ಕಾವೇರಿ ನಮ್ಮ ಜೀವ, ಮೇಕೆದಾಟು ಡ್ಯಾಮ್ ಕಟ್ಟೋಕೆ ಬಿಡೋದಿಲ್ಲ: ತಮಿಳುನಾಡು ಸಚಿವ ದುರೈಮುರುಗನ್
ಕರ್ನಾಟಕದಿಂದ ರಾಜ್ಯಕ್ಕೆ 12.213 ಸಾವಿರ ಮಿಲಿಯನ್ ಕ್ಯೂಬಿಕ್ ಅಡಿ ನೀರು ಬರಬೇಕಿತ್ತು ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್ ಹೇಳಿದ್ದಾರೆ.
ನವದೆಹಲಿ (ಜು.6): ಕಾವೇರಿ ನೀರು ಹಂಚಿಕೆ ಎನ್ನುವುದು ಯಾವುದೇ ಸಾಮಾನ್ಯ ವಿಷಯವಲ್ಲ, ಇದು ತಮಿಳುನಾಡಿಗರ ಪಾಲಿಗೆ ಜೀವನ್ಮರಣದ ವಿಚಾರ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್ ಗುರುವಾರ ಹೇಳಿದ್ದಾರೆ. ಇದೇ ಕಾರಣಕ್ಕಾಗಿ ಕಾವೇರಿ ನದಿಗೆ ಮೇಕೆದಾಟುವಿನಲ್ಲಿ ಡ್ಯಾಮ್ ಕಟ್ಟೋದಕ್ಕೆ ತಮಿಳುನಾಡು ಎಂದಿಗೂ ಒಪ್ಪಿಗೆ ನೀಡೋದಿಲ್ಲ ಎಂದಿದ್ದಾರೆ. ಮೇಕೆದಾಟು ಅಣೆಕಟ್ಟು ನಿರ್ಮಾಣದ ವಿವಾದದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿದ್ದ ಅವರು ಗುರುವಾರ ಚೆನ್ನೈಗೆ ತಲುಪಿದರು. ಈ ವೇಳೆ ದುರೈಮುರುಗನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದರು. "ಇದು ಸಾಮಾನ್ಯ ವಿಷಯವಲ್ಲ ಆದರೆ ಜೀವನದ ಸಮಸ್ಯೆ ಎಂದು ನಾನು ಸಚಿವರಿಗೆ ವಿವರಿಸಿದ್ದೇನೆ" ಎಂದು ದುರೈಮುರುಗನ್ ಹೇಳಿದರು. ಕರ್ನಾಟಕದಿಂದ ರಾಜ್ಯಕ್ಕೆ 12.213 ಸಾವಿರ ಮಿಲಿಯನ್ ಕ್ಯೂಬಿಕ್ ಅಡಿ ನೀರು ಬರಬೇಕಿತ್ತು ಎಂದು ತಮಿಳುನಾಡು ಸಚಿವರು ಹೇಳಿದರು. ಆದರೆ ಜುಲೈ 3ರವರೆಗೆ ಕೇವಲ 2.993 ಟಿಎಂಸಿ ನೀರು ಬಂದಿದ್ದು, 9.220 ಟಿಎಂಸಿ ಕೊರತೆಯಾಗಿದೆ ಎಂದಿದ್ದಾರೆ.
ಇದೇ ರೀತಿ ಮುಂದುವರಿದರೆ ಡೆಲ್ಟಾ ಜಿಲ್ಲೆಗಳಲ್ಲಿ ಅಲ್ಪಾವಧಿ ಕುರುವಾಯಿ ಬೆಳೆಗಳು ಹಾನಿಗೊಳಗಾಗಬಹುದು ಎಂದು ದುರೈಮುರುಗನ್ ಹೇಳಿದ್ದಾರೆ. "ಕಾವೇರಿ ಡೆಲ್ಟಾ ಜಿಲ್ಲೆಗಳಲ್ಲಿನ ಬೆಳೆಗಳನ್ನು ರಕ್ಷಿಸಲು ಕರ್ನಾಟಕವು ನೀರನ್ನು ಬಿಡುಗಡೆ ಮಾಡಬೇಕು ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಮಾತುಕತೆ ನಡೆಸಬೇಕು ಅಥವಾ ಅಗತ್ಯ ಆದೇಶಗಳನ್ನು ರವಾನಿಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ.
ತಮ್ಮ ಕಳವಳವನ್ನು ಶೇಖಾವತ್ಗೆ ತಿಳಿಸಿದ ದುರೈಮುರುಗನ್, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯನ್ನು ಕರೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳನ್ನು ಕೇಳಿದ್ದಾರೆ. ತಮಿಳುನಾಡಿಗೆ ಕ್ವಾಂಟಮ್ ನೀರು ನೀಡದೆ ಕರ್ನಾಟಕ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದೆ ಎಂದರು. ಮೇಕೆದಾಟು ಅಣೆಕಟ್ಟು ನಿರ್ಮಾಣದ ಕುರಿತು ತಮಿಳುನಾಡು ಜೊತೆ ಮಾತುಕತೆ ನಡೆಸುವುದಾಗಿ ಕರ್ನಾಟಕ ಸರ್ಕಾರದ ಹೇಳಿಕೆಗಳ ಬಗ್ಗೆ ಕೇಳಿದಾಗ, ದುರೈಮುರುಗನ್ ಅವರು ಮಾತುಕತೆ ನಡೆಸಿದರೂ ಅಥವಾ ಅವರಿಗೆ ಪತ್ರ ಬರೆದರೂ ಅಣೆಕಟ್ಟು ನಿರ್ಮಾಣಕ್ಕೆ ರಾಜ್ಯವು ಎಂದಿಗೂ ಒಪ್ಪಿಗೆ ನೀಡುವುದಿಲ್ಲ ಎಂದು ಹೇಳಿದರು.
ಮೇಕೆದಾಟು ಒತ್ತಡ ಹೇರಲು ಕೇಂದ್ರಕ್ಕೆ ನಿಯೋಗ: ರೇವಣ್ಣ ಸಲಹೆ
ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಸಭೆಯಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಭಾಗವಹಿಸಿದರೆ ಅವರ ವಿರುದ್ಧ ‘ಗೋ ಬ್ಯಾಕ್ ಸ್ಟಾಲಿನ್’ ಪ್ರತಿಭಟನೆ ನಡೆಸುವುದಾಗಿ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಹೇಳಿಕೆಗೆ ದುರೈಮುರುಗನ್ ಅವರು ಇದು ಅವರಿಚ್ಛೆ ಎಂದು ಹೇಳಿದ್ದಾರೆ.
ಮೇಕೆದಾಟು ನೀರಾವರಿ ಯೋಜನೆಗಾಗಿ ಪ್ರಧಾನಿ ಮೋದಿ ಭೇಟಿಗೆ ಡಿಕೆಶಿ ನಿರ್ಧಾರ