Asianet Suvarna News Asianet Suvarna News

ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯ ಒದಗಿಸಿಕೊಡಲು ಸಿದ್ದತೆ

  • ಕಟ್ಟಡ ಕಾರ್ಮಿಕರು ಅತಿ ಹೆಚ್ಚಿನ ಶ್ರಮ ಜೀವಿಗಳಾಗಿದ್ದು, ಸರ್ಕಾರದಿಂದ ಅವರಿಗೆ ದೊರಕಬೇಕಾದ ಸೌಲಭ್ಯಗಳನ್ನು ಕಾಲ ಕಾಲಕ್ಕೆ ಒದಗಿಸಿಕೊಡಲು ಸದಾ ಸಿದ್ದ
  •  ಲಕ್ಷಾಂತರ ಕಟ್ಟಡ ಕಾರ್ಮಿಕರ ಬದುಕಿಗೆ ನೆಲೆ ದೊರಕಿಸಿಕೊಡಲು ಸರ್ಕಾರ ಸಹ ಶ್ರಮಿಸುತ್ತಿದೆ - ಶಾಸಕ ಅಶ್ವಿನ್
MLA Ashwini assure for Facility to Construction Labourers snr
Author
Bengaluru, First Published Nov 8, 2021, 6:30 AM IST

 ಟಿ. ನರಸೀಪುರ (ನ.08):  ಕಟ್ಟಡ ಕಾರ್ಮಿಕರು (construction workers ) ಅತಿ ಹೆಚ್ಚಿನ ಶ್ರಮ ಜೀವಿಗಳಾಗಿದ್ದು, ಸರ್ಕಾರದಿಂದ (Karnataka Govt) ಅವರಿಗೆ ದೊರಕಬೇಕಾದ ಸೌಲಭ್ಯಗಳನ್ನು ಕಾಲ ಕಾಲಕ್ಕೆ ಒದಗಿಸಿಕೊಡಲು ಸದಾ ಸಿದ್ದವಾಗಿರುವುದಾಗಿ ಶಾಸಕ ಎಂ. ಅಶ್ವಿನ್‌ ಕುಮಾರ್‌ (MLA Ashwin Kumar) ಭರವಸೆ ನೀಡಿದರು.

ಪಟ್ಟಣದ ಡಾ. ಬಾಬು ಜಗಜೀವನರಾಂ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನಿಂದ ನಡೆದ ತಾಲೂಕು (Taluk) ಮಟ್ಟದ ಪ್ರಥಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಭವ್ಯ ಕಟ್ಟಡಗಳ ನಿರ್ಮಾಣದ ಮೂಲಕ ಸುಂದರ ಸಮಾಜ ಕಟ್ಟುವಲ್ಲಿ ಶ್ರಮಿಸುತ್ತಿರುವ ಲಕ್ಷಾಂತರ ಕಟ್ಟಡ ಕಾರ್ಮಿಕರ ಬದುಕಿಗೆ ನೆಲೆ ದೊರಕಿಸಿಕೊಡಲು ಸರ್ಕಾರ ಸಹ ಶ್ರಮಿಸುತ್ತಿದ್ದು, ಕಟ್ಟಡ ಕಾರ್ಮಿಕರ ಭವಿಷ್ಯ ನಿಧಿಯಿಂದ ಮಕ್ಕಳ ಸ್ಕಾಲರ್ಶಿಪ್‌, ಮದುವೆಗಳಿಗೆ ಸಹಾಯಧನದಂತಹ ಉತ್ತಮ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಆದಾಗ್ಯೂ ಕಾರ್ಮಿಕರಿಗೆ ನೀಡುತ್ತಿರುವ ಯೋಜನೆಗಳು ಸಾಲುತ್ತಿಲ್ಲವೆಂಬ ಕಾರ್ಮಿಕರ ಮನವಿಗೆ ಸ್ಪಂದಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಪುರಸಭಾ ಸದಸ್ಯ ಆರ್‌. ಅರ್ಜುನ್‌ ಮಾತನಾಡಿ, ಕಾರ್ಮಿಕರು ದೇಶದಲ್ಲಿ ಸ್ವಾವಲಂಬಿಗಳಾಗಿ ಬದುಕು ನಡೆಸುತ್ತಿದ್ದು, ಕಷ್ಟದ ಹಾದಿಯಲ್ಲೂ ಕಠಿಣ ದುಡಿಮೆ ಮಾಡಿ ಸಂಸಾರ ಸಲಹುತ್ತಿರುವ ಬಗ್ಗೆ ಹೆಮ್ಮೆ ಇದೆ. ಕಾರ್ಮಿಕರಲ್ಲಿ ವಿದ್ಯಾಭ್ಯಾಸದ ಕೊರತೆ ಇದೆ. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆದು ಕೂಲಿ ಕಾರ್ಮಿಕರ ಮಕ್ಕಳು ಕೂಲಿಗಳಾಗೇ ಮುಂದುವರೆಯುವ ಸಂಪ್ರದಾಯಕ್ಕೆ ತೀಲಾಂಜಲಿ ನೀಡಬೇಕು ಎಂದರು.

ಸಿಡಬ್ಲ್ಯೂಎಫ್‌ಐ (CWFI) ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್‌ ಮಾತನಾಡಿ, ಕೋವಿಡ್‌  (Covid) ವೇಳೆ ಕೆಲ ಕಟ್ಟಡ ಕಾರ್ಮಿಕರ ಬದುಕು ಬೀದಿ ಪಾಲಾಗಿತ್ತು. ಈ ಕುರಿತು ಯಾವ ಸರ್ಕಾರವು ಸರಿಯಾದ ನೆರವು ನೀಡಲಿಲ್ಲ. ಕಲ್ಯಾಣ ಮಂಡಳಿ ಕೆಲ ಸೌಲಭ್ಯಗಳು ನೀಡಿದರೂ ಸಹ ಸಕಾಲಕ್ಕೆ ಕಾರ್ಮಿಕರಿಗೆ ತಲುಪಲೇ ಇಲ್ಲ. ಕಾರ್ಮಿಕರಿಗೆ ನೀಡಲಾದ ರೇಷನ್‌ ಕಿಟ್‌ನಲ್ಲೂ (Ration Kit) ಸರ್ಕಾರ ಕೋಟ್ಯಂತರ ರು. ಗಳ ಅವ್ಯವಹಾರವೆಸಗಿದೆ ಎಂದು ದೂರಿದರು.

ಪುರಸಭಾ ಅಧ್ಯಕ್ಷ ಎಸ್‌. ಮದನ್‌ರಾಜ್, ಉಪಾಧ್ಯಕ್ಷೆ ಪ್ರೇಮ್ಮಾರಯ್ಯ, ಸಿಐಟಿಯು ಜಿಲ್ಲಾಧ್ಯಕ್ಷ ಎನ್‌.ಕೆ. ಬಾಲಾಜಿ ರಾವ್‌, ಸಿಡಬ್ಲ್ಯೂಎಫ್‌ಐ ಜಿಲ್ಲಾಧ್ಯಕ್ಷ ವಿ. ಸೋಮಶಂಕರ್‌, ಎಚ್‌.ಎಂ. ಬಸವಯ್ಯ, ಸಿಡಬ್ಲ್ಯೂಎಫ್‌ಐ ತಾಲೂಕು ಅಧ್ಯಕ್ಷ ಸಿ. ಪುಟ್ಟಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಸಿ.ಬಿ. ನವೀನ್‌ಕುಮಾರ್‌ ಇದ್ದರು.

ಕಟ್ಟಡ ಕಾರ್ಮಿಕರಿಗೆ ಮನೆ ಸವಲತ್ತು :   ಕೆ.ಆರ್‌. ಕ್ಷೇತ್ರದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಸರ್ಕಾರಿ ಸವಲತ್ತು ಹಾಗೂ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ಕೊಡಿಸುವುದಾಗಿ ಶಾಸಕ ಎಸ್‌.ಎ. ರಾಮದಾಸ್‌ ಭರವಸೆ ನೀಡಿದರು.

ನಮ್ಮ ಕ್ಷೇತ್ರದಲ್ಲಿರುವ ಕಟ್ಟಡ ಕಟ್ಟುವಂಥಹ ಕಾರ್ಮಿಕರಿಗೆ ಯಾರು ಸ್ವಂತ ಮನೆಗಳಿಲ್ಲ ಅವರಿಗೆ ಸರ್ಕಾರದ ವತಿಯಿಂದ ಅವರಿಗೆ ಸವಲತ್ತುಗಳನ್ನು ಹಾಗೂ ಆಶ್ರಯ ಅಡಿಯಲ್ಲಿ ಮನೆಗಳನ್ನು ಕೊಡುವ ಕೆಲಸಗಳನ್ನು ಮುಂದೆ ಮಾಡಲಿದ್ದೇವೆ ಎಂದರು.

ಬಾಡಿಗೆ ಮನೆಯಲ್ಲಿರುವ ಕಟ್ಟಡ ಕಾರ್ಮಿಕರ ವಿವರವನ್ನು ಪಟ್ಟಿಮಾಡಿ ನನಗೆ ಕೊಡಿ. ಅವರಿಗೆ ಸರ್ಕಾರದ ವ್ಯವಸ್ಥೆಯಲ್ಲೂ ಹಣ ಕೊಡಿಸುವುದರ ಜೊತೆಗೆ ಆ.15 ರಂದು ಮನೆಗಳನ್ನು ಹಂಚಿಕೆ ಮಾಡಿಸುವ ವ್ಯವಸ್ಥೆ ಮಾಡಲಾಗುವುದು. ಸುಮಾರು 11 ರಿಂದ 14 ಲಕ್ಷ ಮೊತ್ತದ ಕಟ್ಟಡಗಳಿದ್ದು, ಅದಕ್ಕೆ ಸಂಬಂಧಪಟ್ಟಆರಂಭಿಕ ಮೊತ್ತವನ್ನು ಹೊಂದಿಸುವ ಚಿಂತನೆ ನಡೆಸಲಾಗುತ್ತಿದೆ. ಜನವರಿಯೊಳಗೆ ಇದೆಲ್ಲವೂ ಆಗಲಿದೆ ಎಂದು ಅರು ತಿಳಿಸಿದರು.

ಕೆ.ಆರ್‌. ಕ್ಷೇತ್ರದಲ್ಲಿ ಕಟ್ಟಡ ಕಾರ್ಮಿಕರಿಗೆ ವಿಶೇಷವಾಗಿ ಅವರಿಗೆ ಕೋವಿಡ್‌ ಸಂದರ್ಭದಲ್ಲಿ ಕೆಲಸ ನಿಂತುಹೋಗಿತ್ತು. ಈ ಹಿಂದೆ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ . 5 ಸಾವಿರ ಕೊಡಿಸುವ ಕೆಲಸ ಮಾಡಿತ್ತು. ಕೋವಿಡ್‌ 2ನೆ ಅಲೆಯಲ್ಲೂ ಸಹ . 3 ಸಾವಿರ ನೀಡುತ್ತಿದೆ. ಇದೀಗ ಅವರಿಗೆ ಅಗತ್ಯವಿರುವ ಆಹಾರ ಪದಾರ್ಥಗಳ ಕಿಟ್‌ ಅನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನವೆಂಬರ್‌ವರೆಗೂ ಉಚಿತ ಪಡಿತರವನ್ನ ನೀಡುತ್ತಿದ್ದಾರೆ. ಓರ್ವ ಬಾಲ ಕಟ್ಟಡ ಕಾರ್ಮಿಕ ತನ್ನ ಸಣ್ಣ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಂಡು, ತನ್ನ ಕುಟುಂಬವನ್ನು ಸಲಹುವುದಕ್ಕೋಸ್ಕರ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಾ ಅಲ್ಲೇ ಸಾಧನೆಯನ್ನು ಮಾಡಿ ನೋಬಲ್‌ ಪ್ರಶಸ್ತಿಯನ್ನು ತೆಗೆದುಕೊಂಡವರು ಹ್ಯಾಮಲ್ಟನ್‌ ನಮಗೆಲ್ಲಾ ಸ್ಫೂರ್ತಿ ಎಂದರು.

ನಗರ ಪಾಲಿಕೆ ಸದಸ್ಯೆ ಶಾಂತಮ್ಮ ವಡಿವೇಲು, ಕಾರ್ಮಿಕ ಇಲಾಖೆಯ ಅಧಿಕಾರಿಯಾದ ರಾಜೇಶ್‌ ಜಾಧವ್‌, ಬಿಎಐ ಮ್ಯಾನೇಜಿಂಗ್‌ ಟ್ರಸ್ಟಿಟಿ.ಎನ್‌. ಹೇಮಂತ್‌, ಬಿಎಐ ಅಧ್ಯಕ್ಷ ಅಜಿತ್‌ ನಾರಾಯಣ್‌, ಕ್ರೆಡಾಯ್‌ ಅಧ್ಯಕ್ಷ ಮುರಳೀಧರ ಇದ್ದರು.

ಓರ್ವ ಕಟ್ಟಡ ಕಾರ್ಮಿಕ ಕೂಡಾ ತನ್ನ ಕೌಶಲ್ಯಗಳ ಮೂಲಕ ದೇಶದಲ್ಲಿ ಅಲ್ಲದೇ ವಿದೇಶಕ್ಕೂ ಹೋಗಿ ಕೆಲಸ ಮಾಡಬಹುದು. ಅಂತಹ ಅವಕಾಶಗಳನ್ನು ಮೋದಿ ಸರ್ಕಾರ ಕಲ್ಪಿಸಿಕೊಟ್ಟಿದೆ. ಇಂತಹ ಸ್ಕಿಲ್‌ ಇರುವ ಕೆಲಸಗಾರರನ್ನು ಗುರುತಿಸಿ ವಿಶೇಷವಾದ ಪ್ರೋತ್ಸಾಹವನ್ನು ಕೊಡಬೇಕಾಗಿದೆ.

Follow Us:
Download App:
  • android
  • ios