ಭಾಗ್ಯಲಕ್ಷ್ಮಿಯಲ್ಲಿ ಶ್ರೇಷ್ಠಾಳ ರೋಲ್​ ಮೂಲಕ ಮನೆಮಾತಾಗಿರೋ ನಟಿ ಕಾವ್ಯಾ ಗೌಡ ಸೀರಿಯಲ್​ ಬಿಟ್ರಾ? ನೇರಪ್ರಸಾರದಲ್ಲಿ ಬಂದ ನಟಿ ಹೇಳಿದ್ದೇನು? 

ಸದ್ಯ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಪೂಜಾಳ ಮದುವೆಯ ಗಡಿಬಿಡಿ ನಡೆಯುತ್ತಿದೆ. ಪೂಜಾ ಮತ್ತು ಕಿಶನ್​ ಮದುವೆಯ ಗೋಜಲು ಇದು. ಇದನ್ನು ಸಂಭ್ರಮ ಎನ್ನಬೇಕೋ, ಆತಂಕ ಎನ್ನಬೇಕೋ ಗೊತ್ತಿಲ್ಲ. ಏಕೆಂದ್ರೆ ಇಲ್ಲಿ ಇವರಿಬ್ಬರ ಮದುವೆಯನ್ನು ತಪ್ಪಿಸಲು ಒಬ್ಬರಲ್ಲ, ಇಬ್ಬರಲ್ಲ ನಾಲ್ಕು ಮಂದಿ ಕಿತಾಪತಿ ಮಾಡುತ್ತಿದ್ದಾರೆ. ಕಿಶನ್​ ಅಣ್ಣ ಆದಿ, ಅತ್ತೆ, ಕನ್ನಿಕಾ ಸಾಲದು ಎನ್ನುವುದಕ್ಕೆ ಈಗ ತಾಂಡವ್​ ಪ್ರವೇಶ ಕೂಡ ಆಗಿದೆ! ಏನಾದರೂ ಕಿತಾಪತಿ ಮಾಡಿ ಮದುವೆ ನಿಲ್ಲಿಸಲು ಹರಸಾಹಸ ಮಾಡುತ್ತಲೇ ಇದ್ದಾರೆ. ಭಾಗ್ಯಳ ಮನೆಯವರನ್ನು ಪರೀಕ್ಷಿಸುವ ಸಲುವಾಗಿ ಕಿಶನ್​ಗೆ ಆಸ್ತಿಯಲ್ಲಿ ಬಿಡಿಗಾಸೂ ಕೊಡುವುದಿಲ್ಲ ಎಂದು ತಾತ ಹೇಳಿದ್ದ. ಆದರೆ ತಮಗೆ ಬೇಕಿರುವುದು ಆಸ್ತಿಯಲ್ಲ, ಕಿಶನ್​ ಮತ್ತು ಪೂಜಾಳ ಪ್ರೀತಿ ಎನ್ನುವ ಮೂಲಕ ಮದುವೆ ನಿಲ್ಲಿಸುವ ಪ್ಲ್ಯಾನ್​ ಉಲ್ಟಾ ಮಾಡಿ ಮದುವೆ ನಡೆಯುತ್ತಿದೆ. ಇದೇ ವೇಳೆ ಒಂದು ವೇಳೆ ಮದುವೆಯಾದರೂ ಪೂಜಾಳಿಗೆ ಹಿಂಸೆ ಕೊಡುವುದಾಗಿ ಕನ್ನಿಕಾ ಮತ್ತು ಅತ್ತೆ ಮಾತನಾಡುತ್ತಿರುವುದನ್ನು ಭಾಗ್ಯ ಕೇಳಿಸಿಕೊಂಡಿದ್ದಾಳೆ. ಮುಂದೇನು ಎನ್ನುವ ಆತಂಕ ಅವಳದ್ದು.

ಅದರ ನಡುವೆಯೇ, ಶ್ರೇಷ್ಠಾ ಮಾತ್ರ ಸೀರಿಯಲ್​ನಲ್ಲಿ ಸದ್ಯ ನಾಪತ್ತೆಯಾಗಿದ್ದಾಳೆ. ಮದುವೆಯನ್ನು ನಿಲ್ಲಿಸಲು ತಾಂಡವ್​ ಬಂದರೂ ಶ್ರೇಷ್ಠಾ ಕಾಣಿಸುತ್ತಿಲ್ಲ. ಇದಕ್ಕೆ ಕಾರಣ, ಶ್ರೇಷ್ಠಾ ಸದ್ಯ ಕ್ವಾಟ್ಲೆ ಕಿಚನ್​ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ. ಇದೀಗ ಏಕಾಏಕಿ ನೇರಪ್ರಸಾರದಲ್ಲಿ ಶ್ರೇಷ್ಠಾ ಉರ್ಫ್​ ಕಾವ್ಯಾ ಗೌಡ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಒಮ್ಮೆ ದಂಗಾಗಿದ್ದಾರೆ. ಕಮೆಂಟ್​ ನೋಡಿದರೆ ತಿಳಿಯುತ್ತದೆ ಫ್ಯಾನ್ಸ್​ ಶಾಕ್​ ಆಗಿರೋ ರೀತಿ. ನಟಿ ಭಾಗ್ಯಲಕ್ಷ್ಮಿ ಸೀರಿಯಲ್​ ಬಿಟ್ಟು ಕಿಚನ್​ ಷೋಗೆ ಬಂದಿರಲು ನೇರಪ್ರಸಾರದಲ್ಲಿ ಬಂದಿರಬೇಕು ಎಂದೇ ಹಲವರು ಅಂದುಕೊಂಡಿದ್ದಾರೆ. ಆದರೆ ಕಾವ್ಯಾ ಅವರು ನೇರಪ್ರಸಾರದಲ್ಲಿ ಬರಲು ಕಾರಣ, ಕ್ವಾಟ್ಲೆ ಕಿಚನ್​ ಕುರಿತು ಮಾತನಾಡಿದರು.

ಸೀರಿಯಲ್​ ಮತ್ತು ರಿಯಾಲಿಟಿ ಷೋ ಪ್ರಮೋಷನ್​ಗಾಗಿ ಹೀಗೆ ಆಗಾಗ್ಗೆ ನಟ-ನಟಿಯರು ನೇರಪ್ರಸಾರದಲ್ಲಿ ಬಂದು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಅದೇ ರೀತಿ ಕಾವ್ಯಾ ಗೌಡ ಕೂಡ ಬಂದಿದ್ದು, ಈ ರಿಯಾಲಿಟಿ ಷೋ ಬಗ್ಗೆ ಮಾತನಾಡಿದ್ದಾರೆ. ಹೇಗೆ ಕ್ವಾಟ್ಲೆಗಳು ತಮಗೆ ತೊಂದರೆ ಕೊಡುತ್ತಾರೆ ಎಂದು ಹೇಳಿದ್ದಾರೆ. ರೈಸ್​ ಬಾತ್​ ಎಂದು ತಮ್ಮನ್ನು ತಮಾಷೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಚಿಕನ್​ ಅಡುಗೆಗಳನ್ನೂ ಮಾಡುವುದಾಗಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ತಾಂಡವ್​ ಎಲ್ಲಿ ಎಂದೂ ಕೇಳಿದ್ದಾರೆ. ಅದಕ್ಕೆ ನಟಿ, ಮನೆಯಲ್ಲಿ ಇದ್ದಾರೆ ಎಂದು ಉತ್ತರಿಸಿದ್ದಾರೆ.

ಇನ್ನು ಕಾವ್ಯಾ ಗೌಡ ಕುರಿತು ಹೇಳುವುದಾದರೆ, ಇವರು ಐದು ವರ್ಷ ತೆಲುಗು ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.ಬೆಂಗಳೂರು ಮೂಲದ ಕಾವ್ಯಾ, ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ವಿಲನ್​ ರೋಲ್​ ಮೂಲಕ ಮನೆ ಮಾತಾಗಿದ್ದಾರೆ. 3 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದರು. ವಿಜಯ್ ರಾಘವೇಂದ್ರ ನಟನೆಯ ರಿಂಗ ರಿಂಗ ರೋಸ್ ಎಂಬ ಸಿನಿಮಾಗೂ ಇವರು ನಟಿಸಿದ್ದಾರೆ. ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ಲೀಡ್ ಆಗಿ 100 ಎಪಿಸೋಡ್‌ಲ್ಲಿ ನಟಿಸಿದ್ದರು. ಆಮೇಲೆ ಸೀರಿಯಲ್​ ಬಿಟ್ಟಿದ್ದರು. ಆದರೆ ಈಗ ಭಾಗ್ಯಲಕ್ಷ್ಮಿ ಸೀರಿಯಲ್ ಯಾವ ರೀತಿ ಟರ್ನ್​ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

View post on Instagram