ದ್ವಾರಕಾ ಶ್ರೀಕೃಷ್ಣನ ನಗರಿ. ನವಿಲುಗರಿಗೂ ಈ ದ್ವಾರಕಾಧೀಶನಿಗೂ ಅವಿನಾಭಾವ ಸಂಬಂಧ. ಹೀಗಿರುವಾಗ ಈಗ ದ್ವಾರಕಾದ ಪವಿತ್ರ ಗೋಮತಿ ನದಿಯಲ್ಲಿ ಅಪರೂಪದ ದೃಶ್ಯವೊಂದು ಕಾಣುವುದಕ್ಕೆ ಸಿಕ್ಕಿದೆ. ಏನದು?

ದ್ವಾರಕೆಯಲ್ಲಿ ಕಾಣಿಸಿಕೊಂಡ ಅಪರೂಪದ ಮೀನು:

ದ್ವಾರಕಾ ಶ್ರೀಕೃಷ್ಣನ ನಗರಿ. ನವಿಲುಗರಿಗೂ ಈ ದ್ವಾರಕಾಧೀಶನಿಗೂ ಅವಿನಾಭಾವ ಸಂಬಂಧ. ಹೀಗಿರುವಾಗ ಈಗ ದ್ವಾರಕಾದ ಪವಿತ್ರ ಗೋಮತಿ ನದಿಯಲ್ಲಿ ಅಪರೂಪದ ದೃಶ್ಯವೊಂದು ಕಾಣುವುದಕ್ಕೆ ಸಿಕ್ಕಿದೆ. ದ್ವಾರಕೆಯ ಗೋಮತಿ ಘಾಟನ್‌ ನೀರು ಸದಾ ಕಾಲವೂ ಇಲ್ಲಿಗೆ ಬರುವ ಯಾತ್ರಿಕರನ್ನು ಆಕರ್ಷಿಸುತ್ತಲೇ ಇರುತ್ತದೆ. ಆದರೆ ಈ ವಾರ ಈ ಘಾಟ್ ಅದ್ಬುತ ಕ್ಷಣಕ್ಕೆ ಸಾಕ್ಷಿಯಾಯ್ತು. ಸದಾ ಶ್ರೀಕೃಷ್ಣನ ಹಣೆಯ ಮೇಲಿರುವ ನವಿಲುಗರಿಯಂತೆ ಇಲ್ಲಿನ ನೀರಿನಲ್ಲಿ ಬಾಲದಲ್ಲಿ ನವಿಲುಗರಿಯನ್ನೇ ಹೋಲುವ ಚಿತ್ತಾರವಿರುವ ಮೀನೊಂದು ಕಾಣಿಸಿಕೊಂಡು ಅನೇಕರನ್ನು ಅಚ್ಚರಿಗೀಡು ಮಾಡಿತು.

ಹೀಗೆ ಈ ಮೀನು ಕಾಣಿಸಿಕೊಂಡ ಕೆಲ ಗಂಟೆಗಳಲ್ಲೇ ಅದರ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಅನೇಕರು ಇದನ್ನು ಭಗವಾನ್ ಶ್ರೀಕೃಷ್ಣನ ಹಣೆ ಮೇಲೆ ಇರುವ ನವಿಲುಗರಿಗೆ ಹೋಲಿಸಿದರು. ಈ ಮೀನು ಉದ್ದವಾಗಿ ಸೂಜಿಯಂತೆ ಇದ್ದು, ಇದರ ಬಾಲವೂ ನವಿಲಿನ ಗರಿಯಲ್ಲಿರುವ ಕಣ್ಣಿನಂತೆ ಹಲವು ವೈವಿಧ್ಯಮಯ ಬಣ್ಣಗಳಿಂದ ರೂಪುಗೊಂಡು ನವಿಲುಗರಿಯಂತೆ ಕಾಣಿಸುತ್ತಿತ್ತು. ಮಂದ ಹಸಿರು ಮತ್ತು ಕಂದು ಬಣ್ಣಗಳ ಮಿಶ್ರಣದಿಂದ ಅದು ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: ದೆಹಲಿ ಪೊಲೀಸರ ವಿರುದ್ಧ ಹಿಮಾಚಲ ಪೊಲೀಸರಿಂದ ಎಫ್ಐಆರ್ ಬಂಧನ ಬಿಡುಗಡೆ: ಆಗಿದ್ದೇನು?

ಈ ಮೀನುಗಳು ಸೂಜಿಮೀನು(needlefish)ಕುಟುಂಬಕ್ಕೆ ಸೇರಿದೆ ಎಂದು ನಂಬಲಾಗಿದೆ. ಈ ಮೀನುಗಳ ಗುಂಪು ಉದ್ದವಾದ ದೇಹ ಮತ್ತು ಚೂಪಾದ ದವಡೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಈ ಸೂಜಿ ಮೀನುಗಳು ಸಾಮಾನ್ಯವಾಗಿ ಹೀಗೆ ಬಣ್ಣ ಬಣ್ಣದ ಅಲಂಕಾರಿಕ ಬಾಲಗಳೊಂದಿಗೆ ಕಾಣಿಸುವುದಿಲ್ಲ. ಆದರೂ ಈ ಸೂಜಿ ಮೀನು ಗುಂಪಿಗೆ ಸೇರಿದ ಈ ನಿರ್ದಿಷ್ಟ ಮೀನು ಮಾತ್ರ ವಿಶೇಷವೆಂಬಂತೆ ಅಗಲವಾಗಿ ಮತ್ತು ಎದ್ದುಕಾಣುವ ಬಣ್ಣದಿಂದ ಕೂಡಿದ ಬಾಲದ ರೆಕ್ಕೆಯನ್ನು ಪ್ರದರ್ಶಿಸಿತು. ವೀಕ್ಷಕರು ಈ ರೆಕ್ಕೆಯಾದ್ಯಂತ ಮಿನುಗುವ ವರ್ಣವೈವಿಧ್ಯದ ನೀಲಿ ಮತ್ತು ಹಸಿರು ಬಣ್ಣಗಳನ್ನು ಗಮನಿಸಿದರು, ಇದು ನವಿಲಿನ ಗರಿಯನ್ನು ಹೋಲುವಂತಿದೆ. ಬೆಳಕಿನ ಕೆಲವು ಕೋನಗಳಿಂದ ನೋಡಿದಾಗ ಇದರ ಬಾಲವು ಫ್ಯಾನ್‌ನಂತೆ ಕಾಣಿಸುತ್ತಿತ್ತು.

ಗೋಮತಿ ನದಿಯು ಅರೇಬಿಯನ್ ಸಮುದ್ರವನ್ನು ಸೇರುವುದರಿಂದ ಸಿಹಿನೀರು ಮತ್ತು ಸಮುದ್ರ ಪ್ರಭೇದಗಳು ಕೂಡ ಇಲ್ಲಿಗೆ ಬರುವ ಸಾಧ್ಯತೆಗಳಿರುತ್ತವೆ. ಇಲ್ಲಿ ಉಪ್ಪುನೀರಿನ ವಾತಾವರಣವಿದ್ದು, ಕಾಲೋಚಿತ ಬದಲಾವಣೆಗಳು, ಲವಣಾಂಶದ ಮಟ್ಟಗಳು ಬದಲಾಗುತ್ತಿರುತ್ತವೆ ಮತ್ತು ಅಸಾಮಾನ್ಯ ಪ್ರವಾಹಗಳು ಕೆಲವೊಮ್ಮೆ ಅನಿರೀಕ್ಷಿತ ಸಮುದ್ರ ಜೀವಿಗಳನ್ನು ತೀರಕ್ಕೆ ಹತ್ತಿರ ತರುತ್ತವೆ.

ಈ ಅಪರೂಪದ ದೃಶ್ಯ ಕಂಡು ಬೆರಗಾದ ವಿಜ್ಞಾನಿಗಳು

ಪರಿಸರ ಪರಿಸ್ಥಿತಿಗಳು ಏರಿಳಿತಗೊಂಡಾಗ ಅಪರೂಪದ ಜೀವಿಗಳು ಹೆಚ್ಚಾಗಿ ಕಾಣುತ್ತವೆ ಎಂದು ಸಮುದ್ರ ಜೀವಶಾಸ್ತ್ರಜ್ಞರು ಗಮನಿಸುತ್ತಾರೆ. ಹವಾಮಾನ ವೈಪರೀತ್ಯ, ತಾಪಮಾನ ಏರಿಕೆ, ನೀರು ಮತ್ತು ಪರಿಸರ ಬದಲಾವಣೆಗಳು ಜಾತಿಗಳ ವಿತರಣಾ ಮಾದರಿಗಳನ್ನು ಸೂಕ್ಷ್ಮವಾಗಿ ಬದಲಾಯಿಸಬಹುದು. ಸಣ್ಣ ರೂಪವಿಜ್ಞಾನದ ವ್ಯತ್ಯಾಸಗಳು ಸಹ ಹೊಂದಾಣಿಕೆ, ರೂಪಾಂತರ ಅಥವಾ ಪರಿಸರ ಪ್ರಭಾವದ ಬಗ್ಗೆ ಆಕರ್ಷಕ ವಿವರಗಳನ್ನು ಬಹಿರಂಗಪಡಿಸಬಹುದು. ಸರಿಯಾಗಿ ದಾಖಲಿಸಿದರೆ ಈ ಮೀನು ಭಾರತದ ಕರಾವಳಿ ಪರಿಸರ ವ್ಯವಸ್ಥೆಗಳಲ್ಲಿ ಸ್ಥಳೀಯ ಪರಿಸ್ಥಿತಿಗಳು ಸಮುದ್ರ ಜೀವನವನ್ನು ಹೇಗೆ ರೂಪಿಸುತ್ತವೆ ಎಂಬುದರ ಕುರಿತು ಒಳನೋಟಗಳನ್ನು ನೀಡಬಹುದು.

ಇದನ್ನೂ ಓದಿ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ: 22 ವರ್ಷದ ಯೋಧ ಕ್ಯಾಪ್ಟನ್ ಅಮನ್ ಸಿಂಗ್ ಸಾವು

ಸದ್ಯಕ್ಕೆ ಈ ಮೀನು ಒಂದು ದೃಶ್ಯ ಅದ್ಭುತವಾಗಿ ಉಳಿದಿದೆ. ಇದು ಹಿಂದೂ ಪುರಾಣಗಳು ಹಾಗೂ ಸಮುದ್ರ ಜೀವಶಾಸ್ತ್ರದ ನಡುವಿನ ಕ್ಷಣಿಕ ಮುಖಾಮುಖಿಯಾಗಿದೆ. ತಿಳಿದಿರುವ ಜಾತಿಯ ಅಸಾಮಾನ್ಯ ರೂಪಾಂತರವು ಜನರಲ್ಲಿ ಕುತೂಹಲ ಹೆಚ್ಚಿಸಿದ್ದು, ಇದು ಶ್ರೀಕೃಷ್ಣನ ಊರು ದ್ವಾರಕೆಯಲ್ಲೇ ಕಾಣಿಸಿಕೊಂಡಿರುವುದರಿಂದಾಗಿ ಈ ಮೀನಿಗೂ ಕೃಷ್ಣನ ನವಿಲುಗರಿಗೂ ಹೋಲಿಕೆ ಮಾಡಲಾಗುತ್ತಿದೆ.

View post on Instagram