Asianet Suvarna News Asianet Suvarna News

ಕನ್ನಡಿಗರ ಸೇವೆಗೆ ಅವಕಾಶ ಸಿಕ್ಕಿದ್ದು ಭಾಗ್ಯ: ರಾಜೀವ್‌ ಚಂದ್ರಶೇಖರ್‌ ವಿಶೇಷ ಸಂದರ್ಶನ

ರಾಜ್ಯಸಭಾ ಸದಸ್ಯತ್ವ ಮುಕ್ತಾಯದ ಹಂತದಲ್ಲೇ ಸಂಸದರಾಗಿ 18 ವರ್ಷಗಳ ಅವಧಿಯಲ್ಲಿ ಕೈಗೊಂಡ ನಿರ್ಧಾರಗಳು, ಈ ಅವಧಿಯಲ್ಲಿ ಸರ್ಕಾರದ ಸಾಧನೆಗಳು, ಸಾರ್ವಜನಿಕ ಯೋಜನೆಗಳು, ಕರ್ನಾಟಕ ಹಾಲಿ ರಾಜಕೀಯದಲ್ಲಿನ ದುರಾಡಳಿತದ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ್ದಾರೆ.
 

Union Minister Rajeev Chandrasekhar Special Interview gvd
Author
First Published Feb 12, 2024, 11:39 AM IST

ಸುಮಾರು 2 ದಶಕಗಳಿಂದ ಸಂಸದರಾಗಿ ಸೇವೆ ಸಲ್ಲಿಸುತ್ತಿರುವ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರ ಹಾಲಿ ರಾಜ್ಯಸಭಾ ಸದಸ್ಯತ್ವದ ಅವಧಿ ಮುಕ್ತಾಯ ಹಂತದಲ್ಲಿದೆ. ಈ ಅವಧಿಯಲ್ಲಿ 2ಜಿ ಸ್ಪೆಕ್ಟ್ರಂ ಹಗರಣ, ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ವಿರುದ್ಧ ಹೋರಾಟ; ನೆಟ್‌ ನ್ಯೂಟ್ರಾಲಿಟಿ, ದತ್ತಾಂಶಗಳ ರಕ್ಷಣೆ, ಇಂಟರ್ನೆಟ್‌ ಆಧಾರಿತ ಆಡಳಿತ ಬಗ್ಗೆ ಧ್ವನಿ ಎತ್ತಿದ್ದು; ಯುದ್ಧ ಸ್ಮಾರಕಗಳ ನಿರ್ಮಾಣ, ಯೋಧರಿಗೆ ಮತದಾನ ಹಕ್ಕು, ಒನ್‌ ರ್‍ಯಾಂಕ್‌ ಒನ್‌ ಪೆನ್ಷನ್‌ಗಾಗಿ ಹೋರಾಟ; ಮಕ್ಕಳ ಹಕ್ಕುಗಳ ರಕ್ಷಣೆ, ಭ್ರಷ್ಟ ಕಂಟ್ರಾಕ್ಟರ್‌ ಮತ್ತು ಬಿಲ್ಡರ್‌ಗಳ ವಿರುದ್ಧ ಹೋರಾಟ; ಬೆಂಗಳೂರು ಕೆರೆಗಳ ರಕ್ಷಣೆ, ಬೆಂಗಳೂರಿಗಾಗಿ ಪ್ಲಾನ್‌ ಬೆಂಗಳೂರು 2020 ಯೋಜನೆ, ಬೆಂಗಳೂರಿನಲ್ಲಿ ಸ್ಟೀಲ್‌ ಫ್ಲೈಒವರ್‌ ಹೋರಾಟ ಮುಂತಾದವುಗಳು ಸಂಸದರಾಗಿ, ಓರ್ವ ಜನಪ್ರತಿನಿಧಿಯಾಗಿ ಅವರನ್ನು ಗುರುತಿಸುವಂತೆ ಮಾಡಿದ ಸಾಧನೆಗಳು. ರಾಜ್ಯಸಭಾ ಸದಸ್ಯತ್ವ ಮುಕ್ತಾಯದ ಹಂತದಲ್ಲೇ ಸಂಸದರಾಗಿ 18 ವರ್ಷಗಳ ಅವಧಿಯಲ್ಲಿ ಕೈಗೊಂಡ ನಿರ್ಧಾರಗಳು, ಈ ಅವಧಿಯಲ್ಲಿ ಸರ್ಕಾರದ ಸಾಧನೆಗಳು, ಸಾರ್ವಜನಿಕ ಯೋಜನೆಗಳು, ಕರ್ನಾಟಕ ಹಾಲಿ ರಾಜಕೀಯದಲ್ಲಿನ ದುರಾಡಳಿತದ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ್ದಾರೆ.

* ನಿಮ್ಮ ರಾಜ್ಯಸಭಾ ಅವಧಿ ಮುಕ್ತಾಯವಾಗುತ್ತಿರುವ ಹೊತ್ತಲ್ಲೇ ಇತ್ತೀಚೆಗೆ ಸಂಸತ್ತಿನಲ್ಲಿ ಮಾತನಾಡಿದ್ದೀರಿ. ಈ ವೇಳೆ ನಿಮ್ಮ ಮನಸ್ಸಿನಲ್ಲಿದ್ದ ಭಾವನೆಗಳೇನು?
ಅಂದು ಬೆಳಗ್ಗೆಯಷ್ಟೇ ನನಗೆ ಆ ದಿನವೇ ವಿದಾಯ ಅಧಿವೇಶನ ನಡೆಯಲಿದೆ ಮತ್ತು ನಮಗೆಲ್ಲಾ ಕೆಲವು ಮಾತು ಆಡಲು ಅವಕಾಶ ಸಿಗಲಿದೆ ಎಂದು ಗೊತ್ತಾಯ್ತು. ಆದರೆ ನನ್ನ 18 ವರ್ಷಗಳನ್ನು ಆ ಕೆಲವು ನಿಮಿಷಗಳಲ್ಲಿ ಸಂಕ್ಷಿಪ್ತಗೊಳಿಸಿ ಮಾತನಾಡುವುದು ಕಷ್ಟಕರವಾಗಿತ್ತು.  ಮುಖ್ಯವಾಗಿ ಬೆಂಗಳೂರು, ಕರ್ನಾಟಕ ಮತ್ತು ಭಾರತಕ್ಕೆ ಸೇವೆ ಸಲ್ಲಿಸಲು ನನಗೆ ದೊರೆತ ಅವಕಾಶ ಬಗ್ಗೆ ನಾನು ಹೆಮ್ಮೆ ಮತ್ತು ಗೌರವ ಹೊಂದಿದ ವಿಷಯಗಳು ನನ್ನ ಮನಸ್ಸಿನಲ್ಲಿ ಮನೆ ಮಾಡಿತ್ತು.  ಇದಕ್ಕಾಗಿ ನನ್ನನ್ನು ಪ್ರೋತ್ಸಾಹಿಸಿದ ಮತ್ತು ಬೆಂಬಲಿಸಿದ ನನ್ನ ಪಕ್ಷದ ಸಾವಿರಾರು ಕಾರ್ಯಕರ್ತರು, ನಾಯಕರು ಮತ್ತು ನನ್ನ ಕುಟುಂಬ ಸೇರಿದಂತೆ ಎಲ್ಲರಿಗೂ ನಾನು ಕೃತಜ್ಞನಾಗಿರುತ್ತೇನೆ.  ಬೆಂಗಳೂರು, ಕರ್ನಾಟಕ ಮತ್ತು ನನ್ನ ದೇಶ ಭಾರತದ ಪರವಾಗಿ ಆ 18 ವರ್ಷಗಳಲ್ಲಿ ನಾನು ಕೈಗೊಂಡ ಎಲ್ಲಾ ಕೆಲಸಗಳು, ಹೊಯ್ದಾಟಗಳು ಮತ್ತು ಹೋರಾಟಗಳ ಒಂದು ಫ್ಲ್ಯಾಷ್‌ಬ್ಯಾಕ್‌ ನನ್ನ ಮನಸ್ಸಿನಲ್ಲಿತ್ತು. 

ಶಾಸಕ ಶಿವಲಿಂಗೇಗೌಡ ಸಚಿವರಾಗುತ್ತಾರೆ: ಸಚಿವ ಕೆ.ಎನ್.ರಾಜಣ್ಣ ವಿಶ್ವಾಸ

* ವಿಪಕ್ಷ ಸಂಸದನಾಗಿ 8 ವರ್ಷ, ಆಡಳಿತ ಪಕ್ಷದ ಸಂಸದರಾಗಿ 10 ವರ್ಷ ಕಳೆದಿದ್ದಾಗಿ ಭಾಷಣದಲ್ಲಿ ಉಲ್ಲೇಖಿಸಿದ್ದೀರಿ. ನಿಮ್ಮ ದೃಷ್ಟಿಕೋನದಲ್ಲಿ ಇವುಗಳ ನಡುವಿನ ವ್ಯತ್ಯಾಸ?
2006ರಿಂದ 2014ರವರೆಗೆ ನಾನು ಮೊದಲ 8 ವರ್ಷಗಳನ್ನು ಕಳೆದೆ. ಇದು ನಾನು ಸಂಸದೀಯ ರಾಜಕೀಯದ ಬಗ್ಗೆ ಕಲಿಯುತ್ತಿದ್ದ ಸಮಯವಾಗಿತ್ತು ಮತ್ತು ಈ ಸಮಯದಲ್ಲಿ ಭಾರತದ ಆರ್ಥಿಕ ಮತ್ತು ರಾಜಕೀಯ ಇತಿಹಾಸಕ್ಕೆ ಅತ್ಯಂತ ಕೆಟ್ಟ ಸಮಯವಾಗಿತ್ತು.2006ರಲ್ಲಿ ನಾನು ಸಂಸದನಾಗಿ ಆಯ್ಕೆಯಾದಾಗ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. (ಈಗ ಇದಕ್ಕೆ INDI alliance ಎಂದು ನಾಮಕರಣ ಮಾಡಲಾಗಿದೆ).  ಇದು ಕಮ್ಯುನಿಷ್ಟರ ಬೆಂಬಲದೊಂದಿಗೆ ಕಾಂಗ್ರೆಸ್‌ ಮತ್ತು ಇತರ ಪಕ್ಷಗಳ ಒಕ್ಕೂಟವಾಗಿತ್ತು. ಆಗಿನ ಉಪರಾಷ್ಟ್ರಪತಿ ಭೈರೋನ್‌ ಸಿಂಗ್‌ ಶೇಖಾವತ್‌ ಬಳಿ ಪ್ರಮಾಣ ವಚನ ಸ್ವೀಕರಿಸಿದ್ದು ನನಗೆ ನೆನಪಿದೆ. ನನ್ನ ರಾಜಕೀಯ ಪ್ರವೇಶವನ್ನು ಸಿಪಿಎಂ ಸಂಸದೆ ಬೃಂದಾ ಕಾರಟ್‌ ಹಾಗೂ ಕರ್ನಾಟಕದ ಮತ್ತೊಬ್ಬ ಮಹಿಳಾ ಸಂಸದೆ ಜೋರಾಗಿ ಅಣಕಿಸಿದ್ದನ್ನು ಕಂಡೆ.  

ಆದರೆ ಈ ವಿಷಯವೇ ನನ್ನನ್ನು ಕಷ್ಟಪಟ್ಟು ಕೆಲಸ ಮಾಡಲು ಮತ್ತು ಆ ಜೋಕರ್‌ಗಳದ್ದೇ ತಪ್ಪೆಂದು ಸಾಬೀತು ಪಡಿಸಲು ಪ್ರೇರೇಪಿಸಿತು. ಉಳಿದವುಗಳನ್ನು ನೀವು ನೋಡಿದ್ದೀರಿ. ಯುಪಿಎ ಸರ್ಕಾರದ ಅವಧಿಯು, ಹಗರಣಗಳು ಮತ್ತು ಲಜ್ಜೆಗೆಟ್ಟ ಭ್ರಷ್ಟಾಚಾರದಿಂದ ಕೂಡಿತ್ತು. ಒಂದು ವೇಳೆ ಯುಪಿಎ ಇರದಿದ್ದರೆ, ನಮ್ಮ ದೇಶದ 10 ವರ್ಷಗಳ ಇತಿಹಾಸವನ್ನು ತಮ್ಮ ಭ್ರಷ್ಟ ರಾಜಕಾರಣದಿಂದ ಹಾಳು ಮಾಡದಿದ್ದರೆ ಇಂದು ಭಾರತ ಎಲ್ಲಿರುತ್ತಿತ್ತು ಎಂದು ನಾನು ಆಗಾಗ್ಗೆ ಯೋಚಿಸುತ್ತೇನೆ.  ಒಬ್ಬ ವಾಣಿಜ್ಯೋದ್ಯಮಿಯಾಗಿ, ನಾನು ಕಾಂಗ್ರೆಸ್‌/ಯುಪಿಎ ಸರ್ಕಾರವನ್ನು ಆರ್ಥಿಕ ಹಗರಣಗಳ ಮೂಲಕ ಗುರುತಿಸಬಲ್ಲೆ ಮತ್ತು ಆ 8 ವರ್ಷಗಳನ್ನು ನಾನು 2ಜಿ ಹಗರಣ, ಸ್ಪೆಕ್ಟ್ರಮ್‌ ಹರಾಜು, ನೆಟ್‌ ನ್ಯೂಟ್ರಾಲಿಟಿ, ಎನ್‌ಪಿಎ ಮತ್ತು ಸರ್ಕಾರದ ಪರವಾಗಿರುವವರಿಗೆ ಮಾತ್ರ ಬ್ಯಾಂಕ್‌ ಸಾಲ ನೀಡುತ್ತಿದ್ದ ಹಗರಣ ಬಹಿರಂಗಪಡಿಸುತ್ತಾ ಕಳೆದಿದ್ದೇನೆ. 

ಜೊತೆಗೆ, ಕಾರ್ಗಿಲ್ ಯುದ್ಧದ ವಿಜಯೋತ್ಸವವನ್ನು ಬಿಜೆಪಿಯ ಯುದ್ಧ ಎಂದು ಹೇಳಿ ಅದನ್ನು ಆಚರಿಸದಂತೆ ಒತ್ತಾಯಿಸಿದ ಅವರ ನಾಚಿಗೆಗೇಡಿನ ದ್ವಂದ್ವ ನೀತಿಯನ್ನು ನಾನು ಬಹಿರಂಗಪಡಿಸಿದ್ದೆ.ಅಲ್ಲದೇ ಕಾರ್ಗಿಲ್‌ ವಿಜಯ ದಿವಸವನ್ನು ಆಚರಿಸಲು ಅವರನ್ನು ಒಪ್ಪಿಸಿದೆ. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವವಿತ್ತು, ಆದರೆ ಆ 8 ವರ್ಷಗಳಲ್ಲಿ ನಾನು ಹಿಂದೆಂದೂ ಕಾಣದಿದ್ದ ಭ್ರಷ್ಟಾಚಾರ ಮತ್ತು ಶೋಷಣೆಯನ್ನು ಕಂಡೆ.  ಅಲ್ಲದೇ ಮೊದಲ ಬಾರಿಗೆ, ಪ್ರಧಾನಿ ಮುನ್ನಡೆಸದ ಸರ್ಕಾರವನ್ನು ಕಂಡೆ. ಸೋನಿಯಾ ಗಾಂಧಿ ಸರ್ಕಾರದಿಂದ ಹೊರಗಿದ್ದುಕೊಂಡು ಸರ್ಕಾರವನ್ನು ಮುನ್ನಡೆಸುತ್ತಿದ್ದರು. ಅಂತಹ ಪರಿಸ್ಥಿತಿ ಈಗ ಕರ್ನಾಟಕದಲ್ಲಿದೆ. 2006ರಿಂದ 2014ರವರೆಗಿನ ಆ 8 ವರ್ಷಗಳು ಭಾರತದ ಪಾಲಿಗೆ ದುಃಸ್ವಪ್ನವಾಗಿತ್ತು. 

ಜನರ ದ್ವೇಷ, ಬೇಸರ ಮತ್ತು ಬದಲಾವಣೆಯ ಬಯಕೆಯು ಕಾಂಗ್ರೆಸ್ಸನ್ನು ಅಧಿಕಾರದಿಂದ ಹೊರಹಾಕಿತು.   2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರಕ್ಕೆ ತಂದಿತು. ಕಳೆದ 10 ವರ್ಷಗಳಲ್ಲಿ ಅವರ ನೇತೃತ್ವದ ಸರ್ಕಾರದ ಅಡಿಯಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ. ರಾಜಕೀಯ ಸಂಸ್ಕೃತಿ ಬದಲಾಗಿದೆ. ಸಂಸತ್ತಿನಲ್ಲಿ ಅಭಿವೃದ್ಧಿ, ಬೆಳವಣಿಗೆ ಮತ್ತು ಎಲ್ಲರಿಗೂ ಅವಕಾಶಗಳು ಎಂಬ ನಿಟ್ಟಿನಲ್ಲಿ ನಿರೂಪಣೆ ಬದಲಾಗಿದೆ. ಆದರೆ ಕಾಂಗ್ರೆಸ್‌ ಹಾಗೂ ಅವರ ಕೆಲವು ಸ್ನೇಹಿತರು ಇನ್ನೂ ಅದೇ ಹಳೆಯ ತುಷ್ಟೀಕರಣ, ವಿಭಜಕ ಮತ್ತು ಭ್ರಷ್ಟ ರಾಜಕಾರಣದೊಂದಿಗೆ ಹಿಂದೆಯೇ ಉಳಿದುಕೊಂಡಿದ್ದಾರೆ.  ದೇಶವು ಹಳೆಯದನ್ನು ತೊರೆದು ವೇಗವಾಗಿ ಮುಂದೆ ಸಾಗುತ್ತಿದೆ. ಈ 10 ವರ್ಷಗಳು ಸಂಸದನಾಗಿ ಮತ್ತು ಜನಸೇವಕನಾಗಿ ನನ್ನ ಜೀವನದ ರೋಚಕ ಕ್ಷಣಗಳಾಗಿವೆ.

* ಹಿಂದೆ ಸಂಸದರಾಗಿದ್ದಿರಿ, ಇದೀಗ ಸಚಿವರಾಗಿದ್ದೀರಿ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿ ನಮಗೆ ಒಂದು ದೃಷ್ಟಿಕೋನ ಒದಗಿಸಿ?
ದೇಶದಲ್ಲಿ ಭಾರಿ ಬದಲಾವಣೆಯನ್ನು ತರುತ್ತಿರುವ ಮತ್ತು ಹಿಂದೆಂದೂ ನಡೆಯದ ರೀತಿಯಲ್ಲಿ ಮತ್ತು ವೇಗದಲ್ಲಿ ದೇಶವನ್ನು ಮುನ್ನಡೆಸುತ್ತಿರುವ ನಾಯಕರಾದ ಪ್ರಧಾನಿ ನರೇಂದ್ರ ಮೋದಿಯವರ ತಂಡದ ಭಾಗವಾಗಿರುವುದು ಖಂಡಿತವಾಗಿಯೂ ನಂಬಲಾಗದ ಗೌರವವಾಗಿದೆ.  ಪ್ರಧಾನಿ ತಮ್ಮ ಎರಡನೇ ಅವಧಿಯಲ್ಲಿ ಕೇವಲ ಆರ್ಥಿಕ ಬೆಳವಣಿಗೆ, ಭದ್ರತೆ, ಅಭಿವೃದ್ಧಿ ಮತ್ತು ಎಲ್ಲರಿಗೂ ಸಮಾನ ಅವಕಾಶಗಳೊಂದಿಗೆ ವ್ಯವಹರಿಸಿದ್ದಷ್ಟೇ ಅಲ್ಲದೇ ಎರಡೂವರೆ ವರ್ಷಗಳ ಕಾಲ ಪ್ರತಿಯೊಬ್ಬ ಭಾರತೀಯರನ್ನು ಕೋವಿಡ್ ಸಾಂಕ್ರಾಮಿಕದಿಂದ ರಕ್ಷಿಸಿದ್ದಾರೆ.  

ಭಾರತವನ್ನು ದುರ್ಬಲ 5 ಆರ್ಥಿಕತೆಯಿಂದ ವಿಶ್ವದ ಅಗ್ರ 5 ಕ್ಕೆ ತೆಗೆದುಕೊಂಡು ಹೋಗಿರುವುದು ಮತ್ತು ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮಾಡಿರುವುದು ಪ್ರಧಾನಿ ಅವರ 2ನೇ ಅವಧಿಯನ್ನು ಅವಧಿಯ ಪ್ರಮುಖ ವ್ಯಾಖ್ಯಾನವಾಗಿದೆ. ನಾನು ಆರಂಭದಲ್ಲಿ ತಂತ್ರಜ್ಞಾನ ಸಚಿವಾಲಯ ಮತ್ತು ಕೌಶಲ್ಯ ಸಚಿವಾಲಯದ ಎರಡು ಜವಾಬ್ದಾರಿಗಳನ್ನು ಹೊಂದಿದ್ದೆ, ಇವೆರಡು ಯುವ ಭಾರತೀಯರಿಗೆ ಅಗತ್ಯವಾದ ಮತ್ತು ಮುಖ್ಯವಾದವುಗಳಾಗಿದ್ದವು. ಪ್ರಧಾನಿ ಮೋದಿ ಅವರು ಡಿಜಿಟಲ್ ಆರ್ಥಿಕತೆ ಮತ್ತು ಕೌಶಲ್ಯವನ್ನು ತಮ್ಮ ಅಭಿವೃದ್ಧಿಯ ಕಾರ್ಯತಂತ್ರದ ಪ್ರಮುಖ ಭಾಗವಾಗಿಸಿದ್ದಾರೆ.  

ಇದಕ್ಕಾಗಿ 1,00,000ಕ್ಕೂ ಅಧಿಕ ಸ್ಟಾರ್ಟಪ್‌ಗಳು, 112 ಯುನಿಕಾರ್ನ್‌ಗಳು, ಹೊಸ ಡೇಟಾ ರಕ್ಷಣೆ ಕಾನೂನು, ಹೊಸ ಐಟಿ ನಿಯಮಗಳು, ಕೇವಲ ಐಟಿ ಮತ್ತು ಐಟಿಇಎಸ್‌ನಿಂದ ತಂತ್ರಜ್ಞಾನ ಮತ್ತು ನಾವೀನ್ಯತೆ ವ್ಯವಸ್ಥೆಯ ವಿಸ್ತರಣೆ ಮತ್ತು ಬೆಳವಣಿಗೆ, ಎಐ, ಸೆಮಿಕಂಡಕ್ಟರ್‌, ಎಲೆಕ್ಟ್ರಾನಿಕ್ಸ್‌, ಕ್ವಾಂಟಮ್‌ ಟೆಕ್ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಯ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತೀಯ ಉಪಸ್ಥಿತಿಯನ್ನು ಸಾಧಿಸಲಾಗಿದೆ.  ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ಕಳೆದ 10 ವರ್ಷಗಳಲ್ಲಿ ಭಾರಿ ದೂರವನ್ನು ಪ್ರಯಾಣಿಸಿದೆ. ಭಾರತೀಯ ಇಂಟರ್ನೆಟ್‌ನ ಬಳಕೆದಾರರ ಸುರಕ್ಷತೆ ಮತ್ತು ನಂಬಿಕೆಗೆ ಪ್ಲಾಟ್‌ಫಾರ್ಮ್‌ಗಳು ಹೆಚ್ಚು ಜವಾಬ್ದಾರರಾಗಿರುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ನಮ್ಮ ಹೊಸ ನೀತಿಗಳೊಂದಿಗೆ ಸಾಕಷ್ಟು ಪ್ರಗತಿಯನ್ನು ಕೈಗೊಳ್ಳಲಾಗಿದೆ. 

ಇದರ ಪರಿಣಾಮವಾಗಿ ಕರ್ನಾಟಕ ಮತ್ತು ಬೆಂಗಳೂರು ಬೃಹತ್‌ ಹೂಡಿಕೆ ಮತ್ತು ಬೆಳವಣಿಗೆಯನ್ನು ಕಂಡಿವೆ. 2014ರಲ್ಲಿ ಭಾರತವು ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿತ್ತು.  ಆದರೆ ಇಂದು ಭಾರತದಲ್ಲಿ ಬಳಕೆ ಮಾಡುವ ಶೇ.100ರಷ್ಟು ಮೊಬೈಲ್‌ಫೋನ್‌ಗಳು ಭಾರತದಲ್ಲಿಯೇ ತಯಾರಿಸಲ್ಪಡುತ್ತಿವೆ. ಭಾರತವು 2ನೇ ಅತಿದೊಡ್ಡ ಮೊಬೈಲ್‌ ತಯಾರಕನಾಗಿ ಹೊರಹೊಮ್ಮಿದೆ ಮತ್ತು ಪ್ರತಿ ವರ್ಷ 1 ಲಕ್ಷ ಕೋಟಿಗೂ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡುತ್ತಿದೆ.  ಕರ್ನಾಟಕಕ್ಕೂ ದೊಡ್ಡ ಕಾರ್ಖಾನೆಗಳು ಬಂದಿವೆ. ಇದಕ್ಕಾಗಿ ಎಲೆಕ್ಟ್ರಾನಿಕ್ಸ್‌ಗಾಗಿ PLI ನೀತಿಗಳನ್ನು ಜಾರಿ ಮಾಡಿದ ಪ್ರಧಾನಿ ಮೋದಿ ಅವರ ದೂರದೃಷ್ಟಿಗೆ ಧನ್ಯವಾದಗಳು.

* ಮೊದಲಿನಿಂದಲೂ ನೀವು ಬೆಂಗಳೂರಿನ ಆಡಳಿತ ಮತ್ತು ಯೋಜನಾ ಸುಧಾರಣೆಗಳ ಬಗ್ಗೆ ಬಹಳ ಸಕ್ರಿಯರಾಗಿದ್ದಿರಿ. ನೀವು 2010 ರಲ್ಲಿ ABiDE ಸಂಚಾಲಕರಾಗಿದ್ದಿರಿ. ಬೆಂಗಳೂರಿಗೆ ಈವರೆಗೆ ಏನಾಗಿದೆ ಮತ್ತು ನಾವು ಏನು ಮಾಡಬಹುದು?
ಯಡಿಯೂರಪ್ಪ ಮತ್ತು ದೇವೇಗೌಡರ ಹೊರತಾಗಿ ಕರ್ನಾಟಕ ರಾಜಕಾರಣದಲ್ಲಿ ನನ್ನ ಮುಖ್ಯ ಗುರುಗಳಲ್ಲಿ ಅನಂತಕುಮಾರ್‌ ಅವರು ಸಹ ಒಬ್ಬರು. ಅನಂತ್‌ ಕುಮಾರ್‌ ಅವರು ನನ್ನಂತೆ ಬೆಂಗಳೂರಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದರು. ಅವರ ಆರಂಭಿಕ ಬೆಂಬಲದೊಂದಿಗೆ 2010ರಲ್ಲಿ ನಾನು ಪ್ಲಾನ್‌ ಬೆಂಗಳೂರು 2020 ಎಂದು ಕರೆಯಲಾಗುವ 10 ವರ್ಷಗಳ ಯೋಜನೆಯನ್ನು ಬೆಂಗಳೂರಿಗಾಗಿ ರಚಿಸಿದೆ. ಬೆಂಗಳೂರಿನ ಭವಿಷ್ಯಕ್ಕಾಗಿ ಯೋಚಿಸುವ ಹಾಗೂ ಬೆಂಗಳೂರಿನ ಆಡಳಿತದ ಬದಲಾವಣೆಗೆ ಬಯಸುವ ಜನರೊಂದಿಗೆ ದೀರ್ಘ ಸಮಾಲೋಚನೆ ನಡೆಸಿ ಇದನ್ನು ನಿರ್ಮಿಸಿದ್ದೆವು. ಇತರ ಅನೇಕರಂತೆ ನಾನು ಇದಕ್ಕಾಗಿ ಶ್ರಮಿಸಿದೆ.  ಆದರೆ 2013ರಲ್ಲಿ ಕರ್ನಾಟಕದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಈ ಯೋಜನೆಯನ್ನು ಹಳಿತಪ್ಪಿಸಿದವು. ಸಿದ್ದರಾಮಯ್ಯ ಅವರ ಹೊಸ ಸರ್ಕಾರವು ಈಗಿನಂತೆ ಆಗಲೂ ಬೆಂಗಳೂರಿನ ಆಡಳಿತ ಮತ್ತು ಸುಧಾರಣೆಗಳ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸಲಿಲ್ಲ. 

ಬೆಂಗಳೂರು ಅವರಿಗೆ ಹಣ ನೀಡುವ ಕೇಂದ್ರವಾಗಿದ್ದು, ಈಗ ನಡೆಸುತ್ತಿರುವ ಶೋಷಣೆಯನ್ನೇ ಆಗಲೂ ನಡೆಸಿದ್ದರು. 2019ರಲ್ಲಿ ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದಾಗ ಬೆಂಗಳೂರಿನ ಸುಧಾರಣೆ ಕೈಗೊಳ್ಳಲು ಅವಕಾಶವನ್ನು ಹೊಂದಿತ್ತು.  ಆದರೆ ಕೋವಿಡ್ ಸಾಂಕ್ರಾಮಿಕ ಹೆಚ್ಚಿನ ಸಂಪನ್ಮೂಲ ಮತ್ತು ಗಮನವನ್ನು ಸೆಳೆದ ಕಾರಣ ಇದು ಸಾಧ್ಯವಾಗಲಿಲ್ಲ. ಆದರೆ ಇಂದಿಗೂ 2010ರಲ್ಲಿ ಬರೆದ ಪ್ಲಾನ್‌ ಬೆಂಗಳೂರು ನಮ್ಮ ಊರಿನ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗೆ ಅತ್ಯುತ್ತಮ ನೀಲನಕ್ಷೆಯಾಗಿ ಉಳಿದಿದೆ.  ಪ್ರಧಾನಿ ನರೇಂದ್ರ ಮೋದಿ ಅವರ 3ನೇ ಅವಧಿಯಲ್ಲಿ, ಅವರು ನಗರ ಸುಧಾರಣೆಗಳು ಮತ್ತು ಬೆಳವಣಿಗೆಯ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂಬುದು ನನಗೆ ಖಾತ್ರಿಯಿದೆ. ನಮ್ಮ ಬೆಂಗಳೂರು ಫೌಂಡೇಶನ್‌ನಂತಹ ಎನ್‌ಜಿಒಗಳೊಂದಿಗೆ ಸ್ವತಃ ನಾನು ಕೆಲಸ ಮಾಡುತ್ತಿದ್ದೇನೆ. ಅಕ್ರಮ ಎಸಗುವ ಬಿಲ್ಡರ್‌ಗಳನ್ನು ಕಾನೂನಿನಡಿಯಲ್ಲಿ ಶಿಕ್ಷಿಸಲು ನಾನು ಹೋರಾಡಿದ್ದೇನೆ.

* ಕಾನೂನು ಉಲ್ಲಂಘಿಸುವ ಬಿಲ್ಡರ್‌ಗಳನ್ನು ಮತ್ತು ಅವರಿಗೆ ಸಹಾಯ ಮಾಡುವ ಅಧಿಕಾರಿಗಳೊಂದಿಗಿನ ಅವರ ಸಂಬಂಧವನ್ನು ನಾವು ಹೇಗೆ ತಡೆಯಬಹುದು?
ಇದು ಬೆಂಗಳೂರಿನ ಮುಖ್ಯ ಆಪತ್ತು. ನಗರವನ್ನು ರಕ್ಷಿಸುವ ಮತ್ತು ನಗರದ ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು ನಮ್ಮ ಹೆಮ್ಮೆಯ ನಗರವನ್ನು ದುರ್ಬಳಕೆ ಮಾಡಿಕೊಳ್ಳಲು ಬಯಸುವ ಕೆಲವು ಬಿಲ್ಡರ್‌ಗಳೊಂದಿಗೆ ಶಾಮೀಲಾಗಿದ್ದಾರೆ. ಆದರೆ ರಾಜ್ಯ ಸರ್ಕಾರದ ಜನರೇ ದೊಡ್ಡ ಭೂಗಳ್ಳರು ಮತ್ತು ಬಿಲ್ಡರ್‌ಗಳಾಗಿದ್ದರೆ ಇದು ಪರಿಹಾರವಾಗಲು ಸಾಧ್ಯವೆಂದು ಹೇಗೆ ನಾವು ಆಶಿಸಲು ಸಾಧ್ಯ?

* ನೀವು ಸಂಸದರಾಗಿದ್ದಾಗಲೂ ಪಿಐಎಲ್‌ಗಳ ಬಲವಾದ ಬೆಂಬಲಿಗರಾಗಿದ್ದಿರಿ. ನೀವು ಬೆಂಬಲಿಸಿದ ಕೆಲವು ಪಿಐಎಲ್‌ಗಳ ಬಗ್ಗೆ ವಿವರಿಸಬಹುದೇ?
ನಗರದ ನಾಗರಿಕರಿಗೆ ಕೇಳುವ ಹಕ್ಕಿದೆ ಎಂಬುದೇ ಪಿಐಎಲ್‌ಗಳ ಕುರಿತು ನನ್ನ ಆಲೋಚನೆಯಾಗಿದೆ. ನಮ್ಮ ಪ್ರಜಾಪ್ರಭುತ್ವ ಜನರಿಗೆ ಸಂಬಂಧಿಸಿದ್ದು. ಆದ್ದರಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ನೀತಿಯನ್ನು ಅಂತಿಮಗೊಳಿಸುವ ಮೊದಲು ಸಾರ್ವಜನಿಕ ಸಮಾಲೋಚನೆ ಮತ್ತು ನಾಗರಿಕರೊಂದಿಗೆ ಸಂವಾದ ನಡೆಸಬೇಕು ಎಂದು ಒತ್ತಾಯಿಸುತ್ತಾರೆ.  ನಾನು ಸಹ ಪ್ರತಿಯೊಂದು ನೀತಿ, ಕಾನೂನು ಅಥವಾ ನಿಯಮಕ್ಕಾಗಿ ನಾನು ನನ್ನ ಸಚಿವಾಲಯದಲ್ಲಿ ಈ ಮಂತ್ರವನ್ನು ಅನುಸರಿಸುತ್ತೇನೆ. ಸಾರ್ವಜನಿಕರ ದನಿ ಮತ್ತು ಅವರ ಭಾಗವಹಿಸುವಿಕೆಯನ್ನು ಬಿಬಿಎಂಪಿ ಮತ್ತು ಬಿಡಿಎಯಂತಹ ಸಂಸ್ಥೆಗಳು ನಿರ್ಲಕ್ಷಿಸುವುದರಿಂದ ಬೆಂಗಳೂರಿನಲ್ಲಿ ಪಿಐಎಲ್‌ಗಳು ಅಗತ್ಯವಾಗುತ್ತವೆ.  ಅವರ ಭವಿಷ್ಯವನ್ನು ನಿರ್ಧರಿಸುವ ನೀತಿಗಳ ತಯಾರಿಕೆಯನ್ನು ಸೇರಿಕೊಳ್ಳಲು ಬಯಸುವ ನಾಗರಿಕರಿಗೆ ಪಿಐಎಲ್‌ಗಳು ಏಕೈಕ ಮಾರ್ಗಗಳಾಗಿವೆ. ನಾನು ಬೆಂಬಲಿಸಿದ ಪಿಐಎಲ್‌ಗಳು ಅಥವಾ ನಾಗರಿಕ ಚಳವಳಿಗಳಲ್ಲಿ ಸ್ಟೀಲ್‌ ಫ್ಲೈಓವರ್, ಕಬ್ಬನ್ ಪಾರ್ಕ್, ಕೆರೆಗಳ ಅತಿಕ್ರಮಣ, ಬಿಬಿಎಂಪಿ ನಿರ್ಲಕ್ಷ್ಯದಿಂದ ಉಂಟಾದ ಸಾವುಗಳು ಹಾಗೂ ಇತ್ಯಾದಿಗಳು ಸೇರಿವೆ.

* ಕರ್ನಾಟಕದ ವಿರುದ್ಧದ ತಾರತಮ್ಯದ ಬಗ್ಗೆ ಇತ್ತೀಚೆಗೆ ದೆಹಲಿಯಲ್ಲಿ ಸಿದ್ದರಾಮಯ್ಯ ಸರ್ಕಾರದ ಪ್ರತಿಭಟನೆ ಬಗ್ಗೆ ನಿಮ್ಮ ಅಭಿಪ್ರಾಯ?
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಬೇಜವಾಬ್ದಾರಿ ಖರ್ಚು, ಭರವಸೆಗಳು ಮತ್ತು ಅವರ ಭ್ರಷ್ಟಾಚಾರದ ಮಾರಕ ಸಂಯೋಜನೆಯಿಂದಾಗಿ ಕರ್ನಾಟಕವನ್ನು ಬಲಿಷ್ಠ ಆರ್ಥಿಕತೆಯಿಂದ ದಿವಾಳಿಯಾಗಿ ಪರಿವರ್ತಿಸುತ್ತದೆ ಎಂದು ಚುನಾವಣಾ ಫಲಿತಾಂಶದ ಮರುದಿನವೇ ನಾನು ಈ ಬಗ್ಗೆ ಭವಿಷ್ಯ ನುಡಿದಿದ್ದೆ. ಅದು ನಿಖರವಾಗಿ ಸಂಭವಿಸಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ಸರ್ಕಾರದ ಸುಳ್ಳನ್ನು ಬಹಿರಂಗಪಡಿಸಿದ್ದಾರೆ ಮತ್ತು ಯುಪಿಎ ಆಡಳಿತದ ಅವಧಿಗೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕದ ಜನರಿಗೆ ಹೇಗೆ ಸುಮಾರು ಮೂರರಿಂದ ನಾಲ್ಕು ಪಟ್ಟು ಹೆಚ್ಚು ಸಂಪನ್ಮೂಲಗಳನ್ನು ಕಳುಹಿಸಿದ್ದಾರೆ ಎಂಬುದನ್ನು ತೋರಿಸಿದ್ದಾರೆ. ಬಿಎಸ್‌ವೈ ಮತ್ತು ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಸರ್ಕಾರ ಇರುವವರೆಗೂ ಯಾವುದೇ ಸಮಸ್ಯೆ ಇರಲಿಲ್ಲ ಮತ್ತು ರಾಜ್ಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು.  ಆದರೆ ಸಿದ್ದರಾಮಯ್ಯನವರಿಗೆ ಬಜೆಟ್‌ಗಳನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿದಿಲ್ಲ ಮತ್ತು ಅವರ ಹಣಕಾಸು ಯೋಜನೆಗಳನ್ನು ಯೋಜಿಸಲು ಸಾಧ್ಯವಾಗದ ಕಾರಣ ಅವರು ತಮ್ಮನ್ನು ಮತ್ತು ತಮ್ಮ ಎಟಿಎಂ ಆಪರೇಟರ್ ಸ್ನೇಹಿತರನ್ನು ಹೊರತುಪಡಿಸಿ ಯಾರನ್ನೂ ದೂಷಿಸಬಹುದು ಎಂದರ್ಥವಲ್ಲ.

* ಕರ್ನಾಟಕ ಮತ್ತು ಭಾರತದಲ್ಲಿ ಹಿರಿಯ ಸೈನಿಕರು ಮತ್ತು ಅವರ ಕುಟುಂಬಗಳಿಗಾಗಿ ನೀವು ಸಾಕಷ್ಟು ಕೆಲಸ ಮಾಡಿದ್ದೀರಿ. ಅವರ ಮೇಲೆ ವಿಶೇಷ ಗಮನ ಏಕೆ, ಬೆಂಗಳೂರು ಮಿಲಿಟರಿ ಸ್ಮಾರಕ, ಕಾರ್ಗಿಲ್ dIwasetc ಹೋರಾಟ ಮಾಡಿದ್ದೇಕೆ?
ನಾನು ವಾಯುಪಡೆಯ ಹಿರಿಯ, ಅನುಭವಿ ಅಧಿಕಾರಿ ಮಗ. ದೇಶ ಸೇವೆಯ ಹಲವು ಮೌಲ್ಯಗಳನ್ನು ನಾನು ಅವರಿಂದ ಮತ್ತು ಅವರಂತಹ ಅನೇಕರಿಂದ ಕಲಿತಿದ್ದೇನೆ. ಹಾಗಾಗಿ ಅವರಿಗೆ ಸೇವೆ ಮಾಡಲು ನಾನು ಏನು ಮಾಡಬಹುದೋ ಅದನ್ನು ನಾನು ಮಾಡಬೇಕು ಮತ್ತು ನಾನು ಮಾಡುತ್ತೇನೆ ಎಂಬುದನ್ನು ನಂಬುತ್ತೇನೆ.  ಕರ್ನಲ್ ವಸಂತ್, ಕರ್ನಲ್ ಜೋಜನ್ ಥಾಮಸ್, ಲ್ಯಾನ್ಸ್ ಎನ್‌.ಕೆ.ಹನುಮಂತಪ್ಪ, ಮೇಜರ್ ಉನ್ನಿಕೃಷ್ಣನ್ ಮತ್ತು ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸಿದ ಮತ್ತು ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸಿದ ಇನ್ನೂ ಅನೇಕರ ಸೇವೆಯನ್ನು ಯಾವಾಗಲೂ ಸ್ಮರಿಸುವುದನ್ನು ನನ್ನ ಕರ್ತವ್ಯವೆಂದು ನಾನು ಭಾವಿಸುತ್ತೇನೆ. ಇದು ನಾನು ಗಂಭೀರವಾಗಿ ತೆಗೆದುಕೊಳ್ಳುವ ಕರ್ತವ್ಯವಾಗಿದೆ ಮತ್ತು ನಾನು ಚೆನ್ನಾಗಿ ಮಾಡಿದ್ದೇನೆ ಎಂದು ನಾನು ಭಾವಿಸುತ್ತೇನೆ.

* ಸಂಸದ ಮತ್ತು ಸಚಿವರಾಗಿ ನಿಮ್ಮ ರಿಪೋರ್ಟ್ ಕಾರ್ಡ್ ಏನು? ನೀವೇ ನಿಮಗೆ ಯಾವ ಗ್ರೇಡ್‌ ಕೊಟ್ಟುಕೊಳ್ಳುತ್ತೀರಿ?
ಈ ಪಟ್ಟಿ ಬಹಳ ಉದ್ದವಾಗಿದೆ. ನಾನು ಖಂಡಿತವಾಗಿಯೂ ಸಮಗ್ರ ಪಟ್ಟಿಯನ್ನು ನೀಡುವುದಿಲ್ಲ. ಆದರೆ ನನ್ನ ವೆಬ್‌ಸೈಟ್ www.rajeev.inಗೆ ಭೇಟಿ ನೀಡಿದರೆ, ಜನರು ನನಗೆ ಸೇವೆ ಸಲ್ಲಿಸಲು ನೀಡಿದ ಸಮಯವನ್ನು ನಾನು ಒಂದು ದಿನವೂ ವ್ಯರ್ಥ ಮಾಡಿಲ್ಲ ಎಂಬುದನ್ನು ನೀವು ನೋಡಲು ನಿಮಗೆ ಸಹಾಯವಾಗುತ್ತದೆ.  ಬೆಂಗಳೂರು ಮತ್ತು ಕರ್ನಾಟಕವನ್ನು ಪ್ರತಿನಿಧಿಸುವ ಸಂಸದನಾಗಿ ಮತ್ತು ಡಿಜಿಟಲ್ ಎಕಾನಮಿ ಮತ್ತು ಅದರಲ್ಲಿನ ಹಲವು ವಿಷಯಗಳ ಬಗ್ಗೆ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ ತಂಡದಲ್ಲಿ ಸಚಿವನಾಗಿ ನನ್ನ ಕೆಲಸದ ದಾಖಲೆ ಉತ್ತಮವಾಗಿದೆ.  ಇದಕ್ಕೆ ನನ್ನನ್ನು ಬೆಂಬಲಿಸಿದ ಕರ್ನಾಟಕ ಮತ್ತು ಬೆಂಗಳೂರಿನ ಜನರು ಮತ್ತು ಎಲ್ಲಾ ಕಾರ್ಯಕರ್ತರು ಕಾರಣ ಎಂದು ನಾನು ಭಾವಿಸುತ್ತೇನೆ. ಯಾವ ಗ್ರೇಡ್‌ ಎಂದು ಕೇಳಿದರೆ, ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಸಮರ್ಥಿಸಿದ್ದೇನೆ ಎಂದು ಭಾವಿಸುತ್ತೇನೆ.

ಈ ಬಾರಿ ಮುಖ್ಯಮಂತ್ರಿಗಳಿಂದ ಜನಪರ ಬಜೆಟ್ ಮಂಡನೆ: ಸಚಿವ ಚಲುವರಾಯಸ್ವಾಮಿ

* ನಾನು ಯಾವುದೇ ಕೆಲಉದ್ಯಮಶೀಲತೆ ಮತ್ತು ತಂತ್ರಜ್ಞಾನದ ಹಿನ್ನೆಲೆಯಿಂದ ಬಂದವರು ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬುದು ಸಾಮಾನ್ಯ ಸಂಗತಿಯಲ್ಲ. ಇದನ್ನು ನೀವು ಹೇಗೆ ವಿವರಿಸುತ್ತೀರಿ?
ವನ್ನು ಮಾಡಿದರೂ ಅದನ್ನು ಜೀವಿತದ ಧ್ಯೇಯವಾಗಿ ತೆಗೆದುಕೊಳ್ಳುತ್ತೇನೆ ಮತ್ತು ನಾನು ಶೇ.1000ದಷ್ಟು ಅದಕ್ಕೆ ಬದ್ಧವಾಗಿರುತ್ತೇನೆ. ನನಗೆ ತಿಳಿದಿರುವ ಸಾಮರ್ಥ್ಯವನ್ನು ಹೊರಹಾಕಲು ನಮಗೆ ಬದಲಾವಣೆಯ ಅಗತ್ಯವಿದೆ ಎಂದು ನಾನು ಯಾವಾಗಲೂ ಭಾವಿಸಿದ್ದೆ.  ಸುಮ್ಮನೆ ಕುಳಿತುಕೊಳ್ಳುವ ಬದಲು, ನಾನು ನನ್ನ ವ್ಯಾಪಾರ ವೃತ್ತಿಜೀವನವನ್ನು ತ್ಯಜಿಸಿ ವಿಷಯಗಳನ್ನು ಬದಲಾಯಿಸುವ ಭರವಸೆನಾನು 8 ವರ್ಷಗಳ ಕಾಲ ಹೋರಾಡಿದೆ ಮತ್ತು ಯಾವುದೇ ಬದಲಾವಣೆಯನ್ನು ನೋಡಲು ಸಾಧ್ಯವಾಗಲಿಲ್ಲ ಆದರೆ ಆ ಸಮಯದಲ್ಲಿ ಮತ್ತಷ್ಟು ಕೆಟ್ಟಯೊಂದಿಗೆ ಸಾರ್ವಜನಿಕ ಜೀವನಕ್ಕೆ ಹೋಗಲು ನಿರ್ಧರಿಸಿದೆ. ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಬಂದ ಮೇಲೆ ನಾನು ನಿರೀಕ್ಷಿಸಿದ್ದ ಮತ್ತು ಕನಸು ಕಂಡ ಎಲ್ಲಾ ದಬಲಾವಣೆಗಳು ನಿಜವಾಗಲು ಪ್ರಾರಂಭಿಸಿದವು.ಇಂದು ನಾವು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅತ್ಯಂತ ರೋಮಾಂಚನಕಾರಿ ಅವಧಿಯಲ್ಲಿ ಜೀವಿಸುತ್ತಿದ್ದೇವೆ.  ಭಾರತದ ಇತಿಹಾಸದಲ್ಲಿ ಈ ರೋಮಾಂಚಕಾರಿ ಹಂತದ ಭಾಗವಾಗಲು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಲವಾದ, ಸಮೃದ್ಧಿಯ ದೃಷ್ಟಿಗೆ ಸ್ವಲ್ಪ ಕೊಡುಗೆ ನೀಡಲು ಅವಕಾಶ ಸಿಕ್ಕಿರುವುದು ಒಂದು ಗೌರವವಾಗಿದೆ.

Follow Us:
Download App:
  • android
  • ios