- Home
- Entertainment
- TV Talk
- Actors in legal Case: ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಕಾನೂನು ಸಂಕಷ್ಟಕ್ಕೆ ಸಿಲುಕಿದ ಕನ್ನಡ ನಟ-ನಟಿಯರು!
Actors in legal Case: ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಕಾನೂನು ಸಂಕಷ್ಟಕ್ಕೆ ಸಿಲುಕಿದ ಕನ್ನಡ ನಟ-ನಟಿಯರು!
ಕನ್ನಡ ಚಿತ್ರರಂಗ ಹಾಗೂ ಕಿರುತೆರೆಗಳ ನಟ-ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ಕಾನೂನು ಸಂಕಷ್ಟಕ್ಕೆ ಒಳಗಾದವರು ಇಲ್ಲಿದ್ದಾರೆ ನೋಡಿ. ನವಿಲು ಗರಿ ಬಳಸಿ ನೃತ್ಯ ಮಾಡಿದ ನಿವೇದಿತಾ ಗೌಡ -ಕಿಶನ್ ಬೆಳಗುಲಿ ಸೇರಿ ಹಲವರ ವಿವರ ಇಲ್ಲಿದೆ.

ಸೋಶಿಯಲ್ ಮೀಡಿಯಾ ರೀಲ್ಸ್ನಿಂದ ಕಾನೂನು ಸಂಕಷ್ಟ ಎದುರಿದುತ್ತಿರುವ ನಟ-ನಟಿಯರು
ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕೆಂಬ ಹಂಬಲ ಎಲ್ಲರಿಗೂ ಇದೆ. ಆದರೆ, ಈ 'ರೀಲ್ಸ್' ಮತ್ತು ವಿಡಿಯೋಗಳ ಹುಚ್ಚಿನಲ್ಲಿ ಕೆಲವೊಮ್ಮೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿನಿಮಾ ಮತ್ತು ಕಿರುತೆರೆ ನಟ-ನಟಿಯರೇ ಕಾನೂನು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. "ಇದ್ದಕ್ಕಿದ್ದಂತೆ ಇರುವೆ ಬಿಟ್ಟುಕೊಳ್ಳುವುದು" ಎಂಬ ಗಾದೆಯಂತೆ, ಪ್ರಸಿದ್ಧಿಗಾಗಿ ಮಾಡಿದ ವಿಡಿಯೋಗಳು ಇವರನ್ನು ಪೊಲೀಸ್ ಠಾಣೆ ಮತ್ತು ಅರಣ್ಯ ಇಲಾಖೆಯ ಮೆಟ್ಟಿಲೇರಿಸಿವೆ. ಅಂತಹ ಕೆಲವು ಪ್ರಮುಖ ಪ್ರಕರಣಗಳ ವಿವರ ಇಲ್ಲಿದೆ.
ನಿವೇದಿತಾ ಗೌಡ - ಕಿಶನ್ ಬೆಳಗುಲಿ:
ನಟಿ ನಿವೇದಿತಾ ಗೌಡ (Actress Niveditha Gowda) ಹಾಗೂ ನಟ ಕಿಶನ್ ಬೆಳಗುಲಿ (Kishan Belaguli) ಅವರು ನವಿಲು ಗರಿಗಳನ್ನು ಮೈಗೆಲ್ಲಾ ಸುತ್ತಿಕೊಂಡು ಓ.., ನವಿಲೇ, ಹೆಣ್ ನವಿಲೇ ಎಂದು ಡ್ಯಾನ್ಸ್ ಮಾಡಿದ್ದರು. ನವಿಲು ಗರಿಗಳನ್ನು (Peacock feathers)ಬಳಸಿ ನೃತ್ಯ ಮಾಡಿದ ಈ ಜೋಡಿಯ ವಿರುದ್ಧ ಇದೀಗ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ (Dinesh Kallahalli) ಅವರು ವಿರುದ್ಧ ಅರಣ್ಯ ಇಲಾಖೆಗೆ (Karnataka Forest Department) ದೂರು ನೀಡಿದ್ದಾರೆ. ರಾಷ್ಟ್ರೀಯ ಪಕ್ಷಿ ನವಿಲು (National Bird Peacock) ಬೇಟೆ ಮತ್ತು ಕೊಲ್ಲುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ನಿವೇದಿತಾ ಗೌಡ - ಕಿಶನ್ ಬೆಳಗುಲಿ:
ಆದರೂ, ನೂರಾರು ನವಿಲು ಗರಿಗಳಿಂದ ತಯಾರಿಸಿದ ಉಡುಪು ಧರಿಸಿ ಸಾರ್ವಜನಿಕವಾಗಿ ನೃತ್ಯ ಪ್ರದರ್ಶನ ಮಾಡಲಾಗಿದೆ. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ (Wildlife Protection Act) ಕಾಯ್ದೆ ಉಲ್ಲಂಘನೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಟಿ ನಿವೇದಿತಾ ಗೌಡ ಹಾಗೂ ಕಿಶನ್ ಬೆಳಗುಲಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದಿನೇಶ್ ಕಲ್ಲಹಳ್ಳಿ ಅವರು ದೂರು ನೀಡಿ ಆಗ್ರಹ ಮಾಡಿದ್ದಾರೆ.
ವರ್ತೂರು ಸಂತೋಷ್
ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಹಳ್ಳಿಕಾರ್ ಹಸುಗಳ ಸಂರಕ್ಷಕ ವರ್ತೂರು ಸಂತೋಷ್ (Varthur Santhosh) ಅವರೂ ಕೂಡ ಹುಲಿಯ ಉಗುರಿನ ಪೆಂಡೆಂಟ್ (Tiger) ಮಾಡಿಸಿಕೊಂಡು ಧರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಕಷ್ಟಕ್ಕೆ ಒಳಗಾಗಿದ್ದರು. ಇವರು ಬಿಗ್ ಬಾಸ್ ಮನೆಯಲ್ಲಿರುವಾಗಲೇ (Bigg Boss home) ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಬಂಧಸಿದ್ದರು. ಇದಾದ ನಂತರ ಕಾನೂನು ಹೋರಾಟ ಮಾಡಿ, ಜೈಲಿನಿಂದ ಹೊರಬಂದು ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ರಜತ್ ಕಿಶನ್- ವಿನಯ್ ಗೌಡ
ಕನ್ನಡ ಸಿನಿಮಾ ನಟರು ಹಾಗೂ ಬಿಗ್ ಬಾಸ್ ಸ್ಪರ್ಧಿಗಳೂ ಆಗಿರುವ ನಟ ವಿನಯ್ ಗೌಡ (Actor Vinay Gowda) ಹಾಗೂ ರಜತ್ ಕಿಶನ್ (Rajat Kishan) ಅಲಿಯಾಸ್ ಬುಜ್ಜಿ ಇಬ್ಬರೂ ರೀಲ್ಸ್ ಮಾಡುವುದಕ್ಕಾಗಿ ಮಚ್ಚುಗಳನ್ನು ಪ್ರದರ್ಶನ ಮಾಡಿದ್ದರು. ಈ ವೇಳೆ ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶನ ಮಾಡಿ ಬೆದರಿಕೆ ಒಡ್ಡಿದ್ದಾರೆಂದು ಕೇಸ್ ದಾಖಲಾಗಿತ್ತು. ಕೊನೆಗೆ ನಾವು ಬಳಸಿದ ಮಚ್ಚು ಪ್ಲಾಸ್ಟಿಕ್ನಿಂದ ಮಾಡಿದ ಮಚ್ಚಿನ ಮಾದರಿಯ ವಸ್ತು ಎಂದು ಪೊಲೀಸ್ ಠಾಣೆಗೆ ಮಚ್ಚು ಒಪ್ಪಿಸಿದ್ದರು.
ರಜತ್ ಕಿಶನ್
ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ರಜತ್ ಕಿಶನ್ (Rajath Kishan) ಮಚ್ಚು ಪ್ರದರ್ಶನದ ರೀಲ್ಸ್ ಬಳಿಕ, ಮೈಸೂರಿನಲ್ಲಿ ಪಾರಂಪರಿಕ ಜಿಲ್ಲಾಧಿಕಾರಿ ಕಟ್ಟಡದ (Mysore DC Office) ಮುಂಭಾಗದಲ್ಲಿ ಸಿಗರೇಟ್ ಸೇದುವ ಮೂಲಕ ಮತ್ತೊಮ್ಮೆ ಫಜೀತಿಗೆ ಸಿಲಕುಕಿದ್ದರು. ಆದರೆ, ಈ ಪ್ರಕರಣದ ಅಷ್ಟೊಂದು ಗಂಭೀರತೆ ಪಡೆದುಕೊಳ್ಳಲಿಲ್ಲ.
ನಟಿ ಅಶ್ವಿನಿ ಗೌಡ
ಅಶ್ವಿನಿ ಗೌಡ (Actress Ashwini Gowda)ಅವರು ಕೂಡ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ (Rakshita Shetty) ಅವರಿಗೆ ಎಸ್ ಕೆಟಗರಿ ಎಂಬ ಪದವನ್ನು (S Category word) ಬಳಕೆ ಮಾಡಿದ್ದರು. ಈ ಕುರಿತಂತೆ ವಕೀಲ ಪ್ರಶಾಂತ್ ಮೆತಾಲ್ ಎನ್ನುವವರು ಬಿಡದಿ ಠಾಣೆಯಲ್ಲಿ ಬಿಗ್ ಬಾಸ್ ಆಯೋಜಕರು ಹಾಗೂ ಅಶ್ವಿನಿ ಗೌಡ ವಿರುದ್ಧ ಜಾತಿನಿಂದನೆ ಮತ್ತು ಪದ ಬಳಸಿದ್ದಕ್ಕೆ ದೂರು ದಾಖಲಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ ಪದದಿಂದ ಅವರು ಕಾನೂನು ಸಂಕಷ್ಟಕ್ಕೆ ಒಳಗಾಗಿದ್ದರು
ತನಿಷಾ ಕುಪ್ಪಂಡ
ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ತನಿಷಾ ಕುಪ್ಪಂಡ (Tanisha Kuppanda) ವಿರುದ್ಧ ಜಾತಿ ನಿಂದನೆ ಆರೋಪದಡಿ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 'ಬಿಗ್ ಬಾಸ್' ಶೋನಲ್ಲಿ ತನಿಷಾ ಕುಪ್ಪಂಡ ಅವರು ಬೋವಿ ಜನಾಂಗದ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ, ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ. ಪದ್ಮಾ ಎಂಬುವರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಕುಂಬಳಗೂಡು ಪೊಲೀಸರು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

