MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ದೇವಾಲಯಕ್ಕೆ ಬಂದಾಗ ಪ್ಲೀಸ್ ನಮ್ಮನ್ನು ವಿಲನ್​ ಥರ ನೋಡ್ಬೇಡಿ: ನಟಿ ಅಶ್ವಿನಿ ಗೌಡ ಮನವಿ ಮಾಡಿದ್ಯಾಕೆ

ದೇವಾಲಯಕ್ಕೆ ಬಂದಾಗ ಪ್ಲೀಸ್ ನಮ್ಮನ್ನು ವಿಲನ್​ ಥರ ನೋಡ್ಬೇಡಿ: ನಟಿ ಅಶ್ವಿನಿ ಗೌಡ ಮನವಿ ಮಾಡಿದ್ಯಾಕೆ

ಬಿಗ್ ಬಾಸ್ ಖ್ಯಾತಿಯ ನಟಿ ಅಶ್ವಿನಿ ಗೌಡ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗ, ತಮಗೆ ಬೇಗ ದರ್ಶನ ಸಿಕ್ಕಿದ್ದಕ್ಕೆ ಜನರು ತಮ್ಮನ್ನು ವಿಲನ್ ರೀತಿ ನೋಡುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಜನಸಂದಣಿಯನ್ನು ತಪ್ಪಿಸಲು ಆಡಳಿತ ಮಂಡಳಿ ಹೀಗೆ ಮಾಡುತ್ತದೆ ಎಂದಿದ್ದಾರೆ.

1 Min read
Author : Suchethana D
Published : Jul 24 2026, 08:06 PM IST
Share this Photo Gallery
  • FB
  • TW
  • Linkdin
  • Whatsapp
16
ಬಿಗ್​ಬಾಸ್​ ಬಳಿಕ ಇನ್ನಷ್ಟು ಖ್ಯಾತಿ
Image Credit : colors kannada

ಬಿಗ್​ಬಾಸ್​ ಬಳಿಕ ಇನ್ನಷ್ಟು ಖ್ಯಾತಿ

ಬಿಗ್​ಬಾಸ್​ (Bigg Boss) ಖ್ಯಾತಿಯ ಅಶ್ವಿನಿ ಗೌಡ (Ashwini Gowda) ಬಿಗ್​ಬಾಸ್​​ ಷೋ ಬಳಿಕ ಸಾಕಷ್ಟು ಜನಪ್ರಿಯರಾಗಿದ್ದಾರೆ. ಸಹಜವಾಗಿ ಬಿಗ್​ಬಾಸ್​​ ಅವರ ಖ್ಯಾತಿಯನ್ನು ಹೆಚ್ಚಿಸಿದ್ದು, ಅವರಿಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅಶ್ವಿನಿ ಗೌಡ ಬೇಸರ
Image Credit : colors kannada

ಅಶ್ವಿನಿ ಗೌಡ ಬೇಸರ

ಇಂತಿಪ್ಪ ಅಶ್ವಿನಿ ಗೌಡ ಇದೀಗ ಅಭಿಮಾನಿಗಳಲ್ಲಿ ಚಿಕ್ಕದೊಂದು ಮನವಿ ಮಾಡಿಕೊಂಡಿದ್ದಾರೆ. ಅದೇನೆಂದರೆ, ಜನರು ತಮ್ಮನ್ನು ವಿಲನ್​ ರೀತಿ ನೋಡುತ್ತಾರೆ ಎನ್ನುವುದು, ಅದೂ ದೇವರ ದರ್ಶನಕ್ಕೆ ಬಂದ ಸಮಯದಲ್ಲಿ ಹೀಗೆ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

Related Articles

Related image1
ತನಗಿಂತ ಮಕ್ಕಳೆಂದ್ರೆ ಹೆಂಡ್ತಿಗೆ ಪ್ರೀತಿ: ಕೋಪದಿಂದ 20 ವರ್ಷ ಮಾತು ಬಿಟ್ಟ ಗಂಡ! ಮುಂದೇನಾಯ್ತು ನೋಡಿ
Related image2
Karna Serial ಟ್ವಿಸ್ಟ್​: ಕತ್ತಲಲ್ಲಿದ್ದ ಭುವನೇಶ್ವರಿ ಬೆಳಕಿಗೆ ಬಂದಳು- ತನ್ನದೇ ಆಸ್ಪತ್ರೆಯಲ್ಲಿ ಕೆಲಸದವನಾದ ಕರ್ಣ
36
ವಿವಿಧ ಕಾರಣಕ್ಕೆ ಹೀಗೆ
Image Credit : colors kannada

ವಿವಿಧ ಕಾರಣಕ್ಕೆ ಹೀಗೆ

ಅಷ್ಟಕ್ಕೂ ಜನರು ಚುಚ್ಚುಮಾತು ಆಡಲು ಕಾರಣವೂ ಇದೆ. ಸಹಜವಾಗಿ ಸೆಲೆಬ್ರಿಟಿಗಳು ಬಂದಾಗ ದೇವಸ್ಥಾನಗಳಲ್ಲಿ ಜನರಿಗಿಂತಲೂ ಮುಂಚೆನೇ ಅವರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇದಕ್ಕೆ ಹಲವಾರು ಕಾರಣಗಳು ಇರುತ್ತವೆ. ಅವರು ಸೆಲೆಬ್ರಿಟಿ ಎನ್ನುವುದು ಒಂದು ಕಾರಣವಾದರೆ, ಅವರನ್ನು ನೋಡಿದಾಗ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳುವ ಸಲುವಾಗಿ ಮುಗಿಬಿದ್ದು ಗಲಾಟೆ ಸೃಷ್ಟಿಸುತ್ತಾರೆ ಎನ್ನುವ ಕಾರಣಕ್ಕೆ.

46
ವಿಲನ್​ ಥರ ನೋಡ್ಬೇಡಿ
Image Credit : Ashwini Gowda Instagram

ವಿಲನ್​ ಥರ ನೋಡ್ಬೇಡಿ

ಇದೀಗ ಚಾಮುಂಡಿ ಬೆಟ್ಟದ ದೇವಿ ದರ್ಶನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಶ್ವಿನಿ ಗೌಡ, ನಮಗೆ ಬೇಗ ದರ್ಶನಕ್ಕೆ ಬಿಡುತ್ತಾರೆ ಎಂದು ಜನರು ನಮ್ಮನ್ನು ವಿಲನ್​ ರೀತಿ ನೋಡ್ತಾರೆ, ಪ್ಲೀಸ್​ ಹಾಗೆ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

56
ಕ್ಯೂ ನಿಂತೇ ಬಂದಿರುತ್ತೇವೆ
Image Credit : Colors Kannada

ಕ್ಯೂ ನಿಂತೇ ಬಂದಿರುತ್ತೇವೆ

ನಿಮ್ಮ ಹಾಗೆ ನಾವೂ ಸರತಿಯಲ್ಲಿ ಕ್ಯೂ ನಿಂತೇ ಬಂದಿರುತ್ತೇವೆ. ಕೊನೆಯ ಕ್ಷಣದಲ್ಲಿ ನಿಮಗೆ ಸ್ವಲ್ಪವೇ ಮೊದಲು ನಮಗೆ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಾರೆ. ಬಂದ ತಕ್ಷಣ ಅವಕಾಶ ನೀಡಲ್ಲ. ಆದರೂ ಕೆಲವೊಮ್ಮೆ ವಿಲನ್​ ರೀತಿ ನೋಡ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ನಟಿ.

66
ಹಲವು ಕಾರಣ ಇವೆ
Image Credit : Colors Kannada

ಹಲವು ಕಾರಣ ಇವೆ

ನನ್ನಿಂದ ನಿಮಗೇನಾದ್ರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ನಮ್ಮನ್ನು ಬೇಗ ದರ್ಶನಕ್ಕೆ ಬಿಡಲು ಹಲವು ಕಾರಣವಿದೆ. ಫೋಟೋಗಾಗಿ ಬರುವ ಕಾರಣ ತೊಂದರೆ ಆಗಬಾರದು ಎಂದು ಹೀಗೆ ಮಾಡುತ್ತಾರಷ್ಟೇ. ಆದರೂ ನಾವೆಲ್ಲಾ ಕ್ಯೂನಲ್ಲಿ ನಿಂತೇ ಬಂದಿರುತ್ತೇವೆ ಎಂದಿದ್ದಾರೆ ಅಶ್ವಿನಿ ಗೌಡ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಅಶ್ವಿನಿ ಗೌಡ
Latest Videos
Recommended Stories
Recommended image1
300 ಸಂಚಿಕೆ ಪೂರೈಸಿದ ‘ನಂದಗೋಕುಲ’, ಯಶಸ್ಸಿಗೆ ಪತ್ನಿಯೇ ಕಾರಣ ಎಂದ ನಿರ್ದೇಶಕ ಶ್ರವಂತ್
Recommended image2
Vijay: ಸಿನಿಮಾದಲ್ಲಿದ್ದ ತಮ್ಮ ಸೀನ್‌ಗಳೆಲ್ಲ ಡಿಲೀಟ್! 'ಜನ ನಾಯಗನ್' ತಂಡದ ವಿರುದ್ಧ ಕಣ್ಣೀರಿಟ್ಟ ಖ್ಯಾತ ನಟಿ!
Recommended image3
ಕುಂಭಮೇಳ ಚೆಲುವೆ ಮೋನಾಲಿಸಾಗೆ ಪೊಲೀಸ್ ರಕ್ಷಣೆಗೆ 'ಒಕೆ' ಎಂದ ಕೋರ್ಟ್; ಎಲ್ಲಿದ್ದಾರೆ ಈಗ ರುದ್ರಾಕ್ಷಿ ಸುಂದರಿ?!
Related Stories
Recommended image1
ತನಗಿಂತ ಮಕ್ಕಳೆಂದ್ರೆ ಹೆಂಡ್ತಿಗೆ ಪ್ರೀತಿ: ಕೋಪದಿಂದ 20 ವರ್ಷ ಮಾತು ಬಿಟ್ಟ ಗಂಡ! ಮುಂದೇನಾಯ್ತು ನೋಡಿ
Recommended image2
Karna Serial ಟ್ವಿಸ್ಟ್​: ಕತ್ತಲಲ್ಲಿದ್ದ ಭುವನೇಶ್ವರಿ ಬೆಳಕಿಗೆ ಬಂದಳು- ತನ್ನದೇ ಆಸ್ಪತ್ರೆಯಲ್ಲಿ ಕೆಲಸದವನಾದ ಕರ್ಣ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved