Chanakya Niti bravery: ಚಾಣಕ್ಯರು ತಮ್ಮ ನೀತಿಯಲ್ಲಿ, ಒಬ್ಬ ವ್ಯಕ್ತಿಯು ಎಂದಿಗೂ ಧೈರ್ಯವನ್ನು ಪ್ರದರ್ಶಿಸಬಾರದ ಕೆಲವು ಸಂದರ್ಭಗಳನ್ನು ಸಹ ಉಲ್ಲೇಖಿಸಿದ್ದಾರೆ. ನೀವು ಎಷ್ಟೇ ಧೈರ್ಯಶಾಲಿಯಾಗಿದ್ದರೂ, ಈ ಸಂದರ್ಭಗಳಲ್ಲಿ ಶಾಂತವಾಗಿರುವುದು ಬುದ್ಧಿವಂತಿಕೆ.

ಆಚಾರ್ಯ ಚಾಣಕ್ಯ ಅತ್ಯಂತ ಜ್ಞಾನಿ, ಬುದ್ಧಿವಂತ ಪುರುಷರಲ್ಲಿ ಒಬ್ಬರೆಂದು ಪ್ರಸಿದ್ಧರಾಗಿದ್ದಾರೆ. ಅವರು ಮಾನವೀಯತೆಯ ಕಲ್ಯಾಣಕ್ಕಾಗಿ ಅನೇಕ ಮಾತುಗಳನ್ನು ಹೇಳಿದ್ದಾರೆ. ಅದು ಇಂದಿಗೂ ನಮ್ಮನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸಲು ಸಹಾಯ ಮಾಡುತ್ತದೆ. ಚಾಣಕ್ಯ ಹೇಳಿದ್ದನ್ನು ಇಂದು 'ಚಾಣಕ್ಯ ನೀತಿ' ಎಂದು ಕರೆಯಲಾಗುತ್ತದೆ. ಚಾಣಕ್ಯರು ತಮ್ಮ ನೀತಿಯಲ್ಲಿ, ಒಬ್ಬ ವ್ಯಕ್ತಿಯು ಎಂದಿಗೂ ಧೈರ್ಯವನ್ನು ಪ್ರದರ್ಶಿಸಬಾರದ ಕೆಲವು ಸಂದರ್ಭಗಳನ್ನು ಸಹ ಉಲ್ಲೇಖಿಸಿದ್ದಾರೆ. ನೀವು ಎಷ್ಟೇ ಧೈರ್ಯಶಾಲಿಯಾಗಿದ್ದರೂ, ಈ ಸಂದರ್ಭಗಳಲ್ಲಿ ಶಾಂತವಾಗಿರುವುದು ಬುದ್ಧಿವಂತಿಕೆ. ಏಕೆಂದರೆ ನಿಮ್ಮ ಸಂಯಮವನ್ನು ಕಳೆದುಕೊಳ್ಳುವುದು ಸಾಕಷ್ಟು ತೊಂದರೆಗೆ ಕಾರಣವಾಗಬಹುದು. ಆದ್ದರಿಂದ ಈ ಸಂದರ್ಭಗಳನ್ನು ವಿವರವಾಗಿ ನೋಡೋಣ..

ನಿಮ್ಮ ಮುಂದೆ ಇರುವ ವ್ಯಕ್ತಿ ಕೋಪದಲ್ಲಿದ್ದಾಗ
ಚಾಣಕ್ಯರ ಪ್ರಕಾರ, ನಿಮ್ಮ ಮುಂದೆ ಇರುವ ವ್ಯಕ್ತಿ ತುಂಬಾ ಕೋಪಗೊಂಡಿರುವಾಗ ನೀವು ಎಂದಿಗೂ ಧೈರ್ಯವನ್ನು ಪ್ರದರ್ಶಿಸಬಾರದು. ಕೋಪಗೊಂಡ ವ್ಯಕ್ತಿಯೊಂದಿಗೆ ವಾದ ಮಾಡುವುದು ಅಥವಾ ತೊಡಗಿಸಿಕೊಳ್ಳುವುದು ಅತ್ಯಂತ ಹಾನಿಕಾರಕ. ಒಬ್ಬ ವ್ಯಕ್ತಿಯು ಕೋಪಗೊಂಡಾಗ, ಅವರು ಸರಿ ಮತ್ತು ತಪ್ಪುಗಳ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾರೆ ಮತ್ತು ಇದು ಅವರು ನಿಮ್ಮ ವಿರುದ್ಧ ಅನೈತಿಕ ಕ್ರಮಗಳನ್ನು ತೆಗೆದುಕೊಳ್ಳಲು ಕಾರಣವಾಗಬಹುದು ಎಂದು ಚಾಣಕ್ಯ ಹೇಳುತ್ತಾನೆ. ಕೋಪಗೊಂಡ ವ್ಯಕ್ತಿಯೊಂದಿಗೆ ವಾದ ಮಾಡುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತುಇನ್ನಷ್ಟು ಸಮಸ್ಯೆಯನ್ನು ತಂದೊಡ್ಡುತ್ತದೆ.

ಪರಿಸ್ಥಿತಿ ನಿಮ್ಮ ನಿಯಂತ್ರಣದಲ್ಲಿ ಇರದಿದ್ದಾಗ
ಕೆಲವೊಮ್ಮೆ ಸಂದರ್ಭಗಳು ನಮ್ಮ ನಿಯಂತ್ರಣದಿಂದ ಸಂಪೂರ್ಣವಾಗಿ ಹೊರಗಿರುತ್ತವೆ ಎಂದು ಚಾಣಕ್ಯ ಹೇಳುತ್ತಾರೆ. ಅಂತಹ ಸಂದರ್ಭಗಳಲ್ಲಿ, ಧೈರ್ಯವನ್ನು ತೋರಿಸುವ ಬದಲು, ನೀವು ಶಾಂತ ಮನಸ್ಸಿನಿಂದ ಯೋಚಿಸಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಎಂದು ಚಾಣಕ್ಯ ಹೇಳುತ್ತಾರೆ. ಪ್ರವಾಹ, ಬೆಂಕಿ ಅಥವಾ ಹಿಂಸಾಚಾರದ ವಾತಾವರಣವಿದ್ದರೆ ಯೋಚಿಸದೆ ಮುಂದುವರಿಯುವುದು ನಿಮ್ಮ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮೊದಲು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು, ಆ ನಂತರ ನಿರ್ಧಾರ ತೆಗೆದುಕೊಳ್ಳುವುದು ಬುದ್ಧಿವಂತರ ಲಕ್ಷಣ.

ಎದುರಾಳಿ ಹೆಚ್ಚು ಶಕ್ತಿಶಾಲಿಯಾಗಿದ್ದಾಗ

ನಿಮ್ಮ ಶತ್ರು ನಿಮಗಿಂತ ಹೆಚ್ಚು ಶಕ್ತಿಶಾಲಿ ಅಥವಾ ಬಲಶಾಲಿಯಾಗಿದ್ದರೆ, ನೀವು ಅವನ ಮುಂದೆ ಧೈರ್ಯಶಾಲಿಯಾಗಿರಲು ಪ್ರಯತ್ನಿಸಬಾರದು ಎಂದು ಚಾಣಕ್ಯ ಹೇಳುತ್ತಾರೆ. ಅಂತಹ ಶತ್ರುವನ್ನು ನೇರವಾಗಿ ಎದುರಿಸುವುದು ಮೂರ್ಖತನವೇ ಸರಿ. ನೀವು ಧೈರ್ಯವನ್ನು ತೋರಿಸಲು ಅಥವಾ ಬಲಿಷ್ಠ ಶತ್ರುವನ್ನು ಎದುರಿಸಲು ಬಯಸಿದರೆ ಮೊದಲು ಯೋಜಿಸಿ ಆ ನಂತರ ತಯಾರಿ ಮಾಡಿಕೊಳ್ಳಬೇಕು.

ದೈಹಿಕ ಅಥವಾ ಮಾನಸಿಕ ದೌರ್ಬಲ್ಯ

ಚಾಣಕ್ಯ ಹೇಳುವಂತೆ ಕೆಲವೊಮ್ಮೆ ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿದಿರುತ್ತೇವೆ. ನೀವು ಆಯಾಸ, ಒತ್ತಡ ಅಥವಾ ಯಾವುದೇ ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದರೆ, ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ತಪ್ಪಾಗಿರಬಹುದು. ಅಂತಹ ಸಂದರ್ಭಗಳಲ್ಲಿ, ಒಬ್ಬರು ಧೈರ್ಯವನ್ನು ತೋರಿಸುವುದರ ಮೇಲೆ ಅಲ್ಲ, ಬದಲಾಗಿ ತಮ್ಮನ್ನು ತಾವು ಬಲಪಡಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಚಾಣಕ್ಯ ಹೇಳುತ್ತಾರೆ. ನೀವು ಎಲ್ಲ ರೀತಿಯಲ್ಲೂ ಸದೃಢರಾಗಿರುವಾಗ ಮಾತ್ರ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಯಾವುದಾದರೂ ವಿಷಯ ಬಗ್ಗೆ ಜ್ಞಾನವು ಅಪೂರ್ಣವಾಗಿದ್ದಾಗ

ಯಾವುದೇ ವಿಷಯದ ಬಗ್ಗೆ ಅಪೂರ್ಣ ಜ್ಞಾನವು ಅತ್ಯಂತ ಅಪಾಯಕಾರಿ ಮತ್ತು ಹಾನಿಕಾರಕ ಎಂದು ಚಾಣಕ್ಯ ಹೇಳುತ್ತಾರೆ. ಒಂದು ಕಾರ್ಯ ಅಥವಾ ಸನ್ನಿವೇಶದ ಬಗ್ಗೆ ನಿಖರವಾದ ಮಾಹಿತಿಯ ಕೊರತೆಯಿದ್ದರೆ ನೀವು ಎಂದಿಗೂ ಧೈರ್ಯವನ್ನು ತೋರಿಸಬಾರದು. ಆಗಾಗ್ಗೆ ಅಪೂರ್ಣ ಮಾಹಿತಿಯೊಂದಿಗೆ ತೆಗೆದುಕೊಳ್ಳುವ ನಿರ್ಧಾರಗಳು ತಪ್ಪಾಗಿರಬಹುದು ಮತ್ತು ತೊಂದರೆಗೆ ಕಾರಣವಾಗಬಹುದು. ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲು ಮರೆಯದಿರಿ.