Asianet Suvarna News Asianet Suvarna News

ಮೊದಲ ವಿಶ್ವಕಪ್‌ಗೆ 37ರ ಹರುಷ, ತುರ್ತು ಪರಿಸ್ಥಿತಿಗೆ 45 ವರ್ಷ; ಜೂ.25ರ ಟಾಪ್ 10 ಸುದ್ದಿ!

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೊರೋನಾ ವೈರಸ್ ಪ್ರಕರಣ ಮೀತಿ ಮೀರುತ್ತಿದೆ. ಇದೀಗ ಮತ್ತೊಮ್ಮೆ ಲಾಕ್‌ಡೌನ್‌ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಪತನದ ಭೀತಿಗೆ ಸಿಲುಕಿದ್ದ ಮಣಿಪುರದ ಬೀರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ ಅಪಾಯದಿಂದ ಪಾರಾಗಿದೆ. ಇತ್ತ ಗಡಿಯಲ್ಲಿ ಮತ್ತೆ ಚೀನಾ ಖ್ಯಾತೆ ತೆಗೆಯುತ್ತಿದೆ. ಹೆಚ್ಚುವರಿ ಸೈನಿಕರನ್ನು ಜಮಾವಣೆ ಮಾಡುತ್ತಿದೆ. ಪಾಕಿಸ್ತಾನದಲ್ಲಿ ಬೃಹತ್ ಕೃಷ್ಣನ ಮಂದಿರ ನಿರ್ಮಾಣವಾಗುತ್ತಿದೆ. ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್ ಸಂಭ್ರಮಕ್ಕೆ 27 ವರ್ಷ, ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಗೆ 45 ವರ್ಷ ಸೇರಿದಂತೆ ಜೂನ್ 25ರ ಟಾಪ್ 10 ಸುದ್ದಿ ಇಲ್ಲಿವೆ.

Team India World cup 1983 to Emergency 1975 top 10 news of june 25
Author
Bengaluru, First Published Jun 25, 2020, 4:44 PM IST

ಅಮಿತ್‌ ಶಾ ಸಂಧಾನ: ಮಣಿಪುರ ಸರ್ಕಾರ ಪತನದಿಂದ ಬಚಾವ್‌!

Team India World cup 1983 to Emergency 1975 top 10 news of june 25

ಶಾಸಕರ ರಾಜೀನಾಮೆಯಿಂದಾಗಿ ಪತನದ ಭೀತಿಗೆ ಸಿಲುಕಿದ್ದ ಮಣಿಪುರದ ಬೀರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ ಸದ್ಯ ಅಪಾಯದಿಂದ ಪಾರಾಗಿದೆ.

97 ಬಲಿ ಪಡೆದ ಪಾಕ್‌ ವಿಮಾನ ದುರಂತಕ್ಕೆ ಕೊರೋನಾ ಕಾರಣ!

Team India World cup 1983 to Emergency 1975 top 10 news of june 25

ಕಳೆದ ತಿಂಗಳು ಪಾಕಿಸ್ತಾನದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ‘ಕೊರೋನಾ ವೈರಸ್‌’ ಕಾರಣ ಎಂಬ ಅಚ್ಚರಿಯ ಅಂಶ ಹೊರಬಿದ್ದಿದೆ.

ಪಾಕ್ ರಾಜಧಾನಿಯಲ್ಲಿ ನಿರ್ಮಾಣವಾಗಲಿದೆ ಬೃಹತ್ ಕೃಷ್ಣ ದೇವಾಲಯ

Team India World cup 1983 to Emergency 1975 top 10 news of june 25

ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್‌ನಲ್ಲಿ ಹಿಂದೂ ದೇವಲಾಯ ನಿರ್ಮಾಣವಾಗಲಿದೆ. ಇಲ್ಲಿಯವರೆಗೂ ಯಾವುದೇ ಧಾರ್ಮಿಕ ಕಾರ್ಯಕ್ಕೆ ನಗರದ ಹೊರಭಾಗಕ್ಕೆ ಹೋಗುತ್ತಿದ್ದ ಜನರಿಗೆ ಇನ್ನು ತಮ್ಮ ನಗರದಲ್ಲಿಯೇ ದೇವಾಲಯ ಹಾಗೂ ಸ್ಮಶಾನ ಎರಡೂ ಸಿಗಲಿವೆ.

ಶಾಂತಿ ಜಪದ ಮಧ್ಯೆಯೇ ಚೀನಾದಿಂದ ಗಡಿಯಲ್ಲಿ ಸೇನೆ ಜಮಾವಣೆ!

Team India World cup 1983 to Emergency 1975 top 10 news of june 25

ಗಲ್ವಾನ್‌ ಕಣಿವೆಯಲ್ಲಿ ಉದ್ಭವವಾಗಿರುವ ತ್ವೇಷಮಯ ಪರಿಸ್ಥಿತಿಯನ್ನು ತಿಳಿಗೊಳಿಸಲು ಒಂದೆಡೆ ಶಾಂತಿ ಮಂತ್ರ ಜಪಿಸಲು ಆರಂಭಿಸಿರುವ ಚೀನಾ, ಮತ್ತೊಂದೆಡೆ ಸದ್ದಿಲ್ಲದೆ ಸೇನಾ ಜಮಾವಣೆ ಪ್ರಾರಂಭಿಸುವ ಮೂಲಕ ತನ್ನ ಕಪಟ ಬುದ್ಧಿ ಪ್ರದರ್ಶಿಸಿದೆ.

'ತುಟಿ ಬಿಚ್ಚಬೇಡಿ' ಸಚಿವರಿಗೆ ಬಿಎಸ್‌ ಯಡಿಯೂರಪ್ಪ ತಾಕೀತು!

Team India World cup 1983 to Emergency 1975 top 10 news of june 25

ಲಾಕ್ ಡೌನ್ ಬಗ್ಗೆ ತುಟಿ ಬಿಚ್ಚಬೇಡಿ  ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸಚಿವರಿಗೆ ಖಡಕ್ ಸೂಚನೆ ನೀಡಿದ್ದಾರೆ.  ಶುಕ್ರವಾರ ಸಹ ಕೋವಿಡ್ 19 ವಿಚಾರವಾಗಿ ಸರಣಿ ಸಭೆ ನಡೆಸಲಿದ್ದೇವೆ. ನಾಳೆ ಸರ್ವಪಕ್ಷಗಳ ಬೆಂಗಳೂರು ಶಾಸಕರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡೋಣ ಎಂದಿದ್ದಾರೆ.

ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 37 ವರ್ಷ..!

Team India World cup 1983 to Emergency 1975 top 10 news of june 25

ಜೂನ್ 25, 1983 ಭಾರತ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲ್ಪಡುವ ದಿನ. ಮೂರನೇ ಏಕದಿನ ವಿಶ್ವಕಪ್‌ನಲ್ಲಿ ಬಲಿಷ್ಠ ವಿಂಡೀಸ್ ಬಗ್ಗು ಬಡಿದು ಚಾಂಪಿಯನ್ ಆದ ದಿನಕ್ಕೆ ಇಂದಿಗೆ 37 ವರ್ಷ ಕಳೆದಿದೆ. ಈ ವಿಶ್ವಕಪ್ ಜರ್ನಿಯ ಮೆಲುಕು ಇಲ್ಲಿದೆ ನೋಡಿ.

ತುರ್ತುಸ್ಥಿತಿ ಘೋಷಣೆಗೆ 45 ವರ್ಷ: ಇಂದಿರಾಗೆ ಎಮರ್ಜೆನ್ಸಿ ಹೇರುವ ಸಲಹೆ ನೀಡಿದ್ದು ಯಾರು?...

Team India World cup 1983 to Emergency 1975 top 10 news of june 25

1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಘೋಷಿಸಿದ್ದ ತುರ್ತು ಪರಿಸ್ಥಿತಿ ದೇಶದ ರಾಜಕೀಯ ಪುಟಗಳಲ್ಲಿ ಪ್ರಮುಖ ಘಟನೆಯಾಗಿ ದಾಖಲಾಗಿದೆ. ಬರೋಬ್ಬರಿ 21 ತಿಂಗಳುಗಳ ಕಾಲ ಅಸ್ತಿತ್ವದಲ್ಲಿದ್ದ ತುರ್ತು ಪರಿಸ್ಥಿತಿ ಘೋಷಣೆಯಾಗಿ ಇಂದಿಗೆ 45 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯ ಘೋಷಣೆಯ ಹಿಂದಿನ ಕಾರಣ, ತುರ್ತುಸ್ಥಿತಿ ವೇಳೆಯ ದಿನಗಳು ಹೇಗಿದ್ದವು ಎಂಬ ಇತ್ಯಾದಿ ಕುತೂಹಲಕಾರಿ ಮಾಹಿತಿಯನ್ನು ಇಲ್ಲಿ ಸವಿಸ್ತಾರವವಾಗಿ ನೀಡಲಾಗಿದೆ.

ಮೋಸ್ಟ್‌ ಸೆಕ್ಸಿ ಗರ್ಲ್‌ ಇಶಾ ಗುಪ್ತಾ ಫಿಟ್‌ನೆಸ್‌ ಪಾಠ ಹೇಗಿದೆ ನೋಡಿ!

Team India World cup 1983 to Emergency 1975 top 10 news of june 25

ಮೋಸ್ಟ್‌ ಸೆಕ್ಸಿ ಗರ್ಲ್‌ ಅಂತ ಕರೆಸಿಕೊಳ್ಳೋ ನಿಸ್ಸಂಕೋಚದ ಹುಡುಗಿ ಇಶಾ ಗುಪ್ತಾ ಲಾಕ್‌ಡೌನ್‌ ಟೈಮ್‌ನಲ್ಲಿ ಹೊಸ ಬಗೆಯ ಸ್ಟ್ರೆಚ್‌ಗಳು, ಯೋಗ ಪ್ರಾಕ್ಟೀಸ್‌ ಮಾಡಿದ್ದಾರೆ. ಆಕೆಯ ಫಿಟ್‌ನೆಸ್‌ ಪಾಠ ಹೀಗಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಗೂ ಅವಕಾಶ, ಕೇಂದ್ರ ಸಂಪುಟದಿಂದ ಐತಿಹಾಸಿಕ ನಿರ್ಧಾರ!

Team India World cup 1983 to Emergency 1975 top 10 news of june 25

ಬಾಹ್ಯಾಕಾಶ ಅನ್ವೇಷಣೆ ಸೇರಿದಂತೆ ಎಲ್ಲಾ ರೀತಿಯ ಅಂತರಿಕ್ಷ ಚಟುವಟಿಕೆಗಳಲ್ಲಿ ಖಾಸಗಿ ವಲಯ ತೊಡಗಿಸಿಕೊಳ್ಳುವುದಕ್ಕೆ ಅನುಮತಿ ನೀಡಿ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಇದೇ ವೇಳೆ, ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಹಾಗೂ ಮಂಜೂರಾತಿ ಕೇಂದ್ರ (ಇನ್‌-ಸ್ಪೇಸ್‌) ಸ್ಥಾಪನೆಗೆ ಅನುಮತಿ ನೀಡಿದೆ.

ವಿದ್ಯಾರ್ಥಿ ಆವಿಷ್ಕರಿಸಿದ ನೂತನ ಎಲೆಕ್ಟ್ರಿಕ್ ಬೈಕ್‌ಗೆ ಭಾರಿ ಬೇಡಿಕೆ!

Team India World cup 1983 to Emergency 1975 top 10 news of june 25

ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಕಾರಿಗೆ ಇದೀಗ ಭಾರಿ ಬೇಡಿಕೆ ಇದೆ. ಕಡಿಮೆ ನಿರ್ವಹಣಾ ವೆಚ್ಚ ಮಾತ್ರವಲ್ಲ, ಭವಿಷ್ಯದ ವಾಹನ ಎಂದೇ ಗುರಿತಿಸಿಕೊಂಡಿದೆ. ಹಲವು ಕಂಪನಿಗಳು ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡುತ್ತಿದೆ. ಇದೀಗ ವಿದ್ಯಾರ್ಥಿ ನೂತನ ಪೋರ್ಟೇಬಲ್ ಎಲೆಕ್ಟ್ರಿಕ್ ಬೈಕ್ ಆವಿಷ್ಕರಿಸಿದ್ದು, ನೂತನ ಬೈಕ್‌ಗೆ ಭಾರಿ ಬೇಡಿಕೆ ಬರುತ್ತಿದೆ.

Follow Us:
Download App:
  • android
  • ios