ಮಹಾರಾಣಿ ತ್ರಿಶಿಕಾ ಬರ್ತ್ಡೇ: ಮಹಾರಾಜ ಶುಭ ಹಾರೈಸಿದ್ದು ಹೇಗೆ?
ಮಹಾರಾಣಿ ತ್ರಿಶಿಕಾ ಕುಮಾರಿ ಒಡೆಯರ್ ಅವರ ಬರ್ತ್ಡೇ ಇಂದು. ಅದಕ್ಕಾಗಿ ಯದುವೀರ್ ತುಂಬ ಸೊಗಸಾದ ಶುಭಹಾರೈಕೆಯೊಂದನ್ನು ಮಾಡಿದ್ದಾರೆ. ನೋಡಿ. ಜೊತೆಗೆ ತ್ರಿಶಿಕಾ ಅವರ ಇತರ ವಿವರಗಳೂ ಇಲ್ಲಿವೆ.
ಇಂದು ಮೈಸೂರಿನ ಮಹಾರಾಣಿ ತ್ರಿಶಿಕಾ ಕುಮಾರಿ ಒಡೆಯರ್ ಅವರ ಜನ್ಮದಿನ. ಅದಕ್ಕೆ ಅವರ ಪತಿ, ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶುಭ ಹಾರೈಸಿದ್ದು ಹೀಗೆ:
ಸನ್ನಿಧಾನ ಸವಾರಿಯವರು ಮಹಾರಾಣಿ ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರವರ ಜನ್ಮದಿನದಂದು ಅವರಿಗೆ ಶುಭ ಕೋರುತ್ತೇವೆ, ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇವೆ.
ಯದುವೀರ್ ಮತ್ತು ತ್ರಿಶಿಕಾ ಒಂದು ರೀತಿಯಲ್ಲಿ ಬಾಲ್ಯದ ಗೆಳೆಯರು ಎನ್ನಬಹುದು. ಇಬ್ಬರೂ ಪಾರ್ಟಿಗಳಲ್ಲಿ ಆಗಾಗ ಭೇಟಿ ಆಗುತ್ತಿದ್ದರು. ಯಾಕೆಂದರೆ ಇಬ್ಬರ ಮನೆತನದವರೂ ಜೊತೆಯಾಗಿ ಪಾರ್ಟಿ ಮಾಡುತ್ತಿದ್ದರು. ಮೈಸೂರಿನ ರಾಜಮನೆತನದವರೂ, ಪಂಜಾಬ್ನ ರಾಜಮನೆತನದವರೂ ಕೂಡಿದಾಗ ಈ ಪಾರ್ಟಿಗಳು ನಡೆಯುತ್ತಿದ್ದವು. ಅಲ್ಲಿ ಇವರಿಬ್ಬರ ಪರಿಚಯ, ಸ್ನೇಹವಿತ್ತು. ಅದು ಪ್ರೇಮಕ್ಕೆ ತಿರುಗಿದ್ದು ಅವರಿಬ್ಬರ ವಿದ್ಯಾಭ್ಯಾಸದ ಟೈಮ್ನಲ್ಲಿ. ಇಬ್ಬರೂ ಹೆಚ್ಚು ಕಡಿಮೆ ಸಮಾನ ವಯಸ್ಸಿನವರು. ಮದುವೆಯಾದಾಗ ಯದುವೀರ್ಗೆ ಇಪ್ಪತ್ತನಾಲ್ಕು, ತ್ರಿಶಿಕಾಗೆ ಇಪ್ಪತ್ತಮೂರು.
ಸನ್ನಿಧಾನ ಸವಾರಿಯವರು ಮಹಾರಾಣಿ ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರವರ ಜನ್ಮದಿನದಂದು ಅವರಿಗೆ ಶುಭ ಕೋರುತ್ತೇವೆ, ಜಗನ್ಮಾತೆಯಾದ ಶ್ರೀ...
Posted by Yaduveer Krishnadatta Chamaraja Wadiyar on Tuesday, November 10, 2020
ಸರಳತೆಗೆ ಹೆಸರಾದ ಮೈಸೂರು ರಾಜ ಯದುವೀರ್ - ತ್ರಿಷಿಕಾ ದೇವಿ ರಾಯಲ್ ಲವ್ಸ್ಟೋರಿ! ...
ತ್ರಿಶಿಕಾ ಕಟ್ಟುನಿಟ್ಟಾದ ವೆಜೆಟೇರಿಯನ್. ಮೊಟ್ಟೆ ಕೂಡ ಸೇವಿಸುವುದಿಲ್ಲ. ಇವರು ಪ್ರಾಣಿ ಪ್ರಿಯೆ. ಹೀಗಾಗಿ ಮಾಂಸಾಹಾರ ಸೇವಿಸಲು ಇಷ್ಟಪಡುವುದಿಲ್ಲ. ಮಹಾರಾಜರಾದರೋ ಆಗಲೋ ಈಗಲೋ ಎಂದು ಮಾಂಸ ಸೇವಿಸುವುದು ಉಂಟು. ಅರಮನೆಯಲ್ಲಿ ಮಾಂಸಾಹಾರದ ಸೇವನೆ ಇಲ್ಲ. ಇಬ್ಬರ ದಿನಚರಿಯೂ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಇಬ್ಬರೂ ರಾತ್ರಿ ಒಂಬತ್ತೂವರೆಗೆಲ್ಲ ಮಲಗಿ ಬಿಡುತ್ತಾರೆ. ಮೈಸೂರಿನ ಜೀವನ ಬೆಂಗಳೂರಿನ ಹಾಗಲ್ಲ ತಾನೆ? ಆದರೆ ಇಬ್ಬರೂ ಬೆಳಗ್ಗೆ ಐದು ಗಂಟೆಗೆ ಏಳುತ್ತಾರೆ. ಯದುವೀರ್ ಸೂರ್ಯ ನಮಸ್ಕಾರ ಮತ್ತು ಇತರ ಯೋಗಾಸನಗಳನ್ನು ಮಾಡುತ್ತಾರೆ. ತ್ರಿಶಿಕಾ ಕೂಡ ಯೋಗಾಸನ ಮಾಡುತ್ತಾರೆ. ದಿನಕ್ಕೊಮ್ಮೆ ಹನುಮಾನ್ ಚಾಲೀಸ್ ಪಠಿಸುತ್ತಾರೆ. ಮತ್ತೆ ಮಗ, ಯುವರಾಜನ ಆರೈಕೆ ಹಾಗೂ ಆಟಪಾಠ ಇದ್ದೇ ಇರುತ್ತೆ. ಇತ್ತೀಚೆಗೆ ಅರಮನೆಯಲ್ಲಿ ಯಾವುದೇ ಹಬ್ಬ ಆದರೂ ಅದರಲ್ಲಿ ಯುವರಾಜ ಆದ್ಯವೀರನ ಅಲಂಕಾರ, ಇತ್ಯಾದಿಗಳು ಕೂಡ ಪ್ರಮುಖ ಭಾಗವಾಗಿರ್ತವೆ. ಮಹಾರಾಜರ ಜೊತೆಗೆ ಮಹಾರಾಣಿ, ಯುವರಾಜ ಕೂಡ ಇದಕ್ಕೆಲ್ಲಾ ತಯಾರಾಗಬೇಕಿದೆ.
ಕ್ರಿಕೆಟ್ ಬ್ಯಾಟ್ ಹಿಡಿದು ಫೀಲ್ಡಿಗಿಳಿದ ಮೈಸೂರು ರಾಜಕುಮಾರಿ! ...
ತ್ರಿಶಿಕಾ ಅವರಿಗೆ ಒಳ್ಳೆಯ ಓದುವ ಹವ್ಯಾಸ ಇದೆ. ಅರಮನೆಯಲ್ಲಿ ಅವರದ್ದೇ ಆದ ಲೈಬ್ರೆರಿಯೂ ಇದೆ. ಯದುವೀರ್ ಕೂಡ ಚೆನ್ನಾಗಿ ಓದಿಕೊಂಡಿದ್ದಾರೆ ಹಾಗೂ ಈಗಲೂ ಓದುತ್ತಾರೆ. ಮೈಸೂರಿನ ಒಡೆಯರ ಇತಿಹಾಸವೇ ಸಾಕಷ್ಟು ಓದುವಷ್ಟು ಇದೆ ಎನ್ನುತ್ತಾರೆ. ಪದವಿ ಮುಗಿಸಿದ ಬಳಿಕ ತ್ರಿಶಿಕಾ ಅವರಿಗೆ ಪಿಎಚ್ಡಿ ಮಾಡಬೇಕು ಎಂಬ ಆಸೆಯಿತ್ತು. ಆದರೆ ಅದು ಕೈಗೂಡಲಿಲ್ಲ. ಈಗ ಮಗು ಹುಟ್ಟಿದ ಬಳಿಕ ಸಂಸಾರದ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಇಂದಲ್ಲ ನಾಳೆಯಾದರೂ ಪಿಎಚ್ಡಿ ಮಾಡಿ ಮುಗಿಸಬೇಕು ಅನ್ನುವುದು ಅವರ ಕನಸು. ಹಾಗೇ ಈಗ ಅವರು ಆದಿವಾಸಿ ಮಕ್ಕಳ ಕುರಿತು ಅಧ್ಯಯನ ಮಾಡಿ ಪಿಎಚ್ಡಿ ಪಡೆಯಲು ಮುಂದಾಗಿದ್ದಾರೆ.
ಆದಿವಾಸಿ ಮಕ್ಕಳ ಕುರಿತು ರಾಣಿ ತ್ರಿಷಿಕಾ ಕುಮಾರಿ ಪಿಎಚ್ಡಿ ...