ಬೈಕ್ ರೈಡಿಂಗ್ನಲ್ಲಿರುವ ಗಂಡನ ಮೇಲೆ ಆಕ್ರೋಶ ತೀರಿಸಿಕೊಂಡ ಹೆಂಡತಿ, ಮನೆ ಒಳಗಿನ ಜಗಳ ಬೀದಿಯಲ್ಲಿ ಸದ್ದು ಮಾಡಿದೆ. ಹೆಂಡಿತಿ ಆಕ್ರೋಶ, ಕಿತ್ತಾಟದ ನಡುವೆ ಗಂಡ ಬೈಕ್ ರೈಡ್ ಮಾಡಿದ್ದಾನೆ.
- Home
- News
- India News
- India Latest News Live: ಬೈಕ್ ರೈಡಿಂಗ್ನಲ್ಲಿರುವ ಗಂಡನ ಮೇಲೆ ಆಕ್ರೋಶ ತೀರಿಸಿಕೊಂಡ ಹೆಂಡತಿ, ವಿಡಿಯೋ ವೈರಲ್
India Latest News Live: ಬೈಕ್ ರೈಡಿಂಗ್ನಲ್ಲಿರುವ ಗಂಡನ ಮೇಲೆ ಆಕ್ರೋಶ ತೀರಿಸಿಕೊಂಡ ಹೆಂಡತಿ, ವಿಡಿಯೋ ವೈರಲ್

ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ಅಮರಂಬಲಂ ಎಂಬ ಹಳ್ಳಿಯಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿ ಈಗಾಗಲೇ 30 ಮಸೀದಿಗಳಿದ್ದು, 31ನೇ ಮಸೀದಿ ನಿರ್ಮಾಣ ವಿಚಾರವಾಗಿ ಗದ್ದಲವೆದ್ದಿದೆ. ಈ ವಿಚಾರ ಸುಪ್ರೀಂ ಕೋರ್ಟ್ ಅಂಗಳವನ್ನು ತಲುಪಿದೆ.
ಏನಿದು ವಿವಾದ?
ಅಮರಂಬಲಂ ಪಂಚಾಯ್ತಿ ವ್ಯಾಪ್ತಿಯ ತೊಟ್ಟೆಕ್ಕಾಡಿನಲ್ಲಿ 2018ರಲ್ಲಿ ವಾಣಿಜ್ಯ ಕಟ್ಟಡವೊಂದನ್ನು ನಿರ್ಮಿಸಲಾಗಿತ್ತು. ಮಾಲೀಕರು ಅದನ್ನು ವಕ್ಫ್ ಆಸ್ತಿಯಾಗಿ ನೂರುಲ್ ಇಸ್ಲಾಂ ಸಾಂಸ್ಕೃತಿಕ ಸಂಘಕ್ಕೆ ನೀಡಿದ್ದು, ಮಸೀದಿಯಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿದ್ದರು. ವಾಣಿಜ್ಯ ಕಟ್ಟಡವನ್ನು ಮಸೀದಿಯಾಗಿ ಪರಿವರ್ತಿಸಲು ಸಂಘ ಪಂಚಾಯ್ತಿಯ ಸನ್ನದು ಪಡೆಯಲು ಹೋದಾಗ, ಜಿಲ್ಲಾಧಿಕಾರಿಗಳ ಬಳಿ ಹೋಗುವಂತೆ ಸೂಚಿಸಲಾಯಿತು. ಆ ಪ್ರದೇಶದಲ್ಲಿ ಈಗಾಗಲೇ 5 ಕಿ.ಮೀ. ವ್ಯಾಪ್ತಿಯಲ್ಲಿ 30 ಮಸೀದಿಗಳಿರುವುದನ್ನು ಗಮನಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ, ಕಟ್ಟಡದ ಪರಿವರ್ತನೆ ಮನವಿಯನ್ನು ತಿರಸ್ಕರಿಸಿದ್ದರು.
India Latest News Live 19 January 2026ಬೈಕ್ ರೈಡಿಂಗ್ನಲ್ಲಿರುವ ಗಂಡನ ಮೇಲೆ ಆಕ್ರೋಶ ತೀರಿಸಿಕೊಂಡ ಹೆಂಡತಿ, ವಿಡಿಯೋ ವೈರಲ್
India Latest News Live 19 January 2026ಮೂರು ಮನೆ, 3 ಆಟೋ, ಒಂದು ಕಾರು ಜೊತೆಗೆ ಡ್ರೈವರ್, ಈತ ಭಾರತದ ಕೋಟ್ಯಾಧಿಪತಿ ಭಿಕ್ಷುಕ
ಮೂರು ಮನೆ, 3 ಆಟೋ, ಒಂದು ಕಾರು, ಲಕ್ಷ ಲಕ್ಷ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್, ಸಾಲ ಇಲ್ಲ, ಯಾವ ತಲೆನೋವು ಇಲ್ಲ. ಈತನ ಭಾರತದ ಶ್ರೀಮಂತ ಭಿಕ್ಷುಕ ಮಂಗಿಲಾಲ್. ಕಾಲುಗಳಿಗೆ ಸ್ವಾಧೀನವಿಲ್ಲ, ಹೀಗಾಗಿ ಅನಿವಾರ್ಯ ಭಿಕ್ಷಾಟನೆಗೆ ಇಳಿದ ಲಾಲ್ ಈಗ ಶ್ರೀಮಂತ.
India Latest News Live 19 January 2026ಲೈಕ್ಗೋಸ್ಕರ್ ಒಂದು ಜೀವವನ್ನೇ ತೆಗೆದಳಾ ಈ ಮುಸ್ತಫಾ? ದೀಪಕ್ ಸಾವಿನ ಹಿಂದಿರೋ ರಹಸ್ಯವೇನು? ನಿಜವೇನು?
ಕೇರಳದಲ್ಲಿ ಬಸ್ ಪ್ರಯಾಣದ ವೇಳೆ ಸಹ ಪ್ರಯಾಣಿಕನ ವಿರುದ್ಧ ಲೈಂ*ಗಿಕ ದೌರ್ಜನ್ಯದ ಆರೋಪ ಮಾಡಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಒಬ್ಬರು ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿ, ಆರೋಪಕ್ಕೆ ಗುರಿಯಾದ ವ್ಯಕ್ತಿ ಅವಮಾನ ತಾಳಲಾರದೆ ಬದುಕನ್ನು ಕೊನೆಗೊಳಿಸಿಕೊಂಡಿದ್ದಾರೆ.
India Latest News Live 19 January 2026ರೋಹಿತ್, ಜಡೇಜಾ ಅಲ್ಲ! ಟೀಂ ಇಂಡಿಯಾ ಸರಣಿ ಸೋಲಿಗೆ ಈ ಇಬ್ಬರೇ ಕಾರಣ! ನೀವೇನಂತೀರಾ?
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಭಾರತ 2-1 ಅಂತರದಲ್ಲಿ ಸೋತಿದೆ. ಈ ಸೋಲಿಗೆ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆಗಾರ ಅಜಿತ್ ಅಗರ್ಕರ್ ಅವರ ವಿವಾದಾತ್ಮಕ ನಿರ್ಧಾರಗಳೇ ಕಾರಣವೆಂದು ವಿಶ್ಲೇಷಿಸಲಾಗಿದೆ.
India Latest News Live 19 January 2026ಕೊನೆಗೂ ಮುಗಿಯಿತಾ ಈ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ವೃತ್ತಿಬದುಕು?
ಇಂದೋರ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ ಕೈಚೆಲ್ಲಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಪ್ರದರ್ಶನದ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿದ್ದು, ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಕ್ರಿಕೆಟ್ ವೃತ್ತಿಜೀವನ ಮುಗಿಯಿತಾ ಎನ್ನುವ ಪ್ರಶ್ನೆಗಳು ಕಾಡಲಾರಂಭಿಸಿವೆ.
India Latest News Live 19 January 2026ಎಲ್ಲರಿಗೂ ಗುಡ್ಬೈ, ಮತ್ತೆ ಸಿಗುತ್ತೇನೋ ಗೊತ್ತಿಲ್ಲ - ವಿದಾಯದ ಪೋಸ್ಟ್ ಹಾಕಿದ ಗುಳಿಕೆನ್ನೆ ಚೆಲುವೆ! ಫ್ಯಾನ್ಸ್ ಶಾಕ್
"ಕ್ಯಾಂಡಿ ಶಾಪ್" ವಿಡಿಯೋದಿಂದಾಗಿ ಟ್ರೋಲ್ಗೆ ಒಳಗಾದ ಗಾಯಕಿ, ಗುಳಿ ಕೆನ್ನೆ ಚೆಲುವೆ ನೇಹಾ ಕಕ್ಕರ್, ಸೋಷಿಯಲ್ ಮೀಡಿಯಾದಲ್ಲಿ ಶಾಕಿಂಗ್ ಪೋಸ್ಟ್ ಹಾಕಿದ್ದಾರೆ. ಅವರು ಸೆಲೆಬ್ರಿಟಿ ಜೀವನದಿಂದ ವಿರಾಮ ತೆಗೆದುಕೊಳ್ಳುತ್ತಿದ್ದು, ತಮ್ಮ ಫೋಟೋ ತೆಗೆಯದಂತೆ ಪಾಪರಾಜಿಗಳು ಮತ್ತು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ
India Latest News Live 19 January 2026ಅಬ್ಬಬ್ಬಾ..! ಒಂದು ಇನ್ಸ್ಟಾಗ್ರಾಂ ಪೋಸ್ಟ್ನಿಂದ ವಿರಾಟ್ ಕೊಹ್ಲಿ ಗಳಿಸೋದು ಇಷ್ಟೊಂದಾ?
ಭಾರತದ ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿ ಬರೀ ಕ್ರಿಕೆಟ್, ಜಾಹೀರಾತು, ಬ್ಯುಸಿನೆಸ್ನಿಂದ ಅಷ್ಟೇ ಅಲ್ಲ, ಸೋಶಿಯಲ್ ಮೀಡಿಯಾದಿಂದಲೂ ಕೋಟಿ ಕೋಟಿ ಸಂಪಾದಿಸ್ತಾರೆ. ಅವರು ಒಂದು ಇನ್ಸ್ಟಾಗ್ರಾಂ ಪೋಸ್ಟ್ಗೆ ಎಷ್ಟು ತಗೋತಾರೆ ಗೊತ್ತಾ?
India Latest News Live 19 January 2026ಕಿವೀಸ್ ಎದುರಿನ ಒಂದು ಶತಕದಿಂದ ಹಲವು ರೆಕಾರ್ಡ್ಸ್ ನುಚ್ಚುನೂರು ಮಾಡಿದ ವಿರಾಟ್ ಕೊಹ್ಲಿ!
ಇಂದೋರ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಮೋಘ ಶತಕ ಸಿಡಿಸಿದರು. ತಂಡವನ್ನು ಸೋಲಿನಿಂದ ಪಾರುಮಾಡಲು ವಿಫಲರಾದರೂ, ಹಲವು ದಾಖಲೆಗಳನ್ನು ಕೊಹ್ಲಿ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾದರು.
India Latest News Live 19 January 2026ಟಿ20 ವಿಶ್ವಕಪ್ - ಭಾರತಕ್ಕೆ ಬರಲ್ಲವೆಂದು ಹಟ ಹಿಡಿದಿರುವ ಬಾಂಗ್ಲಾದೇಶಕ್ಕೆ ಕಟ್ಟ ಕಡೆಯ ವಾರ್ನಿಂಗ್ ಕೊಟ್ಟ ಐಸಿಸಿ!
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳನ್ನು ಭಾರತದಲ್ಲಿ ಆಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಭದ್ರತೆಯ ನೆಪವೊಡ್ಡಿ ನಿರಾಕರಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಜನವರಿ 21ರೊಳಗೆ ನಿರ್ಧಾರ ತಿಳಿಸುವಂತೆ ಬಾಂಗ್ಲಾಗೆ ಡೆಡ್ಲೈನ್ ನೀಡಿದೆ ಐಸಿಸಿ.
India Latest News Live 19 January 20262000ರಲ್ಲಿ ₹1 ಲಕ್ಷಕ್ಕೆ ಚಿನ್ನ ಖರೀದಿಸಿದ್ದರೆ, ಇಂದು ನಿಮ್ಮ ಬಳಿ ಎಷ್ಟು ಹಣ ಇರುತ್ತಿತ್ತು ಗೊತ್ತಾ?
ಬೆಂಗಳೂರು: ಚಿನ್ನದ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಸದ್ಯ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1.5 ಲಕ್ಷ ರೂ. ತಲುಪಿದೆ. ಆದರೆ, ನೀವು 26 ವರ್ಷಗಳ ಹಿಂದೆ 1 ಲಕ್ಷ ರೂಪಾಯಿಗೆ ಚಿನ್ನ ಖರೀದಿಸಿದ್ದರೆ ಇಂದು ನಿಮ್ಮ ಬಳಿ ಎಷ್ಟು ಹಣ ಇರುತ್ತಿತ್ತು ಎಂದು ತಿಳಿಯೋಣ.
India Latest News Live 19 January 2026ಕೊಹ್ಲಿ ಶತಕ ಬಾರಿಸುತ್ತಿದ್ದಂತೆಯೇ ಎದ್ದು ನಿಂತು ಚಪ್ಪಾಳೆ ತಟ್ಟಿದ ಗಂಭೀರ್! ಈಗ ಬಾಸ್ ಯಾರಂತ ಗೊತ್ತಾಯ್ತಾ ಎಂದು ವಿರಾಟ್ ಫ್ಯಾನ್ಸ್
ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 54ನೇ ಶತಕ ಸಿಡಿಸಿ, ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿದರು. ಈ ಶತಕಕ್ಕೆ ಕೋಚ್ ಗೌತಮ್ ಗಂಭೀರ್ ಡಗೌಟ್ನಿಂದ ಎದ್ದುನಿಂತು ಚಪ್ಪಾಳೆ ತಟ್ಟಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
India Latest News Live 19 January 2026Job Interview - ಕೆಲಸ ಯಾಕೆ ಬದಲಿಸ್ತೀರಾ ಅಂದ್ರೇನು ಉತ್ತರಿಸಬೇಕು? ಸಂದರ್ಶನದಲ್ಲಿ ಈ ತಪ್ಪಂತೂ ಮಾಡಲೇ ಬೇಡಿ!
ಸಂದರ್ಶನದಲ್ಲಿ 'ಕೆಲಸ ಏಕೆ ಬದಲಿಸುತ್ತಿದ್ದೀರಾ?' ಎಂಬ ಪ್ರಶ್ನೆಗೆ ನಕಾರಾತ್ಮಕವಾಗಿ ಉತ್ತರಿಸಬಾರದು. ಬದಲಿಗೆ, ಇದನ್ನು ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಹೊಸ ಉದ್ಯೋಗವು ನಿಮ್ಮ ವೃತ್ತಿ ಬೆಳವಣಿಗೆಗೆ ಹೇಗೆ ಸಹಕಾರಿ ಎಂಬುದನ್ನು ವಿವರಿಸಲು ಒಂದು ಅವಕಾಶವಾಗಿ ಬಳಸಿಕೊಳ್ಳಬೇಕು.
India Latest News Live 19 January 2026NTR ಹೋಲಿಕೆ ಇದ್ದಿದ್ದಕ್ಕೆ ಜೂ. ಎನ್ಟಿಆರ್ರನ್ನು ಫ್ಯಾಮಿಲಿಗೆ ಸೇರಿಸಿಕೊಂಡರು, ಇಲ್ಲದಿದ್ರೆ ಬೇರೆನೇ ಇರ್ತಿತ್ತು!
NTR: ಜೂ. ಎನ್ಟಿಆರ್ ನಂದಮೂರಿ ಕುಟುಂಬದಲ್ಲಿ ಸೇರಿಕೊಂಡಿದ್ದರ ಬಗ್ಗೆ ಹಿರಿಯ ನಟಿ ಕಾಕಿನಾಡ ಶ್ಯಾಮಲಾ ಇಂಟ್ರೆಸ್ಟಿಂಗ್ ಹೇಳಿಕೆ ನೀಡಿದ್ದಾರೆ. ತಾರಕ್ ಅವರ ಕುಟುಂಬದಲ್ಲಿ ಸೇರಲು ಕಾರಣವೇನು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
India Latest News Live 19 January 2026ಕಿವೀಸ್ ಎದುರಿನ ಕೊನೆಯ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಹೆಸರಿನಲ್ಲಿದ್ದ 2 ಅಪರೂಪದ ದಾಖಲೆ ಮುರಿದ ಕಿಂಗ್ ಕೊಹ್ಲಿ!
ಇಂದೋರ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಹೊರತಾಗಿಯೂ ಭಾರತ ಸೋಲುಂಡಿತು.
India Latest News Live 19 January 2026ವಿರಾಟ್ ಕೊಹ್ಲಿ ಶತಕದ ಹೋರಾಟ ವ್ಯರ್ಥ - ಮೊದಲ ಭಾರತದಲ್ಲಿ ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್!
ಇಂದೋರ್ನಲ್ಲಿ ನಡೆದ ನಿರ್ಣಾಯಕ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯವರ ಅಮೋಘ ಶತಕ (124) ವ್ಯರ್ಥವಾಯಿತು. ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಶತಕಗಳ ನೆರವಿನಿಂದ ನ್ಯೂಜಿಲೆಂಡ್ 337 ರನ್ ಗಳಿಸಿತು. ಗುರಿ ಬೆನ್ನತ್ತಿದ ಭಾರತ, ಕೊಹ್ಲಿಯ ಹೋರಾಟದ ಹೊರತಾಗಿಯೂ ಸೋಲನುಭವಿಸಿತು.