MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • 'ಯುದ್ಧ ಆಗಬೇಕು, ನನ್ನ ರಕ್ತ ಕುದಿಯುತ್ತಿದೆ...' ಎಂದು ಹೇಳಿದ ದಿಶಾ ಪಟಾಣಿ ಸಹೋದರಿ ಖುಷ್ಬೂ ಯಾರು?

'ಯುದ್ಧ ಆಗಬೇಕು, ನನ್ನ ರಕ್ತ ಕುದಿಯುತ್ತಿದೆ...' ಎಂದು ಹೇಳಿದ ದಿಶಾ ಪಟಾಣಿ ಸಹೋದರಿ ಖುಷ್ಬೂ ಯಾರು?

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ದಿಶಾ ಪಟಾಣಿ ಸಹೋದರಿ ಖುಷ್ಬೂ ಪಟಾಣಿ ಕೂಡ ಈ ಭಯೋತ್ಪಾದಕ ಘಟನೆಯ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

2 Min read
Pavna Das
Published : Apr 25 2025, 01:21 PM IST| Updated : Apr 25 2025, 02:18 PM IST
Share this Photo Gallery
  • FB
  • TW
  • Linkdin
  • Whatsapp
18

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ (Pahalgam Terrorist Attack) ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಈಗ ದಿಶಾ ಪಟಾಣಿ ಸಹೋದರಿ ಖುಷ್ಬೂ ಪಟಾಣಿ ಕೂಡ ಈ ಭಯೋತ್ಪಾದಕ ಘಟನೆಯ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ದಿಶಾ ಪಟಾಣಿ ತಂಗಿ ಯಾರು ಗೊತ್ತಾ? 
 

28

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಘಟನೆಯ ಬಗ್ಗೆ ಬಾಲಿವುಡ್‌ನಿಂದ ದಕ್ಷಿಣದವರೆಗಿನ ತಾರೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ., ಈಗ ದಿಶಾ (Dissha Patani) ಸಹೋದರಿ ಖುಷ್ಬೂ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ, ಅವರು ಯುದ್ಧ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
 

38

ಇತ್ತೀಚೆಗೆ ಮಗುವಿನ ಜೀವ ಉಳಿಸಿದ್ದ ಖುಷ್ಬೂ
ಖುಷ್ಬೂ (Khushboo Patani) ಇತ್ತೀಚೆಗೆ ಒಂದು ಪುಟ್ಟ ಮಗುವಿನ ಜೀವವನ್ನು ಉಳಿಸಿದ್ದರು. ಪುಟ್ಟ ಮಗುವನ್ನು ಉಳಿಸುವ ವಿಡಿಯೋವನ್ನು ಖುಷ್ಬೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಮಗುವಿನ ಜೀವ ಉಳಿಸಿದ ನಂತರ, ಜನರು ಖುಷ್ಬೂ ಅವರನ್ನು ತುಂಬಾ ಹೊಗಳುತ್ತಿದ್ದಾರೆ.

48

ದಿಶಾಳ ಸಹೋದರಿ ಯಾರು?
ದಿಶಾ ಪಟಾಣಿ ಸಹೋದರಿ ಖುಷ್ಬೂ ಭಾರತೀಯ ಸೇನೆಯಲ್ಲಿದ್ದರು (Indian Army). ದೇಶ ಸೇವೆ ಮಾಡಿದ ನಂತರ, ಖುಷ್ಬೂ ನಿವೃತ್ತಿ ಹೊಂದಿದ್ದು, ಬರೇಲಿಯಲ್ಲಿ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಾರೆ.

58

ಖುಷ್ಬೂಗೆ 33 ವರ್ಷ
33 ವರ್ಷದ ಖುಷ್ಬೂ ಈಗ ಫಿಟ್ನೆಸ್ ತರಬೇತುದಾರರಾಗಿದ್ದಾರೆ ಮತ್ತು ಸೇನೆಯಿಂದ ದೂರವಾಗಿದ್ದಾರೆ. ಆದರೆ ದೇಶದಲ್ಲಿ ದುರ್ಘಟನೆ ಸಂಭವಿಸಿದಾಗ ಆ ಬಗ್ಗೆ ಕಿಡಿ ಕಾರಿದ್ದಾರೆ. 

68

ರಕ್ತ ಕುದಿಯುತ್ತಿದೆ ಎಂದು ಖುಷ್ಬೂ
ದಾಳಿಯ ಬಗ್ಗೆ ಮಾತನಾಡಿದ ಖುಷ್ಬೂ, ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಾ, "ನಮ್ಮ ಸೈನ್ಯವು ತುಂಬಾ ಉತ್ತಮವಾಗಿದೆ ಮತ್ತು ಅವರಿಗೆ ಉತ್ತಮ ತರಬೇತಿ ನೀಡಲಾಗಿದೆ. ಆದೇಶಗಳನ್ನು ಸ್ವೀಕರಿಸಲು ಒಬ್ಬರು ಸಿದ್ಧರಾಗಿರಬೇಕು. ಇದನ್ನು ಹಗುರವಾಗಿ ಪರಿಗಣಿಸಬಾರದು. ಉಗ್ರರು ಯಾವುದೇ ಧರ್ಮಕ್ಕೆ ಸೇರಿರಲು, ಸುಮ್ಮನೆ ಬಿಡಬಾರದು, ನನ್ನ ರಕ್ತ ಉರಿಯುತ್ತಿದೆ, ನನ್ನ ರಕ್ತ ಕುದಿಯುತ್ತಿದೆ" ಎಂದು ಹೇಳಿದರು.

78

ನಮ್ಮಲ್ಲಿ ಒಳ್ಳೆಯ ಪಡೆಗಳಿವೆ
"ಅವರು ಹಿಂದೂಗಳನ್ನು ಕೊಂದರು. ಇದು ಕೇವಲ ಭಯೋತ್ಪಾದಕ ದಾಳಿಯಲ್ಲ, ಪಾಕಿಸ್ತಾನಿ ಸೇನೆಯೂ ಇದರಲ್ಲಿ ಸಂಪೂರ್ಣವಾಗಿ ಭಾಗಿಯಾಗಿದೆ. ನಾವು ಪಾಕಿಸ್ತಾನಿ ಸೇನೆಯನ್ನು ಭಯೋತ್ಪಾದಕರು ಎಂದು ಕರೆಯಬೇಕು ಎಂದಿರುವ ಖುಷ್ಭೂ ಭಾರತೀಯ ಸೇನೆಯ ಮಾಜಿ ಮೇಜರ್ ಆಗಿ, ನಮ್ಮಲ್ಲಿ ಉತ್ತಮ ಪಡೆಗಳಿವೆ ಅನ್ನೋದನ್ನಂತೂ ನಾನು ಹೇಳ್ತೀನಿ ಎಂದು ಖುಷ್ಬೂ ಹೇಳಿದರು.
 

88

ಈಗ ಯುದ್ಧ ಮಾತ್ರ ಇರಬೇಕು
ಇದಲ್ಲದೆ ಭಾರತದಲ್ಲಿ ಈಗ 15 ಲಕ್ಷಕ್ಕೂ ಹೆಚ್ಚು ಸೈನಿಕರಿದ್ದಾರೆ. ಈಗ ಯುದ್ಧ ಆಗಬೇಕು.  ಅದು ಯಾವ ಧರ್ಮ, ಯಾವ ಪುಸ್ತಕದಲ್ಲಿ ಮುಗ್ಧ ಜನರನ್ನು ಕೊಲ್ಲಬಹುದು ಎಂದು ಬರೆಯಲಾಗಿದೆ. ಎಲ್ಲಾ ಭಾರತೀಯರು ಭಯೋತ್ಪಾದನೆಯ ವಿರುದ್ಧ ಒಗ್ಗೂಡಬೇಕಾದ ಮತ್ತು ನಮ್ಮ ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತರಲು ಸರ್ಕಾರದ ನಿರ್ಧಾರಗಳನ್ನು ಪೂರ್ಣ ಹೃದಯದಿಂದ ಬೆಂಬಲಿಸಬೇಕಾದ ಸಮಯ ಇದು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದಿದ್ದಾರೆ ಖುಷ್ಭೂ. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ನಟಿ
ಮಹಿಳೆಯರು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved