Asianet Suvarna News Asianet Suvarna News

ವಾಲ್ಮೀಕಿ ನಿಗಮ, ಮುಡಾ ಹಗರಣದ ವಿರುದ್ಧ ನಾಮ್‌ಕಾವಸ್ತೆ ಹೋರಾಟ; ರಾಜ್ಯ ಬಿಜೆಪಿ ನಾಯಕರ ಮೇಲೆ ಹೈಕಮಾಂಡ್ ಗರಂ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡು ದೊಡ್ಡ ಹಗರಣದಲ್ಲಿ ಸಿಲುಕಿದ್ದರೂ ದೊಡ್ಡ ಮಟ್ಟದ ಹೋರಾಟ ನಡೆಸದೇ ಬರೀ ಹೇಳಿಕೆ ನೀಡಿ ಸುಮ್ಮನಾಗುತ್ತಿರುವ ರಾಜ್ಯ ನಾಯಕರ ವಿರುದ್ಧ ಬಿಜೆಪಿ ಹೈಕಮಾಂಡ್ ಕೆಂಡಾಮಂಡಲವಾಗಿದೆ.

MUDA scam and valmiki corporation scam issue bjp high command sparks against state bjp leaders rav
Author
First Published Jul 11, 2024, 3:24 PM IST | Last Updated Jul 11, 2024, 3:44 PM IST

ಬೆಂಗಳೂರು (ಜು.11): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡು ದೊಡ್ಡ ಹಗರಣದಲ್ಲಿ ಸಿಲುಕಿದ್ದರೂ ದೊಡ್ಡ ಮಟ್ಟದ ಹೋರಾಟ ನಡೆಸದೇ ಬರೀ ಹೇಳಿಕೆ ನೀಡಿ ಸುಮ್ಮನಾಗುತ್ತಿರುವ ರಾಜ್ಯ ನಾಯಕರ ವಿರುದ್ಧ ಬಿಜೆಪಿ ಹೈಕಮಾಂಡ್ ಕೆಂಡಾಮಂಡಲವಾಗಿದೆ.

ಹೌದು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ, ಪರ್ಸೆಂಟೇಜ್ ಹಗರಣ ಎಂದು ವಿರೋಧಪಕ್ಷದಲ್ಲಿದ್ದ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಬಿಜೆಪಿ ಸರ್ಕಾರವನ್ನು ಹಿಂಡೇಹಿಪ್ಪೆ ಮಾಡಿಬಿಟ್ಟಿತ್ತು. ಆದರೆ ಅದೇ ಕಾಂಗ್ರೆಸ್ ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದು ವರ್ಷ ಕಳೆಯುವುದರೊಳಗೆ ಎರಡು ದೊಡ್ಡ ಹಗರಣಗಳಲ್ಲಿ ಸಿಲುಕಿಕೊಂಡಿದೆ. ಮೊದಲನೇಯದು ಮಹರ್ಷಿ ವಾಲ್ಮೀಕಿ ನಿಗಮದಲ್ಲಿನ ಅವ್ಯವಹಾರ ಅಕ್ರಮವಾಗಿ ಬರೋಬ್ಬರಿ 187 ಕೋಟಿ ರೂ. ಹಣ ವರ್ಗಾವಣೆ, ಎರಡನೇಯದು ಮೈಸೂರು ಮುಡಾ ನಿವೇಶನ ಹಂಚಿಕೆ ಹಗರಣ. ಈ ಹಗರಣದಲ್ಲಿ ಸುಮಾರು 5 ಸಾವಿರ ಕೋಟಿ ರೂ.ನಷ್ಟು ದೊಡ್ಡ ಹಗರಣ ನಡೆದಿದೆ.  ಇಂತಹ ದೊಡ್ಡ ಹಗರಣಗಳು ನಡೆದಿದ್ದರೂ ಪರಿಣಾಮಕಾರಿಯಾಗಿ ಹೋರಾಟ ನಡೆಸದೇ ನಾಮಕಾವಸ್ತೆಗೆ ಹೋರಾಟ ನಡೆಸಿರುವ ರಾಜ್ಯ ನಾಯಕರ ವಿರುದ್ಧ ಬಿಜೆಪಿ ಹೈಕಮಾಂಡ್ ಗರಂ ಆಗಿದೆ.

ಮುಡಾ ಗಬ್ಬೆದ್ದು ಹೋಗಿದೆ, ಅದನ್ನ ಕ್ಲೀನ್ ಮಾಡುವ ಕೆಲಸ ಮಾಡ್ತೇವೆ: ಸಿಎಂ

ಒಂದು ವೇಳೆ ಇದೇ ಕಾಂಗ್ರೆಸ್ ವಿರೋಧಪಕ್ಷದಲ್ಲಿದ್ದಿದ್ದರೆ ಇಷ್ಟೊತ್ತಿಗಾಗಲೇ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಿ ಹೊತ್ತಿ ಉರಿಸುವ ಮೂಲಕ ಸರ್ಕಾರವನ್ನೇ ಅಲುಗಾಡಿಸುತ್ತಿತ್ತು. ಈ ಹಿಂದೆ ಏನೆಲ್ಲ ಅಪಪ್ರಚಾರ ಮಾಡಿ ಹೋರಾಟ ಮಾಡಿದರು ನೆನಪಿಲ್ಲವೇ? ಆದರೀಗ ರಾಜ್ಯ ಬಿಜೆಪಿ ನಾಯಕರ ಹೋರಾಟಕ್ಕೆ ಎರಡು ಪ್ರಬಲ ಅಸ್ತ್ರ ಸಿಕ್ಕಿದ್ದರೂ ನಾಯಕರು ಬೀದಿಗಿಳಿಯದೇ ಕೇವಲ ಕಾಟಾಚಾರಕ್ಕೆ ಹೇಳಿಕೆ ಕೊಡುವುದು, ಹೋರಾಟದ ಎಚ್ಚರಿಕೆ ಕೊಡುವುದರ ಬಗ್ಗೆ ಬಿಜೆಪಿ ಹೈಕಮಾಂಡ್ ತೀವ್ರ ಅಸಮಾಧಾನ ಹೊರಹಾಕಿರುವ ಬಗ್ಗೆ ಮೂಲಗಳು ತಿಳಿಸಿವೆ. 

ಮುಡಾ ಹಗರಣ, ವಾಲ್ಮೀಕಿ ಹಗರಣ ಎರಡರಲ್ಲೂ ಸಮರ್ಥವಾಗಿ ಹೋರಾಟ ರೂಪಿಸುವಲ್ಲಿ ಫೇಲ್ ಆಗಿದ್ದೀರಿ. ಸಮರ್ಥವಾಗಿ ಹೋರಾಟಕ್ಕೆ ಇಳಿದರೆ ಮುಡಾ ಹಗರಣದಿಂದಲೇ ರಾಜ್ಯ ಸರ್ಕಾರ ಪತನವಾಗಬೇಕು ಆದರ ಮುಡಾ ಹಗರಣದಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ. ಕಾಂಗ್ರೆಸ್ ಒಳಗಡೆಯೇ ಬಹಿರಂಗ ಅಸಮಾಧಾನ ಸೃಷ್ಟಿಸಿದ್ದರೂ ನೀವೇಕೆ ಇನ್ನೂ ಚುರುಕಾಗಿಲ್ಲ? ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದರೇ ಬಹಿರಂಗವಾಗಿ ಅಕ್ರಮದ ಬಗ್ಗೆ ದನಿ ಎತ್ತಿದ್ದಾರೆ. ವಿರೋಧ ಪಕ್ಷ ವಿಫಲವಾದರೂ ನಾವು ಬಿಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಎರಡು ದೊಡ್ಡ ಹಗರಣಗಳ ಬಗ್ಗೆ ಹೋರಾಟ ನಡೆಸಲು ಪ್ರಬಲ ಅಸ್ತವಿದ್ದರೂ ರಾಜ್ಯ ನಾಯಕರೇಕೆ ಪರಿಣಾಮಕಾರಿ ಹೋರಾಟ ರೂಪಿಸುತ್ತಿಲ್ಲ? ಎಂದು ರಾಜ್ಯ ನಾಯಕರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಸಿದ್ದು ಪತ್ನಿಗೆ ಸಿಗಬೇಕಾಗಿದ್ದು ಎರಡೇ ಸೈಟ್‌, ಕೊಟ್ಟಿರುವುದು 14 ನಿವೇಶನ: ಬಿ.ವೈ.ವಿಜಯೇಂದ್ರ

ಕಳೆದ ಬಿಜೆಪಿ ಅಧಿಕಾರಾವಧಿಯಲ್ಲಿ ಪೇಸಿಎಂ, ಪರ್ಸೆಂಟೇಜ್ ಆರೋಪದಲ್ಲಿ ಕಾಂಗ್ರೆಸ್ ನಾಯಕರು ಬೀದಿಗಿಳಿದು ಭಾರೀ ಹೋರಾಟ ನಡೆಸಿದ್ದರು. ಬೀದಿಬೀದಿಗಳಲ್ಲಿ ಪೇಸಿಎಂ ಪೋಸ್ಟರ್ ಅಂಟಿಸುವ ಮೂಲಕ ಜಾಹೀರಾತು ಕೊಡುವ ಮೂಲಕ, ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ವಿಯಾಗಿ ಹೋರಾಟ ನಡೆಸಿದ್ದರು. ಅವರು ಅಂದು ಮಾಡಿದ್ದ ಹೋರಾಟದಿಂದ ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತಾಗಿದ್ದು, ಆದರೀಗ ಅದೇ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ, ಹಗರಣದಲ್ಲಿ ಸಿಲುಕಿಕೊಂಡಿದೆ ಆದರೆ ಸಮರ್ಥವಾಗಿ ಹೋರಾಟ ರೂಪಿಸಬೇಕಾದ ರಾಜ್ಯ ಬಿಜೆಪಿ  ನಾಯಕರು ಬಾಯ್ಮಾತಿನ ಹೇಳಿಕೆ ಸೀಮಿತವಾಗಿದೆ. ಯಾವ ನಾಯಕರಲ್ಲೂ ಹೋರಾಟ ನಡೆಸುವ ಕೆಚ್ಚು, ಹುಮ್ಮಸ್ಸು ಕಾಣುತ್ತಿಲ್ಲ. ಇಂತಹ ಹೋರಾಟ ನಡೆಯೊಲ್ಲ ಎಂದು ರಾಜ್ಯ ನಾಯಕರ ವಿರುದ್ಧ ಬಿಜೆಪಿ ಹೈಕಮಾಂಡ್ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios