MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಬಾಯ್‌ಫ್ರೆಂಡ್ ಎದುರೇ 8 ಕಾಮುಕರಿಂದ ಯುವತಿ ಮೇಲೆ ಅತ್ಯಾ**ರ, ಭೀಕರ ಘಟನೆ ಬೆಳಕಿಗೆ

ಬಾಯ್‌ಫ್ರೆಂಡ್ ಎದುರೇ 8 ಕಾಮುಕರಿಂದ ಯುವತಿ ಮೇಲೆ ಅತ್ಯಾ**ರ, ಭೀಕರ ಘಟನೆ ಬೆಳಕಿಗೆ

ಬಾಯ್‌ಫ್ರೆಂಡ್ ಎದುರೇ 8 ಕಾಮುಕರಿಂದ ಯುವತಿ ಮೇಲೆ ಅತ್ಯಾ**ರ, ಕಾರಿನಲ್ಲಿ ಬಂದು ಅಡ್ಡಗಟ್ಟಿ ಚಾಕು ಹಿಡಿದು ಕೃತ್ಯ ಎಸಗಿದ್ದಾರೆ. ಬಳಿಕ ಯುವತಿಯಿಂದ 10 ಸಾವಿರ ರೂಪಾಯಿ ಕಿತ್ತುಕೊಂಡ ಘಟನೆ ಬೆಳಕಿಗೆ ಬಂದಿದೆ. 

1 Min read
Author : Chethan Kumar
Published : Feb 24 2026, 09:45 PM IST
Share this Photo Gallery
  • FB
  • TW
  • Linkdin
  • Whatsapp
15
ಯುವತಿ ಮೇಲೆರಗಿದ 8 ಕಾಮುಕರು
Image Credit : X

ಯುವತಿ ಮೇಲೆರಗಿದ 8 ಕಾಮುಕರು

ಬಾಯ್‌ಫ್ರೆಂಡ್ ಜೊತೆ ಕಾರಿನಲ್ಲಿ ಕುಳಿತಿರುವಾಗ 8 ಮಂದಿಯ ತಂಡ ಮಹೀಂದ್ರ ಥಾರ್ ಮೂಲಕ ಆಗಮಿಸಿ ಜೋಡಿಗಳ ಮೇಲೆ ದಾಳಿ ಮಾಡಿದೆ. 8 ಮಂದಿಯ ಪೈಕಿ ಕೆಲವರು ಬಾಯ್‌ಫ್ರೆಂಡ್ ಹಿಡಿದರೆ, ಮತ್ತೆ ಕೆಲವರು ಯುವತಿಯನ್ನು ಹಿಡಿದು ಸಾಮೂಹಿಕ ಅತ್ಯಾ**ರ ಎಸಗಿದ ಘಟನೆ ಅಸ್ಸಾಂ ರಾಜಧಾನಿ ಗುವ್ಹಾಟಿಯಲ್ಲಿ ನಡೆದಿದೆ.

25
ಸಂತ್ರಸ್ತೆಯಿಂದ ದೂರು
Image Credit : X

ಸಂತ್ರಸ್ತೆಯಿಂದ ದೂರು

ಸಿಲ್ಚಾರ್ ಪಟ್ಟಣದಿಂದ ಕೆಲ ಕಿಲೋಮೀಟರ್ ದೂರದಲ್ಲಿರುವ ಬೈಪಾಸ್ ರಸ್ತೆ ಬಳಿಕ ಕಾರಿನಲ್ಲಿರುವಾಗ ಈ ದಾಳಿ ನಡೆದಿದೆ. ದಾಳಿ ನಡೆಸಿದ 8 ಮಂದಿ ಜೋಡಿಗಳನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಬಾಯ್‌ಫ್ರೆಂಡ್ ಗಟ್ಟಿಯಾಗಿ ಹಿಡಿದು ಚಾಕು ಮುಂದಿಟ್ಟು ಬೆದರಿಸಿದ್ದಾರೆ. ಇತ್ತ ಗೆಳತಿ ಮೇಲೆ ನಿರಂತರ ಸಾಮೂಹಿಕ ಅತ್ಯಾ**ರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ. ಕೃತ್ಯ ಎಸಗಿದ ಬಳಿಕ ಯುವತಿ ಬಳಿ ಇದ್ದ 10 ಸಾವಿರ ರೂಪಾಯಿ ಕಿತ್ತು ಪರಾರಿಯಾಗಿದ್ದಾರೆ.

Related Articles

Related image1
ಮುತ್ತಿನ ಮತ್ತಿನ ಲೀವ್ ಇನ್ ರಿಲೇಶನ್‌ಶಿಪ್ ದುರಂತ, ಯುವತಿ ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ
Related image2
Chikkamagaluru: ಪರಿಚಯದ ಮುಸ್ಲಿಂ ಯುವತಿ ಜತೆ ಮಾತಾಡಿದ್ದಕ್ಕೆ ದಲಿತನ ಮೇಲೆ ಹಲ್ಲೆ
35
ಇಬ್ಬರು ಅರೆಸ್ಟ್
Image Credit : ChatGPT

ಇಬ್ಬರು ಅರೆಸ್ಟ್

ಈ ಘಟನೆ ನಡೆದಿರುವುದು ಫೆಬ್ರವರಿ 19ರಂದು. ದೂರಿನ ಬಳಿಕ ತನಿಖೆ ಆರಂಭಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದಾರೆ. ಈ ಆರೋಪಿಗಳನ್ನು ಸಂತ್ರಸ್ತೆ ಗುರುತಿಸಿದ್ದಾರೆ. ನಿಲೋಟಪಲ್ ದಾಸ್(25) ಹಾಗೂ ಸುಬೋಲ್ ದಾಸ್ (25) ಬಂಧಿತ ಆರೋಪಿಗಳು. ಇನ್ನುಳಿದ 6 ಮಂದಿ ತಲೆಮರೆಸಿಕೊಂಡಿದ್ದಾರೆ.

45
ಭುಗಿಲೆದ್ದ ಆಕ್ರೋಶ
Image Credit : Getty

ಭುಗಿಲೆದ್ದ ಆಕ್ರೋಶ

ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಸಂತ್ರಸ್ತೆ ಕುಟುಂಬಸ್ಥರು ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇಂತಹ ಘಟನೆ ಇನ್ನೆಂದು ನಡೆಯದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಆರೋಪಿಗಳ ನಮ್ಮ ಕೈಗೆ ನೀಡಿ ಎಂದು ಆಗ್ರಹಿಸಿದ್ದಾರೆ.

55
ಎನ್‌ಕೌಂಟರ್‌ಗೆ ಆಗ್ರಹ
Image Credit : Getty

ಎನ್‌ಕೌಂಟರ್‌ಗೆ ಆಗ್ರಹ

ರಾಜಕೀಯ ನಾಯಕರು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ತ್ರಿಣಮೂಲ ನಾಯಕ, ರಾಜ್ಯಸಭಾ ಸಂಸದಾ ಸುಶ್ಮಿತ್ ದೇವ್ ಈ ಘಟನೆ ಖಂಡಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಕ್ರೌರ್ಯಕ್ಕೆ ತಕ್ಕ ಶಿಕ್ಷೆಯಾಗಬೇಕು. ಆರೋಪಿಗಳ ಎನ್‌ಕೌಂಟರ್ ಮಾಡುವಂತೆ ಆಗ್ರಹ ಕೇಳಿಬರುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಅಸ್ಸಾಂ
ಭಾರತ ಸುದ್ದಿ
ಪೊಲೀಸ್

Latest Videos
Recommended Stories
Recommended image1
ಜಯಲಲಿತಾ ಜನ್ಮದಿನದಂದೇ ಹೊಸ ಪಕ್ಷ ಘೋಷಿಸಿದ ಆಪ್ತೆ ಶಶಿಕಲಾ; ತಮಿಳುನಾಡು ರಾಜಕಾರಣದಲ್ಲಿ ಚಿನ್ನಮ್ಮ ಕೋಲಾಹಲ!
Recommended image2
PM Modi Israel Visit: ಮತ್ತಷ್ಟು ಗಟ್ಟಿಯಾಗಲಿದೆ ಭಾರತ-ಇಸ್ರೇಲ್ ದೋಸ್ತಿ; ಮೋದಿ ಪ್ರವಾಸದ ಸಂಪೂರ್ಣ ಮಾಹಿತಿ
Recommended image3
ಕೇವಲ 2 ವರ್ಷದ ಅನುಭವಕ್ಕೆ ತಿಂಗಳಿಗೆ 13 ಲಕ್ಷ ವೇತನದ ವರ್ಕ್ ಫ್ರಮ್ ಹೋಮ್ ಕೆಲಸ ಗಿಟ್ಟಿಸಿದ ಉದ್ಯೋಗಿ
Related Stories
Recommended image1
ಮುತ್ತಿನ ಮತ್ತಿನ ಲೀವ್ ಇನ್ ರಿಲೇಶನ್‌ಶಿಪ್ ದುರಂತ, ಯುವತಿ ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ
Recommended image2
Chikkamagaluru: ಪರಿಚಯದ ಮುಸ್ಲಿಂ ಯುವತಿ ಜತೆ ಮಾತಾಡಿದ್ದಕ್ಕೆ ದಲಿತನ ಮೇಲೆ ಹಲ್ಲೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved