MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Bhagyalakshmi ಮಡಿಲಲ್ಲಿ ಮಗುವಾದ ಆದಿ: ಪ್ಲೀಸ್​ ಇವರ ಮದ್ವೆ ಮಾಡಿಸೋದು ಬೇಡ ಅಂತಿರೋದ್ಯಾಕೆ ಫ್ಯಾನ್ಸ್​?

Bhagyalakshmi ಮಡಿಲಲ್ಲಿ ಮಗುವಾದ ಆದಿ: ಪ್ಲೀಸ್​ ಇವರ ಮದ್ವೆ ಮಾಡಿಸೋದು ಬೇಡ ಅಂತಿರೋದ್ಯಾಕೆ ಫ್ಯಾನ್ಸ್​?

ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ, ಆದಿ ಮತ್ತು ಸುರಭಿ ಮದುವೆ ನಿಲ್ಲುವ ಹಂತದಲ್ಲಿದೆ. ಅನಾರೋಗ್ಯಕ್ಕೀಡಾದ ಆದಿಯ ಜವಾಬ್ದಾರಿಯನ್ನು ಭಾಗ್ಯ ವಹಿಸಿಕೊಂಡಿದ್ದು, ಅವಳಲ್ಲಿ ತಾಯಿಯ ಪ್ರೀತಿಯನ್ನು ಕಂಡಿದ್ದಾನೆ. ಇವರಿಬ್ಬರ ಸ್ನೇಹ ಮದುವೆಯಾಗಬಾರದು ಎಂಬುದು ಬಹುತೇಕ ವೀಕ್ಷಕರ ಅಭಿಪ್ರಾಯವಾಗಿದೆ.

1 Min read
Suchethana D
Published : Nov 24 2025, 11:54 AM IST
Share this Photo Gallery
  • FB
  • TW
  • Linkdin
  • Whatsapp
16
ಆದಿ ಭಾಗ್ಯ ಮದುವೆ?
Image Credit : Instagram

ಆದಿ-ಭಾಗ್ಯ ಮದುವೆ?

ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ಈಗ ರೋಚಕ ಘಟ್ಟ ತಲುಪಿದೆ. ಭಾಗ್ಯಳೇ ಮುಂದೆ ನಿಂತು ಆದಿ ಮತ್ತು ಸುರಭಿಯ ಮದುವೆಗೆ ಮುಂದಾಗಿದ್ದಳು. ಆದರೆ ಕುಸುಮಾಗೆ ಇದು ಇಷ್ಟವಿರಲಿಲ್ಲ. ಇದಕ್ಕೆ ಕಾರಣ, ಆಕೆಗೆ ಆದಿ ಮತ್ತು ಭಾಗ್ಯ ಮದುವೆಯಾಗಬೇಕು ಎನ್ನುವ ಆಸೆ.

26
ಒಳ್ಳೆಯ ಸ್ನೇಹ ಸಂಬಂಧ
Image Credit : Instagram

ಒಳ್ಳೆಯ ಸ್ನೇಹ ಸಂಬಂಧ

ಆದರೆ ಭಾಗ್ಯಳ ಪಾಲಿಗೆ ಆದಿ ಒಳ್ಳೆಯ ಸ್ನೇಹಿತ ಅಷ್ಟೇ. ಆದಿಗೂ ಭಾಗ್ಯಳ ಮೇಲೆ ಆ ರೀತಿಯ ವ್ಯಾಮೋಹವಿಲ್ಲ. ಅವರಿಬ್ಬರದ್ದೂ ಸ್ನೇಹ ಸಂಬಂಧ ಮಾತ್ರ. ಆದರೆ, ಕುಸುಮಳಂತೆ ಭಾಗ್ಯಲಕ್ಷ್ಮಿಯ ಬಹುತೇಕ ವೀಕ್ಷಕರು ಕೂಡ ಆದಿ ಮತ್ತು ಭಾಗ್ಯ ಮದುವೆಯಾಗಬೇಕು ಎಂದೇ ಹೇಳುತ್ತಾ ಬಂದವರು.

Related Articles

Related image1
ಪುಟ್ಟಕ್ಕನ ಮಕ್ಕಳು- Bigg Boss ಮಂಜು ಭಾಷಿಣಿ ಕೊನೆಯ ದಿನದ ಶೂಟಿಂಗ್: ಉಮಾಶ್ರೀ ಕಣ್ಣೀರು- ವಿಡಿಯೋ ವೈರಲ್
Related image2
Karna ಸೀರಿಯಲ್​ ನಿತ್ಯನ ನಟನೆಗೆ ಅಪ್ಪು ಶ್ಲಾಘನೆ: ಪುನೀತ್​ ರಾಜ್​ ದನಿ ಕೇಳಿ ನಮ್ರತಾ ಗೌಡ ಕಣ್ಣೀರು
36
ಕುಸಿದ ಆದಿ
Image Credit : Instagram

ಕುಸಿದ ಆದಿ

ಇದೀಗ ಸುರಭಿಯ ಹೆಸರು ಕೇಳುತ್ತಲೇ ಆದಿಗೆ ತನ್ನ ಮಾಜಿ ಲವರ್​ ನೆನಪಾಗಿ ಕುಸಿದು ಬಿದ್ದಿದ್ದಾನೆ. ಆತನನ್ನು ಆಸ್ಪತ್ರೆಗೆ ಸೇರಿಸಿದಾಗ, ಅವನನ್ನು ಗುಣಮುಖರನ್ನಾಗಿ ಮಾಡಲು ಭಾಗ್ಯಳಿಂದ ಮಾತ್ರ ಸಾಧ್ಯ ಎಂದಿದ್ದಾರೆ ವೈದ್ಯರು. ಇದೇ ಕಾರಣಕ್ಕೆ ಆದಿಯ ಆರೋಗ್ಯದ ಜವಾಬ್ದಾರಿಯನ್ನು ಭಾಗ್ಯ ವಹಿಸಿಕೊಂಡಿದ್ದಾಳೆ.

46
ಭಾಗ್ಯಳ ಮಡಿಲಲ್ಲಿ ಮಗು
Image Credit : Instagram

ಭಾಗ್ಯಳ ಮಡಿಲಲ್ಲಿ ಮಗು

ಭಾಗ್ಯಳ ಪ್ರೀತಿಯಲ್ಲಿ ಅಮ್ಮನ ಪ್ರೀತಿಯನ್ನು ಕಂಡಿದ್ದಾನೆ ಆದಿ. ನಿಮ್ಮ ಸೇವೆ ನೋಡುತ್ತಿದ್ದರೆ ನನ್ನ ಅಮ್ಮನೇ ನೆನಪಾದಳು ಎಂದು ಆತ ಭಾಗ್ಯಳ ಮಡಿಲಲ್ಲಿ ಮಗುವಾಗಿ ಬಿಟ್ಟಿದ್ದಾನೆ. ಅದು ಅಮ್ಮ-ಮಗನ ಬಾಂಧವ್ಯವನ್ನು ಪ್ರತಿಬಿಂಬಿಸುವಂತಿದೆ.

56
ಪ್ಲೀಸ್​ ಮದ್ವೆ ಮಾಡಬೇಡಿ
Image Credit : Instagram

ಪ್ಲೀಸ್​ ಮದ್ವೆ ಮಾಡಬೇಡಿ

ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ಇವರಿಬ್ಬರ ಮದುವೆ ಆಗಬೇಕು ಎಂದು ಕೆಲವೇ ಜನ ಹೇಳುತ್ತಿದ್ದರೆ, ಮದುವೆಯಿಂದ ಸಂಬಂಧ ಹಾಳಾಗುತ್ತದೆ, ಅಲ್ಲಿ ಬೇರೆಯದ್ದೇ ವರ್ತನೆ ಶುರುವಾಗುತ್ತದೆ. ದಯವಿಟ್ಟು ಇವರನ್ನು ಹೀಗೆಯೇ ಸ್ನೇಹಿತರನ್ನಾಗಿ ಬಿಟ್ಟುಬಿಡಿ, ಮದುವೆ ಮಾಡಿಸಬೇಡಿ. ಇವರದ್ದು ಶುದ್ಧವಾಗಿರುವ ಪ್ರೀತಿ, ಸ್ನೇಹ. ಆ ಬಾಂಧವ್ಯ ಹಾಗೆಯೇ ಮುಂದುವರೆಯಲಿ ಎನ್ನುವವರೇ ಹೆಚ್ಚು.

66
ನಿಜ ಜೀವನದಲ್ಲೂ ಹಾಗೆ
Image Credit : Instagram

ನಿಜ ಜೀವನದಲ್ಲೂ ಹಾಗೆ

ಹಾಗೆ ನೋಡಿದರೆ, ನಿಜ ಜೀವನದಲ್ಲಿಯೂ ಇದೇ ರೀತಿ ಆಗುವುದು ಇದೆ. ಪ್ರೇಮಿಗಳಾಗಿ ಎಷ್ಟೋ ವರ್ಷ ತುಂಬಾ ಪ್ರೀತಿಯಿಂದ ಇರುವವರು, ಮದುವೆ ಎನ್ನುವ ಬಂಧನಕ್ಕೆ ಒಳಗಾದ ಕೆಲವೇ ವರ್ಷಗಳಲ್ಲಿ ಬೇರೆ ಬೇರೆಯಾಗುವುದು ಇದೆ. ಅಲ್ಲಿ ನಾನು, ನನ್ನದು, ಇಗೋ ಎಲ್ಲವೂ ಶುರುವಾಗಿಬಿಡುತ್ತದೆ. ಇದೇ ಕಾರಣಕ್ಕೆ ಭಾಗ್ಯ ಮತ್ತು ಆದಿ ಕೂಡ ಹೀಗೆಯೇ ಇರಲಿ ಎನ್ನುವುದು ಹಲವರ ಅಭಿಮತ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ
ಸಂಬಂಧಗಳು
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
Latest Videos
Recommended Stories
Recommended image1
Bigg Boss Kannada 12: ತಮ್ಮ ಖುಷಿಗೆ ಮೂರು ಕಾರಣಗಳನ್ನು ನೀಡಿದ ರಕ್ಷಿತಾ ಶೆಟ್ಟಿ
Recommended image2
BBK 12 ನಾಮಿನೇಷನ್: ರಣಕಹಳೆ ಮೊಳಗಿಸಿದ ಧ್ರುವಂತ್, ಬೆಕ್ಕಿನ ಹೆಜ್ಜೆ ಇಟ್ಟ ರಕ್ಷಿತಾ ಶೆಟ್ಟಿ
Recommended image3
BBK 12: ಸೀರಿಯಸ್ ಟೈಮ್‌ನಲ್ಲೂ ಗಿಲ್ಲಿ ವಿಚಿತ್ರ ವರ್ತನೆ; ಇತ್ತ ರಿಷಾ ಗೌಡ ಎಲಿಮಿನೇಷನ್‌ನಲ್ಲಿತ್ತು ಅಚ್ಚರಿ
Related Stories
Recommended image1
ಪುಟ್ಟಕ್ಕನ ಮಕ್ಕಳು- Bigg Boss ಮಂಜು ಭಾಷಿಣಿ ಕೊನೆಯ ದಿನದ ಶೂಟಿಂಗ್: ಉಮಾಶ್ರೀ ಕಣ್ಣೀರು- ವಿಡಿಯೋ ವೈರಲ್
Recommended image2
Karna ಸೀರಿಯಲ್​ ನಿತ್ಯನ ನಟನೆಗೆ ಅಪ್ಪು ಶ್ಲಾಘನೆ: ಪುನೀತ್​ ರಾಜ್​ ದನಿ ಕೇಳಿ ನಮ್ರತಾ ಗೌಡ ಕಣ್ಣೀರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved