ವಿಶ್ವಾದ್ಯಂತ ಕೊರೋನಾ ಮಹಾಮಾರಿ ಜನರನ್ನು ಇನ್ನಿಲ್ಲದಂತೆ ನಲುಗಿಸಿದೆ. ಹೀಗಿರುವಾಗ ಈ ಮಹಾಮಾರಿ ಬೆನ್ನಲ್ಲೇ ಸುರಿದ ಭೀಕರ ಮಳೆ, ಭೂಕುಸಿತ ಹಾಗೂ ಪ್ರವಾಹದಿಂದ ಜಪಾನ್ನ ದ್ವೀಪಗಳ ಸ್ವರೂಪವೇ ಬದಲಾಗಿದೆ. ಎಲ್ಲಿ ನೋಡಿದರಲ್ಲಿ ಕುಸಿದ ಭೂಮಿ, ಕಟ್ಟಡ, ರಸ್ತೆ, ಕೊಚ್ಚಿ ಹೋದ ಮನೆ ಹಾಗೂ ವಾಹನಗಳ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಜಪಾನ್ನ ನೈರುತ್ಯ ದ್ವೀಪ ಕ್ಯುಶುನಲ್ಲಿ ಈ ಭೀಕರ ದುರಂತ ಸಂಭವಿಸಿದ್ದು, ಪ್ರವಾಹ ಮತ್ತು ಭೂಕುಸಿತದಲ್ಲಿ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ. ನದಿಗಳು ತುಂಬಿ ಹರಿಯುತ್ತಿದ್ದು, ಮಳೆ ತೀವ್ರಗೊಂಡರರೆ ಜಪಾನ್ ಸ್ಥಿತಿ ಮತ್ತಷ್ಟು ಹದಗೆಡುವುದರಲ್ಲಿ ಅನುಮಾನವಿಲ್ಲ. ಇನ್ನು ಕೊರೋನಾ ವಿಚಾರದಲ್ಲಿ ಜಪಾನ್ ಸ್ಥಿತಿ ಕೊಂಚ ನಿಯಂತ್ರಣದಲ್ಲಿದೆ. ದೇಶದಲ್ಲಿ ಒಟ್ಟು 20,174 ಜನರಿಗೆ ಈ ರೋಗ ಪತ್ತೆಯಾಗಿದೆ. 17,331 ಮಂದಿ ಗುಣಮುಖರಾಗಿದ್ದು, 980 ಮಂದಿ ಸಾವನ್ನಪ್ಪಿದ್ದಾರೆ.
International Jul 10, 2020, 1:27 PM IST
ಹಳೆ ಬಸ್ ನಿಲ್ದಾಣ ಹಾಗೂ ಗ್ರಾಪಂ ಕಟ್ಟಡ ತೆರವುಗೊಳಿಸಿ ನಡೆಸುತ್ತಿದ್ದ ರಸ್ತೆ ಅಭಿವೃದ್ಧಿ ಕಾರ್ಯಾಚರಣೆಗೆ ಮಾಜಿ ಶಾಸಕ ಮತ್ತು ಅವರ ಬೆಂಬಲಿಗರು ತಡೆದು ಜೆಸಿಬಿ ಯಂತ್ರವನ್ನು ಹಾನಿಗೊಳಿಸಿ ಯಂತ್ರದ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
Karnataka Districts Jul 10, 2020, 12:31 PM IST
ಸರ್ಕಾರದ ಕೊರೋನಾ ವೈರಸ್ ನಿಯಂತ್ರಣಕ್ಕೆ ಹೋರಾಡುತ್ತಿದೆ. ಇದರ ನಡುವೆ ದೆಹಲಿಯ ನಾರ್ತ್ ಬ್ಲಾಕ್ನಲ್ಲಿರುವ ಕ್ಯಾಬಿನೆಟ್ ಕಾರ್ಯದರ್ಶಿಗಳ ಕಚೇರಿ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ನಡೆದಿದೆ.
