MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • ನಿವೇಶನ ಅಥವಾ ಜಮೀನು ಖರೀದಿಸುವ ಮುನ್ನ ಈ 3 ವಾಸ್ತು ನಿಯಮ ನೆನಪಿಡಿ.. ನಿರ್ಲಕ್ಷಿಸಿದ್ರೆ ಪಶ್ಚಾತ್ತಾಪ ಪಡಬೇಕಾದೀತು!

ನಿವೇಶನ ಅಥವಾ ಜಮೀನು ಖರೀದಿಸುವ ಮುನ್ನ ಈ 3 ವಾಸ್ತು ನಿಯಮ ನೆನಪಿಡಿ.. ನಿರ್ಲಕ್ಷಿಸಿದ್ರೆ ಪಶ್ಚಾತ್ತಾಪ ಪಡಬೇಕಾದೀತು!

Vastu for buying land: ನಿಮ್ಮ ಕನಸಿನ ಮನೆ ಸುಖ-ಸಮೃದ್ಧಿಯ ಗೂಡಾಗಬೇಕೆಂದರೆ ನೀವು ಖರೀದಿಸುವ ಭೂಮಿ ವಾಸ್ತುಬದ್ಧವಾಗಿರಬೇಕು. ಭೂಮಿಯ ಇಳಿಜಾರು ಯಾವ ಕಡೆ ಇರಬೇಕು? ಎಂತಹ ಮಣ್ಣಿನ ಜಮೀನು ಶ್ರೇಷ್ಠ? ಇತ್ಯಾದಿ. ಅಂದಹಾಗೆ ಜಮೀನು ಖರೀದಿಸುವಾಗ ಪಾಲಿಸಬೇಕಾದ 3 ಮುಖ್ಯ ವಾಸ್ತು ಟಿಪ್ಸ್‌ಗಳು ಇಲ್ಲಿದೆ.

2 Min read
Author : Ashwini HR
Published : Jun 25 2026, 08:58 PM IST
Share this Photo Gallery
  • FB
  • TW
  • Linkdin
  • Whatsapp
14
ನೀವು ಗಮನಿಸಬೇಕಾದ ಆ 3 ಮುಖ್ಯ ವಿಷಯಗಳು
Image Credit : AI Image

ನೀವು ಗಮನಿಸಬೇಕಾದ ಆ 3 ಮುಖ್ಯ ವಿಷಯಗಳು

ನೀವು ಗಮನಿಸಬೇಕಾದ ಆ 3 ಮುಖ್ಯ ವಿಷಯಗಳು
ಪ್ರತಿಯೊಬ್ಬರಿಗೂ ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂಬ ಕನಸು ಇರುತ್ತದೆ. ಇದಕ್ಕಾಗಿ ನಿವೇಶನ ಅಥವಾ ಜಮೀನು ಖರೀದಿಸುವಾಗ ನಾವು ಹಣಕಾಸು ಮತ್ತು ದಾಖಲೆಗಳನ್ನು ಎಷ್ಟು ಜಾಗರೂಕತೆಯಿಂದ ಪರಿಶೀಲಿಸುತ್ತೇವೆಯೋ, ಅಷ್ಟೇ ಪ್ರಾಮುಖ್ಯತೆಯನ್ನು 'ವಾಸ್ತು ಶಾಸ್ತ್ರ'ಕ್ಕೂ ನೀಡಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಜಮೀನು ಖರೀದಿಸುವ ಮೊದಲು ಕೆಲವು ಪ್ರಮುಖ ನಿಯಮಗಳನ್ನು ಪಾಲಿಸದಿದ್ದರೆ, ನಂತರದ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಅಥವಾ ಮಾನಸಿಕ ನೆಮ್ಮದಿಗೆ ಭಂಗ ಉಂಟಾಗಬಹುದು. ಭೂಮಿ ಖರೀದಿಸುವಾಗ ನೀವು ಗಮನಿಸಬೇಕಾದ ಆ 3 ಮುಖ್ಯ ವಿಷಯಗಳು ಇಲ್ಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
1. ಭೂಮಿಯ ಆಕಾರ
Image Credit : AI Image

1. ಭೂಮಿಯ ಆಕಾರ

1. ಭೂಮಿಯ ಆಕಾರ
ವಾಸ್ತು ಶಾಸ್ತ್ರದ ಪ್ರಕಾರ, ಮನೆ ಕಟ್ಟಲು ಯಾವಾಗಲೂ 'ಸಿಂಹಮುಖಿ' ಜಮೀನನ್ನು ಖರೀದಿಸಬಾರದು. ಸಿಂಹಮುಖಿ ಎಂದರೆ ಮುಂಭಾಗ ಅಗಲವಾಗಿದ್ದು, ಹಿಂಭಾಗಕ್ಕೆ ಹೋದಂತೆ ಕಿರಿದಾಗುವ ಜಮೀನು. ಇಂತಹ ಜಮೀನಿನಲ್ಲಿ ಮನೆ ಕಟ್ಟಿದರೆ ಕೌಟುಂಬಿಕ ಜೀವನದಲ್ಲಿ ಕಲಹಗಳು ಉಂಟಾಗಬಹುದು ಮತ್ತು ಮಾನಸಿಕ ಒತ್ತಡ ಎದುರಿಸಬೇಕಾಗಬಹುದು. ಮನೆ ಕಟ್ಟಲು ಯಾವಾಗಲೂ 'ಗೋಮುಖಿ' ನಿವೇಶನ ಅತ್ಯಂತ ಶುಭ. ಗೋಮುಖಿ ಎಂದರೆ ಮುಂಭಾಗ ಕಿರಿದಾಗಿದ್ದು, ಹಿಂಭಾಗಕ್ಕೆ ಹೋದಂತೆ ಅಗಲವಾಗುವ ಜಮೀನು. ಇದು ಮನೆಗೆ ಶಾಂತಿ ಮತ್ತು ಸಮೃದ್ಧಿ ತರುತ್ತದೆ.

Related Articles

Related image1
Vastu Tips: ಮನೆಯ ಮುಖ್ಯ ದ್ವಾರಕ್ಕೆ ನೀರು ಚಿಮುಕಿಸುವುದರಿಂದ ಇಷ್ಟೆಲ್ಲಾ ಲಾಭ ಇದ್ಯಾ?
Related image2
Vastu Tips: ಜಿರಲೆಗೂ ನಿಮ್ಮ ಮನೆಗೆ ಬರುವ ಹಣಕ್ಕೂ ಒಂದು ರಹಸ್ಯ ಸಂಬಂಧವಿದೆ ಅಂದ್ರೆ ನಂಬ್ತೀರಾ?
34
2. ಭೂಮಿಯ ಇಳಿಜಾರು
Image Credit : AI Image

2. ಭೂಮಿಯ ಇಳಿಜಾರು

2. ಭೂಮಿಯ ಇಳಿಜಾರು
ನಿವೇಶನ ಖರೀದಿಸುವಾಗ ಅದರ ಇಳಿಜಾರು ಯಾವ ದಿಕ್ಕಿನಲ್ಲಿದೆ ಎಂಬುದು ಬಹಳ ಮುಖ್ಯ. ಜಮೀನಿನ ಇಳಿಜಾರು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನ ಕಡೆಗೆ ಇರಬಾರದು. ಈ ದಿಕ್ಕುಗಳಲ್ಲಿ ಇಳಿಜಾರು ಇದ್ದರೆ ಹಣದ ನಷ್ಟ ಅಥವಾ ಆರ್ಥಿಕ ಅಭಿವೃದ್ಧಿ ಕುಂಠಿತವಾಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಬದಲಾಗಿ, ಉತ್ತರ ಅಥವಾ ಪೂರ್ವ ದಿಕ್ಕಿನ ಕಡೆಗೆ ಇಳಿಜಾರು ಇರುವ ಜಮೀನು ಅತ್ಯಂತ ಶ್ರೇಷ್ಠ. ಇದು ಮನೆಗೆ ಸುಖ-ಸಮೃದ್ಧಿ ಮತ್ತು ಧನಲಾಭವನ್ನು ತರುತ್ತದೆ.

44
3. ಮಣ್ಣಿನ ವಿಧ ಮತ್ತು ಬಣ್ಣ
Image Credit : AI Image

3. ಮಣ್ಣಿನ ವಿಧ ಮತ್ತು ಬಣ್ಣ

3. ಮಣ್ಣಿನ ವಿಧ ಮತ್ತು ಬಣ್ಣ
ಜಮೀನು ಖರೀದಿಸುವ ಮುನ್ನ ಅಲ್ಲಿನ ಮಣ್ಣು ಎಂತಹದ್ದು ಎಂಬುದನ್ನು ಗಮನಿಸಬೇಕು. ಭೂಮಿಯನ್ನು ಅಗೆದಾಗ ಮಣ್ಣು ಕೆಂಪು ಅಥವಾ ಹಳದಿ ಬಣ್ಣದಲ್ಲಿದ್ದರೆ ಅದು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಇಂತಹ ಮಣ್ಣಿನ ಭೂಮಿಯಲ್ಲಿ ಮನೆ ಕಟ್ಟುವುದರಿಂದ ಮನೆಯವರಿಗೆ ಲಾಭ ಮತ್ತು ಯಶಸ್ಸು ಸಿಗುತ್ತದೆ. ಮಣ್ಣು ಕಪ್ಪು ಅಥವಾ ದುರ್ವಾಸನೆಯಿಂದ ಕೂಡಿದ್ದರೆ ಅಂತಹ ಜಮೀನನ್ನು ಆದಷ್ಟು ತಪ್ಪಿಸುವುದು ಉತ್ತಮ. ನಿಮ್ಮ ಕನಸಿನ ಮನೆ ನೆಮ್ಮದಿಯ ಗೂಡಾಗಬೇಕೆಂದರೆ, ಜಮೀನು ಖರೀದಿಸುವ ಹಂತದಲ್ಲಿಯೇ ಈ ಸಣ್ಣ ಬದಲಾವಣೆಗಳು ಅಥವಾ ಜಾಗರೂಕತೆ ವಹಿಸುವುದು ಬಹಳ ಮುಖ್ಯ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ವಾಸ್ತು ಸಲಹೆಗಳು
ಜ್ಯೋತಿಷ್ಯ
ಹಬ್ಬ

Latest Videos
Recommended Stories
Recommended image1
ಅಡುಗೆ ಮನೆಯ ಈ ಜಾಗದಲ್ಲಿ ಬೇಳೆಕಾಳಿಟ್ರೆ ಎಂದೂ ಕಾಡಲ್ಲ ಆಹಾರ ಸಮಸ್ಯೆ
Recommended image2
ಬೇರೆಯವರ ಮನೆಯಿಂದ ತಂದ ಮನಿ ಪ್ಲಾಂಟ್ ನೆಡ್ತೀರಾ? ವಾಸ್ತು ಪ್ರಕಾರ ಇದು ಶುಭನಾ? ಅಶುಭನಾ?
Recommended image3
ಅಪ್ಪಿ ತಪ್ಪಿ ಟೆರೇಸ್ ಮೇಲೆ ಈ 4 ಗಿಡಗಳನ್ನು ಇಡ್ಬೇಡಿ
Related Stories
Recommended image1
Vastu Tips: ಮನೆಯ ಮುಖ್ಯ ದ್ವಾರಕ್ಕೆ ನೀರು ಚಿಮುಕಿಸುವುದರಿಂದ ಇಷ್ಟೆಲ್ಲಾ ಲಾಭ ಇದ್ಯಾ?
Recommended image2
Vastu Tips: ಜಿರಲೆಗೂ ನಿಮ್ಮ ಮನೆಗೆ ಬರುವ ಹಣಕ್ಕೂ ಒಂದು ರಹಸ್ಯ ಸಂಬಂಧವಿದೆ ಅಂದ್ರೆ ನಂಬ್ತೀರಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved