ನೋ ಮಾತಾಡಂಗಿಲ್ಲ; ಎಲ್ಲದರಲ್ಲೂ ಮೂಗು ತೂರಿಸುವ ಪ್ರಿಯಾಗೆ ಚುರುಕು ಮುಟ್ಟಿಸಿದ ಅಮೂಲ್ಯಾ
ಕಲರ್ಸ್ ಕನ್ನಡದ ನಂದಗೋಕುಲ ಧಾರಾವಾಹಿಯಲ್ಲಿ, ವಲ್ಲಭನ ವಿಷಯದಲ್ಲಿ ಅನವಶ್ಯಕವಾಗಿ ತಲೆಹಾಕಿದ ಪ್ರಿಯಾಗೆ ಅಮೂಲ್ಯ ಎಲ್ಲರ ಮುಂದೆ ಖಡಕ್ ಎಚ್ಚರಿಕೆ ನೀಡಿದ್ದಾಳೆ. ತನ್ನ ಮತ್ತು ವಲ್ಲಭನ ವಿಷಯದಲ್ಲಿ ಮಾತನಾಡಲು ಪ್ರಿಯಾಗೆ ಯಾವುದೇ ಹಕ್ಕಿಲ್ಲ ಎಂದು ಅಮೂಲ್ಯ ಹೇಳಿದಾಗ, ಪ್ರಿಯಾ ಕಣ್ಣೀರು ಹಾಕಿದ್ದಾಳೆ.

ನಂದಗೋಕುಲ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವನಂದಗೋಕುಲಸೀರಿಯಲ್ ವೀಕ್ಷಕರು ಕಾಯುತ್ತಿದ್ದ ದಿನ ಮತ್ತೊಮ್ಮೆ ಬಂದಿದೆ. ಈ ಹಿಂದೆಯೇ ಪ್ರಿಯಾಗೆ ಅಮೂಲ್ಯ ಮತ್ತು ಮೀನಾ ಜೊತೆಯಾಗಿ ಎಚ್ಚರಿಕೆಯನ್ನು ನೀಡಿದ್ದರು. ಇಷ್ಟಾದ್ರು ತನ್ನ ಚಾಳಿ ಮುಂದುವರಿಸಿದ್ದ ಪ್ರಿಯಾಗೆ ಎಲ್ಲರ ಮುಂದೆ ಅಮೂಲ್ಯ ಎಚ್ಚರಿಕೆ ನೀಡಿದ್ದಾಳೆ. ಇದರಿಂದ ಪ್ರಿಯಾ ಕಣ್ಣೀರು ಹಾಕಿದ್ದಾಳೆ.
ವಲ್ಲಭನ ಬೈಕ್ ಕಳ್ಳತನ
ಬೈಕ್ ಕಳ್ಳತನವಾಗಿದ್ದರಿಂದ ಕೆಲಸಕ್ಕೆ ಹೋಗಲಾಗದೇ ವಲ್ಲಭ ಕಷ್ಟಪಡುತ್ತಿದ್ದಾನೆ. ಹಳೆ ಸೈಕಲ್ ಮೂಲಕವೇ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರೋದನ್ನು ಕಂಡ ತಾಯಿ ಗಿರಿಜಾ ಕಣ್ಣೀರು ಹಾಕುತ್ತಾ ಗಂಡ ನಂದನಿಗೆ ಸಹಾಯ ಮಾಡುವಂತೆ ಹೇಳಿದ್ದಳು. ಇದರಿಂದ ನಂದ ಸಹ, ಎಲ್ಲಿಯೋ ಹೋಗೋದು ಬೇಡ. ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವಂತೆ ಹೇಳ್ತಾರೆ. ಆದ್ರೆ ಇದಕ್ಕೆ ವಲ್ಲಭ ಒಪ್ಪಲ್ಲ.
