NEWS Jul 31, 2018, 4:39 PM IST
NEWS Jul 31, 2018, 4:12 PM IST
NEWS Jul 17, 2018, 5:26 PM IST
NEWS Jul 17, 2018, 4:59 PM IST
NEWS Jul 17, 2018, 4:26 PM IST
ದೆಹಲಿಯ ಕರ್ನಾಟಕ ಭವನದಲ್ಲಿ ಸಿದ್ದರಾಮಯ್ಯ ಕಾಲದಲ್ಲಿ ಮುಖ್ಯಮಂತ್ರಿಯ ಡ್ಯೂಟಿಗಿದ್ದ ಎಲ್ಲ ಸಿಬ್ಬಂದಿಯನ್ನು ಬದಲಾಯಿಸಲಾಗಿದೆ.
NEWS Jul 17, 2018, 3:58 PM IST
ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಒಂದು ಅಂದಾಜಿನ ಪ್ರಕಾರ 5500ರಿಂದ 6000 ಕೋಟಿವರೆಗೆ ಖರ್ಚಾಗಿದೆಯಂತೆ. ಎರಡು ರಾಷ್ಟ್ರೀಯ ಪಕ್ಷಗಳು ತಲಾ 700ರಿಂದ 800 ಕೋಟಿವರೆಗೆ ಪ್ರಚಾರ, ಪಾರ್ಟಿ ಫಂಡ್ಗಾಗಿ ಖರ್ಚು ಮಾಡಿದ್ದು, ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡ 200ರಿಂದ 300 ಕೋಟಿವರೆಗೆ ಖರ್ಚು ಮಾಡಿರುವ ಬಗ್ಗೆ ಅಂದಾಜು ಮಾಡಲಾಗಿದೆ. ಇದನ್ನು ಬಿಟ್ಟು ಅಭ್ಯರ್ಥಿಗಳು 3000 ಕೋಟಿವರೆಗೆ ಹಣ ಖರ್ಚು ಮಾಡಿರುವ ಬಗ್ಗೆ ಅಂದಾಜಿದೆ.
NEWS Jul 17, 2018, 3:31 PM IST
ವಿಷಕಂಠ ತಾನು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅತ್ತಿದ್ದು ದೇಶದ ತುಂಬೆಲ್ಲ ಸುದ್ದಿಯಾಗಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ ಎನ್ನುತ್ತಿವೆ ಟೆನ್ ಜನಪಥ್ ಮೂಲಗಳು.
NEWS Jul 17, 2018, 1:45 PM IST
2014ರ ಲೋಕಸಭೆ ಚುನಾವಣೆಯಲ್ಲಿ ಮೋದಿಯವರ ಪ್ರಚಾರದ ಹೊಣೆ ವಹಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ಮತ್ತೊಮ್ಮೆ ಮೋದಿ ತಂಡಕ್ಕೆ ವಾಪಸ್ ಆಗಲು ಅಮಿತ್ ಶಾ ಒಪ್ಪಿದ್ದಾರೆ. 2019ರ ಲೋಕಸಭೆ ಚುನಾವಣೆಗೆ 6 ತಿಂಗಳ ಮುಂಚೆಯೇ ಪ್ರಶಾಂತ್ 5 ವಾರ್ ರೂಮ್ಗಳನ್ನು ಆರಂಭಿಸಲಿದ್ದಾರೆ.
NEWS Jul 17, 2018, 1:29 PM IST
ದೇವೇಗೌಡರ ಪತ್ರಿಕಾಗೋಷ್ಠಿ ಎಂದ ಮೇಲೆ ಸಿಟ್ಟು ಸೆಡವು, ಅಯ್ಯೋ ರಾಮ, ಅಯ್ಯೋ ಶಿವನೇ, ಸ್ವಲ್ಪ ಬಂದೆ ಇರಿ ಸಾರ್, ಜೀವನದಲ್ಲಿ ಇಂಥ ಕೆಟ್ಟಸರ್ಕಾರ ನೋಡಿಲ್ಲ... ಎಂಬ ಪದ ಪ್ರಯೋಗಗಳು ಮಾಮೂಲು. ಆದರೆ ಅಧಿಕಾರ ಹಿಡಿದ ನಂತರ ಮೊದಲ ಬಾರಿ ದಿಲ್ಲಿಯಲ್ಲಿ 45 ನಿಮಿಷ ಮಾತನಾಡಿದ ದೇವೇಗೌಡರು ನಗು ನಗುತ್ತಲೇ ಇದ್ದರೇ ಹೊರತು ಒಮ್ಮೆಯೂ ಮುಖ ಗಂಟು ಹಾಕಲಿಲ್ಲ.
NEWS Jul 3, 2018, 3:28 PM IST
ಇಫ್ತಾರ್ ಕೂಟ ನಡೆಸಿದ ನಂತರ ಮತ್ತೆ ಹೊರಗೆ ಹಾರಿರುವ ರಾಹುಲ್ ಗಾಂಧಿ ಬಗ್ಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ನಾಯಕರಿಗೆ ಬಹಳಾನೇ ಮುಜುಗರವಾಗುತ್ತದೆ. ಕರ್ನಾಟಕದ ಕಾಂಗ್ರೆಸ್ ನಾಯಕರಂತೂ ಖಾಸಗಿಯಾಗಿ ‘ಏನ್ ಸರ್, ನಾವು ಯಾರ ಹತ್ತಿರ ದುಃಖ ಹೇಳಿಕೊಳ್ಳೋದು? ಸೋನಿಯಾ ಗಾಂಧಿ ಟೈಮೇ ಕೊಡೋಲ್ಲ. ರಾಹುಲ್ ಗಾಂಧಿಗೆ ಟೈಮೇ ಸಿಗೋಲ್ಲ. ದೇವೇಗೌಡರು ನಮ್ಮನ್ನು ಆಪೋಶನ ತೆಗೆದುಕೊಂಡ ಮೇಲೆ ಗೊತ್ತಾಗುತ್ತದೆ ಬಿಡಿ ಹಣೆಬರಹ’ ಎನ್ನುತ್ತಿರುತ್ತಾರೆ.
NEWS Jul 3, 2018, 3:07 PM IST
ಲೋಕಸಭೆಯಲ್ಲಿ ಮೈತ್ರಿ ಸಾಧ್ಯವಿಲ್ಲ, ಅನಗತ್ಯ ಒತ್ತಡ ಹೇರಬೇಡಿ ಎಂದೂ ಹೈಕಮಾಂಡ್ಗೆ ಅವರು ಹೇಳಿದ್ದಾರಂತೆ. ಧರ್ಮಸ್ಥಳದ ಶಾಂತಿವನದ ಸಿ.ಡಿ. ಬಿಡುಗಡೆಯಾದ ನಂತರ ದೂರವಾಣಿಯಲ್ಲಿ ತಮ್ಮನ್ನು ಸಂಪರ್ಕಿಸಿದ ಅಹ್ಮದ್ ಪಟೇಲ್, ಗುಲಾಂ ನಬಿ ಆಜಾದ್ಗೆ ಈ ಎಲ್ಲಾ ವಿಷಯವನ್ನು ಸಿದ್ದರಾಮಯ್ಯ ತಿಳಿಸಿದ್ದಾರೆ ಎನ್ನಲಾಗುತ್ತಿದ್ದು, ‘ಮೈತ್ರಿಯಿಂದ ಒಂದು ಕಡೆ ಬಿಜೆಪಿ ಪ್ರಬಲವಾಗುತ್ತದೆ, ಇನ್ನೊಂದು ಕಡೆ ಜೆಡಿಎಸ್ ಮೊದಲಿಗಿಂತ ಅಧಿಕಾರದ ಬಲದ ಮೇಲೆ ಚಿಗುರಿಕೊಳ್ಳುತ್ತದೆ. ಆದರೆ ನಷ್ಟಅನುಭವಿಸುವುದು ಕಾಂಗ್ರೆಸ್. ದಯವಿಟ್ಟು ನಿಮ್ಮ ದಿಲ್ಲಿ ರಾಜಕೀಯಕ್ಕಾಗಿ ರಾಜ್ಯದ ಕಾಂಗ್ರೆಸ್ ಬಲಿ ಕೊಡಬೇಡಿ. ಇದನ್ನು ದಯವಿಟ್ಟು ರಾಹುಲ್ ಗಾಂಧಿಗೆ ತಿಳಿಸಿ ಹೇಳಿ’ ಎಂದು ಕೇಳಿಕೊಂಡಿದ್ದಾರೆಂದು ಕೆಲ ಕಾಂಗ್ರೆಸಿಗರೇ ಮಾತನಾಡಿಕೊಳ್ಳುತ್ತಿದ್ದಾರೆ.
NEWS Jul 3, 2018, 1:35 PM IST
ಎಐಸಿಸಿ ಅಧ್ಯಕ್ಷ ರಾಹುಲ್ರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಸುಮಾರು ಅರ್ಧ ಗಂಟೆ ಮಾತನಾಡಿದರು. ಅದರಲ್ಲಿ 20 ನಿಮಿಷ ಸಿದ್ದರಾಮಯ್ಯ ಬಗ್ಗೆಯೇ ಹೇಳಿದರು ಎನ್ನಲಾಗಿದೆ.
NEWS Jun 19, 2018, 2:57 PM IST
ಕರ್ನಾಟಕದಲ್ಲಿ ಬಿಜೆಪಿಯನ್ನು ಹೊರಗಿಡಲು ದೇವೇಗೌಡರ ಮೊರೆ ಹೋದ ಕಾಂಗ್ರೆಸ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಾಯಾವತಿ ಜೊತೆ ಮೈತ್ರಿಗೆ ಮುಂದಾಗಿದೆ. ದಲಿತ ಮತಗಳು ಹರಿದು ಹಂಚಬಾರದು ಎಂದು ರಾಹುಲ್ ಗಾಂಧಿ ಅವರು ಗುಲಾಂ ನಬಿ ಆಜಾದ್ಗೆ ಮಾಯಾವತಿ ಜೊತೆ ಮಾತನಾಡುವ ಜವಾಬ್ದಾರಿ ವಹಿಸಿದ್ದಾರೆ.
Jun 12, 2018, 6:32 PM IST
ಮೋದಿ ಸರ್ಕಾರದಲ್ಲಿ ವಿಪಕ್ಷಗಳು ಕೂಡ ಇಷ್ಟಪಡುವ ಸಚಿವರೆಂದರೆ ನಿತಿನ್ ಗಡ್ಕರಿ. ತನ್ನ ಬಳಿ ಬಂದವರಿಗೆಲ್ಲ ‘ಯಸ್’ ಅಂದು ಕೇಳಿದ ಕೆಲಸ ಮಾಡಿಕೊಡುವ ಗಡ್ಕರಿ ಎಂದರೆ ಮೋದಿ ಸಾಹೇಬರಿಗೆ ವೈಯಕ್ತಿಕವಾಗಿ ಸ್ವಲ್ಪ ಇರುಸುಮುರಿಸು ಇದೆಯಾದರೂ ಅವರ ಕೆಲಸದ ಬಗ್ಗೆ ಮೆಚ್ಚುಗೆಯಿದೆ.
Jun 12, 2018, 6:23 PM IST