AI Summit Protest ಎಐ ಶೃಂಗಸಭೆ ಪ್ರತಿಭಟನೆ ಪ್ರಕರಣದಲ್ಲಿ ಆರೋಪಿಗಳಿಗೆ ಎಫ್ಐಆರ್ ಪ್ರತಿ ನೀಡುವಂತೆ ದೆಹಲಿ ಪೊಲೀಸರಿಗೆ ಪಟಿಯಾಲ ಹೌಸ್ ಕೋರ್ಟ್ ಆದೇಶಿಸಿದೆ. ಇದೊಂದು 'ಸೂಕ್ಷ್ಮ ಪ್ರಕರಣ' ಎಂಬ ಪೊಲೀಸರ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.
- Home
- News
- India News
- India Latest News Live: AI Summit Protest - 'ಇದು ಸೂಕ್ಷ್ಮ ಪ್ರಕರಣ' ಎಂದ ಪೊಲೀಸರಿಗೆ ಶಾಕ್! ಆರೋಪಿಗಳಿಗೆ FIR ಪ್ರತಿ ಕೊಡಿ ಎಂದ ಕೋರ್ಟ್
India Latest News Live: AI Summit Protest - 'ಇದು ಸೂಕ್ಷ್ಮ ಪ್ರಕರಣ' ಎಂದ ಪೊಲೀಸರಿಗೆ ಶಾಕ್! ಆರೋಪಿಗಳಿಗೆ FIR ಪ್ರತಿ ಕೊಡಿ ಎಂದ ಕೋರ್ಟ್

ನವದೆಹಲಿ: ‘ಮೋದಿ ಜೀ, ನೀವು ನಾಚಿಕೆಗೇಡಿನ ಬಗ್ಗೆ ಮಾತನಾಡುತ್ತೀರಾ? ನಾಚಿಕೆಗೇಡಿನ ವಿಷಯ ಏನೆಂದು ನಾನು ನಿಮಗೆ ಹೇಳುತ್ತೇನೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಭಾನುವಾರ ಮಾತನಾಡಿದ್ದ ಮೋದಿ, ‘ಮಹಿಳೆಯರನ್ನು ಸಂಸತ್ತಿನಲ್ಲಿ ಮುಂದಿಟ್ಟುಕೊಂಡು ಕಾಂಗ್ರೆಸ್ ಹೋರಾಡಿದ್ದು ನಾಚಿಕೆಗೇಡು’ ಎಂದಿದ್ದರು.
ಇದಕ್ಕೆ ಟ್ವೀಟರಲ್ಲಿ ತಿರುಗೇಟು ನೀಡಿದ ರಾಗಾ, ‘ನಿಮ್ಮ (ಮೋದಿ) ಹೆಸರು, ನಿಮ್ಮ ಮಂತ್ರಿ ಮತ್ತು ನಿಮ್ಮ ಸ್ನೇಹಿತನ ಹೆಸರು ಎಪ್ಸ್ಟೀನ್ ಫೈಲ್ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಂತಹ ನೀಚ ಅಪರಾಧಿಗೆ ಸಂಬಂಧಿಸಿದೆ - ಇದು ನಾಚಿಕೆಗೇಡಿನ ಸಂಗತಿ. ನೀವು ಅಮೆರಿಕದೊಂದಿಗೆ ಮಾಡಿಕೊಂಡ ವ್ಯಾಪಾರ ಒಪ್ಪಂದ, ಅದರಲ್ಲಿ ನೀವು ದೇಶವನ್ನೇ ಮಾರಿದ್ದೀರಿ - ಇದು ನಾಚಿಕೆಗೇಡಿನ ಸಂಗತಿ. ನೀವು ನಮ್ಮ ದೇಶದ ಡೇಟಾವನ್ನು ಹಸ್ತಾಂತರಿಸಿದ್ದೀರಿ. ನೀವು ರೈತರನ್ನು ನಾಶಮಾಡಿದ್ದೀರಿ. ನೀವು ಜವಳಿ ಉದ್ಯಮವನ್ನು ಹಾಳುಮಾಡಿದ್ದೀರಿ - ಇದು ನಾಚಿಕೆಗೇಡಿನ ಸಂಗತಿ’ ಎಂದಿದ್ದಾರೆ.
India Latest News Live 24 February 2026AI Summit Protest - 'ಇದು ಸೂಕ್ಷ್ಮ ಪ್ರಕರಣ' ಎಂದ ಪೊಲೀಸರಿಗೆ ಶಾಕ್! ಆರೋಪಿಗಳಿಗೆ FIR ಪ್ರತಿ ಕೊಡಿ ಎಂದ ಕೋರ್ಟ್
India Latest News Live 24 February 2026ಭಾರತದ ವ್ಯಾಟ್ಸಾಪ್ ಬಳಕೆದಾರರಿಗೆ ಸಿಮ್ ಬೈಡಿಂಗ್ ರೂಲ್ಸ್, ಏನಿದು ಹೊಸ ನಿಯಮ?
ಭಾರತದ ವ್ಯಾಟ್ಸಾಪ್ ಬಳಕೆದಾರರಿಗೆ ಸಿಮ್ ಬೈಡಿಂಗ್ ರೂಲ್ಸ್, ಏನಿದು ಹೊಸ ನಿಯಮ? ಕೇಂದ್ರ ಸರ್ಕಾರದ ಡಿಜಿಟಲ್ ಸುರಕ್ಷತೆ ಹಾಗೂ ಸೈಬರ್ ವಂಚನೆ ತಡೆಗಟ್ಟಲು ಕಟ್ಟುನಿಟ್ಟಿನ ನಿಯಮ ತರುತ್ತಿದೆ.
India Latest News Live 24 February 2026ಟಾಪ್ಲೆಸ್ ಕಾರ್ ವಾಶ್ ಅಂತ ಬೋರ್ಡ್ ಹಿಡಿದ ಯುವತಿ - ಓಕೆ ಎಂದು ಬೆಸ್ತು ಬಿದ್ದ ಕಾರು ಚಾಲಕರು - ಆಗಿದ್ದೇನು?
ಇಲ್ಲೊಂದು ಕಡೆ ಯುವತಿಯೊಬ್ಬಳು ಟಾಪ್ಲೆಸ್ ಆಗಿ ಕಾರು ವಾಶ್ ಮಾಡೋದಾಗಿ ಬೋರ್ಡ್ ಹಿಡಿದು ರಸ್ತೆ ಬದಿ ನಿಂತಿದ್ದಾಳೆ. ಇದಕ್ಕೆ ಕಾರು ಚಾಲಕರು ಒಪ್ಪಿದ್ದಾರೆ. ಆದರೆ ನಂತರ ಟಾಪ್ಲೆಸ್ ಆಗಿ ಬಂದವರನ್ನು ನೋಡಿ ಬೆಸ್ತು ಬೀಳುವ ಸರದಿ ಕಾರು ಚಾಲಕರದ್ದಾಗಿತ್ತು. ಹಾಗಿದ್ರೆ ಆಗಿದ್ದೇನು ಮುಂದೆ ಓದಿ...
India Latest News Live 24 February 2026ಬಾಯ್ಫ್ರೆಂಡ್ ಎದುರೇ 8 ಕಾಮುಕರಿಂದ ಯುವತಿ ಮೇಲೆ ಅತ್ಯಾ**ರ, ಭೀಕರ ಘಟನೆ ಬೆಳಕಿಗೆ
ಬಾಯ್ಫ್ರೆಂಡ್ ಎದುರೇ 8 ಕಾಮುಕರಿಂದ ಯುವತಿ ಮೇಲೆ ಅತ್ಯಾ**ರ, ಕಾರಿನಲ್ಲಿ ಬಂದು ಅಡ್ಡಗಟ್ಟಿ ಚಾಕು ಹಿಡಿದು ಕೃತ್ಯ ಎಸಗಿದ್ದಾರೆ. ಬಳಿಕ ಯುವತಿಯಿಂದ 10 ಸಾವಿರ ರೂಪಾಯಿ ಕಿತ್ತುಕೊಂಡ ಘಟನೆ ಬೆಳಕಿಗೆ ಬಂದಿದೆ.
India Latest News Live 24 February 2026ಜಯಲಲಿತಾ ಜನ್ಮದಿನದಂದೇ ಹೊಸ ಪಕ್ಷ ಘೋಷಿಸಿದ ಆಪ್ತೆ ಶಶಿಕಲಾ; ತಮಿಳುನಾಡು ರಾಜಕಾರಣದಲ್ಲಿ ಚಿನ್ನಮ್ಮ ಕೋಲಾಹಲ!
ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ, ಎಐಎಡಿಎಂಕೆ ಪಕ್ಷಕ್ಕೆ ಮರಳುವ ಪ್ರಯತ್ನ ವಿಫಲವಾದ ನಂತರ ತಮ್ಮದೇ ಆದ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. ಜಯಲಲಿತಾ ಅವರ ಜನ್ಮದಿನದಂದೇ ಈ ಘೋಷಣೆ ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿ ಹೊಂದಿದ್ದಾರೆ.
India Latest News Live 24 February 2026PM Modi Israel Visit - ಮತ್ತಷ್ಟು ಗಟ್ಟಿಯಾಗಲಿದೆ ಭಾರತ-ಇಸ್ರೇಲ್ ದೋಸ್ತಿ; ಮೋದಿ ಪ್ರವಾಸದ ಸಂಪೂರ್ಣ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 25-26ರಂದು ಇಸ್ರೇಲ್ಗೆ ಎರಡು ದಿನಗಳ ಅಧಿಕೃತ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಭಾರತ-ಇಸ್ರೇಲ್ ವ್ಯೂಹಾತ್ಮಕ ಪಾಲುದಾರಿಕೆ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ.
India Latest News Live 24 February 2026ಮತ್ತೆ ಇಂಡೋ-ಪಾಕ್ ಪಂದ್ಯ, ಐಸಿಸಿ ಟಿ20 ವಿಶ್ವಕಪ್ ಮಹಿಳಾ ಟೂರ್ನಿ ವೇಳಾಪಟ್ಟಿ ಪ್ರಕಟ
ಮತ್ತೆ ಇಂಡೋ-ಪಾಕ್ ಪಂದ್ಯ, ಐಸಿಸಿ ಟಿ20 ವಿಶ್ವಕಪ್ ಮಹಿಳಾ ಟೂರ್ನಿ ವೇಳಾಪಟ್ಟಿ ಪ್ರಕಟ, ಮತ್ತೊಂದು ಮೆಗಾ ಫೈಟ್ಗೆ ವೇದಿಕೆ ಸಜ್ಜಾಗಿದೆ. ಭಾರತ ಪಾಕಿಸ್ತಾನ ಪಂದ್ಯ ಯಾವತ್ತೂ? ಟೂರ್ನಿ ವೇಳಾಪಟ್ಟಿ ಇಲ್ಲಿದೆ.
India Latest News Live 24 February 202637ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್
37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್, ಫಿಟ್ನೆಸ್ ವಿಚಾರದಲ್ಲಿ ಯಾವತ್ತೂ ರಾಜಿಯಾಗಿಲ್ಲ. 7 ಬಾರಿ ಮಿಸ್ಟರ್ ಇಂಡಿಯಾ ಪ್ರಶಸ್ತಿ ಗೆದ್ದ ಮಯಾಂಕ್ ಪವಾರ್ ದುರಂತ ಸಾವು ಕಂಡಿದ್ದಾರೆ
India Latest News Live 24 February 2026ವಿಜಯ್ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್ ಹೇಳಿದ್ರು? ವಿಡಿಯೋ ವೈರಲ್
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ ಸುದ್ದಿ ನಡುವೆ, ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ, ರಕ್ಷಿತ್ ಶೆಟ್ಟಿ ಅವರೊಂದಿಗಿನ ಬ್ರೇಕಪ್ ಬಗ್ಗೆ ಕನ್ನಡದಲ್ಲಿ ಕೇಳಿದ ಪ್ರಶ್ನೆಗೆ ರಶ್ಮಿಕಾ ಉತ್ತರಿಸಲು ತಡವರಿಸುತ್ತಾರೆ, ಆಗ ವಿಜಯ್ ದೇವರಕೊಂಡ ಮಧ್ಯಪ್ರವೇಶಿಸಿ ಗರಂ ಆದರು.
India Latest News Live 24 February 2026ಕೇವಲ 2 ವರ್ಷದ ಅನುಭವಕ್ಕೆ ತಿಂಗಳಿಗೆ 13 ಲಕ್ಷ ವೇತನದ ವರ್ಕ್ ಫ್ರಮ್ ಹೋಮ್ ಕೆಲಸ ಗಿಟ್ಟಿಸಿದ ಉದ್ಯೋಗಿ
ನೇಮಕಾತಿ ಸಂಸ್ಥೆಯಾದ ರೈಟ್ಫಿಟ್ನ ಸಂಸ್ಥಾಪಕ ಸುಮಿತ್ ಸಿಂಗ್, ಕೇವಲ 2 ವರ್ಷಗಳ ಅನುಭವವಿರುವ ಅಭ್ಯರ್ಥಿಯೊಬ್ಬರು ತಿಂಗಳಿಗೆ 13 ಲಕ್ಷ ರೂ. ಸಂಬಳದ ವರ್ಕ್ ಫ್ರಮ್ ಹೋಮ್ ಉದ್ಯೋಗವನ್ನು ಪಡೆದಿದ್ದಾರೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India Latest News Live 24 February 2026ಅ-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಟಾಟಾ
ಅ-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಟಾಟಾ, ಈ ವಿಶೇಷ ಕಾರು ಉಡುಗೊರೆ ವಿಶ್ವಕಪ್ ಗೆಲುವಿನ ಪರ್ಫಾಮೆನ್ಸ್ಗೆ ಅಲ್ಲ. ಇದು ಕಳೆದ ವರ್ಷದ ಪ್ರದರ್ಶನಕ್ಕೆ ಈಗ ಸಿಕ್ಕ ಉಡುಗೊರೆಯಾಗಿದೆ.
India Latest News Live 24 February 2026ಅಯ್ಯಪ್ಪ ಮಾಲೆ ಧರಿಸಿ ಎಣ್ಣೆ ಪಾರ್ಟಿಗೆ ಬಂದ ರಾಮ್ ಚರಣ್ ತೇಜ, ನೆಟ್ಟಿಗರ ಟ್ರೋಲ್!
Ram Charan Trolled for Attending Allu Sirish's Party in Ayyappa Deeksha ಅಲ್ಲು ಸಿರಿಶ್ ಅವರ ಕಾಕ್ಟೈಲ್ ಪಾರ್ಟಿಗೆ ರಾಮ್ ಚರಣ್ ಅಯ್ಯಪ್ಪ ಮಾಲೆ ಧರಿಸಿ ಬಂದಿದ್ದು ಟ್ರೋಲ್ಗೆ ಕಾರಣವಾಯಿತು. ಚರಣ್ ಅವರು ಮದ್ಯಪಾನಕ್ಕೂ ಮುನ್ನವೇ ಬಂದು ಶುಭ ಹಾರೈಸಿದ್ದರು ಎಂದು ಅಲ್ಲು ಸಿರಿಶ್ ಹೇಳಿದ್ದಾರೆ.
India Latest News Live 24 February 2026ಸಿಜೆ ರಾಯ್ ರೀತಿಯಲ್ಲಿ ಮತ್ತೊಬ್ಬ ಉದ್ಯಮಿ ಗುಂಡಿಕ್ಕಿ ಸಾವು, ಮಗಳ ಮದುವೆ 2 ದಿನ ಮೊದಲು ದುರಂತ
ಸಿಜೆ ರಾಯ್ ರೀತಿಯಲ್ಲಿ ಮತ್ತೊಬ್ಬ ಉದ್ಯಮಿ ಗುಂಡಿಕ್ಕಿ ಸಾವು, ಮಗಳ ಮದುವೆ 2 ದಿನ ಮೊದಲು ದುರಂತ, ಸುಂದರ ಸಂಸಾರದ ನಡುವೆ ಅಕ್ರಮವಾಗಿ ಶುರುವಾದ ಪ್ರೀತಿ ಕೊನೆಗೆ ಜೀವವನ್ನೇ ಬಲಿ ತೆಗೆದುಕೊಂಡಿದೆ. ಆಸ್ತಿ, ಹಣ ಎಲ್ಲಾ ನೀಡಿದರೂ ಸಾಲಲಿಲ್ಲ.
India Latest News Live 24 February 2026ಮದುವೆಗೂ ಮುನ್ನ ಉದಯ್ಪುರದಲ್ಲಿ ವಾಲಿಬಾಲ್ ಆಡಿ ಸಂಭ್ರಮಿಸಿದ ವಿಜಯ್ ದೇವರಕೊಂಡ!
India Latest News Live 24 February 2026Political Row - ಗೋವು, ಟೋಪಿ, ಲಸಿಕೆ, ಪಾಕಿಸ್ತಾನ ಪದಗಳನ್ನ ತೆಗೆದರೆ ಬಿಜೆಪಿ ಸಾಯುತ್ತದೆ.. ಎಂದ ಆ ನಾಯಕ ಯಾರು?
Political Row ಎಐಎಂಐಎಂ ನಾಯಕ ಅಖ್ತರುಲ್ ಇಮಾನ್, ಬಿಜೆಪಿಯ ರಾಜಕೀಯವು ಕೇವಲ ಭಾವನಾತ್ಮಕ ಪದಗಳ ಮೇಲೆ ನಿಂತಿದೆ ಎಂದು ಟೀಕಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೀಮಾಂಚಲ್ ಭೇಟಿಯನ್ನು ಪ್ರಶ್ನಿಸಿ, ಒಳನುಸುಳುವಿಕೆ ಆರೋಪದ ಬಗ್ಗೆ ಸರ್ಕಾರದ ಜವಾಬ್ದಾರಿಯನ್ನು ಕೇಳಿದ್ದಾರೆ.
India Latest News Live 24 February 2026ಶ್ವಾನ ಪ್ರಿಯರೇ ಎಚ್ಚರ - ನಾಯಿ ನೆಕ್ಕಿದ್ದರಿಂದ ಕೈಕಾಲು ಕಳೆದುಕೊಂಡ ಮಹಿಳೆ- 11.3 ದಶಲಕ್ಷ ಪ್ರಕರಣ ದಾಖಲು!
ಸಾಕು ನಾಯಿಗಳು ಪ್ರೀತಿಯಿಂದ ನೆಕ್ಕುವುದು ಸಾಮಾನ್ಯ, ಆದರೆ ಇದು ಅಪಾಯಕಾರಿಯಾಗಬಹುದು. ಮಹಿಳೆಯೊಬ್ಬರು ನಾಯಿ ನೆಕ್ಕಿದ್ದರಿಂದ 'ಸೆಪ್ಸಿಸ್' ಎಂಬ ಗಂಭೀರ ಸೋಂಕಿಗೆ ತುತ್ತಾಗಿ ತಮ್ಮ ಕೈ-ಕಾಲುಗಳನ್ನು ಕಳೆದುಕೊಂಡಿದ್ದಾರೆ. ಭಾರತದಲ್ಲಿ 11.3 ದಶಲಕ್ಷ ಪ್ರಕರಣ ದಾಖಲಾಗಿವೆ. ಏನಿದು ಸಮಸ್ಯೆ?
India Latest News Live 24 February 2026ಭಾರತಕ್ಕೂ ಬರ್ತಿದೆ ಲಿಮಿಟೆಡ್ ಎಡಿಷನ್ ಡುಕಾಟಿ ಬೈಕ್; ಈ ರೇಟ್ರೋ ಸುಂದರಿಯ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಾ!
ಡುಕಾಟಿ ತನ್ನ 100ನೇ ವರ್ಷಾಚರಣೆಯ ಅಂಗವಾಗಿ, ಐತಿಹಾಸಿಕ 'ಫಾರ್ಮುಲಾ 73' ಬೈಕನ್ನು ಪರಿಚಯಿಸಿದೆ. 1970ರ ದಶಕದ ರೇಸಿಂಗ್ ಬೈಕ್ನಿಂದ ಸ್ಫೂರ್ತಿ ಪಡೆದ ಈ ಮಾದರಿಯು, ಕ್ಲಾಸಿಕ್ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದ ಸಮ್ಮಿಲನವಾಗಿದೆ.
India Latest News Live 24 February 2026ಜೈಶ್ರೀರಾಮ್ ಘೋಷಣೆ ಮೂಲಕ ನಾಸಿಫ್ ಅಕ್ತರ್ ಶೋಗೆ ಅಡ್ಡಿ ಯತ್ನ, ಕಾಮಿಡಿಯನ್ ಉತ್ತರಕ್ಕೆ ಪ್ರೇಕ್ಷಕ ದಂಗು
ಜೈಶ್ರೀರಾಮ್ ಘೋಷಣೆ ಮೂಲಕ ನಾಸಿಫ್ ಅಕ್ತರ್ ಶೋಗೆ ಅಡ್ಡಿ ಯತ್ನ, ಸ್ಟಾಂಡ್ ಅಪ್ ಕಾಮಿಡಿ ಕಾರ್ಯಕ್ರಮದ ವೇಳೆ ಪ್ರೇಕ್ಷಕನೊಬ್ಬ ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಾಸೀಫ್ ಅಕ್ತರ್, ಮರು ಪ್ರಶ್ನೆಯೊಂದನ್ನು ಹಾಕಿದ್ದಾರೆ. ಈ ಪ್ರಶ್ನೆಗೆ ಪ್ರೇಕ್ಷಕ ದಂಗಾಗಿದ್ದಾನೆ.
India Latest News Live 24 February 2026Terror Threat - ಭಾರತಕ್ಕೆ ಮತ್ತೆ 26/11 ಮಾದರಿ ದಾಳಿ, ಸಮುದ್ರದಲ್ಲಿ ಕಟ್ಟೆಚ್ಚರ - ಲಷ್ಕರ್ ಉಗ್ರನ ವಿಡಿಯೋ ಬೆದರಿಕೆ!
India Latest News Live 24 February 2026POCSO Case - ಪೋಕ್ಸೋ ಕೇಸ್ನಲ್ಲಿ ಸಂಕಷ್ಟ, ನಿರೀಕ್ಷಣಾ ಜಾಮೀನಿಗೆ ಅಲಹಾಬಾದ್ ಹೈಕೋರ್ಟ್ಗೆ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಅರ್ಜಿ
ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ನಿರೀಕ್ಷಣಾ ಜಾಮೀನು ಕೋರಿ ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಪ್ರಯಾಗ್ರಾಜ್ ವಿಶೇಷ ನ್ಯಾಯಾಲಯ ಆದೇಶಿಸಿತ್ತು.