ಮಧ್ಯಪ್ರದೇಶದಲ್ಲಿ, ಮಾಲೀಕನ ಸಾವಿನ ನಂತರ ಆತನ ಶವವಿದ್ದ ವಾಹನವನ್ನು ಶ್ವಾನವೊಂದು 4 ಕಿ.ಮೀ. ಹಿಂಬಾಲಿಸಿದೆ. ಮರಣೋತ್ತರ ಪರೀಕ್ಷೆಯಿಂದ ಹಿಡಿದು ಅಂತಿಮ ಸಂಸ್ಕಾರದವರೆಗೂ ಶವದ ಬಳಿಯೇ ಇದ್ದು, ತನ್ನ ಅಪಾರ ನಿಯತ್ತನ್ನು ಪ್ರದರ್ಶಿಸಿ ಅಲ್ಲಿದ್ದವರ ಕಣ್ಣಾಲಿಗಳು ತೇವಗೊಳ್ಳುವಂತೆ ಮಾಡಿದೆ.
ಭೋಪಾಲ್: ನಿಯತ್ತಿಗೆ ನಾಯಿಗಿಂತ ಬೇರೆ ಉದಾಹರಣೆ ಇಲ್ಲ. ತನಗೆ ಹೊಡೆದರು ಬಡಿದರೂ ತನ್ನ ಮಾಲೀಕನಿಗೆ ಮಾತ್ರ ತುಸು ಹೆಚ್ಚು ಕಡಿಮೆ ಆದರೂ ಈ ಶ್ವಾನ ಸಹಿಸುವುದಿಲ್ಲ. ಸಾವಿನಲ್ಲೂ ಮಾಲೀಕನ ಹಿಂಬಾಲಿಸುವ ಏಕೈಕ ಪ್ರಾಣಿ ಇದು. ಮನುಷ್ಯನ ಬೆಸ್ಟ್ ಫ್ರೆಂಡ್ ಎನಿಸಿದ ಶ್ವಾನದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಶ್ವಾನಗಳು ಮಾಲೀಕನಿಗಾಗಿ ಪ್ರಾಣ ಬಿಟ್ಟಂತಹ ನಿದರ್ಶನಗಳು ಅನೇಕ ಇವೆ. ಹಾಗೆಯೇ ಇಲ್ಲೊಂದು ಕಡೆ ಮಾಲೀಕನ ಸಾವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಶ್ವಾನವೊಂದು ಮಾಲೀಕನ ಶವವನ್ನು ಸಾಗಿಸುತ್ತಿದ್ದ ವಾಹನವನ್ನು ಸುಮಾರು 4 ಕಿಲೋ ಮೀಟರ್ ದೂರದವರೆಗೆ ಹಿಂಬಾಲಿಸಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ.
ಮಧ್ಯಪ್ರದೇಶದ ಶಿವಪುರಿಯಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಪ್ರೀತಿಯ ಶ್ವಾನವನ್ನು ಮರೆತು 40 ವರ್ಷದ ವ್ಯಕ್ತಿ ಪ್ರಜಾಪತಿ ಎಂಬುವವರು ತಮ್ಮ ಮನೆಯಲ್ಲಿ ಸಾವಿಗೆ ಶರಣಾಗಿದ್ದರು. ಈ ದುರಂತದ ವಿಚಾರ ಕುಟುಂಬದವರಿಗೆ ತಿಳಿಯುತ್ತಿದ್ದಂತೆ ಶವವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಆ ಪ್ರಜಾಪತಿ ಅವರು ಸಾಕಿದ್ದ ಪ್ರೀತಿಯ ಶ್ವಾನ ಅವರ ಶವವಿದ್ದ ವಾಹನವನ್ನು ಸುಮಾರು 4 ಕಿಲೋ ಮೀಟರ್ ದೂರದವರೆಗೆ ಹಿಂಬಾಲಿಸಿದೆ. ಶ್ವಾನ ಜೊತೆಗೆ ಹೆಜ್ಜೆ ಹಾಕಲುಹೆಣಗಾಡುತ್ತಿರುವುದನ್ನು ಗ್ರಾಮಸ್ಥರು ನೋಡುತ್ತಿದ್ದರು. ಕೊನೆಗೆ, ಕುಟುಂಬದ ಸದಸ್ಯರು ಆ ಶ್ವಾನವನ್ನು ಟ್ರಾಲಿಯ ಮೇಲೆ ಕೂರಿಸಿತು. ಶವಗಾರದಲ್ಲಿ ಮರಣೋತ್ತರ ಪರೀಕ್ಷೆಯ ಸಮಯದಲ್ಲೀಯೂ ಶ್ವಾನ ಪ್ರಜಾಪತಿಯನ್ನು ಬಿಟ್ಟು ಕದಲಲಿಲ್ಲ, ಹತ್ತಿರದಲ್ಲೇ ಕಾಯುತ್ತಾ ಕುಳಿತಿತ್ತು. ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ನಂತರವೇ ಶ್ವಾನ ಶವದೊಂದಿಗೆ ಹಳ್ಳಿಗೆ ಹಿಂತಿರುಗಿದೆ.
ಇದನ್ನೂ ಓದಿ: ಪ್ರಿಯಾಂಕಾ ಯಶಸ್ಸಿನಿಂದಾಗಿ ಮಗನಿಗೆ ಸರಿಯಾದ ಆರೈಕೆ ಸಿಗಲಿಲ್ಲ, ಒಬ್ಬಂಟಿಯಾಗೇ ಬೆಳೆದ: ತಾಯಿ ಮಧು ಚೋಪ್ರಾ ಬೇಸರ
ಅಲ್ಲದೇ ಆ ನಂತರ ನಡೆದ ಉಳಿದ ವಿಧಿ ವಿಧಾನಗಳ ಸಮಯದಲ್ಲೂ ಶ್ವಾನವು ಮಾಲೀಕನ ದೇಹದ ಬಳಿಯಿಂದ ದೂರ ಹೋಗದೇ ಆತನ ಬಳಿಯೇ ಮೌನವಾಗಿ ಕುಳಿತಿದ. ರಾತ್ರಿಯೆಲ್ಲಾ ಮಾಲೀಕನ ಮೃತದೇಹದ ಬಳಿಯೇ ಇದ್ದ ಶ್ವಾನ ನಂತರ ನಡೆದ ಶವಯಾತ್ರೆಯ ಸಮಯದಲ್ಲೂ ಜೊತೆಗೆ ಹೆಜ್ಜೆ ಇಟ್ಟಿದೆ. ಅತ್ತ ಶವಸಂಸ್ಕಾರದ ಸ್ಥಳದಲ್ಲಿಯೂ ನಾಯಿ ಚಿತೆಯ ಬಳಿಯೇ ಕುಳಿತಿತ್ತು. ಅದು ಯಾವುದೇ ಆಹಾರವನ್ನು ಸೇವಿಸಲಿಲ್ಲ, ಕುಡಿಯಲಿಲ್ಲ, ಅದನ್ನು ದೂರ ಸರಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದವರು. ಅಲ್ಲಿದ್ದ ಅನುಭವಿ ಪೊಲೀಸ್ ಸಿಬ್ಬಂದಿ ಕೂಡ ಪ್ರಾಣಿ ಪ್ರಜಾಪತಿ ಜೊತೆ ಹೊಂದಿದ್ದ ಬಾಂಧವ್ಯದ ಆಳವನ್ನು ನೋಡಿ ಆಶ್ಚರ್ಯಚಕಿತರಾದರು. ನಂತರ ಠಾಣೆಯ ಉಸ್ತುವಾರಿಯೊಬ್ಬರು ನಾಯಿಯ ನಿಷ್ಠೆಯನ್ನು ತೋರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ನಾಪತ್ತೆಯಾಗಿದ್ದ ಬಾಂಗ್ಲಾದೇಶಿ ಹಿಂದೂ ವಿದ್ಯಾರ್ಥಿ ಶವ ನದಿಯಲ್ಲಿ ಪತ್ತೆ
ಪ್ರಜಾಪತಿಯವರು ಹೀಗೆ ಸಾವಿಗೆ ಶರಣಾಗುವಂತಹ ದುರಂತಮಯ ನಿರ್ಧಾರ ಕೈಗೊಳ್ಳುವುದಕ್ಕೆ ಕಾರಣವಾಗಿದ್ದು ಏನು ಎಂಬುದು ತಿಳಿದು ಬಂದಿಲ್ಲ. ಆದರೆ ಆತನ ಸಾವಿನ ನಂತರ ಶ್ವಾನ ಆತನನ್ನು ಬಿಟ್ಟು ಕೊಡದೇ ರೋದಿಸುತ್ತಿದ್ದ ರೀತಿ ಎಂತಹವರ ಕಣ್ಣನ್ನು ತೇವಗೊಳಿಸುವಂತೆ ಮಾಡಿದೆ.