India Jul 9, 2020, 8:06 PM IST
ಮಂಗಳೂರಿನ ಬಿಲ್ಡರ್ ಪಶ್ಚಿಮ ಬಂಗಾಳದಿಂದ ಐವರು ಮೇಸ್ತ್ರಿಗಳನ್ನು ಮಂಗಳೂರಿಗೆ ತರೆಸಿದ್ದಾರೆ. ಈ ಲಾಕ್ಡೌನ್ ಸಮಯದಲ್ಲೂ ಕಟ್ಟಡ ಕೆಲಸಕ್ಕೆ ಕಾರ್ಮಿಕರನ್ನು ವಿಮಾನದಲ್ಲಿ ಕರೆಸಿಕೊಂಡಿರೋದು ವಿಶೇಷ. ಇಲ್ಲಿದೆ ವಿಡಿಯೋ
Karnataka Districts Jul 5, 2020, 3:32 PM IST
ಉಳ್ಳಾಲದ ಮುನ್ನೂರು ಭಾಗದ 25ರ ಹರೆಯದ ಕೊರೊನಾ ಸೋಂಕಿತ ಶನಿವಾರ, 20 ನಿಮಿಷ ಆ್ಯಂಬುಲೆಸ್ಸ್ನಲ್ಲೇ ಉಳಿದಿದ್ದ. ಶಾಸಕ ಯು.ಟಿ. ಖಾದರ್ ನೆರವಿನಿಂದ ಸೋಮಕಿತನನ್ನು ದೇರಳಕಟ್ಟೆಯ ಖಾಸಗಿ ಕಟ್ಟಡದಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದೆ. ಇಲ್ಲಿವೆ ಫೋಟೋಸ್
Karnataka Districts Jul 5, 2020, 8:56 AM IST
ಉಳ್ಳಾಲದ ಮುನ್ನೂರು ಭಾಗದ 25ರ ಹರೆಯದ ಕೊರೊನಾ ಸೋಂಕಿತ ಶನಿವಾರ, 20 ನಿಮಿಷ ಆ್ಯಂಬುಲೆಸ್ಸ್ನಲ್ಲೇ ಉಳಿದಿದ್ದು, ಶಾಸಕರ ಮಧ್ಯಪ್ರವೇಶದ ಬಳಿಕ ಆಸ್ಪತ್ರೆ ವೈದ್ಯರು ದೇರಳಕಟ್ಟೆಯ ಖಾಸಗಿ ಕಟ್ಟಡದಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದಾರೆ.
Karnataka Districts Jul 5, 2020, 8:32 AM IST
ರಕ್ಷಿಸಿದ ವೈದ್ಯೆ ಸಾವಿಗೆ ನೊಂದು ಕಟ್ಟಡದಿಂದ ಹಾರಿ ನಾಯಿ ಸಾವು| ಉತ್ತರ ಪ್ರದೇಶದ ಕಾನ್ಪುರದಲ್ಲೊಂದು ಕರುಣಾಜನಕ ಘಟನೆ
India Jul 4, 2020, 12:00 PM IST
ಖಾಸಗಿ ಕಟ್ಟಡಗಳಲ್ಲಿ ಬಾಡಿಗೆಗೆ ಇರುವ ರಾಜ್ಯದ 14 ಇಲಾಖೆಯ 24 ನಿಗಮ ಮತ್ತು ವಿವಿಧ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Karnataka Districts Jul 1, 2020, 9:42 AM IST
ಸಖರಾಯಪಟ್ಟಣಕ್ಕೆ ಅದರದೇ ಆದ ಇತಿಹಾಸವಿದೆ. ಈ ಪಟ್ಟಣಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಿ ಅಭಿವೃದ್ಧಿಗೆ ಸಹಕರಿಸಲಾಗಿದೆ. ಕಳೆದ ಬಾರಿ ಭೇಟಿ ನೀಡಿದಾಗ ಮಸೀದಿ ರಸ್ತೆ ಮಾಡಿಕೊಡುವುದಾಗಿ ತಿಳಿಸಿದ ಕಾರಣ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 30 ಲಕ್ಷ ರುಪಾಯಿ ಅನುದಾನವನ್ನು ಬಿಡುಗಡೆಗೊಳಿಸಿ ರಸ್ತೆ ನಿರ್ಮಿಸಲಾಗಿದೆ ಎಂದರು.
Karnataka Districts Jun 29, 2020, 10:22 AM IST
ಜಿಲ್ಲೆಯ ಜನರ ಬಹುದಿನಗಳ ಮೆಡಿಕಲ್ ಕಾಲೇಜು ಕನಸು ನನಸಾಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾದ ಕಟ್ಟಡ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. 478 ಕೋಟಿ ರು. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಬೆಂಗಳೂರಿನ ಕೆಬಿಆರ್ ಇನ್ಫ್ರಾಟೆಕ್ ಸಂಸ್ಥೆ ಪಡೆದುಕೊಂಡಿದ್ದು, ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲು ಉದ್ದೇಶಿಸಲಾಗಿದೆ.
Karnataka Districts Jun 29, 2020, 7:45 AM IST
ಫಿಯೋನ್ ಶೆಫರ್ಡ್ ಜನವರಿ 16, 2020ರಲ್ಲಿ ಆಶ್ರಮಕ್ಕೆ ಬಂದಿದ್ದರು. ಮೃತದೇಹವನ್ನು ಶವ ಪರೀಕ್ಷೆ ನಡೆಸಲು ಕರುನಾಗಪಲ್ಲಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಆಶ್ರಮದಲ್ಲಿ ಪ್ರತಿಬಾರಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಸಾಮಾನ್ಯವಾಗಿ ಹೋಗಿದೆ. ಲಾಕ್ಡೌನ್ನಿಂದಾಗಿ ಇಂಗ್ಲೆಂಡ್ ಮರಳಲು ಸಾದ್ಯವಾಗದಿದ್ದರಿಂದ ಮಹಿಳೆ ಸಾಕಷ್ಟು ಖಿನ್ನತೆಗೊಳಗಾಗಿದ್ದರು ಎಂದು ಪೊಲೀಸ್ ಮೂಲಗಳು ಅಂದಾಜಿಸಿವೆ.
CRIME Jun 25, 2020, 5:52 PM IST
ವಿಘ್ನ ನಿವಾರಣೆಗಾಗಿ ಡಿಕೆ ಶಿವಕುಮಾರ್ ಕೆಪಿಸಿಸಿ ಕಟ್ಟಡದಲ್ಲಿ ವಿಶೇಷ ಹೋಮ, ಹವನಾದಿಗಳನ್ನು ಮಾಡಿಸಿ ದೇವರ ಮೊರೆ ಹೋದರು. ಅಲ್ಲಿಗೆ ಬಂದಿದ್ದ ಮಂಗಳಮುಖಿಯರಿಂದ ನಾಣ್ಯ ಪಡೆದು ಆಶೀರ್ವಾದ ಪಡೆದರು. ಮಂಗಳಮುಖಿಯರಿಂದ ನಾಣ್ಯ ಪಡೆಯುವುದು ಶುಭ ಸಂಕೇತ ಎಂಬ ನಂಬಿಕೆಯಿದ್ದು ಅದರಂತೆ ಮಂಗಳಮುಖಿಯರು ಡಿಕೆಶಿಗೆ ನಾಣ್ಯ ನೀಡಿ ಹರಸಿದರು.
state Jun 14, 2020, 3:47 PM IST
ಚಿಕ್ಕಪೇಟೆಯಲ್ಲಿ ಹೂವಿನ ವ್ಯಾಪಾರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಕುಂದನ್ ಜೈನ್ ಆಸ್ಪತ್ರೆಯಲ್ಲಿ ಈ ವೃದ್ಧ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ವೃದ್ಧನ ನಿವಾಸದ ಬಳಿ ಇರುವ ರಸ್ತೆಯನ್ನು ಸೀಲ್ಡೌನ್ ಮಾಡಲಾಗಿದೆ. ಜೊತೆಗೆ ಅಕ್ಕಪಕ್ಕದ ಕಟ್ಟಡಗಳ ನಿವಾಸಿಗಳಿಗೂ ಹೊರ ಬರದಂತೆ ಬಿಬಿಎಂಪಿ ಎಚ್ಚರಿಸಿದೆ. ಈ ಬಗ್ಗೆ ಸ್ಥಳದಿಂದಲೇ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ಇಲ್ಲಿದೆ ನೋಡಿ..!
state Jun 13, 2020, 6:52 PM IST
28 ವರ್ಷದ ಬಾಲಿವುಡ್ ಸೆಲೆಬ್ರಿಟಿ ಮ್ಯಾನೇಜರ್ ದಿಶಾ ಸಾಲಿಯಾನ್ ಮಲಾಡ್ ಹೈರೈಸ್ ಕಟ್ಟಡದ 12ನೇ ಅಂತಸ್ತಿನಿಂದ ಬಿದ್ದು ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ.
News Jun 10, 2020, 3:35 PM IST
ಕಾಮುಕನ ಕಾಮದಾಟಕ್ಕೆ ಸಿಲುಕಿದ 13 ವರ್ಷದ ಬಾಲೆಯೊಬ್ಬಳು, ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ. ಸಿಂದಗಿ ತಾಲೂಕಿನ ಗೊರವಗುಂಡಗಿ ಗ್ರಾಮದ ಕಟ್ಟಡ ಕಾರ್ಮಿಕ ಶರಣಬಸು ಅವರಾದಿ (35) ಬಾಲೆ ಮೇಲೆ ಅತ್ಯಾಚಾರ ಎಸಗಿದ ಕಾಮುಕ.
Karnataka Districts Jun 2, 2020, 1:25 PM IST