ನೆರೆ ರಾಜ್ಯ ಕೇರಳದ ಕಲ್ಲಿಕೋಟೆ ಜಿಲ್ಲೆಯ ಹಲವು ಕಡೆಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಪೀಡಿತ ಪ್ರದೇಶಗಳಿಂದ ಸಂಗ್ರಹಿಸಲಾದ ರಕ್ತದ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದಾಗ ಎಚ್‌5ಎನ್‌1 ಸೋಂಕು ದೃಢ ಪಟ್ಟಿದೆ.

 ಕಲ್ಲಿಕೋಟೆ: ನೆರೆ ರಾಜ್ಯ ಕೇರಳದ ಕಲ್ಲಿಕೋಟೆ ಜಿಲ್ಲೆಯ ಹಲವು ಕಡೆಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಪೀಡಿತ ಪ್ರದೇಶಗಳಿಂದ ಸಂಗ್ರಹಿಸಲಾದ ರಕ್ತದ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದಾಗ ಎಚ್‌5ಎನ್‌1 ಸೋಂಕು ದೃಢ ಪಟ್ಟಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಪಣಂಗಡ್, ಒಲವಣ್ಣ, ಕಕ್ಕೋಡಿ, ಪೆರುಮನ್ನ ಪಂಚಾಯತ್‌, ನಲ್ಲಂ, ಕಲ್ಲಿಕೋಟೆಯಲ್ಲಿ ಸೋಂಕಿನ ಪ್ರಕರಣ ದೃಢಪಟ್ಟಿದೆ. ಆದರೆ ಇದುವರೆಗೆ ಮನುಷ್ಯರಿಗೆ ಹರಡಿರುವ ಯಾವುದೇ ಘಟನೆ ವರದಿಯಾಗಿಲ್ಲ. ಆದರೂ ಸ್ಥಳೀಯಾಡಳಿತ ಮುಂಜಾಗ್ರತಾ, ನಿಯಂತ್ರಣ ಕ್ರಮಕ್ಕೆ ಮುಂದಾಗಿದೆ. ನಾಗರಿಕರು ಸುರಕ್ಷಿತ ನಿಯಮ ಪಾಲಿಸುವಂತೆ ಸಲಹೆ ನೀಡಿದೆ.

ವಿಜಯ್‌ಗೆ ಎರಡೂವರೆ ವರ್ಷ ಸಿಎಂ, ಶೇ.50 ಸೀಟು ಆಫರ್‌: ಟಿವಿಕೆ

ಚೆನ್ನೈ: ನಮ್ಮೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡರೆ ಶೇ.50ರಷ್ಟು ಸೀಟು ಮತ್ತು ಪಕ್ಷದ ಅಧ್ಯಕ್ಷ ವಿಜಯ್‌ ಅವರನ್ನು ಎರಡೂವರೆ ವರ್ವ ಕಾಲ ಮುಖ್ಯಮಂತ್ರಿ ಮಾಡುವುದಾಗಿ ರಾಜಕೀಯ ಪಕ್ಷವೊಂದು ಆಫರ್‌ ನೀಡಿತ್ತು. ಆದರೆ ವಿಜಯ್‌ ಆ ಪ್ರಸ್ತಾಪ ತಿರಿಸ್ಕರಿಸಿದ್ದರು ಎಂದು ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅವಧ್‌ ಅರ್ಜುನ್‌ ಹೇಳಿದ್ದಾರೆ. 

ಆಫರ್‌ ನೀಡಿದ ಪಕ್ಷ ಯಾವುದೆಂದು ಅವರು ಹೇಳಿಲ್ಲ

ಆಫರ್‌ ನೀಡಿದ ಪಕ್ಷ ಯಾವುದೆಂದು ಅವರು ಹೇಳಿಲ್ಲ. ವಿಜಯ್‌ ಜೊತೆ ನಮ್ಮ ಪಕ್ಷ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಎನ್‌ಡಿಎ ಕೂಟದ ಪಕ್ಷಗಳಾದ ಅಣ್ಣಾಡಿಎಂಕೆ ಮತ್ತು ಬಿಜೆಪಿ ಸ್ಪಷ್ಟಪಡಿಸಿದ್ದವು. ಆದರೆ ಬಿಜೆಪಿ ಕಡೆಯಿಂದ ಇಂಥದ್ದೊಂದು ಆಫರ್‌ ಹೋಗಿತ್ತು ಎಂದು ವರದಿಗಳು ಹೇಳಿದ್ದವು.