ಭಾರೀ ಮಳೆಯಾದರೆ ಅಥಣಿ ಕ್ಷೇತ್ರದ ಜನರ ಬದುಕು ದುಸ್ತರವಾಗುತ್ತದೆ. ತುಂಬಿ ಹರಿಯುವ ಹಳ್ಳ. ಈ ಹಳ್ಳ ದಾಟಲು ಹಗ್ಗದ ಮೇಲೆ ನಡಿಗೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಜನರ ಬದುಕು ಅಪಾಯಕ್ಕೆ ಸಿಲುಕುತ್ತದೆ.
Karnataka Districts Oct 15, 2020, 2:04 PM IST
ಬೆಳೆ ಹಾನಿಯ ಬಗ್ಗೆ ನಾಳೆ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ಮಾಡುತ್ತೇನೆ. ಬೆಳೆ ಹಾನಿಗೆ ಹಣವನ್ನೂ ಬಿಡುಗಡೆ ಮಾಡುತ್ತೇನೆ. ಆಯಾ ಜಿಲ್ಲೆಗಳ ಹಾನಿಗಳ ಬಗ್ಗೆ ಜಿಲ್ಲಾ ಉಸ್ತುವಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದು ಸಿಎಂ ಭರವಸೆ ನೀಡಿದ್ಧಾರೆ.
state Oct 15, 2020, 1:49 PM IST
ಸೋಮರಡ್ಡಿ ಅಳವಂಡಿ
ಕೊಪ್ಪಳ(ಅ.15): 2435 ಹೆಕ್ಟೇರ್ ಬೆಳೆ ನಾಶವಾಗಿದೆ. 650 ಮನೆಗಳು ಬಿದ್ದಿವೆ. 150 ಕಿಮೀ ರಸ್ತೆ ಹಾಳಾಗಿದ್ದು, ಹತ್ತಾರು ಸೇತುವೆಗಳು, ಬ್ಯಾರೇಜ್ಗಳು ಕೊಚ್ಚಿ ಹೋಗಿವೆ. ಇದು, ಜಿಲ್ಲಾಡಳಿತ ನೀಡಿದ ಪ್ರಾಥಮಿಕ ವರದಿಯಿಂದಲೇ ಗೊತ್ತಾಗಿರುವ ಹಾನಿ. ಇದರ ವಾಸ್ತವಿಕ ಲೆಕ್ಕಾಚಾರ ಇನ್ನಷ್ಟು ದುಪ್ಪಟ್ಟಿರಬಹುದು. ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಈಗಾಗಲೇ ಜಂಟಿಯಾಗಿ ಸಮೀಕ್ಷೆ ಕೈಗೊಂಡಿವೆ.
Karnataka Districts Oct 15, 2020, 1:15 PM IST
ವಿಜಯಪುರದಲ್ಲಿ ಭಾರೀ ಮಳೆಯಾಗುತ್ತಿದೆ. ಬೂದಿಹಾಳ ಹಳ್ಳದಲ್ಲಿ ಸಿಲುಕಿದ್ದ ಒಂದೇ ಕುಟುಂಬದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಸ್ಥಳೀಯರಿಂದ ವಿಚಾರ ತಿಳಿದ ಅಗ್ನಿಶಾಮಕ ಸಿಬ್ಬಂದಿ ನಾಲ್ವರನ್ನು ರಕ್ಷಣೆ ಮಾಡಿದ್ಧಾರೆ.
Karnataka Districts Oct 15, 2020, 12:28 PM IST
ಕಲ್ಬುರ್ಗಿ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರೆದಿದೆ. ಇನ್ನೂ 2 ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಳಖೇಡದ ಗುರುರಾಯರ ಉತ್ತರಾಧಿ ಮಠ ಭಾಗಶಃ ಮುಳುಗಡೆಯಾಗಿದೆ.
Karnataka Districts Oct 15, 2020, 11:29 AM IST
ದೇಶಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು. ಎಲ್ಲೆಲ್ಲೂ ಪ್ರವಾಹದ ಭೀತಿ ನಿರ್ಮಾಣವಾಗಿದೆ. ಕಂಡು ಕೇಳರಿಯದ ಮಳೆಗೆ ಆಂಧ್ರ ಪ್ರದೇಶ ಸಾಕ್ಷಿಯಾಗಿದೆ. ಮನೆಗಳು ಕುಸಿದು ಬೀಳುತ್ತಿವೆ. ಕುರುಹುಗಳು ಸಿಗುತ್ತಿಲ್ಲ. ರಸ್ತೆಗಳು ಹೊಳೆಗಳಾಗಿವೆ.
India Oct 15, 2020, 9:56 AM IST
ರಾಜ್ಯದಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. 10 ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
Karnataka Districts Oct 15, 2020, 7:24 AM IST
ಯಾದಗಿರಿಯಲ್ಲಿ ಕಳೆದ ಕೆಲದಿನಗಳಿಂದ ಭಾರಿ ಪ್ರಮಾಣದಲ್ಲಿ ಮಲೆ ಸುರಿಯುತ್ತಿದ್ದು ಇದರಿಂದ ಜನಜೀವನ ತೀವ್ರ ಆತಂಕಗೊಂಡಿದೆ.
Karnataka Districts Oct 15, 2020, 7:14 AM IST
ತೆಲಂಗಾಣದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಈಗಾಗಲೇ 12 ಜನರು ಸಾವನ್ನಪ್ಪಿದ್ದಾರೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹೈದರಾಬಾದ್ ಸೇರಿದಂತೆ ಬಹುತೇಕ ನಗರಗಳು ಜಲಾವೃತವಾಗಿವೆ. ತೆಲಂಗಾಣದ ಮಳೆಗೆ 2 ತಿಂಗಳ ಮಗು ಸೇರಿದಂತೆ ಒಟ್ಟು 12 ಜನರು ಸಾವನ್ನಪ್ಪಿದ್ದಾರೆ. ಹೈದರಾಬಾದ್ನ ರಸ್ತೆಗಳಲ್ಲಿ ನಿಂತ ಕಾರು, ಲಾರಿಗಳು ಮಳೆಯ ನೀರಿನಲ್ಲಿ ತೇಲಿಕೊಂಡು ಬರುತ್ತಿರುವ ಪೋಟೋ, ವಿಡಿಯೋಗಳು ವೈರಲ್ ಆಗಿವೆ.
India Oct 14, 2020, 8:55 PM IST
ಮಳೆಯಿಂದಾಗಿ ಆಸ್ಪತ್ರೆಗೆ ಹೋಗಲು ಆಗದೇ ಗಂಜಿಕೇಂದ್ರದಲ್ಲಿ ಉಳಿದುಕೊಂಡಿದ್ದ ಗರ್ಭಿಣಿ ಮಹಿಳೆ ಶಾಲೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.
Karnataka Districts Oct 14, 2020, 8:33 PM IST
ಮಳೆರಾಯನ ಅಬ್ಬರಕ್ಕೆ ಜನರು ಮಾತ್ರವಲ್ಲ ದೇವರೇ ನಡುಗಿ ಹೋಗಿದ್ದಾನೆ. ಗರ್ಭಗುಡಿಗೆ ನುಗ್ಗಿದೆ ನೀರು. ಭಗವಂತನೇ ಸಾಕು ಮಳೆರಾಯ, ನಿಲ್ಲಿಸು ನಿನ್ನ ಆರ್ಭಟ ಎನ್ನುತ್ತಿದ್ದಾನೆ.
India Oct 14, 2020, 9:13 AM IST
ಕಲ್ಭುರ್ಗಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಪ್ರವಾಹದಲ್ಲಿ ಬೈಕ್ ಸವಾರನೊಬ್ಬ ಸಿಲುಕಿಕೊಂಡಿದ್ದು ಆತನನ್ನು ರಕ್ಷಣೆ ಮಾಡಲಾಗಿದೆ. ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಬೈಕ್ ಓಡಿಸುವ ಸಾಹಸ ಮಾಡಿದ್ದಾರೆ ಬೈಕ್ ಸವಾರ.
Karnataka Districts Oct 13, 2020, 4:44 PM IST
ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ಪ್ರವಾಹದಾತಂಕ ಕಾಣಿಸಿಕೊಂಡಿದೆ. ಡೋಣಿ, ಘಟಪ್ರಭಾ, ಮಲಪ್ರಭಾ, ಕಾಗಿಣಾ ನದಿಗಳು, ಬೆಣ್ಣಿಹಳ್ಳ, ಹಿರೇಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಬೆಳಗಾವಿ, ಬಾಗಲಕೋಟೆ ಸೇರಿ ವಿವಿಧೆಡೆ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದೆ. ಮಳೆಯಬ್ಬರಕ್ಕೆ 200ಕ್ಕೂ ಹೆಚ್ಚು ಮನೆಗಳು ಕುಸಿದುಬಿದ್ದಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಮಳೆ ಸಂಬಂಧಿ ಅನಾಹುತಕ್ಕೆ ಮಹಿಳೆ ಸೇರಿ ಇಬ್ಬರು ಬಲಿಯಾಗಿದ್ದಾರೆ.
Karnataka Districts Oct 13, 2020, 11:13 AM IST
ನಿರಂತರ ಮಳೆಗೆ ಬಾಗಲಕೋಟೆ ಜಿಲ್ಲೆ ತತ್ತರಿಸಿದೆ. ನದಿಯ ನೀರು ಅಕ್ಕಪಕ್ಕದ ಹೊಲಗಳಿಗೆ ನುಗ್ಗಿದೆ. ಜೋಳ, ಮೆಕ್ಕೆಜೋಳ, ಸಜ್ಜೆ ಸೇರಿದಂತೆ ಹಲವು ಬೆಳೆಗಳು ನಾಶವಾಗಿವೆ.
Karnataka Districts Oct 12, 2020, 4:24 PM IST
ಮಹಾಮಳೆಯ ಅಬ್ಬರಕ್ಕೆ ಬ್ರಿಟನ್ ನಲುಗಿ ಹೋಗಿದೆ. 66 ವರ್ಷಗಳ ಬಳಿಕ ಇಟಲಿಯಲ್ಲಿ ಮಹಾ ಪ್ರಳಯದ ವಾತಾವರಣ ಸೃಷ್ಟಿಯಾಗಿದೆ. ಇನ್ನೊಂದು ಕಡೆ ಅಲೆಕ್ಸ್ ಚಂಡಮಾರುತದ ಅಬ್ಬರಕ್ಕೆ ಫ್ರಾನ್ಸ್, ಸ್ಪೇನ್ ಹಾಗೂ ಇಟಲಿ ಛಿದ್ರಛಿದ್ರವಾಗಿದೆ. ಫ್ರಾನ್ಸ್ನಲ್ಲೀಗ ರಸ್ತೆಗಳೇ ಕಾಲುವೆಗಳಾಗಿವೆ.
International Oct 7, 2020, 10:32 AM IST