ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕ್ರಿಕೆಟ್ ಆರಂಭಕ್ಕೆ ಇನ್ನೆರಡು ದಿನ ಬಾಕಿ. ಎಲ್ಲರೂ ಚುಟುಕು ಸರಣಿಗಾಗಿ ಕಾಯುತ್ತಿದ್ದಾರೆ. ಉಭಯ ದೇಶಗಳ ಆಟಗಾರರು ಜೊತೆಯಾಗಿ ಐಪಿಎಲ್ ಟೂರ್ನಿ ಆಡಿ ಹೆಚ್ಚು ಆತ್ಮೀಯರಾಗಿದ್ದಾರೆ. ಆದರೆ ಈ ಹಿಂದಿನ ಭಾರತ ಹಾಗೂ ದಕ್ಷಿಣ ಆಫ್ರಿಕಾ ಸರಣಿ ಹಲವು ವಿವಾದಕ್ಕೆ ಗುರಿಯಾಗಿದೆ. ಇಂಡೋ-ಆಫ್ರಿಕಾ ಸರಣಿಯಲ್ಲಿನ ಪ್ರಮುಖ 4 ವಿವಾದಗಳು ವಿಶ್ವ ಕ್ರಿಕೆಟನ್ನೇ ಬೆಚ್ಚಿ ಬೀಳಿಸಿವೆ. ಇದಕ್ಕಾಗಿ ಪ್ರತಿಭಟನೆಗಳು ಕೂಡ ನಡೆದಿದೆ. ಇಂತಹ 4 ವಿವಾದಗಳ ವಿವರ ಇಲ್ಲಿದೆ.
SPORTS Sep 13, 2019, 10:16 PM IST
ಜಿಯೋ ಗ್ರಾಹಕರಿಗೆ ಇದೀಗ ಭರ್ಜರಿ ಆಫರ್ ಘೋಷಿಸಲಾಗಿದೆ. ಭಾರತ ಹಾಗೂ ಸೌತ್ ಆಫ್ರಿಕಾ ಕ್ರಿಕೆಟ್ ಸರಣಿಯನ್ನು ಉಚಿತವಾಗಿ ನೀಡಲು ಜಿಯೋ ನಿರ್ಧರಿಸಿದೆ. ಇದಕ್ಕೇನು ಮಾಡಬೇಕು? ಇಲ್ಲಿದೆ ವಿವರ.
SPORTS Sep 13, 2019, 9:28 PM IST
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಕಳೆದೆರಡು ವರ್ಷಗಳಿಂದ ನೀರಸ ಪ್ರದರ್ಶನ ತೋರಿದ್ದ ಕೆ.ಎಲ್ ರಾಹುಲ್’ಗೆ ಕೋಕ್ ನೀಡಲಾಗಿದೆ. ಎಂ.ಎಸ್.ಕೆ. ಪ್ರಸಾದ್ ರೋಹಿತ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲೇ ರೋಹಿತ್ ಆರಂಭಿಕನಾಗಿ ಕಣಕ್ಕಿಳಿದರೆ, ಡೆಲ್ಲಿ ಡ್ಯಾಶರ್ ವಿರೇಂದ್ರ ಸೆಹ್ವಾಗ್ ಸಾಲಿಗೆ ಸೇರಲಿದ್ದಾರೆ. ಈ ಮೊದಲು ಸೆಹ್ವಾಗ್’ರಂತೆ ಏಕದಿನ ಕ್ರಿಕೆಟ್’ನಲ್ಲಿ ದ್ವಿಶತಕ ಸಿಡಿಸಿದ ಸಾಧನೆ ಮಾಡಿರುವ ರೋಹಿತ್ ರೆಡ್ ಬಾಲ್ ಕ್ರಿಕೆಟ್’ನಲ್ಲಿ ಆರಂಭಿಕನಾಗಿ ಕಮಾಲ್ ಮಾಡ್ತಾರಾ ಎನ್ನುವುದು ಈಗಿನ ಕುತೂಹಲ...
