ಭಾಯಿಯೋ ಔರ್ ಬೆಯನೋ ಅನ್ನೋದು ಈಗ ಬಿಟ್ಟಿದಾನೆ. ಈಗ ಮೇರೆ ಪರಿವಾರ ವಾಲೆ ಅಂತ ಹೊಸದು ಶುರು ಮಾಡಿದ್ದಾನೆ. ಮೋದಿ ಸುಳ್ಳಿನ ಸರದಾರ, ಇಂತವರಿಗೆ ಮತ ಹಾಕಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ(ಮೇ.01):  ಮೋದಿ ಜನರ ಕಲ್ಯಾಣಕ್ಕೆ ಪ್ರಧಾನಿ ಆದವನಲ್ಲ. ಬಡವರ ಶೋಷಣೆ ಮಾಡಲು ಮೋದಿ ಪ್ರಧಾನಿ ಆಗಿದ್ದು, ಶ್ರೀಮಂತರ ಉದ್ದಾರಕ್ಕಾಗಿ ಮೋದಿ ಪ್ರಧಾನಿ ಆಗಿದ್ದಾನೆ. ಆರ್‌ಎಸ್‌ಎಸ್ ಸಿದ್ಧಾಂತ ಅನುಷ್ಠಾನಕ್ಕೆ ತರಲು ಮೋದಿ ಪ್ರಧಾನಿ ಆಗಿದ್ದಾನೆ ಎಂದು ಪ್ರಧಾನಿ ನರೇಂದ್ರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಇಂದು(ಬುಧವಾರ) ಜಿಲ್ಲೆಯ ಜೇವರ್ಗಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಭಾಯಿಯೋ ಔರ್ ಬೆಯನೋ ಅನ್ನೋದು ಈಗ ಬಿಟ್ಟಿದಾನೆ. ಈಗ ಮೇರೆ ಪರಿವಾರ ವಾಲೆ ಅಂತ ಹೊಸದು ಶುರು ಮಾಡಿದ್ದಾನೆ. ಮೋದಿ ಸುಳ್ಳಿನ ಸರದಾರ, ಇಂತವರಿಗೆ ಮತ ಹಾಕಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಪ್ರಧಾನಿ ಮೋದಿಗೆ ಮಕ್ಕಳಿಲ್ಲ ಅಂದ್ರೆ ನಾವೇನು ಮಾಡೋಣ: ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ಪಕ್ಷವನ್ನು ನೀವು ಅಧಿಕಾರಕ್ಕೆ ತಂದ್ರೆ ಪ್ರಜಾಪ್ರಭುತ್ವ ಇರುತ್ತೆ. ಸಂವಿಧಾನ ಉಳಿಯುತ್ತೆ. ಕಾಂಗ್ರೆಸ್ ಸೋತರೆ ಸಂವಿಧಾನ, ಪ್ರಜಾಪ್ರಭುತ್ವ ಎರಡೂ ಹೋಗುತ್ತೇ. ಹಾಗಾಗಿ ಕಾಂಗ್ರೆಸ್ ಪಕ್ಷ ಕ್ಕೆ ಮತ ಕೊಟ್ಟು ಬೆಂಬಲಿಸಿ ಎಂದು ಹೇಳಿದ್ದಾರೆ.