ಪ್ರಿಯಾಗೆ ಎಚ್ಚರಿಕೆ ನೀಡಿದ ಅಮೂಲ್ಯ
ಮಗ ತನ್ನ ಮಾತು ಕೇಳದಕ್ಕೆ ಕೋಪಗೊಂಡು ನಂದಕುಮಾರ್ ಅಲ್ಲಿಂದ ಹೋಗ್ತಾನೆ. ಇಲ್ಲಿ ಸುಮ್ಮಿನರದೇ ವಲ್ಲಭ ಹೇಳಿದ್ದು ತಪ್ಪೆಂದು ಪ್ರಿಯಾ ಹೇಳುತ್ತಾಳೆ. ಇದರಿಂದ ಕೋಪಗೊಂಡ ಅಮೂಲ್ಯಾ, ನಾನು ಮೊದಲಿನಿಂದಲೂ ನಮ್ಮ ವಿಷಯಕ್ಕೆ ಬರಬೇಡಿ ಎಂದು ಹೇಳ್ತಿದ್ದೇನೆ. ವಲ್ಲಭನನ್ನು ಕಂಡ್ರೆ ಮಾವನಿಗೆ ಆಗಲ್ಲ ಅಂತ ನಿಮಗೆ ಹೇಳಿದ್ಯಾರು? ಹಿಂದೆ ಏನಾಗಿದೆ ಎಂಬ ವಿಷಯ ಗೊತ್ತಿಲ್ಲದೇ ಮಾತನಾಡಬೇಡಿ. ಮಾತನಾಡಬೇಕಾದ್ರೆ ಎಲ್ಲವನ್ನು ತಿಳಿದುಕೊಂಡು ಮಾತನಾಡಿ ಎಂದು ಎಚ್ಚರಿಸಿದ್ದಾಳೆ
ನೀವ್ಯಾಕೆ ಮಧ್ಯೆ ಮಾತನಾಡುತ್ತೀರಿ?
ಅಂಗಡಿಗೆ ಬಂದು ಕೆಲಸ ಮಾಡು ಅಂತ ಹೇಳಿದ್ದು ಮಾವನ ದೊಡ್ಡತನ. ಅದೇ ರೀತಿ ಅಂಗಡಿಯಲ್ಲಿ ಕೆಲಸ ಮಾಡೋದು ವಲ್ಲಭನಿಗೆ ಇಷ್ಟವಿಲ್ಲ. ಅಂಗಡಿಗೆ ಹೋಗಬೇಕಾ ಅಥವಾ ಬೇಡವಾ ಅನ್ನೋದು ಅವನ ಇಷ್ಟ. ಈ ಬಗ್ಗೆ ಪ್ರಶ್ನೆ ಮಾಡೋಕೆ ಯಾರಿಗೂ ಹಕ್ಕಿಲ್ಲ. ಅತ್ತೆ ತಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದಾರೆ. ವಲ್ಲಭನ ಹೆಂಡ್ತಿಯಾಗಿ ನಾನೇ ಏನು ಮಾತನಾಡುತ್ತಿಲ್ಲ. ನೀವ್ಯಾಕೆ ಮಧ್ಯೆ ಮಾತನಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾಳೆ.
ಪ್ರಿಯಾ ಕಣ್ಣೀರು
ವಲ್ಲಭನ ಬಗ್ಗೆ ಮಾತನಾಡುವ ಹಕ್ಕನ್ನು ನಿಮಗೆ ಯಾರೂ ಕೊಟ್ಟಿಲ್ಲ. ನೀವ್ಯಾಕೆ ನಮ್ಮ ವಿಷಯದಲ್ಲಿ ತಲೆ ಹಾಕ್ತೀರಿ? ನಿಮ್ಮ ವಿಷಯದಲ್ಲಿ ನಾವೇನಾದ್ರೂ ಮಧ್ಯೆ ಬರ್ತೀವಿಯಾ ಎಂದು ಅಮೂಲ್ಯಾ ಖಡಕ್ ಆಗಿ ಪ್ರಶ್ನೆ ಮಾಡಿದ್ದಾಳೆ. ಅಮೂಲ್ಯ ಮಾತುಗಳಿಂದ ಪ್ರಿಯಾ ಕಣ್ಣೀರು ಹಾಕಿದ್ದಾನೆ. ಮುಂದೇನಾಯ್ತು ಅನ್ನೋದನ್ನು ಇಂದಿನ ಸಂಚಿಕೆಯಲ್ಲಿ ನೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