SPORTS Sep 13, 2019, 2:26 PM IST
ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸರಣಿಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಮುಗ್ಗರಿಸಲಿದೆಯಾ ಎನ್ನುವ ಅನುಮಾನ ದಟ್ಟವಾಗತೊಡಗಿದೆ. ಅರೇ ಇದೇನಪ್ಪಾ, ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಒಂದೇ ಒಂದು ಸೋಲು ಕಾಣದೇ ಸರಣಿ ಗೆದ್ದುಕೊಂಡು ಬಂದಿರುವ ಟೀಂ ಇಂಡಿಯಾಗೆ ಸೋಲಿನ ಭೀತಿಯೇ ಎನ್ನಬಹುದು. ಆದರೆ ಬಲಿಷ್ಠ ಹರಿಣಗಳನ್ನು ಎದುರಿಸಲು ಇನ್ನೂ ಟೀಂ ಇಂಡಿಯಾ ಆಟಗಾರರು ಅಭ್ಯಾಸವನ್ನೇ ಆರಮಭಿಸಿಲ್ಲ. ಎಲ್ಲರೂ ಮೋಜು ಮಸ್ತಿ ಮಾಡುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
SPORTS Sep 12, 2019, 6:27 PM IST
ಸೌತ್ ಆಫ್ರಿಕಾ ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟಗೊಳ್ಳುತ್ತಿದ್ದಂತೆ ಆಯ್ಕೆ ಸಮಿತಿ ನಿರ್ಧಾರಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರಣ ಯುವ ಕ್ರಿಕೆಟಿಗ ಶುಭ್ಮನ್ ಗಿಲ್ಗೆ ಅವಕಾಶ ನೀಡಲಾಗಿದೆ. ಇತ್ತ ಕೆಎಲ್ ರಾಹುಲ್ಗೆ ಕೊಕ್ ನೀಡಲಾಗಿದೆ. ಈ ಕುರಿತು ಅಭಿಮಾನಿಗಳ ಪ್ರತಿಕ್ರಿಯೆ ಇಲ್ಲಿದೆ.
SPORTS Sep 12, 2019, 5:41 PM IST
ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಅಳೆದು ತೂಗಿ ತಂಡ ಆಯ್ಕೆ ಮಾಡಿದೆ. ಟೆಸ್ಟ್ ತಂಡದಲ್ಲಿ ಯಾರಿಗೆ ಸ್ಥಾನ? ಯಾರಿಗೆ ಕೊಕ್? ಇಲ್ಲಿದೆ ವಿವರ.
SPORTS Sep 12, 2019, 4:56 PM IST
ಬುಧವಾರ ತಡರಾತ್ರಿ ಮಳೆ ಸುರಿಯಲಿದ್ದು, ಗುರುವಾರ ಪಿಚ್ ಆಟವಾಡಲು ಯೋಗ್ಯ ರೀತಿಯಲ್ಲಿ ಸಿದ್ಧವಾಗುವುದು ಅನುಮಾನವಾಗಿದೆ. ಗುರುವಾರವೂ ಮಳೆ ನಿಲ್ಲದಿದ್ದರೆ ಮೈದಾನ ಸಿಬ್ಬಂದಿ ಮತ್ತಷ್ಟು ಸಂಕಷ್ಟ ಎದುರಿಸಲಿದ್ದಾರೆ.
SPORTS Sep 12, 2019, 12:59 PM IST
ಎಂಎಸ್ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಗುರುವಾರ ಸಭೆ ಸೇರಲಿದ್ದು, ಇದೇ ವೇಳೆ ಭಾರತ ತಂಡದಲ್ಲಿನ ನ್ಯೂನ್ಯತೆಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ. ಹಾಗೆ ದ.ಆಫ್ರಿಕಾ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡದ ಆಯ್ಕೆಯೂ ನಡೆಯಲಿದೆ.
SPORTS Sep 12, 2019, 10:30 AM IST
ಏಕದಿನ ಹಾಗೂ ಟಿ20 ಮಾದರಿಯಲ್ಲಿ ಅದ್ಭುತ ಲಯದಲ್ಲಿರುವ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್ನಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ರೋಹಿತ್ ಈ ವರೆಗೂ 27 ಟೆಸ್ಟ್ಗಳನ್ನು ಆಡಿದ್ದು ಒಮ್ಮೆಯೂ ಆರಂಭಿಕನಾಗಿ ಕಣಕ್ಕಿಳಿದಿಲ್ಲ. ಆದರೆ ಪ್ರಥಮ ದರ್ಜೆ ಪಂದ್ಯಗಳಲ್ಲಿ ಮುಂಬೈ ಪರ ಆರಂಭಿಕನಾಗಿ ಆಡಿದ ಅನುಭವ ಹೊಂದಿದ್ದಾರೆ.
SPORTS Sep 11, 2019, 1:00 PM IST
ಕಳೆದೆರಡು ವರ್ಷಗಳಿಂದಲೂ ಟೀಂ ಇಂಡಿಯಾ ಟೆಸ್ಟ್ ತಂಡದ ಆರಂಭಿಕ ಕೆ.ಎಲ್ ಕಳಪೆ ಬ್ಯಾಟಿಂಗ್ ಪದೇ ಪದೇ ಮುಂದುವರೆದಿದೆ. ವಿಂಡೀಸ್ ವಿರುದ್ಧದ ಎರಡು ಟೆಸ್ಟ್’ನಲ್ಲೂ ರಾಹುಲ್’ರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಬಹುತೇಕ ರಾಹುಲ್ ಅವರನ್ನು ಡ್ರಾಪ್ ಮಾಡುವುದು ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ರಾಹುಲ್ ಸ್ಥಾನ ತುಂಬಲು ಮೂವರು ಕ್ರಿಕೆಟಿಗರು ರೆಡಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
SPORTS Sep 10, 2019, 4:00 PM IST
ಟೀಂ ಇಂಡಿಯಾ ಕ್ರಿಕೆಟಿಗರು ದಾನದಲ್ಲಿ, ಸಾಮಾಜಿಕ ಕಳಕಳಿ, ಜವಾಬ್ದಾರಿ ನಿರ್ವಹಿಸುವುದರಲ್ಲಿ ಇತರ ಕ್ರಿಕೆಟಿಗರಿಗಿಂತ ಮುಂದಿದ್ದಾರೆ. ಇದೀಗ ಕೇರಳಾ ಯುವ ಕ್ರಿಕೆಟಿಗ ಸಂಜು ಸಾಮ್ಸನ್ ತನ್ನ ಸಂಭಾವನೆಯನ್ನು ಗ್ರೌಂಡ್ ಸ್ಟಾಫ್ಗೆ ನೀಡೋ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಸಂಜು ಸಾಮ್ಸನ್ ಕೋಟಿ ಕೋಟಿ ಬಾಚಿಕೊಳ್ಳೋ ಸ್ಟಾರ್ ಕ್ರಿಕೆಟಿಗನಲ್ಲ, ಆದರೂ ದಾನದಲ್ಲಿ ಕೋಟಿ ಕ್ರಿಕೆಟಿಗರಿಗಿಂತಲೂ ಮಿಗಿಲಾಗಿದ್ದಾರೆ.
SPORTS Sep 9, 2019, 6:40 PM IST
ಸೌತ್ ಆಫ್ರಿಕಾ ತಂಡ ಸದ್ಯ ಭಾರತ ವಿರುದ್ದದ ಸರಣಿಗಾಗಿ ಅಭ್ಯಾಸ ಆರಂಭಿಸಿದೆ. ಈಗಾಗಲೇ ಭಾರತಕ್ಕೆ ಆಗಮಿಸಿರುವ ಸೌತ್ ಆಫ್ರಿಕಾ ತಂಡ ಇದೀಗ ಮುಂಬೈ ಮಾಜಿ ಕ್ರಿಕೆಟಿಗನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿದೆ.
SPORTS Sep 9, 2019, 6:00 PM IST
ಕೊನೆಯ ಟಿ20 ಪಂದ್ಯದ ಟಿಕೆಟನ್ನು ಸೆ.16 ರಂದು ಬೆಳಗ್ಗೆ 10 ಗಂಟೆಗೆ ಕೌಂಟರ್ನಲ್ಲಿ ಮಾರಾಟ ಮಾಡಲಾಗುತ್ತದೆ. 5000 ರುಪಾಯಿಗಳಿಗಿಂತ ಹೆಚ್ಚಿನ ಬೆಲೆಯ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಕೊಂಡುಕೊಳ್ಳಬೇಕು.
SPORTS Sep 8, 2019, 5:13 PM IST
ಮೊದಲ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದ್ದು, ಸೆ.18ರಂದು ಮೊಹಾಲಿಯಲ್ಲಿ 2ನೇ ಪಂದ್ಯ ನಡೆಯಲಿದೆ. ಸೆ.22ಕ್ಕೆ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸಲಿದೆ.
SPORTS Sep 8, 2019, 1:02 PM IST
ಮಳೆಯಿಂದಾಗಿ ಪಂದ್ಯವನ್ನು ತಲಾ 20 ಓವರ್ಗೆ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ ‘ಎ’, ಸಂಜು ಸ್ಯಾಮ್ಸನ್ರ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 4 ವಿಕೆಟ್ಗೆ 204 ರನ್ ಗಳಿಸಿತು.
SPORTS Sep 7, 2019, 10:33 AM IST