Asianet Suvarna News Asianet Suvarna News

ಉಪ್ಪಿಯ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಚಿತ್ರದ ಧ್ವನಿ ಸುರುಳಿ ಅದ್ಧೂರಿ ಬಿಡುಗಡೆ

ಕನ್ನಡಿಗರ ಮತ್ತೊಂದು ಹೆಮ್ಮೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ. ರಿಯಲ್  ಸ್ಟಾರ್ ಉಪೇಂದ್ರ ನಾಯಕರಾಗಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಿರುವ  ಕಬ್ಜ ಸಿನೆಮಾದ  ಧ್ವನಿಸುರುಳಿ ಬಿಡುಗಡೆ ಮಾಡಲಾಗಿದೆ. 

Upendra pan India film Kabzaa audio launched in sidlaghatta gow
Author
First Published Feb 26, 2023, 10:40 PM IST

ಬೆಂಗಳೂರು (ಫೆ.26): ಕನ್ನಡಿಗರ ಮತ್ತೊಂದು ಹೆಮ್ಮೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ. ರಿಯಲ್  ಸ್ಟಾರ್ ಉಪೇಂದ್ರ ನಾಯಕರಾಗಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ  ಹಾಗೂ ಮುದ್ದಾದ ಚೆಲುವೆ ಶ್ರೆಯಾ ಶರಣ್ ಸೇರಿದಂತೆ ಅದ್ದೂರಿ ತಾರಾಗಣ ಇರೋ ಕಬ್ಜ ಅಪ್ಪು ಹುಟ್ಟುಹಬ್ಬಕ್ಕೆ ರಿಲೀಸ್ ಆಗ್ತಿದೆ. ಹೀಗಾಗಿ ಸಿನಿಮಾದ ಪ್ರಚಾರಕ್ಕೆ ಹೈದರಾಬಾದ್ ಹಾಗೂ ಚೆನ್ನೈಗೆ ಹೋಗಿ ಬಂದಿರೋ ಕಬ್ಜ ಗ್ಯಾಂಗ್, ಈಗ ಕರ್ನಾಟದಲ್ಲಿ ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸಿದೆ. ಶಿಡ್ಲಘಟ್ಟದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಇಂದು  'ಕಬ್ಜ' ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಲಾಗಿದೆ. 

ಕಬ್ಜ ಸಿನಿಮಾದ ಮೂರನೇ ಹಾಡನ್ನು ಗೀತಾ ಶಿವರಾಜ್ ಕುಮಾರ್ ದಂಪತಿ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ R.ಚಂದ್ರು ಊರಿನಲ್ಲೇ 'ಕಬ್ಜ' ಆಡಿಯೋ ಲಾಂಚ್ ಮಾಡಲಾಗಿದೆ. ಗಾಯಕ ಗುರುಕಿರಣ್ ಮ್ಯೂಸಿಕಲ್ ನೈಟ್ಸ್  ನಡೆದಿದ್ದು, ಕಾರ್ಯಕ್ರಮದಲ್ಲಿ ನಟ ಉಪೇಂದ್ರ, ನಟಿ ಶ್ರೇಯಾ ಶರಣ್, ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ಡಾಲಿ ಧನಂಜಯ್ ಭಾಗಿ ಆಗಲಿದ್ದಾರೆ. ಮಾರ್ಚ್.17ಕ್ಕೆ ಕಬ್ಜ ಸಿನಿಮಾ ಬಿಡುಗಡೆಯಾಗಲಿದೆ. 

ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಕೆ ಸುಧಾಕರ್ ಮಾತನಾಡಿ, ಕಬ್ಜ ಸಿನಿಮಾದ ಹಬ್ಬ ಅಂತ ಅನ್ನಿಸುತ್ತಿದೆ. ಕಬ್ಜ ಸಿನಿಮಾ ಹಾಡನ್ನ ನಮ್ಮೂರಲ್ಲಿ ಮಾಡೋಣ ಅಂದಿದ್ದೆ. ಆದ್ರೆ ಕಬ್ಜ ನಿರ್ದೇಶಕ ಆರ್ ಚಂದ್ರುಗೆ ಶಿಡ್ಲಘಟ್ಟ ಮೇಲೆ ಪ್ರೀತಿ‌ ಹೀಗಾಗಿ ಕಬ್ಜ ಆಡಿಯೋ ಲಾಂಚ್ ಮಾಡಿದ್ದಾರೆ. ಶಿವಣ್ಣ ದಂಪತಿ ಈ ಸಿನಿಮಾದ ಹಾಡು ಬಿಡುಗಡೆ ಮಾಡಿದ್ದಾರೆ. ಶಿವಣ್ಣ ಏನ್ ತಿಂತಾರೆ ಅಂತ‌ ಗೊತ್ತಿಲ್ಲ, ಇವತ್ತಿಗೂ ತುಂಬಾ  ಹ್ಯಾಂಡ್ಸಮ್ ಆಗಿದ್ದಾರೆ. ಸುದೀಪ್ ಹೇಳಿದ್ರು ಕಬ್ಜ ಸಿನಿಮಾ ಉಪ್ಪಿಯನ್ನ ರೀ ಲಾಂಚ್ ಮಾಡುತ್ತೆ ಅಂತ, ಕಬ್ಜದ ಹಾಡು ಟೀಸರ್ ನೋಡಿದ್ರೆ ಅದು ನಿಜ ಅನ್ನಿಸುತ್ತೆ. ಉಪೇಂದ್ರ ಬಿದ್ದಿವಂತ ಕಲಾವಿದ. ಉಪ್ಪಿ ಅವರ‌ ಸಿನಿಮಾಗಳನ್ನ ನೋಡಿದ್ದೇನೆ. ಗುಜರಾತ್ ನಲ್ಲಿ ಕನ್ನಡ ಸಿನಿಮಾ ಬಗ್ಗೆ ಮಾತಾಡ್ತಾರೆ ಎಂದರು.

ರಿಯಲ್ ಸ್ಟಾರ್ ಸಿಗ್ನೇಚರ್ ಸ್ಟೆಪ್ಸ್: ಉಪ್ಪಿಯ ರೆಟ್ರೋ ಸ್ಟೈಲ್'ಗೆ ಫ್ಯಾನ್ಸ್ ಫಿದಾ

ಕಾರ್ಯಕ್ರಮದಲ್ಲಿ ಉಪೇಂದ್ರ ಮಾತನಾಡಿ, ರವಿ ಬಸ್ರೂರು ಈಗಿನ ಮ್ಯೂಸಿಕ್ ಮಾಂತ್ರಿಕ. ಮಾಸ್, ಕ್ಲಾಸಿಕಲ್, ಮೆಲೋಡಿ ಹಾಡು ಕೊಡ್ತಾರೆ ಎಂದ ಉಪ್ಪಿ ಆರ್ ಚಂದ್ರುಗೆ ನೀವೇನಾದ್ರು ರಾಜಕೀಯಕ್ಕೆ ಬರ್ತೀರಾ ಅಂತ ಕೇಳಿದರು. ಚಂದ್ರು ಬಾಯಲ್ಲಿ ರಾಜಕೀಯ ಅಂತ ಬಂತು‌ ಪ್ರಜಾಕೀಯ ಬರಲಿ. ನಿಮ್ಮನ್ನೆಲ್ಲಾ ನೋಡಿ ತುಂಬಾ ಖುಷಿ ಆಯ್ತು. ಕಬ್ಜ ಸಿನಿಮಾದಿಂದ ನಿಮ್ಮೆಲ್ಲರ ಹೃದಯ ಕದಿಯುತ್ತಾರೆ. ಮಾರ್ಚ್ 17 ತಾರೀಖು ಸಿನಿಮಾ ರಿಲೀಸ್ ಆಗ್ತಿದೆ. ಶ್ರೀಯಾ ಗೆ ಒಂದು ಮಗು ಇದೆ.  ಆದ್ರೆ ಶ್ರೀಯಾನೆ ಮಗು ತರ ಇದ್ದಾರೆ. ಈ‌ ಸಿನಿಮಾದಲ್ಲಿ ಕಿಚ್ಚ ಸುದೀಪ್ ಇದ್ದಾರೆ. ಇದರ ಜೊತೆಗೆ ದೊಡ್ಡ ಸರ್‌ಪ್ರೈಸ್ ಕೂಡ ಇದೆ. ನಾನು ರಾಜ್ಯ ಕಟ್ಟೋದು ಕತ್ತಿಗಳಿಂದ ಕೈಗಳಿಂದ ಅಂತ ಕಬ್ಜ ಡೈಲಾಗ್ ಹೊಡೆದರು. ಬಳಿಕ ಶ್ರೀಯಾ ಶರಣ್ ಗೆ  ಉಪ್ಪಿ ರಕ್ತ ಕಣ್ಣೀರು ಸಿನಿಮಾ ಡೈಲಾಗ್ ಹೊಡೆದರು. ಉಪ್ಪಿ ಡೈಲಾಗ್ ಗೆ  ಶ್ರೀಯಾ ಶರಣ್ ನಾಚಿ ನೀರಾದರು.

ನಾಳೆ ಶಿಡ್ಲಘಟ್ಟದಲ್ಲಿ 'ಕಬ್ಜ' ಆಡಿಯೋ ಬಿಡುಗಡೆ: ಒಂದು ಲಕ್ಷ ಮಂದಿ ಸೇರುವ ನಿರೀಕ್ಷೆ

ಉಪ್ಪಿ ಸರ್ ತುಂಬಾ ಬುದ್ಧಿವಂತ ಜ್ಮಾನವಂತ. ಪವನ್ ಕಲ್ಯಾಣ್ ಸರ್ ನಮ್ಮ ಸಿನಿಮಾಗೆ ವಿಶ್ ಮಾಡಿದ್ದಾರೆ ಎಂದು ಚಂದ್ರು ಹೇಳಿದರು. ಪತ್ರದ ಮೂಲಕ ಕಬ್ಜ ಸಿ‌ನಿಮಾಗೆ ಪವನ್ ಕಲ್ಯಾಣ್ ವಿಶ್ ಮಾಡಿದ್ದಾರೆ. ಇನ್ನು ಇದೇ ವೇಳೆ ಸ್ಟೇಜ್ ಮೇಲೆ  ಶಿವಣ್ಣ,  ಉಪೇಂದ್ರ ಡಾನ್ಸ್ ಮಾಡಿದರು.

Follow Us:
Download App:
  • android
  • ios