disabled person struggles at station: ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಲಾದ ಎಸ್ಕಲೇಟರ್ ಮತ್ತು ಲಿಫ್ಟ್ ಉದ್ಘಾಟನೆಯಾಗದ ಕಾರಣ, ಚಿಕಿತ್ಸೆಗಾಗಿ ಬಂದ ವಿಶೇಷಚೇತನ ವ್ಯಕ್ತಿಯೊಬ್ಬರು ಮೆಟ್ಟಿಲುಗಳ ಮೇಲೆ ತೆವಳುತ್ತಾ ಸಾಗಬೇಕಾದ ದಯನೀಯ ಸ್ಥಿತಿ ನಿರ್ಮಾಣವಾಗಿತ್ತು.
- Home
- Karnataka Districts
- Karnataka Latest News Live: ಉದ್ಘಾಟನೆಯಾಗದ ಲಿಫ್ಟ್ - ಫ್ಲಾಟ್ ಫಾರ್ಮಿಂದ ಹೊರಗೆ ಬರಲು ಪಡಬಾರದ ಕಷ್ಟಪಟ್ಟ ಕಾಲಿಲ್ಲದ ಯುವಕ
Karnataka Latest News Live: ಉದ್ಘಾಟನೆಯಾಗದ ಲಿಫ್ಟ್ - ಫ್ಲಾಟ್ ಫಾರ್ಮಿಂದ ಹೊರಗೆ ಬರಲು ಪಡಬಾರದ ಕಷ್ಟಪಟ್ಟ ಕಾಲಿಲ್ಲದ ಯುವಕ

ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರ್ಕಾರದ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ 17 ಮಹಿಳೆಯರೇ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
Karnataka Latest News:ಉದ್ಘಾಟನೆಯಾಗದ ಲಿಫ್ಟ್ - ಫ್ಲಾಟ್ ಫಾರ್ಮಿಂದ ಹೊರಗೆ ಬರಲು ಪಡಬಾರದ ಕಷ್ಟಪಟ್ಟ ಕಾಲಿಲ್ಲದ ಯುವಕ
Karnataka Latest News:Karnataka By Election 2026 - ಬಾಗಲಕೋಟೆಗೆ ಸತೀಶ್, ದಾವಣಗೆರೆಗೆ ಲಕ್ಷ್ಮಿ ಉಸ್ತುವಾರಿ, ಎರಡೂ ಕ್ಷೇತ್ರಗಳಿಗೆ ಸ್ಟಾರ್ ಪ್ರಚಾರಕರಾಗಿ ಲಕ್ಷ್ಮಣ್ ಸವದಿ!
Karnataka By Elections ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್, ಬೆಳಗಾವಿಯ ಪ್ರಭಾವಿ ನಾಯಕರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಲಕ್ಷ್ಮಣ ಸವದಿಗೆ ಮಹತ್ವದ ಜವಾಬ್ದಾರಿ ನೀಡಿದೆ.
Karnataka Latest News:ಉತ್ತರ ಕೊಡಲು ಡಿಸಿಎಂಗೆ ತಾಕತ್ ಇಲ್ಲ - ಮುನಿರತ್ನ, ನಿನ್ನಂತಹ ಪುಡಿ ರೌಡಿಗೆ ನಾನು ಹೆದರಲ್ಲ ಎಂದ ಡಿಕೆಶಿ !
ಬೆಂಗಳೂರು ನಗರ ಅಭಿವೃದ್ಧಿ ಚರ್ಚೆಯ ವೇಳೆ ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮುನಿರತ್ನ ನಡುವೆ ತೀವ್ರ ವಾಗ್ವಾದ ನಡೆಯಿತು. 'ತಾಕತ್ ಇಲ್ಲ' ಎಂಬ ಮುನಿರತ್ನರ ಸವಾಲಿಗೆ ಕೆರಳಿದ ಡಿಕೆಶಿ, ಅವರನ್ನು 'ಪುಡಿ ರೌಡಿ, ರೇ ಪಿಸ್ಟ್' ಎಂದು ನಿಂದಿಸಿದ್ದು ಕೋಲಾಹಲಕ್ಕೆ ಕಾರಣವಾಯಿತು.
Karnataka Latest News:ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ - ಏ.9ಕ್ಕೆ ವಿಚಾರಣೆ | ಏನಿದು ಪ್ರಕರಣ?
ಶಾಲೆಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಕಡ್ಡಾಯವಾಗಿ ಹಾಡಬೇಕೆಂಬ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ.. ಇದೇ ರೀತಿಯ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವ ಹಿನ್ನೆಲೆ ಹೈಕೋರ್ಟ್ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಿದೆ.
Karnataka Latest News:ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ ಕೊಲೆ - ಮಾರಕಾಸ್ತ್ರಗಳಿಂದ ಕಡಿದು ಟಾಬ್ಲೆಟ್ ಆರಿಫ್ ಹತ್ಯೆ
Tablet Arif murder case: ಮಂಗಳೂರು ಹೊರವಲಯದ ತೊಕ್ಕೊಟ್ಟು ಫ್ಲೈಓವರ್ನಲ್ಲಿ ರೌಡಿಶೀಟರ್ ಆರಿಫ್ ಯಾನೆ ಟಾಬ್ಲೆಟ್ ಆರಿಫ್ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೈಕ್ನಲ್ಲಿ ಹೋಗುತ್ತಿದ್ದ ಆರಿಫ್ಗೆ ಕಾರ್ನಿಂದ ಡಿಕ್ಕಿ ಹೊಡೆದು, ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಲಾಗಿದೆ.
Karnataka Latest News:ದಾವಣಗೆರೆಯಲ್ಲಿ ಕಾಂಗ್ರೆಸ್ಗೆ ಬಂಡಾಯ ಬಿಸಿ
ಏ.9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಗುರುವಾರ ಕೊನೆಯ ದಿನವಾಗಿದ್ದು, ಅಲ್ಪಸಂಖ್ಯಾತರು ಸೇರಿ 11 ಪಕ್ಷೇತರರು ನಾಮಪತ್ರ ಹಿಂಪಡೆದಿದ್ದಾರೆ. ಅಂತಿಮವಾಗಿ 31 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Karnataka Latest News:ಮುಡಾ ಕೇಸಲ್ಲಿ ಬಿ ರಿಪೋರ್ಟ್ ಪ್ರಶ್ನಿಸಿ ಅರ್ಜಿ - ಸಿಎಂ, ಲೋಕಾಯುಕ್ತಕ್ಕೆ ನೋಟಿಸ್
ಮುಡಾ ಸೈಟ್ ಅಕ್ರಮ ಹಂಚಿಕೆ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ 'ಬಿ' ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ಕೋರ್ಟ್ ಅಂಗೀಕರಿಸಿತ್ತು. ಈ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಹಿನ್ನೆಲೆ, ಹೈಕೋರ್ಟ್ ಇದೀಗ ಸಿಎಂ ಸಿದ್ದರಾಮಯ್ಯಗೆ ನೋಟೀಸ್ ನೀಡಿದೆ.