MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Lakshmi Nivasa: ಕಲಿಯುಗ ಸಿನಿಮಾದ ರಾಜೇಶ್‌ ರಂತೆ ಸಾಧನೆ ಮಾಡ್ತಾರಾ ಶ್ರೀನಿವಾಸ್?

Lakshmi Nivasa: ಕಲಿಯುಗ ಸಿನಿಮಾದ ರಾಜೇಶ್‌ ರಂತೆ ಸಾಧನೆ ಮಾಡ್ತಾರಾ ಶ್ರೀನಿವಾಸ್?

ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯು 1984ರ 'ಕಲಿಯುಗ' ಸಿನಿಮಾದ ಕಥಾಹಂದರವನ್ನು ಹೋಲುತ್ತಿದೆ. ಈ ಸಿನಿಮಾದಲ್ಲಿ ಹಿರಿಯ ನಟ ರಾಜೇಶ್, ಸುಂದರ್ ರಾಜ್, ಬಾಲಕೃಷ್ಣ, ದಿನೇಶ್ ಮತ್ತು ನಟಿ ಆರತಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.

2 Min read
Author : Mahmad Rafik
Published : Jul 25 2026, 02:48 PM IST
Share this Photo Gallery
  • FB
  • TW
  • Linkdin
  • Whatsapp
15
ಲಕ್ಷ್ಮೀ ನಿವಾಸ ಸೀರಿಯಲ್
Image Credit : Zee Kananda

ಲಕ್ಷ್ಮೀ ನಿವಾಸ ಸೀರಿಯಲ್

ದೀರ್ಘಕಾಲ ಪ್ರಸಾರವಾಗುವ ಧಾರಾವಾಹಿಗಳಲ್ಲಿ ಕೆಲವೊಮ್ಮೆ ಯಾವುದೋ ಸಿನಿಮಾದ ಝಲಕ್ ಕಾಣಿಸಿಕೊಳ್ಳುತ್ತದೆ. ಇಂತಹ ದೃಶ್ಯಗಳು ಸೀರಿಯಲ್ ವೀಕ್ಷಕರು ಬಹುಬೇಗ ಪತ್ತೆ ಮಾಡುತ್ತಾರೆ. ಇದೀಗ ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಕನ್ನಡದ 'ಕಲಿಯುಗ' ಸಿನಿಮಾದ ನೆರಳು ಕಾಣಿಸಿಕೊಂಡಿದೆ. 1984ರಲ್ಲಿ ಬಿಡುಗಡೆಯಾದ ಕಲಿಯುಗ ಸಿನಿಮಾದಲ್ಲಿ ಹಿರಿಯ ನಟ ರಾಜೇಶ್, ಸುಂದರ್ ರಾಜ್, ಬಾಲಕೃಷ್ಣ, ದಿನೇಶ್ ಮತ್ತು ನಟಿ ಆರತಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಕಲಿಯುಗ ಸಿನಿಮಾದ ಕಥೆ ಏನು?
Image Credit : Zee Kananda

ಕಲಿಯುಗ ಸಿನಿಮಾದ ಕಥೆ ಏನು?

ಮೆಕ್ಯಾನಿಕ್ ಆಗಿರುವ ನಾಯಕ ನಟ, ಕಾರ್ ರಿಪೇರಿ ವೇಳೆ ಕೈ ಕಳೆದುಕೊಳ್ಳುತ್ತಾನೆ. ವಿಮೆ ಹಣವನ್ನೆಲ್ಲಾ ಮಕ್ಕಳಿಗೆ ಹಂಚಿ, ಅವರಿಂದಲೇ ಮನೆಯಿಂದ ದೂರವಾಗುತ್ತಾನೆ. ಸ್ವಂತ ಮಕ್ಕಳು ದೂರ ಮಾಡಿದ ಬಳಿಕ ಸಾಕು ಮಗ ಮತ್ತು ಹೆಂಡ್ತಿಯೊಂದಿಗೆ ಹೊಸ ಜೀವನ ಆರಂಭಿಸುತ್ತಾನೆ. ನಂತರ ಸಣ್ಣದಾದ ಗ್ಯಾರೇಜ್ ಆರಂಭಿಸಿ, ಕಡಿಮೆ ಪೆಟ್ರೋಲ್ ಬಳಕೆ ಮಾಡುವ ಇಂಜಿನ್ ಕಂಡು ಹಿಡಿದು ಉನ್ನತ ಸ್ಥಾನಕ್ಕೇರುತ್ತಾನೆ. ತಂದೆಯನ್ನು ದೂರ ಮಾಡಿದ ಮಕ್ಕಳು ಸಾಲದ ಶೂಲದಲ್ಲಿ ಸಿಲುಕಿ ಮತ್ತೆ ತಂದೆಯನ್ನು ಆಶ್ರಯಿಸುತ್ತಾರೆ.

Related Articles

Related image1
Actress Roopika Marriage: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ರೂಪಿಕಾ ಲಗ್ನಪತ್ರಿಕೆ ಶಾಸ್ತ್ರ ಆಯ್ತು!
Related image2
ಸಂತೋಷ್ ಹಣೆಗೆ ಗನ್ ಹಿಡಿದ ಜಯಂತ್…. ಇದು ‘ಲಕ್ಷ್ಮೀ ನಿವಾಸ’ ಮುಕ್ತಾಯದ ಸೂಚನೆಯೆ?
35
ಇಲ್ಲಿಯೂ ಸಾಕು ಮಗ
Image Credit : Zee Kananda

ಇಲ್ಲಿಯೂ ಸಾಕು ಮಗ

ಸ್ವಂತ ಗಂಡು ಮಕ್ಕಳು ದೂರ ಮಾಡಿದರೂ ಸಾಕು ಮಗ ವೆಂಕಿ ಒಬ್ಬನೇ ಲಕ್ಷ್ಮೀ ಮತ್ತು ಶ್ರೀನಿವಾಸ್‌ಗೆ ಜೊತೆಯಾಗಿದ್ದಾನೆ. ಬಂದಂತಹ ಎಲ್ಲಾ ಕಷ್ಟಗಳನ್ನು ಎದುರಿಸಿರುವ ಶ್ರೀನಿವಾಸ್ ದೊಡ್ಡಮಟ್ಟದಲ್ಲಿ ತನ್ನದೇ ಸ್ವಂತ ಗ್ಯಾರೇಜ್ ಆರಂಭಿಸಿದ್ದಾನೆ. ಇತ್ತೀಚಿನ ಸಂಚಿಕೆಯಲ್ಲಿ ಶ್ರೀನಿವಾಸ್ ಮತ್ತು ಲಕ್ಷ್ಮೀ ನಡುವಿನ ಸಂಭಾಷಣೆ ಸೀರಿಯಲ್ ಕಥೆ ಮುಂದೆ ಕಲಿಯುಗ ಸಿನಿಮಾದಂತೆ ತಿರುವು ಪಡೆದುಕೊಳ್ಳುವ ಸುಳಿವು ನೀಡಿದೆ.

45
ಶ್ರೀನಿವಾಸ್ ಮಾತು
Image Credit : Zee Kananda

ಶ್ರೀನಿವಾಸ್ ಮಾತು

ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ. ಯಾರಾದ್ರು ಕಡಿಮೆ ಇಂಧನ ಬಳಸಿಕೊಂಡು ಹೆಚ್ಚು ಮೈಲೇಜ್ ನೀಡುವ ಇಂಜಿನ್ ಕಂಡು ಹಿಡಿದಿದ್ರೆ ಬಡವರಿಗೆ ಎಷ್ಟು ಅನುಕೂಲ ಆಗುತ್ತಿತ್ತು ಅಲ್ಲವಾ ಎಂದು ಪತ್ನಿ ಲಕ್ಷ್ಮೀಗೆ ಶ್ರೀನಿವಾಸ್ ಹೇಳುತ್ತಾನೆ. ಇದೇ ವೇಳೆ ತಾನೇ ಏನಾದ್ರೂ ಪರಿಹಾರ ಕಂಡು ಹಿಡಿಯಬೇಕು ಎಂಬ ಶ್ರೀನಿವಾಸ್ ಮಾತುಗಳನ್ನು ಕೇಳಿದ ವೀಕ್ಷಕರು, ಇದು ಕಲಿಯುಗ ಸಿನಿಮಾದ ಕಥೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

55
ಜಯಂತ್ ಪ್ರೀತಿ ತೊರೆದ ಚಿನ್ನುಮರಿ
Image Credit : Zee Kananda

ಜಯಂತ್ ಪ್ರೀತಿ ತೊರೆದ ಚಿನ್ನುಮರಿ

ಇನ್ನು ಮತ್ತೊಂದೆಡೆ ಜಯಂತ್ ಪ್ರೀತಿಯನ್ನು ತೊರೆದಿರುವ ಚಿನ್ನುಮರಿ ಮಾಂಗಲ್ಯ ಕಳಚಿ ಗಂಡನ ಕೈಗೆ ನೀಡಿದ್ದಾಳೆ. ಇದರ ಜೊತೆಯಲ್ಲಿ ಗಂಡ ಜಯಂತ್‌ ಓರ್ವ ಸೈಕೋ, ಅಜ್ಜಿ ಅನಾರೋಗ್ಯ ಮತ್ತು ತನ್ನ ಗರ್ಭಪಾತಕ್ಕೂ ಜಯಂತ್ ಕಾರಣ ಎಂದು ಚಿನ್ನುಮರಿ ಎಲ್ಲರ ಮುಂದೆ ಹೇಳಿದ್ದಾಳೆ. ಆದ್ರೆ ಇದು ನಿಜವಾಗಿಯೂ ನಡೆದಿದೆಯಾ ಅಥವಾ ಯಾರಾದ್ರೂ ಕನಸು ಕಂಡಿದ್ದಾರಾ ಎಂಬುದರ ಬಗ್ಗೆ ವೀಕ್ಷಕರಲ್ಲಿ ಅನುಮಾನವಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಧಾರಾವಾಹಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Recommended image1
ಕನ್ನಡದ ಕಲ್ಟ್ ಸಿನಿಮಾ ಮನೆಯಲ್ಲೇ ಕುಳಿತು 'ಟಿವಿ'ಯಲ್ಲಿ ನೋಡಿ, ಎಲ್ಲಿ, ಎಷ್ಟು ಗಂಟೆಗೆ? ಈ ಸ್ಟೋರಿ ನೋಡಿ..
Recommended image2
Amruthadhaare: ಶಕುಂತಲಾಗೆ ಒಳಗೊಳಗೆ ತೊಳಲಾಟ; ಜೈದೇವ್‌ ಬೆನ್ನ ಹಿಂದೆಯೇ ಆಪತ್ತು
Recommended image3
Annayya Serial: ಅಳಿಯನ ಮುಂದೆ ಸೋತ ಮಾವ! ಮಾರಿಗುಡಿಗೆ ಈಗ ಶಿವುನೇ ‘ಜನನಾಯಕ’
Related Stories
Recommended image1
Actress Roopika Marriage: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ರೂಪಿಕಾ ಲಗ್ನಪತ್ರಿಕೆ ಶಾಸ್ತ್ರ ಆಯ್ತು!
Recommended image2
ಸಂತೋಷ್ ಹಣೆಗೆ ಗನ್ ಹಿಡಿದ ಜಯಂತ್…. ಇದು ‘ಲಕ್ಷ್ಮೀ ನಿವಾಸ’ ಮುಕ್ತಾಯದ ಸೂಚನೆಯೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved