Asianet Suvarna News Asianet Suvarna News

ದಿಲ್ಲಿ ಪ್ರವಾಸದ ಬಳಿಕ ಸತೀಶ್‌ ಜಾರಕಿಹೊಳಿ ಮೌನ: ಕುತೂಹಲಕಾರಿ ನಡೆ..!

ಸತೀಶ್ ಅವರು ದೆಹಲಿ ಭೇಟಿ ವೇಳೆ ಕೇವಲ ಇಲಾಖೆ ಕೆಲಸಗಳನ್ನಷ್ಟೆ ಮಾಡದೆ, ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಿ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Minister Satish Jarkiholi Silent after back from Delhi grg
Author
First Published Sep 4, 2024, 11:15 AM IST | Last Updated Sep 4, 2024, 11:15 AM IST

ಬೆಂಗಳೂರು(ಸೆ.04): ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಯ ನಡುವೆಯೇ ಕಳೆದೆರಡು ದಿನಗಳ ಹಿಂದೆ ದೆಹಲಿಗೆ ಭೇಟಿ ನೀಡಿದ್ದ ಸಚಿವ ಸತೀಶ್ ಜಾರಕಿಹೊಳಿ ವಾಪಾಸಾದ ನಂತರದಿಂದ ಮೌನವಹಿಸಿದ್ದು, ಅವರ ಈ ನಡೆ ಕುತೂಹಲಕ್ಕೆ ಕಾರಣವಾಗಿದೆ. 

ಲೋಕೋಪಯೋಗಿ ಇಲಾಖೆ ಸೇರಿದಂತೆ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳಿಗಾಗಿ ಸತೀಶ್ ದೆಹಲಿಗೆ ಭೇಟಿ ನೀಡಿದ್ದರು ಎಂದು ಅವರ ಆಪ್ತ ವಲಯ ತಿಳಿಸಿದೆ. ಆದರೆ, ಸತೀಶ್ ಅವರು ದೆಹಲಿ ಭೇಟಿ ವೇಳೆ ಕೇವಲ ಇಲಾಖೆ ಕೆಲಸಗಳನ್ನಷ್ಟೆ ಮಾಡದೆ, ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಿ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

'ದೆಹಲಿಗೆ ನಮ್ಮ ನಾಯಕರು ಹೋಗಿದ್ದಾರಲ್ಲ, ನಾನು ನಮ್ಮ ಊರು ಕಡೆ ಹೋಗ್ತಿನಿ': ಸಚಿವ ಸತೀಶ್ ಜಾರಕಿಹೊಳಿ

ದೆಹಲಿಯಿಂದ ವಾಪಾಸದ ನಂತರದಿಂದ ಸತೀಶ್ ಜಾರಕಿಹೊಳೆ ಮಾಧ್ಯಮಗಳೊಂದಿಗೆ ಕಾಯ್ದುಕೊಂಡಿದ್ದು, ಅಂತರ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಅವರ ಈ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Latest Videos
Follow Us:
Download App:
  • android
  • ios