10:51 PM (IST) Mar 27

Karnataka Latest News:ರೊಮಾನ್ಸ್​, ಕಿಸ್​, ಸ್ಕಿನ್​ ಷೋ ಬ್ಯಾನ್​ - Amrthadhaare ಜೈ ಭಾವಿ ಪತ್ನಿ ನಟಿ ರಾಧಾ ಭಗವತಿ ಹೇಳಿದ್ದೇನು

'ಅಮೃತಧಾರೆ' ಖ್ಯಾತಿಯ ರಾಣವ್ ಗೌಡ ಅವರನ್ನು ವರಿಸಲಿರುವ 'ಭಾರ್ಗವಿ ಎಲ್ಎಲ್​ಬಿ' ನಟಿ ರಾಧಾ ಭಗವತಿ, ತಮ್ಮ ಸಿನಿಮಾ ವೃತ್ತಿಜೀವನದ ಬಗ್ಗೆ ಮಾತನಾಡಿದ್ದಾರೆ. ಮದುವೆಯ ನಂತರ ಸಿನಿಮಾಗಳಲ್ಲಿ ರೊಮ್ಯಾನ್ಸ್, ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸುವ ಬಗ್ಗೆ ಪ್ರಶ್ನೆ ಎದುರಾದಾಗ ನಟಿ ಹೇಳಿದ್ದೇನು?

Read Full Story
10:42 PM (IST) Mar 27

Karnataka Latest News:ಪತಿಯ ಸಾವಿನ ನೋವಲ್ಲೂ ಶಾಲೆಗೆ ಹಾಜರಾದ ಶಿಕ್ಷಕಿ - ವೈಯಕ್ತಿಕ ದುಃಖ ಬದಿಗಿಟ್ಟು ವಿದ್ಯಾರ್ಥಿಗಳಿಗೆ ಗಣಿತ ಪಾಠ

ಮೈಸೂರಿನ ಶಿಕ್ಷಕಿ ಜ್ಯೋತಿ ಅವರು, ಪತಿಯ ನಿಧನದ ದುಃಖದ ನಡುವೆಯೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಗಣಿತ ಪರೀಕ್ಷಾ ಸಿದ್ಧತೆಗಾಗಿ ಶಾಲೆಗೆ ಹಾಜರಾಗಿದ್ದಾರೆ. ತಮ್ಮ ವೈಯಕ್ತಿಕ ನೋವಿಗಿಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆದ್ಯತೆ ನೀಡಿದ ಅವರ ಈ ಕರ್ತವ್ಯನಿಷ್ಠೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

Read Full Story
08:04 PM (IST) Mar 27

Karnataka Latest News:ಡಾಕ್ಟರ್​ ಪತ್ನಿಯಾಗಿ ಸಪ್ತಪದಿ ತುಳಿದ Puttakkana Makkalu ಸಂಜನಾ ಬುರ್ಲಿ - ಮದ್ವೆಯ ಅಪರೂಪದ​ ಫೋಟೋಸ್​ ಇಲ್ಲಿವೆ

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ನಟಿ ಸಂಜನಾ ಬುರ್ಲಿ ಅವರು ವೈದ್ಯರಾದ ಸಮರ್ಥ ಚೆನ್ನಗಿರಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತಮ್ಮ ಮದುವೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅವರ ಪತಿ ಹಾಗೂ ವೃತ್ತಿ ಜೀವನದ ಬಗ್ಗೆ ಈ ಲೇಖನ ಮಾಹಿತಿ ನೀಡುತ್ತದೆ.
Read Full Story
06:36 PM (IST) Mar 27

Karnataka Latest News:ಮಗಳಿಗೆ ಗಂಭೀರ ಕಾಯಿಲೆ! ಮಗುವಿನ ಈಗಿನ ಸ್ಥಿತಿ ಬಗ್ಗೆ ನಟ ವರುಣ್ ಧವನ್ ಹೇಳಿದ್ದೇನು?

ನನ್ನ ಮಗಳಿಗೆ ಡೆವಲಪ್‌ಮೆಂಟಲ್ ಡಿಸ್ಪ್ಲಾಸಿಯಾ ಆಫ್ ದಿ ಹಿಪ್ ಇತ್ತು. ಇದರಲ್ಲಿ ಸೊಂಟದ ಮೂಳೆ ಜಾರಿಕೊಳ್ಳುತ್ತದೆ. ಒಂದು ಕಾಲು ಉದ್ದ, ಇನ್ನೊಂದು ಗಿಡ್ಡ ಆಗಿ ನಡಿಗೆಯಲ್ಲಿ ವ್ಯತ್ಯಾಸವಾಗುತ್ತದೆ ಎಂದು ವರುಣ್ ಹೇಳಿದ್ದಾರೆ.

Read Full Story
06:31 PM (IST) Mar 27

Karnataka Latest News:ಐಷಾರಾಮಿ ಲ್ಯಾಂಬೋರ್ಗಿನಿಯನ್ನು ಫೇಕ್‌ ನಂಬರ್‌ ಪ್ಲೇಟ್‌ ಹಾಕಿ ಓಡಿಸ್ತಿದ್ದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ!

ಬೆಂಗಳೂರಿನ ಅನಿಲ್ ಕುಂಬ್ಳೆ ವೃತ್ತದಲ್ಲಿ ಲ್ಯಾಂಬೋರ್ಗಿನಿ ಕಾರನ್ನು ಅಪಾಯಕಾರಿಯಾಗಿ ಡ್ರಿಫ್ಟಿಂಗ್ ಮಾಡಿದ್ದ ಮುತ್ತಪ್ಪ ರೈ ಪುತ್ರ ರಿಕಿ ರೈ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ವೇಳೆ, ಸಂಚಾರ ದಂಡ ತಪ್ಪಿಸಲು ಗುಜರಾತ್ ಮೂಲದ ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿರುವುದು ಪತ್ತೆಯಾಗಿದೆ.

Read Full Story
05:49 PM (IST) Mar 27

Karnataka Latest News:ಸೋಶಿಯಲ್‌ ಮೀಡಿಯಾದಲ್ಲಿ ರಾಜ್‌ ಬಿ ಶೆಟ್ಟಿ, ರುಕ್ಷ್ಮಿಣಿ ವಸಂತ್‌ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ

'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ನಂತರ ತಮ್ಮ ಆಪ್ತ ಗೆಳೆಯ ರಾಜ್ ಬಿ. ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿರುವುದು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

Read Full Story
05:16 PM (IST) Mar 27

Karnataka Latest News:ಕೇರಳ ಬಸ್‌ನಲ್ಲಿ ದಾಖಲೆಯಿಲ್ಲದ 62.5 ಲಕ್ಷ ನಗದು ಹಣ ಸಾಗಿಸುತ್ತಿದ್ದ ಕನ್ನಡಿಗ ತ್ರಿಶೂರಿನಲ್ಲಿ ಬಂಧನ!

ಕೇರಳ ವಿಧಾನಸಭಾ ಚುನಾವಣೆಗೂ ಮುನ್ನ ನಡೆದ ವಾಹನ ತಪಾಸಣೆ ವೇಳೆ, KSRTC ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕರ್ನಾಟಕದ ವ್ಯಕ್ತಿಯೊಬ್ಬರನ್ನು 62.5 ಲಕ್ಷ ರೂ. ನಗದಿನೊಂದಿಗೆ ಬಂಧಿಸಲಾಗಿದೆ. ಆಸ್ತಿ ವ್ಯವಹಾರಕ್ಕಾಗಿ ಹಣ ಸಾಗಿಸುತ್ತಿರುವುದಾಗಿ ಹೇಳಿಕೆ ನೀಡಿದ್ದರೂ, ಸೂಕ್ತ ದಾಖಲೆಗಳಿಲ್ಲದ ಕಾರಣ ಅಬಕಾರಿ ದಳವು ಹಣವನ್ನು ವಶಪಡಿಸಿಕೊಂಡು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದೆ.
Read Full Story
04:50 PM (IST) Mar 27

Karnataka Latest News:ಕತೆ ಕಳ್ಳತನ.. ಸಾಕ್ಷಿ ಇದ್ದರೆ ಮಾತ್ರ ಪ್ರಕರಣವೇ? ಕಥೆಗಳನ್ನು ಹೇಗೆ ಕಾಪಾಡಿಕೊಳ್ಳಬೇಕು?

ಕಥೆಗಾರನಿಗೆ ತನ್ನ ಕಥೆಯ ಬಗ್ಗೆ ಎಷ್ಟು ಗೌರವ ಇರುತ್ತೆ ಅನ್ನೋದು ಮುಖ್ಯ ಅಂಶ. ನನಗೆ ಎಷ್ಟೋ ಜನ ಇನ್‌ಸ್ಟಾಗ್ರಾಂನಂಥ ಕಡೆಗಳಲ್ಲಿ ಕಥೆ ಕಳಿಸುತ್ತಾರೆ. ಛೇ, ತಮ್ಮ ಕಥೆಯ ಬಗ್ಗೆ ಕಿಂಚಿತ್‌ ಗೌರವವೂ ಇಲ್ಲವಲ್ಲ ಅನಿಸುತ್ತದೆ.

Read Full Story
04:40 PM (IST) Mar 27

Karnataka Latest News:ದಾವಣಗೆರೆ ಉಪ ಚುನಾವಣೆಯಲ್ಲಿ ಬಂಡಾಯ ಶಮನ - ಸಾದಿಕ್ ಪೈಲ್ವಾನ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ

ದಾವಣಗೆರೆ ಉಪ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಹಿರಿಯ ನಾಯಕರ ಸಂಧಾನದ ಬಳಿಕ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಮಾತುಕತೆ ಯಶಸ್ವಿಯಾಗಿದ್ದು, ಯಾವುದೇ ಷರತ್ತುಗಳಿಲ್ಲದೆ ಪಕ್ಷದ ಅಧಿಕೃತ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಪೈಲ್ವಾನ್ ಘೋಷಿಸಿದ್ದಾರೆ.
Read Full Story
04:35 PM (IST) Mar 27

Karnataka Latest News:3 ತಿಂಗಳು, 58 ಸಿನಿಮಾಗಳು, 1 ಹಿಟ್ - ಓಟಿಟಿ, ಸ್ಯಾಟಲೈಟ್‌ ಕುಸಿತ, ಸಂಕಷ್ಟದಲ್ಲೇ ಕನ್ನಡ ಚಿತ್ರರಂಗ

ನಿರ್ಮಾಪಕರು ಸೋತು ಸುಣ್ಣವಾಗುತ್ತಿದ್ದಾರೆ. ಗೆಲುವಿಗೆ ತತ್ವಾರ ಉಂಟಾಗಿದೆ. ಈ ಎಲ್ಲಾ ಸಮಸ್ಯೆಗಲಿಗೂ ತಾತ್ವಿಕ ಪರಿಹಾರ ಕಂಡುಕೊಳ್ಳಲು ಸಂಬಂಧ ಪಟ್ಟವರು ಯಾರೂ ಮುಂದಾಗದೇ ಇರುವುದಕ್ಕೆ ಸುದೀರ್ಘ ನಿಟ್ಟುಸಿರು.

Read Full Story
04:28 PM (IST) Mar 27

Karnataka Latest News:ಅನಂತ್‌ ಅಂಬಾನಿಯ ವಂತರಾಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ - ಕಿಡಿಕಿಡಿಯಾದ ಸಚಿವ ಈಶ್ವರ್‌ ಖಂಡ್ರೆಯಿಂದ ತನಿಖೆಗೆ ಆದೇಶ

ಗುಜರಾತ್‌ನ 'ವಂತಾರಾ' ವನ್ಯಜೀವಿ ಕೇಂದ್ರಕ್ಕೆ ಕರ್ನಾಟಕದ ಅರಣ್ಯಾಧಿಕಾರಿಗಳು ಭೇಟಿ ನೀಡುತ್ತಿರುವುದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಭೇಟಿಗಳ ಬಗ್ಗೆ 7 ದಿನಗಳಲ್ಲಿ ವರದಿ ನೀಡಲು ಆದೇಶಿಸಿದೆ.

Read Full Story
04:12 PM (IST) Mar 27

Karnataka Latest News:ಚಿತ್ರದುರ್ಗ - ಹಳೆ ವೈಷಮ್ಯ ರಾಜಿಗೆ ಒಪ್ಪದ ಯುವಕನನ್ನು ಕಲ್ಲು ಎತ್ತಿ ಹಾಕಿ ಮುಗಿಸಿದ ಮುದುಕಪ್ಪ!

ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಕ್ಯಾಂಪ್ ಗ್ರಾಮದಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕಾಂತರಾಜ್ ಎಂಬ ವ್ಯಕ್ತಿಯನ್ನು ಕಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿದೆ. ರಾಜಿಗೆ ಒಪ್ಪದಿದ್ದಕ್ಕೆ ಈ ಕೃತ್ಯ ನಡೆದಿದ್ದು, ಪೊಲೀಸರು ಆರೋಪಿ ನರಸಿಂಹಪ್ಪನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
Read Full Story
03:36 PM (IST) Mar 27

Karnataka Latest News:ದಕ್ಷಿಣ ಮಧ್ಯ ರೈಲ್ವೆ ಭರ್ಜರಿ ನೇಮಕಾತಿ, ಬರೋಬ್ಬರಿ 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ದಕ್ಷಿಣ ಮಧ್ಯ ರೈಲ್ವೆಯು 2801 ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಮತ್ತು ಐಟಿಐ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Read Full Story
03:13 PM (IST) Mar 27

Karnataka Latest News:ನಂಬಲು ಸಾಧ್ಯವಾಗುತ್ತಿಲ್ಲ, ಮದುವೆಯಾಗಿ ಆಗಲೇ ಒಂದು ತಿಂಗಳು.. - ಆಪ್ತ ಗೆಳತಿಯರಿಗೆ ಧನ್ಯವಾದ ಅರ್ಪಿಸಿದ ರಶ್ಮಿಕಾ-ವಿಜಯ್ ಜೋಡಿ!

ಇದು ನಂಬಲಾಗದ ಸಂಗತಿ! ಆದರೆ ಈ ಪಯಣದಲ್ಲಿ ನನ್ನ ಗೆಳತಿಯರು ನನಗೆ 'ರಕ್ಷಾ ಕವಚ'ದಂತೆ ನಿಂತರು. ಮದುವೆಯಾಗಬೇಕು ಎಂದು ನಿರ್ಧರಿಸಿದ ಕ್ಷಣದಿಂದ ಇಂದಿನವರೆಗೆ ಅವರ ಸಾಥ್ ಅದ್ಭುತ. ಈ ಪ್ರೀತಿ ಶಾಶ್ವತವಾದದ್ದು," ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

Read Full Story
02:01 PM (IST) Mar 27

Karnataka Latest News:ಪದ್ಮಶ್ರೀ ಹರೇಕಳ ಹಾಜಬ್ಬ ಸೇರಿ ಮೂರು ಕ್ಷೇತ್ರದ, ಮೂವರು ದಿಗ್ಗಜರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್

ಮಂಗಳೂರು ವಿಶ್ವವಿದ್ಯಾಲಯವು ತನ್ನ 44ನೇ ಘಟಿಕೋತ್ಸವದಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಘೋಷಿಸಿದೆ. ಶಿಕ್ಷಣ ಸೇವೆಗಾಗಿ ಪದ್ಮಶ್ರೀ ಹರೇಕಳ ಹಾಜಬ್ಬ, ಯಕ್ಷಗಾನ ಕ್ಷೇತ್ರಕ್ಕೆ ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ) ಮತ್ತು ದೈವ ನರ್ತನ ,ಶಿಕ್ಷಣಕ್ಕಾಗಿ ಡಾ. ರವೀಶ್ ಪಡುಮಲೆ ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಈ ಸಾಧಕರನ್ನು ಗೌರವಿಸುವ ಮೂಲಕ ವಿವಿಯು ಶಿಕ್ಷಣ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಮಹತ್ವವನ್ನು ಎತ್ತಿ ಹಿಡಿದಿದೆ.

Read Full Story
01:39 PM (IST) Mar 27

Karnataka Latest News:'ಯಾಕಪ್ಪ ಹೊಡೆಯುತ್ತಿದ್ದೀರಿ...' ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಮಾಡುತ್ತಿದ್ದವರ ಮೇಲೆ ಸ್ಥಳೀಯ ಪುಂಡರು ಹಲ್ಲೆ!

ಹಾಸನ ಜಿಲ್ಲೆಯ ಸಕಲೇಶಪುರದ ಬೆಟ್ಟದ ಭೈರವೇಶ್ವರ ದೇಗುಲದ ಬಳಿ ಪ್ರೀ-ವೆಡ್ಡಿಂಗ್ ಶೂಟಿಂಗ್ ಮಾಡುತ್ತಿದ್ದ ಫೋಟೋಗ್ರಾಫರ್‌ಗಳ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿದ್ದಾರೆ. ಈ ವಿಚಾರವಾಗಿ ಮಾತಿನ ಚಕಮಕಿ ನಡೆದು, ಗಲಾಟೆ ತಾರಕಕ್ಕೇರಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Read Full Story
12:48 PM (IST) Mar 27

Karnataka Latest News:SSLC ಹಿಂದಿ ಪರೀಕ್ಷೆ ದಿನಾಂಕ ಮುಂದೂಡಿಕೆ ಬೆನ್ನಲ್ಲೇ ಹಿಂದಿ ಪರೀಕ್ಷೆ ವಿರುದ್ಧ ಕನ್ನಡ ಪರ ಸಂಘಟನೆಗಳ ಆಕ್ರೋಶ

ಮಹಾವೀರ ಜಯಂತಿಯ ಕಾರಣದಿಂದಾಗಿ, ಮಾರ್ಚ್ 30ರಂದು ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆಯನ್ನು ಮಾರ್ಚ್ 31ಕ್ಕೆ ಮುಂದೂಡಲಾಗಿದೆ. ಇದೇ ವೇಳೆ, ತ್ರಿಭಾಷಾ ಸೂತ್ರವನ್ನು ವಿರೋಧಿಸಿ ಹಿಂದಿ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಕನ್ನಡ ಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ, ಇದು ಹೊಸ ವಿವಾದಕ್ಕೆ ಕಾರಣವಾಗಿದೆ.
Read Full Story
12:11 PM (IST) Mar 27

Karnataka Latest News:ತಾನು ಆರ್ಡರ್ ಮಾಡಿದ ಪೊಂಗಲ್‌ಗೆ ಹೆಚ್ಚು ಬೆಲೆ ಚಾರ್ಜ್ ಮಾಡಿದ್ದಕ್ಕೆ ಸ್ವಿಗ್ಗಿ ವಿರುದ್ಧ ಮಾಜಿ ಸಂಸದೆ ಸುಮಲತಾ ಆಕ್ರೋಶ

ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ₹115ರ ಪೊಂಗಲ್‌ಗೆ ₹273 ಪಾವತಿಸಿದ್ದನ್ನು ಪ್ರಶ್ನಿಸಿದ್ದಾರೆ. ಆಹಾರದ ಮೂಲ ಬೆಲೆಗಿಂತ ಡೆಲಿವರಿ ಹಾಗೂ ಇತರೆ ಶುಲ್ಕಗಳು ಹೆಚ್ಚಿರುವುದರ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಆನ್‌ಲೈನ್ ಆಹಾರ ವಿತರಣಾ ವೇದಿಕೆಗಳ ಶುಲ್ಕ ವ್ಯವಸ್ಥೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
12:01 PM (IST) Mar 27

Karnataka Latest News:5 ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಆಸ್ಪತ್ರೆ ಮೇಲಿಂದ ಬಿದ್ದು ಸಾವು

newly mother died: ರಾಯಚೂರು ಜಿಲ್ಲೆಯ ಮಾನ್ವಿಯ ಖಾಸಗಿ ಆಸ್ಪತ್ರೆಯ ಮೇಲಿಂದ ಬಿದ್ದು 22 ವರ್ಷದ ಬಾಣಂತಿ ವಾಸವಿ ಸಾವನ್ನಪ್ಪಿದ್ದಾರೆ. ಅನಾರೋಗ್ಯಪೀಡಿತ ಮಗುವಿಗೆ ಹಾಲುಣಿಸಲು ಬಂದಿದ್ದ ಅವರ ಸಾವು ಅನುಮಾನಾಸ್ಪದವಾಗಿದ್ದು, ಆಸ್ಪತ್ರೆ ಆಡಳಿತದ ನಡೆ ಬಗ್ಗೆ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

Read Full Story
11:44 AM (IST) Mar 27

Karnataka Latest News:Lockdown Rumours - ದೇಶದಲ್ಲಿ ಮತ್ತೆ ಲಾಕ್‌ಡೌನ್? ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದ ಕೇಂದ್ರ ಸರ್ಕಾರ

ದೇಶದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗಲಿದೆ ಎಂಬ ವದಂತಿಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಪಶ್ಚಿಮ ಏಷ್ಯಾ ಯುದ್ಧದ ಕುರಿತ ಪ್ರಧಾನಿ ಮೋದಿಯವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಯಾವುದೇ 'ಎನರ್ಜಿ ಲಾಕ್‌ಡೌನ್' ಇರುವುದಿಲ್ಲ, ಅಗತ್ಯ ವಸ್ತುಗಳ ಪೂರೈಕೆ ಸುಗಮವಾಗಿದೆ ಎಂದು ಸ್ಪಷ್ಟಪಡಿಸಿದೆ.

Read Full Story