ಕೆಂಪು ಕೋಟೆ ವಶಪಡಿಸಿ ಸಿಖ್ ಧ್ವಜ ಹಾರಿಸಿದ್ದಾರೆ. ವಾಹನಗಳನ್ನು ಜಖಂಗೊಳಿಸಿದ್ದಾರೆ. ದಂಗೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗತಿಗೊಳಿಸಲಾಗಿದೆ.
India Jan 26, 2021, 6:28 PM IST
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸರ್ಕಾರದ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ಕೆಂಪುಕೋಟೆ ಮೇಲೆ ಸಿಖ್ ಬಾವುಟವನ್ನು ಹಾರಿಸಿದ್ದಾರೆ. ಈ ಹೋರಾಟ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
India Jan 26, 2021, 6:00 PM IST
ರೈತರ ಪ್ರತಿಭಟನೆ ಹಿಂಸಾ ರೂಪ ಪಡೆದಿದೆ. ಪೊಲೀಸರ ಮೇಲೆ ದಾಳಿ ಮಾಡಲಾಗಿದೆ. ಸಾರಿಗೆ ವಾಹನ, ಪೊಲೀಸ್ ವಾಹನ ಜಖಂ ಗೊಂಡಿದೆ. ಇತ್ತ ಪ್ರತಿಭಟನೆ ನಡುವೆ ಸರಳ ಗಣರಾಜ್ಯೋತ್ಸವ ಆಚರಿಸಲಾಗಿದೆ. ಟ್ರಾಕ್ಟರ್ ಮುಗಚಿ ರೈತನೋರ್ವ ಸಾವನ್ನಪ್ಪಿದ್ದಾನೆ. ಸುಮ್ನೆ ಸಿಹಿ ಮುತ್ತಿನ ಆಫರ್ ನೀಡಿದ ನಿವೇದಿತಾ ಗೌಡ, ಹಳೆ ದಿನ ನೆನಪಿಸಿದ ಕಂಗನಾ ರನಾವತ್ ಸೇರಿದಂತೆ ಜನವರಿ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
News Jan 26, 2021, 5:47 PM IST