- Home
- Entertainment
- TV Talk
- Karna Serial: ನಕಲಿ ಹೆಂಡ್ತಿ ಹಿಂದೆ ಸುತ್ತಾಡಿದ್ದು ಸಾಕು, ಆಸ್ಪತ್ರೆಗೆ ಹೋಗೋ ಕರ್ಣಾ- ನೆಟ್ಟಿಗರಿಂದ ಭಾರಿ ಟ್ರೋಲ್
Karna Serial: ನಕಲಿ ಹೆಂಡ್ತಿ ಹಿಂದೆ ಸುತ್ತಾಡಿದ್ದು ಸಾಕು, ಆಸ್ಪತ್ರೆಗೆ ಹೋಗೋ ಕರ್ಣಾ- ನೆಟ್ಟಿಗರಿಂದ ಭಾರಿ ಟ್ರೋಲ್
ಕರ್ಣ ಸೀರಿಯಲ್ನಲ್ಲಿ ನಿತ್ಯಾ ಮತ್ತು ತೇಜಸ್ ಮದುವೆ ನಿಂತುಹೋಗಿದೆ. ನಿತ್ಯಾಳ ಮಗುವಿನ ಜವಾಬ್ದಾರಿಯನ್ನು ಕರ್ಣ ಹೊತ್ತುಕೊಂಡಿದ್ದು, ಆಕೆಯ ಹಿಂದೆ ಮುಂದೆ ಇರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾನೆ.

ನಿಂತ ನಿತ್ಯಾ ಮದ್ವೆ
ಕರ್ಣ ಸೀರಿಯಲ್ (Karna Serial) ನಲ್ಲಿ ಸದ್ಯ ನಿತ್ಯಾ ಮತ್ತು ತೇಜಸ್ ಮದುವೆ ನಿಂತಿದೆ. ನಿತ್ಯಾಳ ಹೊಟ್ಟೆಯಲ್ಲಿ ಇರುವ ಮಗು, ರಮೇಶ್ ಕಿತಾಪತಿಯಿಂದಾಗಿ ಕರ್ಣನದ್ದೇ ಎಂದು ತಿಳಿದುಕೊಂಡಿರುವ ತೇಜಸ್ ಮದುವೆಯನ್ನು ನಿಲ್ಲಿಸಿ ಶಾಪ ಹಾಕಿ ಹೋಗಿದ್ದಾನೆ.
ನಿಧಿ ಮತ್ತು ಕರ್ಣನ ಪ್ರೀತಿ
ಅದೇ ಇನ್ನೊಂದೆಡೆ, ನಿಧಿ ಮತ್ತು ಕರ್ಣನ ಪ್ರೀತಿಯ ವಿಷಯವನ್ನು ಹೇಳಲು ಸಾಧ್ಯವಾಗ್ತಿಲ್ಲ. ಅಷ್ಟಕ್ಕೂ ಕರ್ಣ, ನಿತ್ಯಾಳ ಮಗುವಿನ ಜವಾಬ್ದಾರಿಯನ್ನು ತಾನೇ ಹೊತ್ತುಕೊಂಡಿದ್ದಾನೆ. ಅವಳ ಹಿಂದೆ ಮುಂದೆ ತಿರುಗುತ್ತಾನೆ.
ಸಕತ್ ಟ್ರೋಲ್
ಅಸಲಿಗೆ ಕರ್ಣ ಒಬ್ಬ ಡಾಕ್ಟರ್. ಆದರೆ ಸೀರಿಯಲ್ ಆರಂಭದ ದಿನಗಳಲ್ಲಿ ಈ ವಿಷಯವನ್ನು ತೋರಿಸಿರೋದು ಬಿಟ್ಟರೆ, ಅಲ್ಲಿಂದ ಇಲ್ಲಿಯವರೆಗೂ ಆತ ನಿತ್ಯಾಳ ಹಿಂದೆ ಮುಂದೆ ಸುತ್ತಿದ್ದೇ ಆಗಿಬಿಟ್ಟಿದೆ ಎಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಟ್ರೋಲ್ ಆಗ್ತಿದೆ.
ತೇಜಸ್ಗೆ ಅನುಮಾನ
ನಿತ್ಯಾಳ ಮೇಲೆ ಅತೀವ ಕಾಳಜಿ ತೋರಿದ್ದರಿಂದಲೇ ತೇಜಸ್ಗೆ ಅನುಮಾನ ಹುಟ್ಟಿದ್ದು. ನಿತ್ಯಾಳ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ವೈದ್ಯನಾಗಿ ಕರ್ಣ ತನ್ನ ಜವಾಬ್ದಾರಿ ಮಾಡ್ತಿರೋದಾಗಿ ಹೇಳುತ್ತಿದ್ದರೂ, ಈ ನಕಲಿ ಹೆಂಡ್ತಿ ಹಿಂದೆ ಸುತ್ತುತ್ತಿದ್ದರೆ, ನಿನ್ನ ರೋಗಿಗಳ ಕಥೆ ಏನು ಎಂದು ಜಾಲತಾಣದಲ್ಲಿ ತಮಾಷೆ ಮಾಡುತ್ತಿದ್ದಾರೆ.
ನಿತ್ಯಾಳ ವೈದ್ಯನಲ್ಲ
ಅವರ ಪಾಡಿಗೆ ಅವರನ್ನು ಬಿಟ್ಟು, ನೀನು ವೈದ್ಯರ ಕೆಲಸಕ್ಕೆ ಹೋಗು. ನೀನು ನಿತ್ಯಾ ಹಿಂದೆ ಮುಂದೆ ಇದ್ದಷ್ಟೂ ಆಕೆಗೆ ತೊಂದರೆ. ನೀನು ನಿತ್ಯಾಳ ವೈದ್ಯನಲ್ಲ, ಬದಲಿಗೆ ಅಸಂಖ್ಯಾತ ರೋಗಿಗಳ ವೈದ್ಯ ಎಂದು ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

