MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial Update: ಕೊನೆಗೂ ಕರ್ಣ-ನಿಧಿ ಪ್ರೀತಿ ನಿತ್ಯಾ ಮುಂದೆ ಬಯಲು… ತಂಗಿ ಮದುವೆ ಮಾಡಿಸಿಯೇ ಬಿಡ್ತಾಳ ಅಕ್ಕ!

Karna Serial Update: ಕೊನೆಗೂ ಕರ್ಣ-ನಿಧಿ ಪ್ರೀತಿ ನಿತ್ಯಾ ಮುಂದೆ ಬಯಲು… ತಂಗಿ ಮದುವೆ ಮಾಡಿಸಿಯೇ ಬಿಡ್ತಾಳ ಅಕ್ಕ!

Karna Serial: ಕರ್ಣ ಧಾರಾವಾಹಿಯಲ್ಲಿ ಕೊನೆಗೂ ನಿಧಿ ಮತ್ತು ಕರ್ಣ ಪ್ರೀತಿ ನಿತ್ಯಾ ಮುಂದೆ ಬಯಲಾಗೋ ಸಮಯ ಬಂದಿದೆ. ಸತ್ಯ ಗೊತ್ತಾದ್ರೆ ನಿಧಿ ಮತ್ತು ಕರ್ಣನಿಗೆ ಆಸ್ಪತ್ರೆಯಲ್ಲೆ ಮದುವೆ ಮಾಡಿಸಿ, ತಾನು ದೂರ ಹೋಗ್ತಾಳ ನಿತ್ಯಾ. ಸಖತ್ ಟ್ವಿಸ್ಟ್ ಕೊಟ್ಟಿದೆ ಸೀರಿಯಲ್. 

2 Min read
Author : Pavna Das
Published : Feb 05 2026, 11:53 AM IST
Share this Photo Gallery
  • FB
  • TW
  • Linkdin
  • Whatsapp
16
ಕರ್ಣ ಸೀರಿಯಲ್
Image Credit : Zee Kannada

ಕರ್ಣ ಸೀರಿಯಲ್

ಕರ್ಣ ಧಾರಾವಾಹಿಯಲ್ಲಿ ಕೊನೆಗೂ ಸತ್ಯ ಬಯಲಾಗೋ ಸಮಯ ಬಂದೆ ಬಿಟ್ಟಿದೆ. ಇಲ್ಲಿವರೆಗೂ ಅಕ್ಕನಿಂದ ತನ್ನ ಪ್ರೀತಿಯನ್ನು ನಿಧಿ ಮುಚ್ಚಿಟ್ಟಿದ್ದಳು. ಇದೀಗ ಸಮಯ ನಿತ್ಯಾಗೆ ಎಲ್ಲಾ ಸತ್ಯವನ್ನು ಗೊತ್ತಾಗುವಂತೆ ಮಾಡಿದೆ. ಕರ್ಣ ಮತ್ತು ನಿಧಿ ಪ್ರೀತಿ ಗೊತ್ತಾದ ಮೇಲೆ ಏನು ಮಾಡ್ತಾಳೆ ನಿತ್ಯಾ ಕಾದು ನೋಡಬೇಕು.

26
ಪ್ರೊಮೋದಲ್ಲಿ ಏನಿದೆ?
Image Credit : Zee Kannada

ಪ್ರೊಮೋದಲ್ಲಿ ಏನಿದೆ?

ಕರ್ಣ ಸೀರಿಯಲ್ ಪ್ರೊಮೊ ಇದೀಗ ಬಿಡುಗಡೆಯಾಗಿದ್ದು, ಕರ್ಣನ ಕ್ಯಾಬಿನ್ ನಲ್ಲಿ ಕೂತಿರೋ ನಿಧಿ, ಕರ್ಣ ಮತ್ತು ನಿಧಿ ಹೆಸರನ್ನು ಸೇರಿಸಿ FLAMES ಗೇಮ್ ಆಡ್ತಿದ್ದಾಳೆ, ಅದನ್ನೇ ಕರ್ಣನಿಗೂ ಬಂದು ತೋರಿಸಿದ್ದಾಳೆ. ಆದರೆ ಅಷ್ಟರಲ್ಲೇ ಅಲ್ಲಿಗೆ ಬರೋ ಸ್ಟಾಫ್, ಅದೇ ಪೇಪರನ್ನು ತೆಗೆದುಕೊಂಡು ಹೋಗ್ತಾರೆ, ಅದನ್ನ ವಾಪಾಸ್ ಕೊಡುವಂತೆಯೂ ಕೇಳುತ್ತಾಳೆ.

Related Articles

Related image1
Karna Serial: ಕರ್ಣನ ಮ್ಯಾಜಿಕ್!​ ಹೆಂಡ್ತಿಗೆ ಕಾಲಿಗೆ ಬಿದ್ದ ರಮೇಶ್​- ಹೆಂಗೆ ನಮ್​ ಹೀರೋ ಎಂದ ಫ್ಯಾನ್ಸ್​
Related image2
ಕಾಳಿಯಾಗಿ ಬದಲಾದ Karna Serial ನಿತ್ಯಾ! ಭಯಂಕರ ಗೆಟಪ್​ನಲ್ಲಿ ನಟಿ ನಮ್ರತಾ ಗೌಡ
36
ನಿಧಿ ಭವಿಷ್ಯ ನಿತ್ಯಾ ಕೈಯಲ್ಲಿ
Image Credit : Zee Kannada

ನಿಧಿ ಭವಿಷ್ಯ ನಿತ್ಯಾ ಕೈಯಲ್ಲಿ

ಆ ಚೀಟಿಯಲ್ಲಿ ನನ್ನ ಭವಿಷ್ಯಾನೆ ಇದೆ ಎಂದು ನಿಧಿ ಹೇಳ್ತಾಳೆ, ಆದರೆ ಅಲ್ಲಿಗೆ ಬರುವ ನಿತ್ಯಾ ಅವರ ಕೈಯಿಂದ ಆ ಚೀಟಿ ತೆಗೆದು ನೋಡಿ ಶಾಕ್ ಆಗ್ತಾಳೆ. ಅಲ್ಲಿಗೆ ನಿಧಿ ಮತ್ತು ಕರ್ಣ ಪ್ರೀತಿಯ ಕಣ್ಣಾಮುಚ್ಚಾಲೆ ನಿತ್ಯಾ ಮುಂದೆ ಬಯಲಾಗಿದೆ. ಮುಂದೇನು ಮಾಡ್ತಾಳೆ ನಿತ್ಯಾ ಅನ್ನೋದನ್ನು ಕಾದು ನೋಡಬೇಕಾಗಿದೆ.

46
ನಿಜವಾಗಿಯೂ ಸತ್ಯ ಗೊತ್ತಾಯ್ತ?
Image Credit : Zee Kannada

ನಿಜವಾಗಿಯೂ ಸತ್ಯ ಗೊತ್ತಾಯ್ತ?

ಪ್ರೊಮೋದಲ್ಲಿ ತೋರಿಸಿರುವಂತೆ ನಿತ್ಯಾ ಮುಂದೆ ಸತ್ಯ ಬಯಲಾಗಿದೆ. ಆದರೆ ನಿಜವಾಗಿಯೂ ಇಷ್ಟು ಬೇಗ ಸತ್ಯ ಬಯಲಾಗೋದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ ವೀಕ್ಷಕರು. ಸಡನ್ ಆಗಿ ಸತ್ಯ ಅನಾವರಣ ಆಗುವ ಸಾಧ್ಯತೆ ಇಲ್ಲ, ನಿತ್ಯಾ ಮೆಡಿಸಿನ್ ಬಗ್ಗೆ ನೋಡಿ ಶಾಕ್ ಆಗಿರಬೇಕು, ನಿಧಿ ಬರೆದಿರೋದು ಹಿಂದುಗಡೆ ಇದೆ ಎಂದಿದ್ದಾರೆ ವೀಕ್ಷಕರು.

56
ಏನಾಗ್ತಿದೆ ಕರ್ಣ ಧಾರಾವಾಹಿಯಲ್ಲಿ?
Image Credit : Zee Kannada

ಏನಾಗ್ತಿದೆ ಕರ್ಣ ಧಾರಾವಾಹಿಯಲ್ಲಿ?

ಕರ್ಣನಿಗೆ ತನ್ನ ತಂದೆಯಿಂದಲೇ ಕರ್ಣ-ನಿತ್ಯಾ-ನಿಧಿ ಬದುಕು ಹಾಳಾಗಿದೆ ಅನ್ನೋದು ಗೊತ್ತಾಗಿದೆ. ಇಲ್ಲಿವರೆಗೆ ಕಂಡಿದ್ದ ಅಪ್ಪನ ಒಳ್ಳೆಯತನ ಎಲ್ಲವೂ ಸುಳ್ಳು ಅನ್ನೋದು ಸಹ ಬಯಲಾಗಿದೆ. ಹಾಗಾಗಿ ಅಪ್ಪನ ಸೊಕ್ಕು ಮುರಿಯಲು ಏನೇನು ಮಾಡಬಹುದು ಎಲ್ಲವನ್ನೂ ಮಾಡುತ್ತಿದ್ದಾನೆ ಕರ್ಣ. ಜೊತೆಗೆ ನಿತ್ಯಾಗೆ ತಮ್ಮ ಆಸ್ಪತ್ರೆಯ ಬೋರ್ಡ್ ಆಫ್ ಡೈರೆಕ್ಟರ್ ಸಾಲಿನಲ್ಲೂ ತಂದು ಕೂರಿಸಿದ್ದಾರೆ.

66
ಜೋಡಿಯಾಗೋದು ಯಾರು?
Image Credit : Zee Kannada

ಜೋಡಿಯಾಗೋದು ಯಾರು?

ಇಲ್ಲಿವರೆಗೂ ಈ ಧಾರಾವಾಹಿಯಲ್ಲಿ ಕರ್ಣನಿಗೆ ಜೋಡಿಯಾಗೋರು ಯಾರು ಅನ್ನೋದು ಮಾತ್ರ ಗೊತ್ತಾಗ್ತ ಇಲ್ಲ. ಕರ್ಣ ಮತ್ತು ನಿಧಿ ಹತ್ತಿರವಾಗುತ್ತಾರೆ ಅಂದಾಗಲೆಲ್ಲಾ, ವಿಧಿ ಅವರನ್ನು ಮತ್ತೆ ಮತ್ತೆ ದೂರ ಮಾಡುತ್ತಿದೆ, ಮತ್ತೊಂದೆಡೆ ನಿತ್ಯಾ ಮತ್ತು ತೇಜಸ್ ಕೂಡ ದೂರಾಗಿದ್ದಾರೆ. ನಿತ್ಯಾ ಮತ್ತು ಕರ್ಣ ಹತ್ತಿರವಾಗಿದ್ದಾರೆ. ಹಾಗಾಗಿ ಯಾರು ಕರ್ಣನಿಗೆ ಜೋಡಿಯಾಗ್ತಾರೆ ಅನ್ನೋದೆ ವೀಕ್ಷಕರಿಗೆ ಕಗ್ಗಂಟಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಕರ್ಣ ಧಾರಾವಾಹಿ
ಸೀರಿಯಲ್ ಶೂಟಿಂಗ್
ಕನ್ನಡ ಧಾರಾವಾಹಿ
ಜೀ ಕನ್ನಡ

Latest Videos
Recommended Stories
Recommended image1
Amruthadhaare Serial: ಆ ಹಿಟ್ ಧಾರಾವಾಹಿ ಥರ ಚಿಕ್ಕ ವಯಸ್ಸಿನ ಹುಡುಗನನ್ನೇ ಮಲ್ಲಿ ಮದುವೆ ಆಗ್ತಾಳಾ?
Recommended image2
ಮಾರಕ ರೋಗ ಬಿಡಲಿಲ್ಲ, ಚಿಕಿತ್ಸೆಗೆ ಹಣ ಸಾಕಾಗಲಿಲ್ಲ; ದುರಂತ ಅಂತ್ಯ ಕಂಡ ಧಾರಾವಾಹಿ ನಟಿ!
Recommended image3
ಭಾರತೀಯರಿಗೆ ಸಿಗೋ ಅಪರೂಪದ ಆಫರ್‌ ಮಿಸ್‌ ಮಾಡ್ಕೊಂಡ Bigg Boss ರಜತ್;‌ ಹಣೆಬರಹಕ್ಕೆ ಹೊಣೆ ಯಾರು ಎಂದಂಗಾಯ್ತು!
Related Stories
Recommended image1
Karna Serial: ಕರ್ಣನ ಮ್ಯಾಜಿಕ್!​ ಹೆಂಡ್ತಿಗೆ ಕಾಲಿಗೆ ಬಿದ್ದ ರಮೇಶ್​- ಹೆಂಗೆ ನಮ್​ ಹೀರೋ ಎಂದ ಫ್ಯಾನ್ಸ್​
Recommended image2
ಕಾಳಿಯಾಗಿ ಬದಲಾದ Karna Serial ನಿತ್ಯಾ! ಭಯಂಕರ ಗೆಟಪ್​ನಲ್ಲಿ ನಟಿ ನಮ್ರತಾ ಗೌಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved