2ನೇ ಮದುವೆಗೆ ಗಂಡು ರೆಡಿ ಇದ್ದ; ಮಗಳ ಆ ಮಾತಿಗೆ ಸಿಂಗಲ್ ಆಗಿ ಉಳಿದ ನಟಿ ಉಮಾಶ್ರೀ, ಯಾಕೆ?

Synopsis
ಕಿರುತೆರೆ, ಹಿರಿತೆರೆ ಪ್ರೇಕ್ಷಕರಿಗೆ ಹತ್ತಿರ ಆಗಿರೋ ರಾಜಕಾರಣಿ ಉಮಾಶ್ರೀ ಎರಡನೇ ಮದುವೆ ಆಗಲೇ ಇಲ್ಲ. ಮಗಳ ಕಾರಣಕ್ಕೆ ಅವರು ಮತ್ತೆ ಮದುವೆ ಆಗಲಿಲ್ಲ. ಈ ಬಗ್ಗೆ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ ನಟಿ ಉಮಾಶ್ರೀ ಮಾತನಾಡಿದ್ದಾರೆ.
ಖ್ಯಾತ ನಟಿ ಉಮಾಶ್ರೀಗೆ ಈಗ 67ರ ಹರೆಯ. ಮದುವೆಯಾಗಿ, ಗಂಡ ಬಿಟ್ಟ ನಂತರದಲ್ಲಿ ಕುಡಿತಕ್ಕೂ ದಾಸರಾಗಿದ್ದರು. ಇದೆಲ್ಲವನ್ನು ಮೆಟ್ಟಿ ಮಕ್ಕಳನ್ನು ಬೆಳೆಸಬೇಕಾದಂತಹ ಅನಿವಾರ್ಯತೆ ಇತ್ತು. ಇಂದು ಉಮಾಶ್ರೀ ಏನಾಗಿದ್ದಾರೆ ಎನ್ನೋದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆದರೆ ಅವರು ಯಾಕೆ ಎರಡನೇ ಮದುವೆ ಆಗಲಿಲ್ಲ ಎಂದು ಮುಕ್ತವಾಗಿ ಮಾತನಾಡಿದ್ದಾರೆ.
ವೇಶ್ಯೆ ಆಗೋಕೆ ಇಷ್ಟ ಇರಲಿಲ್ಲ
“1984 ನಂತರ ನಾನು ಒಂದಿನವೂ ಕುಡಿದಿಲ್ಲ. ನಟಿಯನ್ನು ಹೇಗೆ ರೂಪಿಸಿಕೊಳ್ಳಬೇಕೋ ಹಾಗೆ ರೂಪಿಸಿಕೊಂಡು ಬರುತ್ತಾ ಹೋದೆ. ನಟಿ ವಿಲಾಸದ ವಸ್ತು, ಮನರಂಜನೆ ಕೊಡುತ್ತಾಳೆ, ಆರಂಭದಲ್ಲಿ ಅಂಗಾಂಗ ಪ್ರದರ್ಶನ ಮಾಡುತ್ತ, ಪುರುಷರನ್ನು ಸೆಳೆಯುವ ಪಾತ್ರಗಳನ್ನು ಮಾಡಿದೆ. ಆಮೇಲೆ ಕಾಮಿಡಿ ಪಾತ್ರಗಳನ್ನು ಮಾಡಿದೆ. ಆರಂಭದಲ್ಲಿ ನನಗೆ ದುಡಿಯಬೇಕು, ದುಡ್ಡು ಮಾಡಬೇಕು ಎನ್ನೋದು ಮಾತ್ರ ಇತ್ತು. ಆದರೆ ವೇಶ್ಯೆ ಆಗಬಾರದು, ನನ್ನ ದೇಹವನ್ನು ಹರಾಜಿಗೆ ಹಾಕಬಾರದು, ಆತ್ಮಹತ್ಯೆ ಮಾಡಿಕೊಳ್ಳಬಾರದು. ಗಂಡನ ಮುಂದೆ ಮಕ್ಕಳನ್ನು ಬೆಳೆಸಿ ತೋರಸ್ತೀನಿ ಅಂತ ಸವಾಲು ಹಾಕಿದ್ದೆ. ಹೀಗೆ ನಾನು ಯಾರಿಗೂ ಕೇರ್ ಮಾಡದೆ ಬದುಕಿದೆ” ಎಂದು ನಟಿ ಉಮಾಶ್ರೀ ಹೇಳಿದ್ದಾರೆ.
