Asianet Suvarna News Asianet Suvarna News

ಸಕ್ಸಸ್, ಅಧ್ಯಾತ್ಮದ ಬಗ್ಗೆ ತಲೈವಾ ಏನ್ ಹೇಳ್ತಿದ್ದಾರೆ ಕೇಳಿಸ್ಕೊಳಿ!

ಸಕ್ಸಸ್, ಸ್ಪಿರಿಚುಯಾಲಿಟಿ ಬಗ್ಗೆ ರಜನಿ ಹೇಳೋ ಮಾತುಗಳು ನಮಗೂ ಹೆಲ್ಪ್ ಆಗಬಹುದು.

What Rajanikanth says about success and spirituality
Author
Bengaluru, First Published Feb 26, 2020, 5:29 PM IST

ನನ್ನ ಪ್ರಕಾರ ಸೂಪರ್‌ಸ್ಟಾರ್ ಅಂದ್ರೆ ಅಮಿತಾಭ್ ಬಚ್ಚನ್ ಮಾತ್ರ- ಅನ್ನುವುದು ರಜನಿಕಾಂತ್ ಹೇಳುವ ಮಾತು. ಅಂದ್ರೆ ಯಶಸ್ಸಿನ ದೊಡ್ಡ ಶಿಖರವನ್ನೇ ಏರಿದ್ರೂ ಅವರು ಉಳಿಸಿಕೊಂಡಿರುವ ವಿನಯ ಅವರಿಂದ ಈ ಮಾತು ಹೇಳಿಸುತ್ತೆ.  ಸಕ್ಸಸ್, ಸ್ಪಿರಿಚುಯಾಲಿಟಿ ಬಗ್ಗೆ ರಜನಿ ಹೇಳೋ ಮಾತುಗಳು ನಮಗೂ ಹೆಲ್ಪ್ ಆಗಬಹುದು.

- ಮುನ್ನೂರು ರೂಪಾಯಿ ಸಂಬ್ಳ ಬರೋ ಬಸ್ ಕಂಡಕ್ಟರ್ ಆಗಿದ್ದೋನು ಸ್ಟಾರ್ ಆದ ಮೇಲೆ ಲಕ್ಷಗಳಲ್ಲಿ ಹಣ ಬರೋಕೆ ಶುರುವಾದ ಬಳಿಕ, ನನ್ನಲ್ಲಿ ಏನೋ ವಿಶೇಷತೆ ಇದೆ ಅಂದುಕೊಂಡೆ. ನಿಧಾನವಾಗಿ ಇದರಲ್ಲಿ ನನ್ದೇನೂ ಇಲ್ಲ, ಎಲ್ಲ ದೇವರ ದಯೆ ಅಂತ ಅರ್ಥವಾಯ್ತು.

- ಪ್ರತಿಯೊಂದು ಫಿಲಂ ಶೂಟಿಂಗ್ ಮುಗಿಸಿದ ಮೇಲೂ ನಾನು ಹಿಮಾಲಯಕ್ಕೆ ಹೋಗಿಬಿಡ್ತೀನಿ.  ತುಂಬ ಒಳಗಡೆ, ಒಂಟಿಯಾಗಿ ಹಳ್ಳಿಗಳಿಗೆ ಹೋಗಿಬಿಡ್ತೀನಿ. ಅಲ್ಲಿನ ಪ್ರಶಾಂತತೆ ಅನುಭವಿಸ್ತೀನಿ. ಅದು ನನ್ನಲ್ಲಿ ಏನೋ ಹೊಸ ಎನರ್ಜಿ ತುಂಬುತ್ತೆ. ಅಲ್ಲಿ ಸುಮ್ಮನೆ ಇರೋದು ಕೂಡ ಒಂದು ಧ್ಯಾನದಂತೆ ಇರುತ್ತದೆ.

-ದೇವರು ನನಗೆ ನಟನ ಪಾತ್ರವನ್ನು ಕೊಟ್ಟಿದ್ದಾನೆ. ಅದನ್ನು ಸಂಪೂರ್ಣ ಶ್ರದ್ದೆಯಿಂದ ಮಾಡಿದ್ದೇನೆ.

- ದೇವರ ದಯೆಯಿಂದ, ನನಗೆ ತಂದೆ ತಾಯಿಗಳಿಂದ ಬಂದ ಏಕೈಕ ಆಸ್ತಿ ಎಂದರೆ ನನ್ನ ಆರೋಗ್ಯಪೂರ್ಣ ದೇಹ. ನೋ ಬಿಪಿ, ನೋ ಶುಗರ್‌. ಯಾವ ಆರೋಗ್ಯ ಸಮಸ್ಯೆಯೂ ಇಲ್ಲ. ಎಲ್ಲ ಮಕ್ಕಳಿಗೂ ತಂದೆ ತಾಯಿ ಕೊಡಬೇಕಿರೋದು ಇದನ್ನೇ.

- ಯುದ್ಧ ಅನಿವಾರ್ಯವಾದರೆ, ಯುದ್ಧದಲ್ಲಿ ಭಾಗವಹಿಸದೆ ಹಿಂದಕ್ಕೆ ಹೋಗಿನೊಡೋದು ಹೇಡಿತನ

- ತನ್ನನ್ನು ತಾನು ಅರ್ಥ ಮಾಡಿಕೊಳ್ಳೋದೇ ಮನುಷ್ಯನಿಗೆ ನಿಜವಾದ ಸವಾಲು. ಪ್ರತಿಯೊಬ್ಬ ಮನುಷ್ಯನೂ ನಿಜವಾಗಿ ಮಾಡಬೇಕಿರೋದು ಅದನ್ನೇ. ಅದೇ ಅವನ ಅಧ್ಯಾತ್ಮದ ಹುಡುಕಾಟ.

- ನಾನು ನನಗೆ ಯಾವಾಗಲೂ ಹೇಳಿಕೊಳ್ತಾ ವಿಷಯವೆಂದರೆ, ಕೆಲಸ ಮಾಡು ರಜನಿಕಾಂತ್‌. ಮಾಡ್ತಾನೇ ಇರು. ನಿಲ್ಲಿಸಬೇಡ. ಯಾವಾಗ ನಿಲ್ಲಿಸಬೇಕು ಎಂದರೆ, ದೇಹ ಇನ್ನು ಸಹಕರಿಸುವುದಿಲ್ಲ ಎಂದಾಗ ಮಾತ್ರ. ಆಗ ಉಸಿರೂ ನಿಂತಿರುತ್ತೆ.

ರಜನೀಕಾಂತ್ ಹಿಮಾಲಯದಲ್ಲಿ ರಹಸ್ಯವಾಗಿ ಭೇಟಿ ಮಾಡುವ ಆ ವ್ಯಕ್ತಿ ಯಾರು?

- ಆಧ್ಯಾತ್ಮವೇ ನನಗೆ ಅತ್ಯಂತ ಪ್ರಿಯವಾದದ್ದು. ನಟನೆ ಮತ್ತು ಆಧ್ಯಾತ್ಮದ ನಡುವೆ ನಾನು ಆಧ್ಯಾತ್ಮವನ್ನೇ ಆರಿಸಿಕೊಳ್ತೀನಿ. ಯಾಕೆಂದರೆ ಅದರಿಂದ ಇಡೀ ವಿಶ್ವವನ್ನೇ ನಿಯಂತ್ರಿಸಬಹುದಾದ ಶಕ್ತಿ ನಿಮಗೆ ಸಿಗುತ್ತೆ. ಇತರ ಯಾವುದೇ ಕ್ಷೇತ್ರದ ಹೆಸರು, ಹಣ ಇತ್ಯಾದಿಗಳಿಗಿಂತ ಅದು ಮಿಗಿಲು.

- ನಾನು ಅತ್ಯಂತ ಸಣ್ಣ ವಯಸ್ಸಿನಲ್ಲೇ ಸಂತರಿಂದ, ಯೋಗಿಗಳಿಂದ ಆಕರ್ಷಿತನಾದೆ. ರಾಮಕೃಷ್ಣ ಮಿಷನ್‌ಗೆ ಸೇರಿಕೊಂಡಿದ್ದೆ. ಅಲ್ಲಿ ನನಗೆ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ರವೀಂದ್ರನಾಥ ಟಾಗೋರ್‌ ಮುಂತಾದವರ ಬಗ್ಗೆಯೆಲ್ಲಾ ಗೊತ್ತಾಯ್ತು.

- ಪ್ರತಿಯೊಂದು ಫಿಲಂ ಕೂಡ ನನಗೆ ಹೊಸದೇ. ಇದು ನನ್ನ ಮೊದಲ ಫಿಲಂ ಅಂದುಕೊಂಡೇ ನಾನು ಅದಕ್ಕೆ ಸಿದ್ಧವಾಗ್ತೀನಿ.

- ಇಲ್ಲಿ ಒಂದು ಸೃಷ್ಟಿ ಇದೆ. ಅಂದ ಮೇಲೆ ಒಬ್ಬ ಸೃಷ್ಟಿಕರ್ತನೂ ಇರಲೇಬೇಕು ಅಲ್ಲವೇ. ಹಾಗಾಗಿ ದೇವರಿದ್ದಾನೆ ಎಂದು ನಾನು ನಂಬುತ್ತೇನೆ.

- ಎಲ್ಲಿ ನಿಮ್ಮ ಮಹತ್ವಾಕಾಂಕ್ಷೆಗೆ ನೀವು ಕೊನೆ ಹಾಡುತ್ತೀರೋ ಅಲ್ಲಿ ನೆಮ್ಮದಿ ಆರಂಭವಾಗುತ್ತದೆ, ಮಹತ್ವಾಕಾಂಕ್ಷೆ, ಹುಡುಕಾಟಗಳು ನೆಮ್ಮದಿಯ ಶತ್ರು.

- ನಾನು ಪವಾಡಗಳಲ್ಲಿ ನಂಬಿಕೆಯಿಟ್ಟಿದ್ದೇನೆ. ಹಾಗಾಗಿಯೇ ನಿಮ್ಮ ಮುಂದೆ ಈ ರಜನಿ ಇರೋದು.

ಬಂಡೀಪುರ ಕಾಡಿನಲ್ಲಿ ರಜನಿ, ಅಕ್ಷಯ್‌ ಏನು ಶೂಟಿಂಗ್‌ ಮಾಡಿದ್ರು? 

- ನೀವು ಮಾರುತಿ ಕಾರಿನಲ್ಲಿ ಹೋಗುತ್ತೀರೋ ಅಥವಾ ಬಿಎಂಡಬ್ಲ್ಯುವಿನಲ್ಲೋ, ದಾರಿ ಮಾತ್ರ ಬದಲಾಗಲ್ಲ. ಬ್ಯುಸಿನೆಸ್‌ ಕ್ಲಾಸಿನಲ್ಲಿ ಪ್ರಯಾಣ ಮಾಡ್ತೀರೋ ಅಥವಾ ಇಕಾನಮಿ ಕ್ಲಾಸಿನಲ್ಲೋ- ನಿಮ್ಮ ಗುರಿ ಮಾತ್ರ ಬದಲಾಗಲ್ಲ. ಟೈಟಾನ್‌ ವಾಚು ಕಟ್ಟುತ್ತೀರೋ ರೋಲೆಕ್ಸೋ- ಸಮಯ ಮಾತ್ರ ಬದಲಾಗಲ್ಲ. ಐಫೋನ್‌ ಹೊಂದಿದ್ದೀರೋ ಸ್ಯಾಮ್ಸಂಗೋ- ಜನ ನಿಮಗೆ ಕಾಲ್‌ ಮಾಡೋ ರೀತಿ ಬದಲಾಗಲ್ಲ.

Follow Us:
Download App:
  • android
  • ios