ಇ. ಪಳನಿಸ್ವಾಮಿ, ಸ್ಪೀಕರ್, ವಿಧಾನಸಭಾ ಕಾರ್ಯದರ್ಶಿ, ಹಾಗೂ ಗೃಹ ಕಾರ್ಯದರ್ಶಿ ಅವರಿಗೆ ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್, ಮಾರ್ಚ್ 10ರೊಳಗೆ ಉತ್ತರಿಸುವಂತೆ ಸೂಚಿಸಿದೆ.

ಚೆನ್ನೈ (ಫೆ.22): ಕಳೆದ ಫೆ.18ರಂದು ತಮಿಳುನಾಡು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಗೆ ಸಂಬಂಧಿಸಿದಂತೆ, ಮದ್ರಾಸ್ ಹೈಕೋರ್ಟ್ ಮುಖ್ಯಮಂತ್ರಿ ಹಾಗೂ ಗೃಹ ಕಾರ್ಯದರ್ಶಿ ಸೇರಿದಂತೆ ನಾಲ್ಕು ಮಂದಿಗೆ ನೋಟಿಸ್ ಜಾರಿ ಮಾಡಿದೆ.

ಇ. ಪಳನಿಸ್ವಾಮಿ, ಸ್ಪೀಕರ್, ವಿಧಾನಸಭಾ ಕಾರ್ಯದರ್ಶಿ, ಹಾಗೂ ಗೃಹ ಕಾರ್ಯದರ್ಶಿ ಅವರಿಗೆ ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್, ಮಾರ್ಚ್ 10ರೊಳಗೆ ಉತ್ತರಿಸುವಂತೆ ಸೂಚಿಸಿದೆ.

ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸದನದಲ್ಲಿ ನಾಟಕೀಯ ಬೆಳವಣಿಗೆಗಳು ನಡೆದಿದ್ದು ಸ್ಪೀಕರ್, 89 ಮಂದಿ ಡಿಎಂಕೆ ಸದಸ್ಯರನ್ನು ಸಭೆಯಿಂದ ಅಮಾನತುಗೊಳಿಸಿದ್ದರು. ಶಶಿಕಲಾ ಆಪ್ತ ಇ.ಪಳನಿಸ್ವಾಮಿ 122 ಮತಗಳನ್ನು ಪಡೆಯುವ ಮೂಲಕ ವಿಶ್ವಾಸ ಮತವನ್ನು ಗೆದ್ದಿದ್ದರು.