ನೀರು ಕೊಡಿ ಅಂದ್ರೆ ಬರೀ ಡೈಲಾಗೇ ಕೊಡ್ತಾರೆ, ಏನ್ ಮಾಡ್ಲಿ: ಶೂಟಿಂಗ್ ಸೆಟ್ನಲ್ಲಿ ನಟಿ ಉಮಾಶ್ರೀ ಗೋಳು ಕೇಳಿ...
ಮತ್ತೆ ಮದುವೆ ಆಗಬೇಡ ಅಂತ ಮಗಳು ಹೇಳಿದಳು
“ನನ್ನ ಸ್ನೇಹಿತರೆಲ್ಲರೂ ತುಂಬ ಸಲ ಎಷ್ಟು ದಿನ ಒಂಟಿಯಾಗಿ ಇರ್ತೀಯಾ? ನಿನಗೆ ಸಂಗಾತಿ ಬೇಕು, ಅರವತ್ತನೇ ವರ್ಷಕ್ಕೆ ನೀನು ಒಂಟಿ ಆಗ್ತೀಯಾ ಅಂತ ಬುದ್ಧಿ ಹೇಳಿದ್ದರು. ಅದೇ ಸಮಯಕ್ಕೆ ಟಿ ಎನ್ ಸೀತಾರಾಮ್ ಅವರು ರಮೇಶ್ ಬಂದಗದ್ದೆ ಅವರಿಗೆ ನನ್ನನ್ನು ಮದುವೆ ಮಾಡಿಕೊಡಬೇಕು ಅಂತ ಅಂದುಕೊಂಡಿದ್ದರು. ಆಗ ಮಗಳ ಬಳಿ “ನಾನು ಮದುವೆ ಆಗಲಾ?” ಅಂತ ಪ್ರಶ್ನೆ ಮಾಡಿದಾಗ ಅವಳು “ನನ್ನ ತಾಯಿಯನ್ನು ಬೇರೆಯವರ ಜೊತೆ ಹಂಚಿಕೊಳ್ಳೋಕೆ ಇಷ್ಟ ಇಲ್ಲ” ಅಂತ ಅಂದುಳು. ಹೀಗಾಗಿ ನಾನು ಬೇರೆ ಮದುವೆ ಆಗಲಿಲ್ಲ” ಎಂದು ನಟಿ ಉಮಾಶ್ರೀ ಹೇಳಿದ್ದಾರೆ.
Kannada Serial TRP 2025; ಎಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ನಂ 1 ಪಟ್ಟ ಪಡೆದ ಸೀರಿಯಲ್ ಯಾವುದು?
ಲೋಕೇಶ್ ಹೇಳಿದಂತೆ ಮಿನಿಸ್ಟರ್ ಆದೆ
“ನನ್ನ ಗಂಡ ಎರಡನೇ ಮದುವೆಯಾಗಿ ಮಕ್ಕಳಾಗಿದ್ದಾರೆ. ಆ ಬಳಿಕವೂ ನಮ್ಮ ಮನೆಗೆ ಬರುತ್ತಿದ್ದರು. ನಾನು ಅವರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ್ದೇನೆ. ಆಗ ಲೀಗಲಿ ಡಿವೋರ್ಸ್ ತಗೊಂಡಿರಲಿಲ್ಲ. ಇದರಿಂದ ಸಮಸ್ಯೆ ಆಗುತ್ತದೆ ಅಂತ ಲೋಕೇಶ್ ಅವರು ಹೇಳಿದರು. ಆಗ ನಾನು ಡಿವೋರ್ಸ್ ತಗೊಂಡೆ. ನಟಿಯರು ಹುಟ್ಟೋದೇ ನಮ್ಮ ಸುತ್ತಮುತ್ತಲಿನ ಜಗತ್ತಿಕ್ಕೋಸ್ಕರ. ನಾವು ನಮಗೋಸ್ಕರ ಅಲ್ಲದೇ ಹೋದ್ರೂ, ನಾವು ಕಟ್ಟಿಕೊಂಡು ಬದುಕಿಗೋಸ್ಕರ ಬದುಕಬೇಕಾಗುತ್ತದೆ. ನೀನು ಮಿನಿಸ್ಟರ್ ಕಾರ್ ಮೇಲೆ ಬರುತ್ತೀಯಾ ಅಂತ ಲೋಕೇಶ್ ಅವರು ಹೇಳಿದ್ದರು. ಹಾಲಿನ ಬಾಟಲಿ ಜೊತೆಗೆ ನಾಟಕದ ದಿನಗಳಲ್ಲಿ ನನ್ನ ಮಗುವನ್ನು ಎತ್ಕೊಂಡು ಹೋಗುತ್ತಿದ್ದೆ” ಎಂದು ಉಮಾಶ್ರೀ ಹೇಳಿದ್ದಾರೆ.
ನೀಚರ ನಾಲಿಗೆ ಇಷ್ಟೆಲ್ಲಾ ಕೆಲ್ಸ ಮಾಡಿತ್ತಾ?.. ಅಯ್ಯೋ ಪಾಪ ನಟಿ ಉಮಾಶ್ರೀ ಮೇಡಂ..!
ಪುರುಷರ ಕಡೆ ಗಮನಕೊಡಬಾರದು ಅಂತ ರಾಜಕೀಯಕ್ಕೆ ಇಳಿದೆ
“ಒಂಟಿ ಜೀವನವನ್ನು ಹೇಗೆ ಜಯಿಸೋದು ಎನ್ನೋದು ಕಲಿತಿದ್ದೆ. ರಾತ್ರಿ ಪೂರ್ತಿ ನಾಟಕ ಮಾಡುತ್ತಿದ್ದೆ. ಬೆಳಗ್ಗೆ ನಿದ್ದೆ ಮಾಡಿ ಮತ್ತೆ ರಾತ್ರಿ ನಾಟಕಕ್ಕೆ ರೆಡಿ ಆಗುತ್ತಿದ್ದೆ. ಹೀಗೆ 2001ರವರೆಗೂ ಕಳೆದೆ. ನನ್ನ ಗಮನಗಳು ಬೇರೆ ಕಡೆಗೆ ಹೋಗತ್ತೆ, ಪುರುಷರ ಕಡೆಗೆ ಗಮನ ಹೋಗತ್ತೆ ಅಂತ 38ನೇ ವಯಸ್ಸಿಗೆ ರಾಜಕೀಯಕ್ಕೆ ಇಳಿದೆ. ಆಗ ನಾನು ರಾಜಕೀಯ ಕ್ಷೇತ್ರದ ಕಡೆಗೆ ಗಮನ ಕೊಟ್ಟು ಎಂಎಲ್ಎ ಆದೆ, ಎಂಎಲ್ಸಿ ಆದೆ, ಮಿನಿಸ್ಟರ್ ಕೂಡ ಆದೆ” ಎಂದು ಉಮಾಶ್ರೀ ಹೇಳಿಕೊಂಡಿದ್ದಾರೆ.
ಸದ್ಯ ಉಮಾಶ್ರೀ ಅವರು ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಜನರಿಗೆ ಇನ್ನಷ್ಟು ಹತ್ತಿರ ಆಗಿದ್ದಾರೆ.