India News Live: ಗೋವಧೆ ಈದ್ ಆಚರಣೆ ಅಥವಾ ಇಸ್ಲಾಂನ ಭಾಗವಲ್ಲ - ಕಲ್ಕತ್ತಾ ಹೈಕೋರ್ಟ್ ಆದೇಶ

ನವದೆಹಲಿ (ಮೇ.22): ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್ ಅವರ ಹೇಳಿಕೆ ಹಾಗೂ ದೇಶದ ರಾಜಕೀಯ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಹಾಗೂ ರಾಜಕೀಯ ಪಕ್ಷಗಳನ್ನು ಟೀಕಿಸುವ ಉದ್ದೇಶದಿಂದ ಹುಟ್ಟುಹಾಕಲಾದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಸಾಮಾಜಿಕ ಮಾಧ್ಯಮದಲ್ಲಿ ಸುನಾಮಿ ಎಬ್ಬಿಸಿದೆ. ಇದಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ದೇಶದ ಜೆನ್ಝೀಗಳು (ಯುವಕರು) ಇದರ ಬೆನ್ನ ಹಿಂದೆ ನಿಂತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..

India News Live 22nd May: ಗೋವಧೆ ಈದ್ ಆಚರಣೆ ಅಥವಾ ಇಸ್ಲಾಂನ ಭಾಗವಲ್ಲ - ಕಲ್ಕತ್ತಾ ಹೈಕೋರ್ಟ್ ಆದೇಶ
India News Live 22nd May: IPL 2026 - ಆರ್ಸಿಬಿಗಿಂದು ಸನ್ರೈಸರ್ಸ್ ಚಾಲೆಂಜ್! ನಂ.1 ಸ್ಥಾನಕ್ಕಾಗಿ ಬಿಗ್ ಫೈಟ್
India News Live 22nd May: IPL 2026 - ನಿನ್ನೆ ನಡೆದ ಸಿಎಸ್ಕೆ-ಗುಜರಾತ್ ಟೈಟಾನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
India News Live 22nd May: 2034ರವರೆಗೆ ದೇಶದಲ್ಲಿ ಬಿಜೆಪಿ ಪ್ರಾಬಲ್ಯ ತಗ್ಗಲ್ಲ - ಸಮೀಕ್ಷಾ ತಜ್ಞ | 70ರ ದಶಕದ ಕಾಂಗ್ರೆಸ್ನ ವರ್ಚಸ್ಸು ಈಗ ಬಿಜೆಪಿಗೆ!
ಚುನಾವಣಾ ಸಮೀಕ್ಷಾ ತಜ್ಞ ಪ್ರದೀಪ್ ಗುಪ್ತಾ ಅವರ ಪ್ರಕಾರ, 2014ರಲ್ಲಿ ಆರಂಭವಾದ ಬಿಜೆಪಿಯ ರಾಜಕೀಯ ಪ್ರಾಬಲ್ಯ ಕನಿಷ್ಠ 2034ರವರೆಗೂ ಮುಂದುವರಿಯಲಿದೆ. ಬಿಜೆಪಿ ಸರ್ಕಾರದ ಸಾಧನೆ ಉತ್ತಮವಾಗಿರುವವರೆಗೂ ಅದರ ಸ್ಥಾನ ಭದ್ರ. ಪ್ರತಿಪಕ್ಷಗಳು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕೆಂದು ವಿಶ್ಲೇಷಿಸಿದ್ದಾರೆ.
India News Live 22nd May: ಇರಾನ್ ಯುದ್ಧ - ಟ್ರಂಪ್-ನೆತನ್ಯಾಹು ನಡುವೆ ಭಾರೀ ವಾಕ್ಸಮರ
ಇರಾನ್ ಮೇಲೆ ಯುದ್ಧದ ವಿಚಾರವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ನಡುವೆ ಭಿನ್ನಮತ ಉಂಟಾಗಿದೆ. ಯುದ್ಧಕ್ಕೆ ನೆತನ್ಯಾಹು ಪಟ್ಟು ಹಿಡಿದರೆ, ಟ್ರಂಪ್ ಮಾತುಕತೆಗೆ ಒಲವು ತೋರಿದ್ದಾರೆ.
India News Live 22nd May: Cockroach Janata Party ಗೆ ವಿಪಕ್ಷ ಬೆಂಬಲ; Gen Z ಹೋರಾಟಕ್ಕೆ ಮಹುವಾ, ಅಖಿಲೇಶ್, ಆಜಾದ್, ಕನಿಮೋಳಿ, ಮುಫ್ತಿ ಸಹಮತ
ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹೇಳಿಕೆಯಿಂದ ಪ್ರೇರಿತರಾಗಿ ಜೆನ್ಝೀ ಯುವಕರು 'ಕಾಕ್ರೋಚ್ ಜನತಾ ಪಾರ್ಟಿ' ಎಂಬ ಆಂದೋಲನವನ್ನು ಆರಂಭಿಸಿದ್ದಾರೆ. ಈ ರಾಜಕೀಯ ವ್ಯವಸ್ಥೆಯ ವಿರುದ್ಧದ ಹೋರಾಟಕ್ಕೆ ಮಹುವಾ ಮೊಯಿತ್ರಾ, ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿಪಕ್ಷ ನಾಯಕರು ಮತ್ತು ಸೆಲೆಬ್ರಿಟಿಗಳು ಬೆಂಬಲ.
India News Live 22nd May: Kerala MLA Oath Ceremony: ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ !
ಕೇರಳ ವಿಧಾನಸಭೆಯ ಪ್ರಮಾಣ ವಚನ ಸಮಾರಂಭದಲ್ಲಿ, ಕಾಸರಗೋಡಿನ ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ ಅಶ್ರಫ್ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ಇದೇ ವೇಳೆ, ದೇವಿಕುಲಂ ಶಾಸಕರು ತಮಿಳಿನಲ್ಲಿ ಶಪಥ ಸ್ವೀಕರಿಸಿದ್ದು, ಈ ಘಟನೆಯು ರಾಜ್ಯದ ಭಾಷಾ ವೈವಿಧ್ಯತೆಯನ್ನು ಪ್ರತಿಬಿಂಬಿಸಿತು.