MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • ಜೆನ್ ಜೀ ಯುಗದ ಹುಡ್ಗೀರು ಮದುವೆ ಬೇಡ ಎನ್ನಲು 5 ಕಾರಣ ಇಲ್ಲಿವೆ!

ಜೆನ್ ಜೀ ಯುಗದ ಹುಡ್ಗೀರು ಮದುವೆ ಬೇಡ ಎನ್ನಲು 5 ಕಾರಣ ಇಲ್ಲಿವೆ!

ಇತ್ತೀಚಿನ ದಿನಗಳಲ್ಲಿ ಜನರೇಷನ್ ಜೀ ಯುಗದ ಹಲವು ಹುಡುಗಿಯರು ಮದುವೆ ಆಗೋದಕ್ಕೆ ಹಿಂದೇಟು ಹಾಕ್ತಿದ್ದಾರೆ. ವೃತ್ತಿ, ಸ್ವಾವಲಂಬನೆ, ಸರಿಯಾದ ಜೀವನ ಸಂಗಾತಿಯ ಹುಡುಕಾಟ, ವಿಫಲ ಮದುವೆಗಳ ಭಯ ಹೀಗೆ ಹಲವು ಕಾರಣಗಳಿವೆ. ಅದರಲ್ಲಿಯೂ 5 ಪ್ರಮುಖ ಕಾರಣಗಳು ಹೀಗಿವೆ ನೋಡಿ..

1 Min read
Sathish Kumar KH
Published : May 02 2025, 03:29 PM IST| Updated : May 02 2025, 03:34 PM IST
Share this Photo Gallery
  • FB
  • TW
  • Linkdin
  • Whatsapp
15

ಇತ್ತೀಚಿನ ಜನರೇಷನ್ ಜೀ ಯುಗದ ಹುಡುಗಿಯರು ಎಲ್ಲದರಲ್ಲೂ ಸ್ವಾವಲಂಬನೆ, ಸಮಾನತೆ ಹಾಗೂ ಸಬಲೀಕರಣ ಪಡೆದುಕೊಳ್ಳುವುದಕ್ಕೆ ಹಾತೊರೆಯುತ್ತಾರೆ. ಈ ಹಿನ್ನೆಲೆಯಲ್ಲಿ ವೃತ್ತಿ ಮತ್ತು ಸ್ವಾವಲಂಬನೆಗೆ ಹೆಚ್ಚು ಮಹತ್ವ ಕೊಡ್ತಾರೆ. ಮದುವೆ ಆದ್ಮೇಲೆ ಕುಟುಂಬ ಮತ್ತು ವೃತ್ತಿ ಎರಡನ್ನೂ ನಿಭಾಯಿಸೋದು ಕಷ್ಟವೆಂದು ಭಾವಿಸಿದ್ದಾರೆ. ಆದ್ದರಿಂದ ಮದುವೆ ಬಗ್ಗೆ ಯೋಚಿಸೋಕೆ ಹಿಂಜರಿಯುತ್ತಾರೆ.

25

ಇತ್ತೀಚಿನ ದಿನಗಳಲ್ಲಿ ಮದುವೆಯಾಗಿ ಒಟ್ಟಿಗೆ ಸುಖ ಸಂಸಾರ ಮಾಡಿಕೊಂಡಿರುವ ಜೋಡಿಗಳನ್ನು ನೋಡುವುದೇ ಅಪರೂಪವಾಗಿದೆ. ಆದ್ದರಿಂದ ಸುತ್ತಮುತ್ತ ವಿಫಲ ಮದುವೆಗಳನ್ನ ನೋಡಿ ಭಯ ತಾವು ಮದುವೆ ಮಾಡಿಕೊಳ್ಳಲು ಭಯ ಪಡುತ್ತಿದ್ದಾರೆ. ಇನ್ನು ಬೇಗ ಮದುವೆ ಆಗಿ ಸಮಸ್ಯೆಗೆ ಸಿಲುಕಿಕೊಳ್ಳೋದು ಬೇಡ ಎಂತಲೂ ಮದುವೆ ವಿಳಂಬ ಮಾಡುತ್ತಾರೆ.

Related Articles

Related image1
ಪ್ರಣಯದಲ್ಲಿ ಈ ರಾಶಿಗೆ ಆಸಕ್ತಿನೇ ಇಲ್ಲ, ರೊಮ್ಯಾನ್ಸ್ ಬೇಡವೇ ಬೇಡ
Related image2
'ಬ್ಲೌಸ್​ ಹಿಂದೆ ಏನಿದೆ' ಎನ್ನುತ್ತಾ ಕುಣಿದು ಕುಪ್ಪಳಿಸಿದ ವರ: ಮದ್ವೆನೇ ಕ್ಯಾನ್ಸಲ್​ ಮಾಡಿದ ವಧು ಅಪ್ಪ!
35

ಹುಡುಗನ ಆಯ್ಕೆ ವಿಚಾರದಲ್ಲಿ ಹುಡುಗಿಯರು ಭಾರೀ ಚೂಸಿ ಆಗಿದ್ದಾರೆ. ಮನಸ್ಸಿಗೆ ಹೊಂದುವ ಗಂಡ ಸಿಗದಿದ್ದರೆ ಒಬ್ಬಂಟಿಯಾಗಿಯೇ ಇರೋದು ಒಳ್ಳೇದು ಅಂತ ಹುಡುಗಿಯರು ಭಾವಿಸುತ್ತಾರೆ.

45

ಮದುವೆಗೆ ಮಾನಸಿಕವಾಗಿ ಸಿದ್ಧರಿಲ್ಲದ ಹುಡುಗಿಯರು ಮದುವೆಯಿಂದ ದೂರ ಉಳಿಯುತ್ತಾರೆ. ಇನ್ನು ಮದುವೆಯಾದ ನಂತರ ತಮ್ಮ ಸೌಂದರ್ಯಕಾಳಜಿ, ಮಕ್ಕಳ ಪಾಲನೆ ಭಯವೂ ಕಾಡುತ್ತದೆ. ಇನ್ನು ಅವಿಭಕ್ತ ಕುಟುಂಬದಲ್ಲಿ ವಾಸ ಮಾಡುವುದಕ್ಕೂ ಹಿಂದೇಟು ಹಾಕುತ್ತಾರೆ.

55

ವೃತ್ತಿ ಮತ್ತು ಜೀವನದ ಸ್ವಾವಲಂಬನೆ ಬಯಸುವ ಯುವತಿಯರು ಮದುವೆಯಾದ ನಂತರ ಸ್ವಾತಂತ್ರ್ಯ ಹೋಗುತ್ತದೆ ಎಂದು ಮದುವೆಯಿಂದ ದೂರ ಉಳಿಯುತ್ತಾರೆ. 

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಜೀವನಶೈಲಿ
ಮದುವೆ
ಮಹಿಳೆಯರು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved