ಭಟ್ಕಳ ನಗರದ ಹಿಂದೂ ಸಮ್ಮೇಳನ ಸಮಿತಿಯಿಂದ ಮಾರ್ಚ್ 8ರಂದು ಸಂಜೆ ನಡೆಯುವ ನಗರ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾಜಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪಾಲ್ಗೊಳ್ಳಲಿದ್ದಾರೆ.
India Latest News Live: ಅನಂತಕುಮಾರ ಹೆಗಡೆ ಮತ್ತೆ ಸಕ್ರಿಯ ರಾಜಕಾರಣ ಪ್ರವೇಶ?

ನವದೆಹಲಿ: ಸುದರ್ಶನ ಚಕ್ರ ಎಂದೇ ಖ್ಯಾತಿ ಪಡೆದ ಭಾರತದ ‘ಎಸ್-400’ ದೀರ್ಘ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆಯು ಶತ್ರು ಕ್ಷಿಪಣಿಯನ್ನು 300 ಕಿ.ಮೀ. ದೂರದಿಂದಲೇ ಪತ್ತೆಹಚ್ಚಿ, ನಾಶ ಮಾಡುತ್ತಿರುವ ವಿಡಿಯೋವೊಂದನ್ನು ಭಾರತೀಯ ಸೇನೆ ಇದೀಗ ಬಿಡುಗಡೆ ಮಾಡಿದೆ. ಇಷ್ಟೊಂದು ದೂರದ ಗುರಿ ಭೇದಿಸುವ ವಿಡಿಯೋ ರೆಕಾರ್ಡ್ ಮಾಡಿದ್ದು ಮಿಲಿಟರಿ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.
India Latest News Live:ಅನಂತಕುಮಾರ ಹೆಗಡೆ ಮತ್ತೆ ಸಕ್ರಿಯ ರಾಜಕಾರಣ ಪ್ರವೇಶ?
India Latest News Live:ಅಂಡಾಣು ಮಾರಾಟ ದಂಧೆ - ಬೆಂಗಳೂರಿನಲ್ಲಿ ತೀವ್ರ ನಿಗಾ - ಐವಿಎಫ್ ಕೇಂದ್ರಗಳ ಮೇಲೆ ಕಣ್ಗಾವಲು
ಬೆಂಗಳೂರಿನಲ್ಲೂ ಅಂಡಾಣು ಮಾರಾಟ ದಂಧೆ ನಡೆಯುತ್ತಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನಗರದ ಐವಿಎಫ್ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
India Latest News Live:ಯಾವ ಶಾಸಕರೂ ನನ್ನ ಪರ ದೆಹಲಿಗೆ ಹೋಗಬೇಡಿ - ಡಿಕೆ ಶಿವಕುಮಾರ್
ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ. ಅವರಿಗೆ ಸಮಸ್ಯೆಯಿದ್ದರೆ ಹೋಗಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಪರವಾಗಿರುವ ಶಾಸಕರು ಡಿನ್ನರ್ ಸಭೆ ನಡೆಸಿ, ದೆಹಲಿಗೆ ಹೋಗುವ ಸಾಧ್ಯತೆ ಕುರಿತು ಸುಳಿವು ನೀಡುತ್ತಿರುವ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
India Latest News Live:ಅಚ್ಚರಿಯ ನಡೆಯೊಂದರಲ್ಲಿ ಜಯಲಲಿತಾ ಶಿಷ್ಯ ಪನ್ನೀರ್ಸೆಲ್ವಂ ಡಿಎಂಕೆಗೆ !
ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗಲೇ, ಅಚ್ಚರಿಯ ನಡೆಯೊಂದರಲ್ಲಿ ಅಣ್ಣಾ ಡಿಎಂಕೆ ಮಾಜಿ ಅಧಿನಾಯಕಿ ದಿ. ಜೆ. ಜಯಲಲಿತಾ ಅವರ ಕಟ್ಟಾ ಶಿಷ್ಯ, 3 ಬಾರಿಯ ಮುಖ್ಯಮಂತ್ರಿ ಓ. ಪನ್ನೀರ್ಸೆಲ್ವಂ ಶುಕ್ರವಾರ ಆಡಳಿತಾರೂಢ ಡಿಎಂಕೆಗೆ ಸೇರ್ಪಡೆಯಾಗಿದ್ದಾರೆ.
India Latest News Live:ಪಾಕಿಸ್ತಾನ- ಅಫಘಾನಿಸ್ತಾನ ಮಧ್ಯೆ ಉಗ್ರ ಯುದ್ಧ - ಯುದ್ಧಕ್ಕೆ 200 ಸಾವು
ಗಡಿ ಸಮಸ್ಯೆ ಹಾಗೂ ಗಡಿಯಲ್ಲಿನ ತಾಲಿಬಾನ್ ಭಯೋತ್ಪಾದನೆ ಸಮಸ್ಯೆ ಮುಂದಿಟ್ಟುಕೊಂಡು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಇದೀಗ ಮತ್ತೊಮ್ಮೆ ನೇರಾನೇರ ಸಂಘರ್ಷಕ್ಕಿಳಿದಿದ್ದು, ಶುಕ್ರವಾರ ಭಾರೀ ದಾಳಿ-ಪ್ರತಿ ದಾಳಿ ನಡೆಸಿವೆ. ಇದರಿಂದಾಗಿ ಒಟ್ಟು ಎರಡೂ ಕಡೆ ಸೇರಿ 200ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.
India Latest News Live:‘ಡಾಲ್ಫಿನ್ ಹಂಟರ್’ ಐಎನ್ಎಸ್ ಅಂಜದೀಪ್ ಯುದ್ಧನೌಕೆ ನೌಕಾಪಡೆಗೆ ಸೇರ್ಪಡೆ
ಶತ್ರು ಜಲಾಂತರ್ಗಾಮಿ ನೌಕೆಗಳ ಪತ್ತೆ, ಟ್ರ್ಯಾಕಿಂಗ್ ಮತ್ತು ನಾಶಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿರುವ, ಡಾಲ್ಫಿನ್ ಹಂಟರ್ ಎಂದೇ ಪ್ರಸಿದ್ಧವಾದ ಐಎನ್ಎಸ್ ಅಂಜದೀಪ್ ಯುದ್ಧನೌಕೆ ಶುಕ್ರವಾರ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ.