MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Lakshmi Nivasa: ಮಂತ್ರಕ್ಕೆ ತಿರುಮಂತ್ರ ಹಾಕಿದ ವಿಶ್ವ: ಥಂಡಾ ಹೊಡೆದ ಸೈಕೋ ಜಯಂತ್!

Lakshmi Nivasa: ಮಂತ್ರಕ್ಕೆ ತಿರುಮಂತ್ರ ಹಾಕಿದ ವಿಶ್ವ: ಥಂಡಾ ಹೊಡೆದ ಸೈಕೋ ಜಯಂತ್!

ಜಾಹ್ನವಿಗಾಗಿ ಚೆಲುವಿ ಮತ್ತು ವೆಂಕಿಯನ್ನು ಅಪಹರಿಸಿದ ಸೈಕೋ ಜಯಂತ್‌ಗೆ ವಿಶ್ವ ತಿರುಮಂತ್ರ ಹಾಕಿದ್ದಾನೆ. ಜಯಂತ್‌ನ ಪ್ರೀತಿಯ ಜಾಹ್ನವಿಯನ್ನೇ ಅಸ್ತ್ರವಾಗಿಸಿಕೊಂಡು, ಚೆಲುವಿ-ವೆಂಕಿಯನ್ನು ಸುರಕ್ಷಿತವಾಗಿ ಬಿಡಿಸುವಂತೆ ವಿಶ್ವ ಬೆದರಿಕೆ ಹಾಕಿದ್ದು, ಜಯಂತ್‌ನ ಕನಸು ಭಗ್ನಗೊಂಡಿದೆ.

1 Min read
Author : Mahmad Rafik
Published : Jan 06 2026, 08:12 AM IST
Share this Photo Gallery
  • FB
  • TW
  • Linkdin
  • Whatsapp
15
ಜಯಂತ್ ತಂತ್ರಕ್ಕೆ ವಿಶ್ವ ತಿರುಮಂತ್ರ
Image Credit : Zee Kannada

ಜಯಂತ್ ತಂತ್ರಕ್ಕೆ ವಿಶ್ವ ತಿರುಮಂತ್ರ

ಜೀ ಕನ್ನಡ ವಾಹಿನಿಯ ಕಥಾ ಸಂಗಮ ಲಕ್ಷ್ಮೀ ನಿವಾಸ ಸೀರಿಯಲ್ ನೋಡುಗರನ್ನು ಮತ್ತೆ ಸೆಳೆಯುತ್ತಿದೆ. ಪ್ರೀತಿಯ ಚಿನ್ನುಮರಿ ಜಾಹ್ನವಿಯನ್ನು ಪಡೆದುಕೊಳ್ಳಲು ಸೈಕೋ ಜಯಂತ್ ಮನೆಗೆ ಮುಗ್ಧರಾದ ಚೆಲುವಿ ಮತ್ತು ವೆಂಕಿಯನ್ನು ಕರೆದುಕೊಂಡು ಬಂದಿದ್ದಾನೆ. ಇದೀಗ ಸೈಕೋ ಜಯಂತ್ ತಂತ್ರಕ್ಕೆ ವಿಶ್ವ ತಿರುಮಂತ್ರ ಹಾಕಿದ್ದಾನೆ.

25
ಜಯಂತ್‌ನಿಂದ ಬ್ಲಾಕ್‌ಮೇಲ್
Image Credit : Zee Kannada

ಜಯಂತ್‌ನಿಂದ ಬ್ಲಾಕ್‌ಮೇಲ್

ಹೌದು, ಚೆಲುವಿ ಮತ್ತು ವೆಂಕಿಯ ಜೀವ ಉಳಿಯಬೇಕಾದ್ರೆ ಚಿನ್ನುಮರಿಯನ್ನು ಕರೆದುಕೊಂಡು ಬರುವಂತೆ ಜಯಂತ್ ಬ್ಲಾಕ್‌ಮೇಲ್ ಮಾಡಿದ್ದನು. ವಿಶ್ವ ಮತ್ತು ಜಯಂತ್ ನಡುವಿನ ಸಂಭಾಷಣೆಯನ್ನು ಕೇಳಿಸಿಕೊಂಡ ಜಾನು ಸಹ ಶಾಕ್ ಆಗಿದ್ದಳು. ಇಷ್ಟು ಮಾತ್ರವಲ್ಲ ನಾಳೆ ನಮ್ಮ ಮನೆಗೆ ಜಾನು ಅವರ ಅಪ್ಪ-ಅಮ್ಮ ಬರ್ತಿದ್ದಾರೆ ಎಂದು ಹೇಳಿ ಭಯ ಹುಟ್ಟಿಸಿದ್ದನು.

Related Articles

Related image1
Disha Madan: ಲಕ್ಷ್ಮೀ ನಿವಾಸದ ಅಳುಮುಂಜಿ ಭಾವನಾ... ರೆಡ್ ಡ್ರೆಸಲ್ಲಿ ಸಖತ್ ಹಾಟ್
Related image2
ವೀಕ್ಷಕರ ಎಲ್ಲಾ ನಿರೀಕ್ಷೆಗಳನ್ನು ಸುಳ್ಳು ಮಾಡಿದ ಲಕ್ಷ್ಮೀ ನಿವಾಸ ಸೀರಿಯಲ್ ನಿರ್ದೇಶಕರು
35
ಮಂತ್ರಕ್ಕೆ ತಿರುಮಂತ್ರ
Image Credit : Zee Kannada

ಮಂತ್ರಕ್ಕೆ ತಿರುಮಂತ್ರ

ಶಾಂತಮ್ಮ ಸಹ ಕಾಲ್ ಮಾಡಿ ಜಯಂತ್ ವರ್ತನೆ ನೋಡಿದ್ರೆ ನನಗೆ ಭಯ ಆಗ್ತಿದೆ. ಹೇಗಾದ್ರು ಮಾಡಿ ವೆಂಕಿ-ಚೆಲುವಿಯನ್ನು ಕಾಪಾಡು ಎಂದು ಶಾಂತಮ್ಮ ಮನವಿ ಮಾಡಿದ್ದಳು. ಈಗ ಸೈಕೋ ಜಯಂತ್ ರೀತಿಯಲ್ಲಿ ವಿಶ್ವ ಪ್ಲಾನ್ ಮಾಡಿ ತಿರುಮಂತ್ರ ಹಾಕಿದ್ದಾನೆ.

45
ವಿಶ್ವನ ಪ್ಲಾನ್ ಏನು?
Image Credit : Zee Kannada

ವಿಶ್ವನ ಪ್ಲಾನ್ ಏನು?

ಜಾಹ್ನವಿಯನ್ನು ಕಟ್ಟಿ ಹಾಕಿ ಜಯಂತ್‌ಗೆ ವಿಡಿಯೋ ಕಾಲ್ ಮಾಡಿರುವ ವಿಶ್ವ, ವೆಂಕಿ-ಚೆಲುವಿಯನ್ನು ಸುರಕ್ಷಿತವಾಗಿ ಕಳುಹಿಸು ಎಂದು ಹೇಳಿದ್ದಾನೆ. ಒಂದು ವೇಳೆ ಅವರಿಗೆ ಏನಾದ್ರು ಆದ್ರೆ ಎಂದು ಹೇಳಿ ಜಾಹ್ನವಿ ಕತ್ತಿಗೆ ಚಾಕು ಇರಿಸಿ ಬೆದರಿಕೆ ಹಾಕುತ್ತಿದ್ದಾನೆ. ತನ್ನ ಪ್ರೀತಿಯ ಮಡದಿಯನ್ನು ಆ ಸ್ಥಿತಿಯಲ್ಲಿ ನೋಡಿ ಜಯಂತ್ ಶಾಕ್ ಆಗಿದ್ದಾನೆ.

ಇದನ್ನೂ ಓದಿ: BBK 12: ಕ್ಷಣ ಮಾತ್ರದಲ್ಲಿಯೇ ಮಾತು ಬದಲಿಸಿದ ರಾಶಿಕಾ: ಬಿಗ್‌ಬಾಸ್ ಇದು ರಕ್ಷಿತಾಗೆ ಅನ್ಯಾಯ ಎಂದ ವೀಕ್ಷಕರು?

55
ಜಯಂತ್ ಕನಸು ಭಗ್ನ!
Image Credit : Zee Kannada

ಜಯಂತ್ ಕನಸು ಭಗ್ನ!

ಜಾಹ್ನವಿಯನ್ನು ಕಷ್ಟದ ಸ್ಥಿತಿಯಲ್ಲಿ ನೋಡಿದ ಜಯಂತ್, ದಯವಿಟ್ಟು ನನ್ನ ಪ್ರೀತಿಯ ಚಿನ್ನುಮರಿಗೆ ಏನು ಮಾಡಬೇಡ. ಚೆಲುವಿ ಮತ್ತು ವೆಂಕಿಯನ್ನು ಸುರಕ್ಷಿತವಾಗಿ ಕಳುಹಿಸಬೇಕು ಅಲ್ಲವಾ ಎಂದು ವಿಶ್ವನ ಮಾತಿಗೆ ಜಯಂತ್ ಒಪ್ಪಿಕೊಳ್ಳುತ್ತಾನೆ. ಇದೀಗ ಮತ್ತೊಮ್ಮೆ ಜಾಹ್ನವಿಯನ್ನು ನೋಡುವ ಜಯಂತ್ ಕನಸು ಭಗ್ನವಾಗಿದೆ.

ಇದನ್ನೂ ಓದಿ: BBK 12: ಫಿನಾಲೆ ಟಿಕೆಟ್‌ಗಾಗಿ ಮೊದಲ ಹಣಾಹಣಿ; ಗಿಲ್ಲಿಗೆ ಮಣ್ಣು ಮುಕ್ಕಿಸಿದ ಧ್ರುವಂತ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಲಕ್ಷ್ಮೀ ನಿವಾಸ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
BBK 12: ಫಿನಾಲೆ ಟಿಕೆಟ್‌ಗಾಗಿ ಮೊದಲ ಹಣಾಹಣಿ; ಗಿಲ್ಲಿಗೆ ಮಣ್ಣು ಮುಕ್ಕಿಸಿದ ಧ್ರುವಂತ್
Recommended image2
BBK 12: ಕ್ಷಣ ಮಾತ್ರದಲ್ಲಿಯೇ ಮಾತು ಬದಲಿಸಿದ ರಾಶಿಕಾ: ಬಿಗ್‌ಬಾಸ್ ಇದು ರಕ್ಷಿತಾಗೆ ಅನ್ಯಾಯ ಎಂದ ವೀಕ್ಷಕರು?
Recommended image3
ನಿಸರ್ಗದ ಮಡಿಲಿನಲ್ಲಿ ಅನುಶ್ರೀ…ಗಂಡನ ಜೊತೆ ಕ್ಯಾತನಮಕ್ಕಿ ಟ್ರೆಕ್ಕಿಂಗ್
Related Stories
Recommended image1
Disha Madan: ಲಕ್ಷ್ಮೀ ನಿವಾಸದ ಅಳುಮುಂಜಿ ಭಾವನಾ... ರೆಡ್ ಡ್ರೆಸಲ್ಲಿ ಸಖತ್ ಹಾಟ್
Recommended image2
ವೀಕ್ಷಕರ ಎಲ್ಲಾ ನಿರೀಕ್ಷೆಗಳನ್ನು ಸುಳ್ಳು ಮಾಡಿದ ಲಕ್ಷ್ಮೀ ನಿವಾಸ ಸೀರಿಯಲ್ ನಿರ್ದೇಶಕರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved