'ಯುದ್ಧ ಆಗಬೇಕು, ನನ್ನ ರಕ್ತ ಕುದಿಯುತ್ತಿದೆ...' ಎಂದು ಹೇಳಿದ ದಿಶಾ ಪಟಾಣಿ ಸಹೋದರಿ ಖುಷ್ಬೂ ಯಾರು?
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ದಿಶಾ ಪಟಾಣಿ ಸಹೋದರಿ ಖುಷ್ಬೂ ಪಟಾಣಿ ಕೂಡ ಈ ಭಯೋತ್ಪಾದಕ ಘಟನೆಯ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ (Pahalgam Terrorist Attack) ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಈಗ ದಿಶಾ ಪಟಾಣಿ ಸಹೋದರಿ ಖುಷ್ಬೂ ಪಟಾಣಿ ಕೂಡ ಈ ಭಯೋತ್ಪಾದಕ ಘಟನೆಯ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ದಿಶಾ ಪಟಾಣಿ ತಂಗಿ ಯಾರು ಗೊತ್ತಾ?
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ಘಟನೆಯ ಬಗ್ಗೆ ಬಾಲಿವುಡ್ನಿಂದ ದಕ್ಷಿಣದವರೆಗಿನ ತಾರೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ., ಈಗ ದಿಶಾ (Dissha Patani) ಸಹೋದರಿ ಖುಷ್ಬೂ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ, ಅವರು ಯುದ್ಧ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಮಗುವಿನ ಜೀವ ಉಳಿಸಿದ್ದ ಖುಷ್ಬೂ
ಖುಷ್ಬೂ (Khushboo Patani) ಇತ್ತೀಚೆಗೆ ಒಂದು ಪುಟ್ಟ ಮಗುವಿನ ಜೀವವನ್ನು ಉಳಿಸಿದ್ದರು. ಪುಟ್ಟ ಮಗುವನ್ನು ಉಳಿಸುವ ವಿಡಿಯೋವನ್ನು ಖುಷ್ಬೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಮಗುವಿನ ಜೀವ ಉಳಿಸಿದ ನಂತರ, ಜನರು ಖುಷ್ಬೂ ಅವರನ್ನು ತುಂಬಾ ಹೊಗಳುತ್ತಿದ್ದಾರೆ.
ದಿಶಾಳ ಸಹೋದರಿ ಯಾರು?
ದಿಶಾ ಪಟಾಣಿ ಸಹೋದರಿ ಖುಷ್ಬೂ ಭಾರತೀಯ ಸೇನೆಯಲ್ಲಿದ್ದರು (Indian Army). ದೇಶ ಸೇವೆ ಮಾಡಿದ ನಂತರ, ಖುಷ್ಬೂ ನಿವೃತ್ತಿ ಹೊಂದಿದ್ದು, ಬರೇಲಿಯಲ್ಲಿ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಾರೆ.
ಖುಷ್ಬೂಗೆ 33 ವರ್ಷ
33 ವರ್ಷದ ಖುಷ್ಬೂ ಈಗ ಫಿಟ್ನೆಸ್ ತರಬೇತುದಾರರಾಗಿದ್ದಾರೆ ಮತ್ತು ಸೇನೆಯಿಂದ ದೂರವಾಗಿದ್ದಾರೆ. ಆದರೆ ದೇಶದಲ್ಲಿ ದುರ್ಘಟನೆ ಸಂಭವಿಸಿದಾಗ ಆ ಬಗ್ಗೆ ಕಿಡಿ ಕಾರಿದ್ದಾರೆ.
ರಕ್ತ ಕುದಿಯುತ್ತಿದೆ ಎಂದು ಖುಷ್ಬೂ
ದಾಳಿಯ ಬಗ್ಗೆ ಮಾತನಾಡಿದ ಖುಷ್ಬೂ, ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಾ, "ನಮ್ಮ ಸೈನ್ಯವು ತುಂಬಾ ಉತ್ತಮವಾಗಿದೆ ಮತ್ತು ಅವರಿಗೆ ಉತ್ತಮ ತರಬೇತಿ ನೀಡಲಾಗಿದೆ. ಆದೇಶಗಳನ್ನು ಸ್ವೀಕರಿಸಲು ಒಬ್ಬರು ಸಿದ್ಧರಾಗಿರಬೇಕು. ಇದನ್ನು ಹಗುರವಾಗಿ ಪರಿಗಣಿಸಬಾರದು. ಉಗ್ರರು ಯಾವುದೇ ಧರ್ಮಕ್ಕೆ ಸೇರಿರಲು, ಸುಮ್ಮನೆ ಬಿಡಬಾರದು, ನನ್ನ ರಕ್ತ ಉರಿಯುತ್ತಿದೆ, ನನ್ನ ರಕ್ತ ಕುದಿಯುತ್ತಿದೆ" ಎಂದು ಹೇಳಿದರು.
ನಮ್ಮಲ್ಲಿ ಒಳ್ಳೆಯ ಪಡೆಗಳಿವೆ
"ಅವರು ಹಿಂದೂಗಳನ್ನು ಕೊಂದರು. ಇದು ಕೇವಲ ಭಯೋತ್ಪಾದಕ ದಾಳಿಯಲ್ಲ, ಪಾಕಿಸ್ತಾನಿ ಸೇನೆಯೂ ಇದರಲ್ಲಿ ಸಂಪೂರ್ಣವಾಗಿ ಭಾಗಿಯಾಗಿದೆ. ನಾವು ಪಾಕಿಸ್ತಾನಿ ಸೇನೆಯನ್ನು ಭಯೋತ್ಪಾದಕರು ಎಂದು ಕರೆಯಬೇಕು ಎಂದಿರುವ ಖುಷ್ಭೂ ಭಾರತೀಯ ಸೇನೆಯ ಮಾಜಿ ಮೇಜರ್ ಆಗಿ, ನಮ್ಮಲ್ಲಿ ಉತ್ತಮ ಪಡೆಗಳಿವೆ ಅನ್ನೋದನ್ನಂತೂ ನಾನು ಹೇಳ್ತೀನಿ ಎಂದು ಖುಷ್ಬೂ ಹೇಳಿದರು.
ಈಗ ಯುದ್ಧ ಮಾತ್ರ ಇರಬೇಕು
ಇದಲ್ಲದೆ ಭಾರತದಲ್ಲಿ ಈಗ 15 ಲಕ್ಷಕ್ಕೂ ಹೆಚ್ಚು ಸೈನಿಕರಿದ್ದಾರೆ. ಈಗ ಯುದ್ಧ ಆಗಬೇಕು. ಅದು ಯಾವ ಧರ್ಮ, ಯಾವ ಪುಸ್ತಕದಲ್ಲಿ ಮುಗ್ಧ ಜನರನ್ನು ಕೊಲ್ಲಬಹುದು ಎಂದು ಬರೆಯಲಾಗಿದೆ. ಎಲ್ಲಾ ಭಾರತೀಯರು ಭಯೋತ್ಪಾದನೆಯ ವಿರುದ್ಧ ಒಗ್ಗೂಡಬೇಕಾದ ಮತ್ತು ನಮ್ಮ ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತರಲು ಸರ್ಕಾರದ ನಿರ್ಧಾರಗಳನ್ನು ಪೂರ್ಣ ಹೃದಯದಿಂದ ಬೆಂಬಲಿಸಬೇಕಾದ ಸಮಯ ಇದು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದಿದ್ದಾರೆ ಖುಷ್ಭೂ.