MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಕಿರುತೆರೆ ಇತಿಹಾಸದಲ್ಲಿ‌ ಮೊದಲ ಬಾರಿಗೆ AI ಬಳಸಿ 'ಶ್ರೀ ರಾಘವೇಂದ್ರ ಮಹಾತ್ಮೆ' ಪ್ರೋಮೊ ರಿಲೀಸ್… ಸೀರಿಯಲ್ ಆರಂಭ ಯಾವಾಗ?

ಕಿರುತೆರೆ ಇತಿಹಾಸದಲ್ಲಿ‌ ಮೊದಲ ಬಾರಿಗೆ AI ಬಳಸಿ 'ಶ್ರೀ ರಾಘವೇಂದ್ರ ಮಹಾತ್ಮೆ' ಪ್ರೋಮೊ ರಿಲೀಸ್… ಸೀರಿಯಲ್ ಆರಂಭ ಯಾವಾಗ?

ಕನ್ನಡ ಟೆಲಿವಿಷನ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ AI ತಂತ್ರಜ್ಞಾನ ಬಳಸಿ , ತಯಾರಾಗಿರುವ 'ಶ್ರೀ ರಾಘವೇಂದ್ರ ಮಹಾತ್ಮೆ' ಪ್ರೊಮೋ ಬಿಡುಗಡೆಯಾಗಿದ್ದು, ಇದೇ ಸೆಪ್ಟೆಂಬರ್ 1 ರಿಂದ ಸೀರಿಯಲ್ ಆರಂಭವಾಗಲಿದೆ.

1 Min read
Pavna Das
Published : Aug 30 2025, 04:24 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಇಲ್ಲಿವರೆಗೆ ಜನರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ 'ಶ್ರೀ ರಾಘವೇಂದ್ರ ಮಹಾತ್ಮೆ' (Sri Raghavendra Mahathme) ಧಾರಾವಾಹಿಯ ಪ್ರೊಮೋ ಬಿಡುಗಡೆಯಾಗಿದೆ. ಇದು ಅಂತಿಂಥ ಪ್ರೊಮೋ ಅಲ್ಲ, ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ AI ತಂತ್ರಜ್ಞಾನ ಬಳಸಿ , ತಯಾರಾಗಿರುವ ಪ್ರೊಮೋ ಇದಾಗಿದೆ.

27
Image Credit : Asianet News

ಹಲವು ಸಮಯದ ಹಿಂದೆಯೇ ಜೀ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ಆಗಿದ್ದ ರಾಘವೇಂದ್ರ ಹುಣಸೂರ್, ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿ ಮಾಡಬೇಕೆನ್ನುವ ಆಸೆಯನ್ನು ತಿಳಿಸಿದ್ದರು. ಇದೀಗ ಹಲವು ಸಮಯ ಬಳಿಕ ಅವರ ಕನಸು ನನಸಾಗಿದ್ದು, ಶೀಘ್ರದಲ್ಲಿ ಸೀರಿಯಲ್ ಬಿಡುಗಡೆಗೆ ತಯಾರಾಗಿದೆ.

Related Articles

Related image1
Shrirasthu Shubhamasthu Serial: ಛೇ... ಕೊನೇ ಎಪಿಸೋಡ್‌ನಲ್ಲಿ ಈ ರೀತಿ ಆಗಿ ಅಂತ್ಯ ಆಯ್ತಾ? ಪುಳಿಯೋಗರೆ ಕಥೆಗೆ ಬೇಸರ!
Related image2
Zee Kannada Auditions: ನಟನಾಸಕ್ತರಿಗೆ ಸುವರ್ಣಾವಕಾಶ: ಸೀರಿಯಲ್ & ರಿಯಾಲಿಟಿ ಶೋಗೆ ಆಹ್ವಾನ- ಡಿಟೇಲ್ಸ್​ ಇಲ್ಲಿದೆ...
37
Image Credit : Asianet News

ಜೀ ಕನ್ನಡ ವಾಹಿನಿಯೂ (Zee Kannada) ಅದ್ಭುತವಾದ ಧಾರಾವಾಹಿಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಇಲ್ಲಿವರೆಗೂ ಶ್ರೀರಸ್ತು ಶುಭಮಸ್ತು ಧಾರಾವಾಹಿ ಪ್ರಸಾರವಾಗುತ್ತಿತ್ತು.ಇದೀಗ ಸೀರಿಯಲ್ ಗೆ ಅಂತ್ಯ ಕಂಡಿದ್ದು, ಇನ್ನು ಮುಂದೆ ಸೆಪ್ಟೆಂಬರ್ 1 ರಿಂದ ಆ ಸಮಯದಲ್ಲಿ 'ಶ್ರೀ ರಾಘವೇಂದ್ರ ಮಹಾತ್ಮೆ' ಆರಂಭವಾಗಲಿದೆ.

47
Image Credit : Asianet News

ಈಗಾಗಲೇ ಬಿಡೂಗಡೆಯಾಗಿರುವ AI ತಂತ್ರಜ್ಞಾನ  (AI Promo)ಬಳಸಿ ಮಾಡಿರುವ ಪ್ರೊಮೋ ಅದ್ಭುತವಾಗಿ ಮೂಡಿ ಬಂದಿದೆ. ಮಾನವರ ಉದ್ಧಾರಕ್ಕಾಗಿ ಬರ್ತಾ ಇದ್ದಾರೆ ರಾಘವೇಂದ್ರ ಸ್ವಾಮಿ ಎನ್ನುವುದರಿಂದ ಸೀರಿಯಲ್ ಆರಂಭವಾಗುತ್ತದೆ.

57
Image Credit : Asianet News

ಪ್ರೊಮೋದಲ್ಲಿ ತೋರಿಸಿದಂತೆ ರಾಘವೇಂದ್ರ ಸ್ವಾಮಿ ಕಾಲಿಡುತ್ತಿದ್ದಂತೆ, ಬರಡು, ಬಂಜರು ಭೂಮಿಯಲ್ಲೂ ಸಹ ಹಸಿರು ತುಂಬುತ್ತದೆ, ಕಾರ್ಮೋಡ ಕವಿದು ಮಳೆಯಾಗುತ್ತದೆ. ಗುರುಗಳ ಆಶೀರ್ವಾದದಿಂದ ಕುರೂಪಿ ಕೂಡ ಸುಂದರಿಯಾಗುತ್ತಾಳೆ. ಮಾಂಸಾಹಾರವು ಹಣ್ಣು ಹಂಪಲಾಗಿ ಬದಲಾಗುತ್ತದೆ.

67
Image Credit : Asianet News

'ಶ್ರೀ ರಾಘವೇಂದ್ರ ಮಹಾತ್ಮೆಯಲ್ಲಿ' ರಾಯರ ಬಾಲ್ಯದಿಂದ ಹಿಡಿದು ಅವರ ಆಧ್ಯಾತ್ಮ ಪಯಣ, ಉಪದೇಶಗಳು, ಪವಾಡಗಳು ರಾಯರ ಜೀವನ ಚರಿತ್ರೆ, ಅವರ ಆಶೀರ್ವಾದಿಂದ ನಡೆದ ಪಾವಡಗಳು ಎಲ್ಲವನ್ನೂ ಪ್ರೇಕ್ಷಕರು ಕಣ್ತುಂಬಿಸಿಕೊಳ್ಳಬಹುದು.

77
Image Credit : Asianet News

ಇನ್ನು ಈ ಧಾರಾವಾಹಿಯಲ್ಲಿ ವಿಷ್ಣು ಪಾತ್ರದಲ್ಲಿ ಅಮಿತ್ ಕಶ್ಯಪ್, ಸಿರಿ ಪ್ರಹ್ಲಾದ್ ಲಕ್ಷ್ಮಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವ್ಯಾಸರಾಯರ ಪಾತ್ರದಲ್ಲಿ ಪರೀಕ್ಷಿತ್ ನಟಿಸಿದ್ದಾರೆ. ಇವರೊಂದಿಗೆ ವಿಕಾಸ್ ವಸಿಷ್ಠ, ದೀಪಿಕಾ, ಕಾರ್ತಿಕ್ ಸಾಮಗ, ಧನ್ಯಶ್ರೀ ಪ್ರಭು, ವಿಕ್ರಂ ಸೂರಿ, ಡಾ.ಸಂಜಯ್, ಸ್ನೇಹಾ ಹೆಗ್ಡೆ, ಶ್ರೀನಿಧಿ, ಶ್ರೀಲತಾ, ಅನುರಾಗ್ ಸೇರಿ ಹಲವರು ನಟಿಸಲಿದ್ದಾರೆ.ಇನ್ನು ಹಿರಣ್ಯ ಕಶಿಪುವಾಗಿ ಚೆಲುವರಾಜು, ಕಯಾದು ಪಾತ್ರದಲ್ಲಿ ನಟಿ ಶ್ರುತಿ ಹರಿಹರನ್ ನಟಿಸುತ್ತಿದ್ದಾರೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಜೀ ಕನ್ನಡ
ಕನ್ನಡ ಧಾರಾವಾಹಿ
ಸೀರಿಯಲ್ ಶೂಟಿಂಗ್
ಶ್ರೀ ರಾಘವೇಂದ್ರ ಮಹಾತ್ಮೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved