- Home
- Entertainment
- TV Talk
- Karna Serial: ದಶಕದ ಬಳಿಕ ಭುವನೇಶ್ವರಿಯಾಗಿ ಎಂಟ್ರಿ ಕೊಟ್ಟ ಕರ್ಣನ ಅಮ್ಮ- ನಟಿ ಜಯಶ್ರೀ ಸ್ಟೋರಿ ಇದು
Karna Serial: ದಶಕದ ಬಳಿಕ ಭುವನೇಶ್ವರಿಯಾಗಿ ಎಂಟ್ರಿ ಕೊಟ್ಟ ಕರ್ಣನ ಅಮ್ಮ- ನಟಿ ಜಯಶ್ರೀ ಸ್ಟೋರಿ ಇದು
'ಕರ್ಣ' ಧಾರಾವಾಹಿಗೆ ನಟಿ ಜಯಶ್ರೀ ಬಿ. ರಾಜ್ ಅವರ ಪ್ರವೇಶವು ಕಥೆಗೆ ರೋಚಕ ತಿರುವನ್ನು ನೀಡಿದೆ. ಅವರು ಕರ್ಣನ ತಾಯಿ ಭುವನೇಶ್ವರಿಯಾಗಿ ಕಾಣಿಸಿಕೊಂಡಿದ್ದು, ಸದ್ಯ ತಾಯಿ-ಮಗನಿಗೆ ತಮ್ಮ ಸಂಬಂಧದ ಅರಿವಿಲ್ಲ. ಈ ಲೇಖನವು ಜಯಶ್ರೀ ಅವರ ಸುದೀರ್ಘ ಕಿರುತೆರೆ ಪಯಣದ ಬಗ್ಗೆ ತಿಳಿಸುತ್ತದೆ.

ಕರ್ಣ ರೋಚಕ ತಿರುವು
ಕರ್ಣ ಸೀರಿಯಲ್ (karna Serial)ನಲ್ಲಿ ಈಗ ಕರ್ಣನ ಅಮ್ಮ ಭುವನೇಶ್ವರಿಯ ಎಂಟ್ರಿ ಆಗಿದ್ದು, ಸೀರಿಯಲ್ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಕರ್ಣ ಮತ್ತು ಭುವನೇಶ್ವರಿ ಇಬ್ಬರಿಗೂ ತಾವು ಅಮ್ಮ-ಮಗ ಎನ್ನುವುದು ತಿಳಿದಿಲ್ಲ. ಸದ್ಯ ಕರ್ಣನ ಪಾಲಿಗೆ ಅಮ್ಮನೇ ವಿಲನ್ ಆಗಿದ್ದಾಳೆ.
ಬೆಳಕಿಗೆ ಬಂದ ಭುವನೇಶ್ವರಿ
ಇಷ್ಟು ದಿನಗಳವರೆಗೆ ಭುವನೇಶ್ವರಿಯನ್ನು ಕತ್ತಲಲ್ಲಿ ಇಡಲಾಗಿತ್ತು. ಇದೀಗ ಆಕೆ ಬೆಳಕಿಗೆ ಬಂದಿದ್ದಾಳೆ. ಅರ್ಥಾತ್ ಭುವನೇಶ್ವರಿಯ ಪಾತ್ರವನ್ನು ನಟಿ ಜಯಶ್ರೀ ಬಿ. ರಾಜ್ ಅವರು ನಿರ್ವಹಿಸುತ್ತಿದ್ದಾರೆ. ಇದಾಗಲೇ ಹಲವಾರು ಸೀರಿಯಲ್ಗಳಲ್ಲಿ ಗುರುತಿಸಿಕೊಂಡಿರೋ ನಟ ಜಯಶ್ರೀ ಅವರು ಜೀ ಕನ್ನಡದಲ್ಲಿ, 10 ವರ್ಷಗಳ ಹಿಂದೆ ನಾಗಿಣಿ ಸೀರಿಯಲ್ನಲ್ಲಿ ನಟಿಸಿದ್ದರು. ಅದಾದ ಬಳಿಕ 10 ವರ್ಷಗಳ ನಂತರ ಈಗ ಜೀ ಕನ್ನಡದಲ್ಲಿ ಭುವನೇಶ್ವರಿ ಆಗಿ ಎಂಟ್ರಿಕೊಟ್ಟಿದ್ದಾರೆ.
ಬಹುಮುಖ ಪ್ರತಿಭೆ
ಅಂದಹಾಗೆ, ಜಯಶ್ರೀ ಬಿ ರಾಜ್ ಹೊಸಬರು ಅಲ್ವೇ ಅಲ್ಲ. ಯಾಕಂದ್ರೆ ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ತಮ್ಮ ನಟನೆ, ನಿರೂಪಣೆ ಮೂಲಕ ರಂಜಿಸಿಕೊಂಡು ಬಂದಿದ್ದಾರೆ ಜಯಶ್ರೀ ರಾಜ್. ಇವರು ನಟಿಯೂ ಹೌದು, ನಿರೂಪಕಿಯೂ ಹೌದು, ನಿರ್ಮಾಪಕಿಯೂ ಹೌದು ಜೊತೆಗೆ ನಿರ್ದೇಶಕಿಯೂ ಹೌದು. ಎಲ್ಲಾ ವಿಧದಲ್ಲೂ ಕನ್ನಡಿಗರ ಮನ ಗೆಲ್ಲುವ ಮೂಲಕ ಇಂದಿಗೂ ಎವರ್ ಗ್ರೀನ್ ಸುಂದರಿಯಾಗಿ ಕಂಗೊಳಿಸ್ತಿದ್ದಾರೆ ಜಯಶ್ರೀ ರಾಜ್ (Jayashree B Raj).
ಕನ್ನಡ ಇಂಡಸ್ಟ್ರಿಯಲ್ಲಿ ಬೆಳ್ಳಿ ಹಬ್ಬ
ನಟಿ ಜಯಶ್ರೀ ರಾಜ್ ಅವರು ಕನ್ನಡ ಇಂಡಸ್ಟ್ರಿಯಲ್ಲಿ ಬೆಳ್ಳಿ ಹಬ್ಬ ಆಚರಿಸುತ್ತಿದ್ದಾರೆ. ಈ ಹಿಂದೆ ಟಾಪ್ ಸೀರಿಯಲ್ಗಳಲ್ಲಿ ಒಂದು ಎನ್ನಿಸಿದ್ದ, ‘ಮಯಾಮೃಗ’ ಸೀರಿಯಲ್ನಲ್ಲಿ ಜನಮನ್ನಣೆ ಗಳಿಸಿದ್ದರು. ಇದನ್ನೂ ಮುನ್ನ ‘ಕಥೆಗಾರ’ ಸೀರಿಯಲ್ನಲ್ಲಿ ನಟಿಸಿದ್ದರು. ಈಗ ಅವರು ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪ್ರೇಮಕಾವ್ಯ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
ತೆಲುಗಿನಲ್ಲಿಯೂ ಬಿಜಿ
ಅಷ್ಟಕ್ಕೂ, ಜಯಶ್ರೀ ಅವರು ಕನ್ನಡದ ಜೊತೆಗೆ ತೆಲುಗಿನ ಎರಡು ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಪಡಮಟಿ ಸಂಧ್ಯಾರಾಗಂ’ ಮತ್ತು ‘ಮಲ್ಲಿ’ ಎನ್ನುವ ಧಾರವಾಹಿಗಳಲ್ಲಿ ನಟಿಸುತ್ತಿದ್ದು, ಪಡಮಟಿ ಸಂಧ್ಯಾರಾಗಂ ಝೀ ತೆಲುಗಿನ (telugu serials) ಸೂಪರ್ ಹಿಟ್ ಸೀರಿಯಲ್ ಗಳಲ್ಲಿ ಒಂದಾಗಿದೆ. ಸದಾ ಬ್ಯುಸಿಯಾಗಿರೋದಕ್ಕೆ ಇಷ್ಟಪಡುವ ಈ ನಟಿ ಸದ್ಯ ಬೆಂಗಳೂರು, ಹೈದರಾಬಾದ್ ಎಂದು ಶೂಟಿಂಗ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.
14ನೇ ವಯಸ್ಸಿನಲ್ಲಿ ನಿರೂಪಕಿಯಾಗಿ ಎಂಟ್ರಿ
14ನೇ ವಯಸ್ಸಿನಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡ ಜಯಶ್ರೀ, ಬಳಿಕ ಟಿ.ಎನ್ ಸೀತಾರಾಮ್ (T.N Seetharam) ನಿರ್ದೇಶನದ ‘ಕಥೆಗಾರ’ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ‘ಮಾಯಾಮೃಗ’, ‘ಜನನಿ’, ‘ಸಮಾಗಮ’, ‘ಸಹನ’, ‘ಭಾರ್ಗವಿ’, ‘ಪುಣ್ಯಕೋಟಿ’, ‘ರಥಸಪ್ತಮಿ’ ಸೇರಿದಂತೆ ಐವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆ ಜತೆಗೆ ‘ಅರಮನೆ’ ಮತ್ತು ‘ಕಸ್ತೂರಿ ನಿವಾಸ’ ಧಾರಾವಾಹಿಗಳ ನಿರ್ಮಾಣ ಕೂಡ ಮಾಡಿದ್ದಾರೆ. ಜೊತೆಗೆ ಬಿಗ್ ಬಾಸ್ ಕನ್ನಡದಲ್ಲೂ (Bigg Boss Kannada) ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಇದೆಲ್ಲದಕ್ಕೂ ಇವರಿಗೆ ಬೆನ್ನೆಲುಬಾಗಿ ನಿಂತವರು ಇವರ ಪತಿ ಚಂದ್ರಶೇಖರ್.
ಚಂದ್ರಶೇಖರ್ ಹಿನ್ನೆಲೆ
ಪತಿ ಚಂದ್ರಶೇಖರ್ ಕೂಡ ಒಂದು ಕಾಲದಲ್ಲಿ ಸೀರಿಯಲ್ ಗಳಲ್ಲಿ ಸಹ ನಟನಾಗಿ, ವಿಲನ್ ಆಗಿ ಕಾಣಿಸಿಕೊಂಡವರು. ಸೀರಿಯಲ್ ಮೂಲಕ ಇವರಿಗೆ ಸಿಕ್ಕ ಹೆಸರು ರಾಕೇಶ್ ಚಂದ್ರು, ಸೀರಿಯಲ್ ಒಂದರಲ್ಲಿ ಇವರ ಹೆಸರು ರಾಕೇಶ್ ಆಗಿದ್ದರಿಂದ ಜನ ಅವರನ್ನು ಅದೇ ಹೆಸರಲ್ಲಿ ಗುರುತಿಸಲು ಆರಂಭಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

