- Home
- Entertainment
- TV Talk
- Karna Serial: ಕರ್ಣನಿಗೆ ಲಾರಿಯಿಂದ ಆ್ಯಕ್ಸಿಡೆಂಟ್- ಶೂಟಿಂಗ್ ವೇಳೆ ನಡೆದದ್ದೇನು? ವಿಡಿಯೋ ವೈರಲ್
Karna Serial: ಕರ್ಣನಿಗೆ ಲಾರಿಯಿಂದ ಆ್ಯಕ್ಸಿಡೆಂಟ್- ಶೂಟಿಂಗ್ ವೇಳೆ ನಡೆದದ್ದೇನು? ವಿಡಿಯೋ ವೈರಲ್
ಕರ್ಣ ಸೀರಿಯಲ್ನಲ್ಲಿನ ನಾಯಕನ ಅಪಘಾತದ ದೃಶ್ಯವನ್ನು ಹೇಗೆ ಚಿತ್ರೀಕರಿಸಲಾಗಿದೆ ಎಂಬ ವಿಡಿಯೋ ವೈರಲ್ ಆಗಿದೆ. ಲಾರಿ ಗುದ್ದುವ ದೃಶ್ಯದಲ್ಲಿ ನಟ ಕಿರಣ್ ರಾಜ್ ಅವರಿಗೆ ಹಗ್ಗ ಕಟ್ಟಿ ಮೇಲಕ್ಕೆ ಎಳೆಯುವ ಮೂಲಕ, ಸಾಹಸ ದೃಶ್ಯವನ್ನು ಸೆರೆಹಿಡಿಯಲಾಗಿದೆ.

ಕರ್ಣ ಸೀರಿಯಲ್
ಕರ್ಣ ಸೀರಿಯಲ್ (Karna Serial)ನಲ್ಲಿ ಸದ್ಯ ಕರ್ಣ ತನ್ನ ಮಗ ಎನ್ನುವ ಅರಿವು ಇಲ್ಲದೆಯೇ ರಮೇಶ್ ಕರ್ಣನ ಅಪಘಾತ ಮಾಡಿಸಿ ಖುಷಿಪಟ್ಟಿದ್ದಾನೆ. ಆದರೆ ಬಳಿಕ ಆತನಿಗೆ ಕರ್ಣನೇ ತನ್ನ ಮಗ ಎನ್ನುವುದು ತಿಳಿದು ಇನ್ನಿಲ್ಲದಂತೆ ಗೋಳಾಡುತ್ತಿದ್ದಾನೆ. ಹಾಗಿದ್ದರೆ ಈ ಅಪಘಾತದ ದೃಶ್ಯಗಳನ್ನು ಹೇಗೆ ಚಿತ್ರೀಕರಣ ಮಾಡಲಾಗಿದೆ ಎನ್ನುವ ವಿಡಿಯೋ ಅನ್ನು, shootingcrazy ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದ್ದು ಅದೀಗ ವೈರಲ್ ಆಗಿದೆ.
ಆ್ಯಕ್ಷನ್ ದೃಶ್ಯಗಳ ಶೂಟಿಂಗ್
ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ.
ಸಿನಿಮಾ ಮಾದರಿಯಲ್ಲಿ ಸೀರಿಯಲ್
ಇಷ್ಟು ಮಾಡಿದ ಮೇಲೂ ಚಿತ್ರ ಯಶಸ್ವಿ ಆಗಿಯೇ ಆಗುತ್ತದೆ ಎಂದೂ ಹೇಳುವುದು ಕಷ್ಟ. ಇದು ಸಿನಿಮಾದ ಮಾತಾದರೆ, ಇಂದು ಸೀರಿಯಲ್ಗಳೂ ಯಾವ ಸಿನಿಮಾಕ್ಕೂ ಕಮ್ಮಿ ಏನಿಲ್ಲ. ಸಿನಿಮಾಗಳ ಮಾದರಿಯಲ್ಲಿಯೇ ದೃಶ್ಯಗಳ ಶೂಟಿಂಗ್ ನಡೆಯುತ್ತದೆ. ಅದಕ್ಕೆ ಸಾಕ್ಷಿಯಾಗಿದೆ ಕರ್ಣ ಸೀರಿಯಲ್.
ಅಪಘಾತದ ಚಿತ್ರೀಕರಣ
ಆ್ಯಕ್ಸಿಡೆಂಟ್ ದೃಶ್ಯವನ್ನು ಮಾಡುವಾಗ, ಕರ್ಣ ಉರ್ಫ್ ನಟ ಕಿರಣ್ ರಾಜ್ ಅವರಿಗೆ ಹಗ್ಗವನ್ನು ಕಟ್ಟಲಾಗಿದೆ. ಅತ್ತ ಕಡೆಯಿಂದ ಲಾರಿ ಬರುವಾಗ, ನಟರನ್ನು ಮೇಲಕ್ಕೆ ಎಳೆಯಲಾಗುತ್ತದೆ. ಆದರೆ ಹಗ್ಗ ಯಾವುದೂ ಆ ಬಳಿಕ ವೀಕ್ಷಕರಿಗೆ ಕಾಣಿಸುವುದಿಲ್ಲ. ಬದಲಿಗೆ ಲಾರಿ ಗುದ್ದಿದಾಗ ನಟರು ಮೇಲಕ್ಕೆ ಹಾರಿ ಬಿದ್ದಂತೆ ಕಾಣಿಸುತ್ತದೆ.
ಮೈ ಝುಂ ಎನ್ನುವುದು
ಇದರ ಶೂಟಿಂಗ್ ವೈರಲ್ ಆಗಿದೆ. ಶೂಟಿಂಗ್ ನೋಡಿದರೆ ಮೈ ಝುಂ ಎನ್ನುವುದು ಕೂಡ ದಿಟವೇ. ನಟರು ಎಷ್ಟು ರಿಸ್ಕ್ ತೆಗೆದುಕೊಳ್ಳಬೇಕು ಎನ್ನುವುದರ ಜೊತೆಜೊತೆಗೇನೇ ಇಂಥ ಶೂಟಿಂಗ್ ಮಾಡುವಾಗ ತೆರೆಯ ಹಿಂದಿರುವ ಸಿಬ್ಬಂದಿ ಎಷ್ಟು ಜಾಗರೂಕರಾಗಿ ಇರಬೇಕು, ಹೇಗೆ ಅವರು ಇಂಥ ಸನ್ನಿವೇಶಗಳನ್ನು ಹ್ಯಾಂಡಲ್ ಮಾಡಬೇಕು ಎನ್ನುವ ಬಗ್ಗೆಯೂ ತೋರಿಸುತ್ತದೆ.
ತೆರೆಮರೆಯ ಹೀರೋಗಳು
ಸಾಮಾನ್ಯವಾಗಿ ನಟ,ನಟಿಯರು ತೆರೆಯ ಮೇಲೆ ಕಾಣಿಸುತ್ತಾರೆ. ಅವರನ್ನು ಜನರು ಹೀರೋ ಎಂದು ಆರಾಧಿಸುತ್ತಾರೆ. ಅವರಿಗೆ ದೊಡ್ಡ ಅಭಿಮಾನ ಬಳಗವೇ ಹುಟ್ಟಿಕೊಳ್ಳುತ್ತದೆ. ಆದರೆ ಅವರನ್ನು ತೆರೆಯ ಮೇಲೆ ಈ ರೀತಿಯಾಗಿ ಬಿಂಬಿಸಲು ತೆರೆಯ ಹಿಂದೆ ಸರ್ಕಸ್ ಮಾಡುವ ಎಲೆಮರೆಯ ಕಾಯಿಗಳು ಹಲವಾರು ಮಂದಿ ಇರುತ್ತಾರೆ. ಆದರೆ ಅವರು ಬೆಳಕಿಗೆ ಬರುವುದಿಲ್ಲ ಅಷ್ಟೇ. ಇಂಥ ಶೂಟಿಂಗ್ಗಳನ್ನು ನೋಡಿದಾಗ ಅವರ ನಿಜವಾದ ಸಾಹಸ ಏನು ಎನ್ನುವುದು ತಿಳಿಯುತ್ತದೆ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

