MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ZEE Kannada ಹೊಸ ಸೀರಿಯಲ್ಸ್​​ ಕೃಷ್ಣ ರುಕ್ಕು, ಜಗದ್ಧಾತ್ರಿ ಶೀಘ್ರದಲ್ಲಿ: ಯಾವ ಧಾರಾವಾಹಿಗಳ ಅಂತ್ಯ?

ZEE Kannada ಹೊಸ ಸೀರಿಯಲ್ಸ್​​ ಕೃಷ್ಣ ರುಕ್ಕು, ಜಗದ್ಧಾತ್ರಿ ಶೀಘ್ರದಲ್ಲಿ: ಯಾವ ಧಾರಾವಾಹಿಗಳ ಅಂತ್ಯ?

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದ್ದು, 'ಕೃಷ್ಣ ರುಕ್ಕು' ಮತ್ತು 'ಜಗದ್ಧಾತ್ರಿ' ಎಂಬ ಹೊಸ ಸೀರಿಯಲ್‌ಗಳು ಬರಲಿವೆ. ಇದರಿಂದಾಗಿ, 'ಅಮೃತಧಾರೆ' ಅಥವಾ 'ಬ್ರಹ್ಮಗಂಟು' ಧಾರಾವಾಹಿ ಅಥವಾ ಬೇರೆ ಸೀರಿಯಲ್​ ಯಾವುದು ಅಂತ್ಯವಾಗಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.  

1 Min read
Author : Suchethana D
Published : Feb 04 2026, 05:11 PM IST
Share this Photo Gallery
  • FB
  • TW
  • Linkdin
  • Whatsapp
16
ಪುಟ್ಟಕ್ಕನ ಮಕ್ಕಳು ಅಂತ್ಯ
Image Credit : Instagram

ಪುಟ್ಟಕ್ಕನ ಮಕ್ಕಳು ಅಂತ್ಯ

ಜೀ ಕನ್ನಡ ಸೀರಿಯಲ್​ ವೀಕ್ಷಕರಿಗೆ ತಿಳಿದಿರುವಂತೆ ಪುಟ್ಟಕ್ಕನ ಮಕ್ಕಳು ಸೀರಿಯಲ್​ ಶೀಘ್ರದಲ್ಲಿ ಅಂತ್ಯ ಕಾಣಲಿದೆ. ಇದಾಗಲೇ ಇದರ ಶೂಟಿಂಗ್​ ಮುಗಿದಿದೆ. ಆದರೆ ಇದರ ಬೆನ್ನಲ್ಲೇ ಇನ್ನೊಂದು ಧಾರಾವಾಹಿ ಕೂಡ ಮುಕ್ತಾಯ ಆಗಲಿದೆ.

26
ಹೊಸ ಸೀರಿಯಲ್ಸ್​ ಪ್ರೊಮೋ
Image Credit : Instagram

ಹೊಸ ಸೀರಿಯಲ್ಸ್​ ಪ್ರೊಮೋ

ಇದಾಗಲೇ ಎರಡು ಹೊಸ ಸೀರಿಯಲ್​ಗಳ ಪ್ರೊಮೋ ಅನ್ನು ವಾಹಿನಿ ಬಿಡುಗಡೆ ಮಾಡಿದೆ. ಒಂದು ಕೃಷ್ಣ ರುಕ್ಕು ಹಾಗೂ ಇನ್ನೊಂದು ಜಗದ್ಧಾತ್ರಿ. ಇವೆರಡೂ ಸೀರಿಯಲ್​​ಗಳ ಪ್ರೊಮೋ ನೋಡಿದ ಮೇಲೆ ವೀಕ್ಷಕರು ಯಾವ ಧಾರಾವಾಹಿಗಳ ಅಂತ್ಯವಾಗುತ್ತೆ ಎನ್ನುವ ಕನ್​ಫ್ಯುಷನ್​ನಲ್ಲಿ ಇದ್ದಾರೆ.

Related Articles

Related image1
ಕಾಳಿಯಾಗಿ ಬದಲಾದ Karna Serial ನಿತ್ಯಾ! ಭಯಂಕರ ಗೆಟಪ್​ನಲ್ಲಿ ನಟಿ ನಮ್ರತಾ ಗೌಡ
Related image2
Karna Serial: ಅವಿವಾಹಿತ ಕಿರಣ್​ ರಾಜ್​ ಸಕ್ಸಸ್​ ಹಿಂದಿರೋದು ಇಬ್ಬಿಬ್ಬರು ಸುಂದರಿಯರು! ಕೊನೆಗೂ ಸೀಕ್ರೆಟ್​ ರಿವೀಲ್​
36
ಅಮೃತಧಾರೆ ಮತ್ತು ಬ್ರಹ್ಮಗಂಟು
Image Credit : Instagram

ಅಮೃತಧಾರೆ ಮತ್ತು ಬ್ರಹ್ಮಗಂಟು

ಇದಾಗಲೇ ಅಮೃತಧಾರೆ ಮತ್ತು ಬ್ರಹ್ಮಗಂಟು ಎರಡೂ ಸೀರಿಯಲ್​ಗಳು ಬಹುತೇಕ ಕ್ಲೈಮ್ಯಾಕ್ಸ್​ ಹಂತದಲ್ಲಿವೆ. ಬ್ರಹ್ಮಗಂಟುವಿನಲ್ಲಿ ಚಿರು ಮತ್ತು ದೀಪಾ ಒಂದಾಗಿಯಾಗಿದೆ. ಸೌಂದರ್ಯಳ ರಹಸ್ಯ ಮಾವನಿಗೂ ತಿಳಿದಿದೆ. ಅದು ಎಲ್ಲರಿಗೂ ತಿಳಿಯುವುದು ಬಾಕಿ ಇದೆ.

46
ಬ್ರಹ್ಮಗಂಟು ಮುಗಿಯಬಹುದಾ?
Image Credit : zee kannada

ಬ್ರಹ್ಮಗಂಟು ಮುಗಿಯಬಹುದಾ?

ಹಾಗೆಂದು ಇದು ಇಷ್ಟು ಬೇಗ ಮುಕ್ತಾಯ ಆಗುತ್ತದೆ ಎಂದು ಹೇಳಲೂ ಆಗದು. ಅರ್ಚನಾ ಮತ್ತು ರಾಹುಲ್​ ವಿಷ್ಯ ಇನ್ನೂ ಕಗ್ಗಂಟಾಗಿದೆ. ರಾಹುಲ್​ ಒಬ್ಬ ಬಾಲಕನನ್ನು ಸಾಕುತ್ತಿದ್ದು, ಆತ ಇವನನ್ನು ಅಪ್ಪ ಎಂದು ಏಕೆ ಹೇಳುತ್ತಾನೆ ಎನ್ನುವುದು ತಿಳಿಯಬೇಕಿದೆ. ಆತನೇ ಸೌಂದರ್ಯಳ ಮಗನಾ ಎನ್ನುವುದೂ ಗೊತ್ತಾಗಬೇಕಿದೆ. ನರಸಿಂಹ ದಂಪತಿಯ ವಿರಸವೂ ಅಂತ್ಯಗೊಳ್ಳಬೇಕಿದೆ. ಸೌಂದರ್ಯಳ ಕಟುಸತ್ಯ ಮಾವನಿಗೆ ತಿಳಿದರೂ ಅದು ಮನೆಯವರಿಗೆ ತಿಳಿಯಬೇಕಿದೆ. ಇವೆಲ್ಲಾ ಆಗಲು ಇನ್ನೂ ಹಲವು ದಿನಗಳೇ ಬೇಕಾಗಬಹುದು.

56
ಅಮೃತಧಾರೆ ಮುಗಿಯತ್ತಾ?
Image Credit : Zee Kannada Instagram

ಅಮೃತಧಾರೆ ಮುಗಿಯತ್ತಾ?

ಅದೇ ಇನ್ನೊಂದೆಡೆ ಅಮೃತಧಾರೆ. ಇದರಲ್ಲಿಯೂ ಗೌತಮ್​ ಮತ್ತು ಭೂಮಿಕಾ ಒಂದಾಗಿ ಆಗಿದೆ. ಆದರೂ ಅವರಿಬ್ಬರ ರೊಮ್ಯಾನ್ಸ್​ ದೃಶ್ಯಗಳಿಂದ ಸೀರಿಯಲ್​​ ಎಳೆಯುತ್ತಿದ್ದಾರೆ. ಇವರ ಮಗಳು ಯಾರು ಎಂದು ತಿಳಿಯಬೇಕಿದೆ. ಶಕುಂತಲಾ ಮತ್ತು ಜೈದೇವ್​ಗೆ ಮಟ್ಟ ಹಾಕಬೇಕಿದೆ. ಭೂಮಿಕಾ ತಮ್ಮ ಮತ್ತು ಗೌತಮ್​ ಇನ್ನೋರ್ವ ತಮ್ಮ ಪಾರ್ಥನ ವಿಷಯವೂ ಇನ್ನೂ ಮುಗಿದಿಲ್ಲ. ಆದ್ದರಿಂದ ಇದು ಕೂಡ ಇಷ್ಟು ಬೇಗ ಅಂತ್ಯ ಆಗತ್ತೆ ಎನ್ನುವುದೂ ಡೌಟೇ.

66
ಬೇರೆ ಸೀರಿಯಲ್​ ಸದ್ಯಕ್ಕಿಲ್ಲ
Image Credit : X

ಬೇರೆ ಸೀರಿಯಲ್​ ಸದ್ಯಕ್ಕಿಲ್ಲ

ಅಮೃತಧಾರೆ ಮತ್ತು ಬ್ರಹ್ಮಗಂಟು ಬಿಟ್ಟರೆ ಸದ್ಯ ಬೇರೆ ಸೀರಿಯಲ್​ಗಳು ಇಷ್ಟು ಬೇಗ ಮುಗಿಯುವ ಹಂತದಲ್ಲಿ ಇಲ್ಲ. ಹಾಗಿದ್ದರೆ ಯಾವ ಸೀರಿಯಲ್​ ಮುಗಿಯಬಹುದು ಎನ್ನುವ ಕುತೂಹಲ ವೀಕ್ಷಕರಿಗೆ ಇದೆ. ಇದಕ್ಕೆ ಶೀಘ್ರದಲ್ಲಿಯೇ ಉತ್ತರ ಸಿಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜೀ ಕನ್ನಡ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಅಮೃತಧಾರೆ
ಪುಟ್ಟಕ್ಕನ ಮಕ್ಕಳು
ಬ್ರಹ್ಮಗಂಟು ಧಾರಾವಾಹಿ

Latest Videos
Recommended Stories
Recommended image1
ಸ್ವಲ್ಪ ರೊಮ್ಯಾಂಟಿಕ್​ ಮೂಡ್​ನಲ್ಲಿ ಪ್ರಪೋಸ್​ ಮಾಡಪ್ಪಾ, ಈ ಮೂತಿ ಯಾಕೆ? Brahmagantu ಚಿರುಗೆ ಕ್ಲಾಸ್
Recommended image2
ಗಂಡನ ಅಕ್ರಮ ಸಂಬಂಧಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಕಣ್ಣೀರಿಟ್ಟ ಬಿಗ್‌ಬಾಸ್‌ ಸ್ಪರ್ಧಿ!
Recommended image3
Annayya Serial: ಪಾರು ಮುಂದೆ ಬಯಲಾಯ್ತು ಮಾಸ್ತಿಕೊಪ್ಪಲ ರಾಜನ ರಹಸ್ಯ: ವೀರಭದ್ರನ ಆಟಕ್ಕೆ ಬ್ರೇಕ್ ಯಾವಾಗ?
Related Stories
Recommended image1
ಕಾಳಿಯಾಗಿ ಬದಲಾದ Karna Serial ನಿತ್ಯಾ! ಭಯಂಕರ ಗೆಟಪ್​ನಲ್ಲಿ ನಟಿ ನಮ್ರತಾ ಗೌಡ
Recommended image2
Karna Serial: ಅವಿವಾಹಿತ ಕಿರಣ್​ ರಾಜ್​ ಸಕ್ಸಸ್​ ಹಿಂದಿರೋದು ಇಬ್ಬಿಬ್ಬರು ಸುಂದರಿಯರು! ಕೊನೆಗೂ ಸೀಕ್ರೆಟ್​ ರಿವೀಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved