Asianet Suvarna News Asianet Suvarna News

ಮಗನ ಮದುವೆ ಪ್ಲಾನ್ ಬಗ್ಗೆ ಹೇಳಿದ್ರು ಶಾಸಕಿ ಅನಿತಾ ಕುಮಾರಸ್ವಾಮಿ

ನಮ್ಮ ಆಸೆಯಂತೆಯೇ ನಿಖಿಲ್ ಮದುವೆ ನಡೆಯುತ್ತೆ. ಒಂದು ಶುಭ ದಿನ ನೋಡಿ ಮುಹೂರ್ತ ನಿಗದಿ ಮಾಡುತ್ತೇವೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. 

Nikhil Marriage To Be held in April Says Anitha Kumaraswamy
Author
Bengaluru, First Published Feb 8, 2020, 12:35 PM IST

ರಾಮ​ನ​ಗರ [ಫೆ.08]:  ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ಜನರ ನಡುವೆ ಪುತ್ರ ನಿಖಿಲ್‌ ಮದುವೆ ಮಾಡ​ಬೇ​ಕೆಂಬುದು ನನ್ನ ಮತ್ತು ಕುಮಾ​ರ​ಸ್ವಾ​ಮಿ ಅವರ ಆಸೆ​ಯಾಗಿತ್ತು. ಅದರಂತೆ ಏಪ್ರಿಲ್‌ನಲ್ಲಿ ವಿವಾಹ ನೆರ​ವೇ​ರ​ಲಿದೆ ಎಂದು ಶಾಸಕಿ ಅನಿತಾ ಕುಮಾ​ರ​ಸ್ವಾಮಿ ತಿಳಿ​ಸಿ​ದರು.

ನಗ​ರದ ಹಳೇ ಮೈಸೂರು ರಸ್ತೆ​ಯ​ಲ್ಲಿ​ರುವ ಪ್ರವಾಸಿ ಮಂದಿ​ರದ ನೂತನ ಕಟ್ಟಡ ನಿರ್ಮಾ​ಣಕ್ಕೆ ಭೂಮಿ ಪೂಜೆ ನೆರ​ವೇ​ರಿಸಿ ಮಾತ​ನಾ​ಡಿದ ಅವರು, ಪುರೋ​ಹಿ​ತರು ಏಪ್ರಿಲ್‌ನಲ್ಲಿ ಮೂರು ದಿನಾಂಕ​ಗ​ಳನ್ನು ಮದುವೆ ಮುಹೂ​ರ್ತಕ್ಕಾಗಿ ನೀಡಿ​ದ್ದಾರೆ. ಅದ​ರಲ್ಲಿ ಶುಭ​ದಿನ ನೋಡಿ​ಕೊಂಡು ಸಮಾ​ರಂಭ ನಿಶ್ಚ​ಯಿ​ಸು​ತ್ತೇವೆ ಎಂದರು.

ನಾವು ಮದುವೆ ಮುಹೂರ್ತ ನೆರ​ವೇ​ರಿ​ಸು​ತ್ತೇವೆ. ಬೀಗರ ಔತ​ಣ​ಕೂ​ಟ​ವನ್ನು ಬೀಗರು ಮಾಡು​ತ್ತಾರೆ. ನಿಖಿಲ್‌ ಮದು​ವೆ​ಗಾಗಿ ಕುಮಾ​ರ​ಸ್ವಾಮಿ ರಾಮ​ನ​ಗ​ರ​ದಲ್ಲಿ ವಿಶಾ​ಲ​ವಾದ ಜಾಗ ವೀಕ್ಷಿ​ಸಿ​ದ್ದಾರೆ. ಅವರು ನೋಡಿದ ನಂತರ ನಾನು ನೋಡುವ ಅಗ​ತ್ಯ​ವಿಲ್ಲ ಎಂದು ಅನಿತಾ ಹೇಳಿ​ದ​ರು.

ಫಿಯಾನ್ಸಿ ಜೊತೆ ಮೊದಲ ಫೋಟೋ ಶೇರ್ ಮಾಡಿದ ನಿಖಿಲ್

ಕುಮಾ​ರ​ಸ್ವಾ​ಮಿ​ ಮುಖ್ಯ​ಮಂತ್ರಿ​ಯಾ​ಗಿದ್ದ ಅವ​ಧಿ​ಯಲ್ಲಿ ರಾಮ​ನ​ಗರ ಕ್ಷೇತ್ರ​ಕ್ಕೆ ಸಾಕಷ್ಟುಯೋಜ​ನೆ​ಗ​ಳನ್ನು ರೂಪಿಸಿ ಅನು​ದಾನ ನೀಡಿ​ದ್ದರು. ಅವು​ಗ​ಳನ್ನು ಬಿಜೆಪಿ ಸರ್ಕಾರ ತಡೆ ಹಿಡಿ​ದಿತ್ತು. ಇದ​ರಿಂದ ಕ್ಷೇತ್ರ​ದಲ್ಲಿ ಅಭಿ​ವೃದ್ಧಿ ಕಾರ್ಯ​ಗ​ಳಿಗೆ ತೊಡ​ಕುಂಟಾ​ಗಿತ್ತು. ಯೋಜ​ನೆ​ಗಳ ಸಂಬಂಧ ಚರ್ಚೆ ನಡೆಸಿದ ನಂತರ ಸರ್ಕಾರ ತಡೆ ಹಿಡಿ​ದಿದ್ದ ಅನು​ದಾ​ನ​ಗಳನ್ನು ಮತ್ತೆ ಬಿಡು​ಗಡೆ ಮಾಡು​ತ್ತಿದೆ ಎಂದು ಅನಿತಾ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದರು.

ವಿಶೇಷ ವಾಹ​ನ​ಗ​ಳಿಗೆ ಹಸಿರು ನಿಶಾನೆ: 

ಲೋಕೋ​ಪ​ಯೋಗಿ ಇಲಾ​ಖೆ​ಯಿಂದ 2.50 ಕೋಟಿ ರುಪಾಯಿ ವೆಚ್ಚ​ದಲ್ಲಿ ಪ್ರವಾಸಿ ಮಂದಿ​ರದ ನೂತನ ಕಟ್ಟ​ಡ ನಿರ್ಮಾ​ಣಕ್ಕೆ ಅನಿ​ತಾ​ರ​ವರು ಗುದ್ದಲಿ ಪೂಜೆ ನೆರ​ವೇ​ರಿ​ಸಿದ ತರು​ವಾಯ ಗೆಜ್ಜ​ಲು​ಗು​ಡ್ಡೆಯಲ್ಲಿ ನೆಲ ಹಂತದ ನೀರು ಸಂಗ್ರ​ಹಣಾ ಟ್ಯಾಂಕ್‌ಗೆ ಶಂಕು​ಸ್ಥಾಪನೆ ನೆರ​ವೇ​ರಿ​ಸಿ​ದರು.

ಬೆಂಗಳೂರಿಗರಿಗೆ ತೊಂದರೆಯಾಗದಂತೆ ನಿಖಿಲ್ ಮದುವೆ...

ಆನಂತರ ರಾಮ​ನ​ಗ​ರ​ದಲ್ಲಿ ಮನೆಯ ಬಳಿಗೇ ಬಂದು ಹಸಿ ಹಾಗೂ ಒಣ ಕಸ​ವನ್ನು ಪ್ರತ್ಯೇ​ಕ​ವಾಗಿ ಸಂಗ್ರ​ಹಿ​ಸಲು ನಗ​ರಸಭೆ ಖರೀದಿ ಮಾಡಿ​ರುವ ವಿಶೇ​ಷ ವಾಹ​ನ​ಗ​ಳ ಸಂಚಾ​ರಕ್ಕೆ ಶಾಸ​ಕರು ಹಸಿರು ನಿಶಾನೆ ತೋರಿ​ಸಿ​ದರು. ಹಸಿ ಮತ್ತು ಒಣ ಕಸದ ಸಂಗ್ರಹಕ್ಕೆಂದೇ ಆಫೆ ಆಟೋ​ಗಳನ್ನು ಆಟೋ ಟಿಪ್ಪರ್‌ಗಳ​ನ್ನಾಗಿ ವಿನ್ಯಾ​ಸ​ಗೊ​ಳಿ​ಸಲಾ​ಗಿದೆ. ಪ್ರತಿ​ನಿತ್ಯ ಕಸ ಸಂಗ್ರ​ಹಿ​ಸುವ ಕಾರ್ಯ ನಡೆ​ಯು​ತ್ತಿದ್ದು, ಅವು​ಗಳ ಜತೆಗೆ ಹೊಸ ವಾಹ​ನ​ಗಳ ಸೇರ್ಪ​ಡೆ​ಯಿಂದ ನಗ​ರ​ದ​ಲ್ಲಿ ಸ್ವಚ್ಛತೆ ಕಾಪಾ​ಡಿ​ಕೊ​ಳ್ಳಲು ಸಹ​ಕಾ​ರಿ​ಯಾ​ಗ​ಲಿ​ದೆ ಎಂದು ಹೇಳಿ​ದ​ರು.

ನಗ​ರ​ಸಭೆ ಆಯುಕ್ತೆ ಬಿ.ಶುಭಾ, ಬಿಡಿ​ಸಿಸಿ ಬ್ಯಾಂಕ್‌ ನಿರ್ದೇ​ಶಕ ಅಶ್ವತ್, ತಾಪಂ ಸದಸ್ಯ ಲಕ್ಷ್ಮೀ​ಕಾಂತ್‌, ಜೆಡಿ​ಎಸ್‌ ತಾಲೂಕು ಅಧ್ಯಕ್ಷ ರಾಜ​ಶೇ​ಖರ್‌ , ಪ್ರಚಾರ ಸಮಿತಿ ಅಧ್ಯಕ್ಷ ಬಿ.ಉ​ಮೇಶ್‌ , ಮುಖಂಡ​ರಾದ ಸುಹೇಲ್‌, ಜಯ​ಕು​ಮಾರ್‌, ಜಕೀ ಉಲ್ಲಾ, ಗೂಳಿ​ಗೌಡ (ಕು​ಮಾರ್‌ ) ಮತ್ತಿ​ತ​ರರು ಹಾಜ​ರಿ​ದ್ದ​ರು.

Follow Us:
Download App:
  • android
  • ios