ದ್ವೇಷಕ್ಕೆ ಮಗನನ್ನೇ ಬಲಿ ಕೊಟ್ಟಳಾ ಶಕುಂತಲಾ? ಅಂಡರ್ ಎಸ್ಟಿಮೇಟ್ ಮಾಡಿದ್ನಾ ಜೈದೇವ್?
'ಅಮೃತಧಾರೆ' ಧಾರಾವಾಹಿಯಲ್ಲಿ ಶಕುಂತಲಾಳ ನಿಜಬಣ್ಣ ಬಯಲಾಗಿದೆ. ಮಕ್ಕಳ ಕೇಕ್ನಲ್ಲಿ ಬಾಂಬ್ ಇಟ್ಟ ಆರೋಪದ ಮೇಲೆ ತನ್ನ ಮಗ ಜೈದೇವ್ನನ್ನೇ ಜೈಲಿಗೆ ಕಳುಹಿಸಿದ್ದಾಳೆ. ತನ್ನ ತಪ್ಪಿಲ್ಲವೆಂದು ಜೈದೇವ್ ಹೇಳುತ್ತಿದ್ದರೂ, ಶಕುಂತಲಾ ಅವನ ವಿರುದ್ಧವೇ ತಿರುಗಿಬಿದ್ದಿದ್ದು, ಮುಂದಿನ ಕಥೆ ರೋಚಕ ತಿರುವು ಪಡೆದಿದೆ.

ಶಕುಂತಲಾ ಪಾತ್ರದ ಅಸಲಿ ಅನಾವರಣ ಯಾವಾಗ?
ಶಕುಂತಲಾ ಬದಲಾಗಿದ್ದಾಳೆ ಎಂಬಂತೆ ತೋರಿಸಲಾಗಿತ್ತು. ಆದ್ರೆ ಇತ್ತೀಚಿನ ಪ್ರೋಮೋದಲ್ಲಿ ಶಕುಂತಲಾಳ ನಿಜರೂಪ ಹೊರ ಬಂದಿತ್ತು. ಮಕ್ಕಳು ಕಟ್ ಮಾಡುವ ಕೇಕ್ನಲ್ಲಿ ಬಾಂಬ್ ಇರಿಸಿದ ಆರೋಪದಲ್ಲಿ ಜೈದೇವ್ ಜೈಲುಪಾಲಾಗಿದ್ದಾನೆ. ಆದ್ರೆ ಬಾಂಬ್ ಕೇಸ್ನಲ್ಲಿ ನನ್ನ ಹಸ್ತಕ್ಷೇಪವಿಲ್ಲ ಎಂದು ಜೈದೇವ್ ಪದೇ ಪದೇ ಹೇಳುತ್ತಿದ್ದಾನೆ.
ಜೈದೇವ್ ನಲ್ಲಿ ಹೆಚ್ಚಾದ ದ್ವೇಷ
ಜೈದೇವ್ ತನ್ನ ತಪ್ಪಿಲ್ಲ ಎಂದು ಹೇಳುತ್ತಿರೋದನ್ನು ಶಕುಂತಲಾಗೆ ಕರೆ ಮಾಡಿ ಪೊಲೀಸ್ ಹೇಳಿದ್ದಾರೆ. ಆದ್ರೆ ಶಕುಂತಲಾ, ಬಾಂಬ್ ಇಟ್ಟಿರೋದು ಜೈದೇವ್, ಆತ ಸತ್ಯ ಹೇಳುವಂತೆ ಟ್ರೀಟ್ಮೆಂಟ್ ಕೊಡ ಎಂದು ಶಕುಂತಲಾ ಹೇಳಿದ್ದಾಳೆ. ಇತ್ತ ಪೊಲೀಸರ ಮುಂದೆಯೂ ಜೈದೇವ್, ನಿಮಗಿಂತ ಮೊದಲು ನನಗೆ ಬಾಂಬ್ ಇಟ್ಟಿರೋ ಯಾರು ಅನ್ನೋದು ಗೊತ್ತಾಗಬೇಕೆಂದು ಹೇಳಿಕೊಂಡಿದ್ದಾನೆ.
ಮಗನನ್ನು ಜೈಲಿಗೆ ಹಾಕಿಸಿದ್ಯಾಕೆ?
ತನ್ನ ಮಕ್ಕಳಿಗಾಗಿ ಏನು ಬೇಕಾದ್ರೂ ಮಾಡಲು ನಾನು ರೆಡಿ ಎಂದು ಹೇಳಿರುವ ಶಕುಂತಲಾ, ಜೈದೇವ್ನನ್ನು ಜೈಲಿಗೆ ಹಾಕಿಸಿದ್ಯಾಕೆ ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಈಗಾಗಲೇ ಪಾರ್ಥ್ ಮತ್ತು ಮಹಿಮಾ ಇಬ್ಬರು ಮೊದಲಿನಿಂದಲೇ ಗೌತಮ್-ಭೂಮಿಕಾ ಪರವಾಗಿದ್ದಾರೆ. ಜೈದೇವ್ ಮಾತ್ರ ನೀಚನಾಗಿ ಉಳಿದುಕೊಂಡಿದ್ದಾನೆ. ದಿಯಾ ಬೇಬಿಯನ್ನು ಕೊಂದಿರುವ ಜೈದೇವ್, ಇನ್ನು ಆ ಪ್ರಕರಣ ಹೊರಗೆ ಬಂದಿಲ್ಲ.
ಶಕುನಿ ಮಾಮಾ ಲಕ್ಷ್ಮೀಕಾಂತ್
ಇನ್ನು ಶಕುಂತಲಾಗೆ ನೆರಳಿನಂತೆಯೇ ಇರೋ ಶಕುನಿ ಮಾಮಾ ಲಕ್ಷ್ಮೀಕಾಂತ್ ಸಹ ಬದಲಾಗಿದ್ದಾನೆ. ತನ್ನ ಸಿಸ್ಟರ್ ಶಕುಂತಲಾಳ ಅಸಲಿ ಮುಖ ತಿಳಿದ್ರೆ ಏನು ಮಾಡುತ್ತಾನೆ? ಗೌತಮ್-ಭೂಮಿಕಾ, ಆನಂದ್ ಅವರ ರಿಯಾಕ್ಷನ್ ಏನಾಗಿರಬಹುದು ಎಂಬುದರ ಬಗ್ಗೆಯೂ ತಿಳಿಯಬೇಕಿದೆ.
ಇದನ್ನೂ ಓದಿ: Amruthadhaare Serial ರೋಚಕ ಟ್ವಿಸ್ಟ್: ಬರ್ತ್ಡೇ ಕೇಕ್ನಲ್ಲಿ ಬಾಂಬ್ ಇಟ್ಟದ್ದು ಶಕುಂತಲನಾ, ಜೈದೇವನಾ
ಗೌತಮ್ ವಿರುದ್ಧ ದ್ವೇಷ?
ಸೀರಿಯಲ್ನಲ್ಲಿಯ ಒಂದೊಂದೇ ನೆಗೆಟಿವ್ ಪಾತ್ರಗಳು ಒಳ್ಳೆಯದಾಗುತ್ತಿರೋದನ್ನು ಕಂಡ ವೀಕ್ಷಕರು ಅಮೃತಧಾರೆ ಮುಕ್ತಾಯವಾಗಲಿದೆ ಎಂದು ಮಾತನಾಡಿಕೊಳ್ಳಲಾರಂಭಿಸಿದ್ದರು. ಆದರೆ ಶಕುಂತಲಾ ಪಾತ್ರದಲ್ಲಿ ರೋಚಕ ಟ್ವಿಸ್ಟ್ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಮುಂದೆ ಶಕುಂತಲಾ ಮತ್ತು ಜೈದೇವ್ ಮತ್ತೆ ಒಂದಾಗಿ ಗೌತಮ್ ವಿರುದ್ಧ ದ್ವೇಷ ಸಾಧಿಸುತ್ತಾರಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಇದನ್ನೂ ಓದಿ: Amruthadhaare: ಹೆತ್ತ ಮಗಳು ಸಿಗ್ತಿದ್ದಂತೆಯೇ ಬದಲಾಯ್ತು ಗೌತಮ್-ಭೂಮಿಕಾ ವರಸೆ: ಫ್ಯಾನ್ಸ್ ಬೇಸರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

