MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಅಂತೂ ಇಂತೂ ಭೂಮಿಕಾಗೆ ಹೊಟ್ಟೆ ಬಂತು! ಗೌತಮ್‌ ಕೇರ್‌ ನೋಡಿ ಕಳೆದುಹೋದ ಪ್ರೇಕ್ಷಕರು!

Amruthadhaare Serial: ಅಂತೂ ಇಂತೂ ಭೂಮಿಕಾಗೆ ಹೊಟ್ಟೆ ಬಂತು! ಗೌತಮ್‌ ಕೇರ್‌ ನೋಡಿ ಕಳೆದುಹೋದ ಪ್ರೇಕ್ಷಕರು!

ʼಅಮೃತಧಾರೆʼ ಧಾರಾವಾಹಿಯಲ್ಲಿ ಹೊಸ ಮನ್ವಂತರ. ಹೌದು, ಗೌತಮ್‌, ಭೂಮಿಕಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಾಜೇಂದ್ರ ಭೂಪತಿ ಕುತಂತ್ರ, ಇನ್ನೊಂದು ಕಡೆ ಶಕುಂತಲಾ ರಹಸ್ಯ ಕಂಡುಹಿಡಿಯುವಲ್ಲಿ ಬ್ಯುಸಿಯಾಗಿದ್ದ ಈ ಜೋಡಿ ಈಗ ತಮಗೆ ಟೈಮ್‌ ಕೊಡುತ್ತಿದೆ.

1 Min read
Padmashree Bhat
Published : May 31 2025, 11:42 AM IST
Share this Photo Gallery
  • FB
  • TW
  • Linkdin
  • Whatsapp
15
Image Credit : zee kannada

ಸದ್ಯ ಭೂಮಿಕಾ, ಗೌತಮ್‌ ಪರಸ್ಪರ ಇಬ್ಬರೂ ಸಮಯ ಕಳೆಯುತ್ತಿದ್ದಾರೆ. ಗೌತಮ್‌ಗೆ ಮಕ್ಕಳೆಂದರೆ ತುಂಬ ಇಷ್ಟ. ಈಗ ಅವನು ಪತ್ನಿ ಭೂಮಿಕಾಳನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ನನ್ನ ಹಾಗೆ ಯೋಚನೆ ಮಾಡುವವರು ಬೇಕು ಎಂದು ಭೂಮಿಕಾ ಬಯಸುತ್ತಿದ್ದಳು, ಅದರಂತೆ ಅವಳಿಗೆ ಪತಿ ಸಿಕ್ಕಿದ್ದಾನೆ.

25
Image Credit : zee kannada instagram

ಭೂಮಿಕಾ ಮಗುವನ್ನು ಸಾಯಿಸಲು ಶಕುಂತಲಾ ರೆಡಿಯಾಗಿದ್ದಾಳೆ. ಇನ್ನೊಂದು ಕಡೆ ರಾಜೇಂದ್ರ ಭೂಪತಿ ಕೂಡ ಹಲ್ಲು ಮಸೆಯುತ್ತಿದ್ದಾನೆ. ಹೀಗಾಗಿ ಭೂಮಿಕಾಗೆ ಏನಾಗಲಿದೆ ಎಂಬ ಆತಂಕವೂ ಇದೆ.

Related Articles

Related image1
Actress Anvita Sagar: ಹೆಸರು ಬದಲಿಸಿ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಅಮೃತಧಾರೆ ಮಲ್ಲಿ: ಟ್ರೈಲರ್​ ಬಿಡುಗಡೆ
Related image2
ಲಚ್ಚಿಗೆ ಕಂಡೇ ಬಿಡ್ತು ಕಾಲು: ಶಕುಂತಲಾ ಕಥೆ ಫಿನಿಶ್​? ಅಮೃತಧಾರೆ ಮುಕ್ತಾಯ?
35
Image Credit : zee kannada instagram

ಗರ್ಭಿಣಿ ಭೂಮಿಕಾಗೆ ಗೌತಮ್‌ ಈಗ ಬಹಳ ಕೇರ್‌ ಮಾಡುತ್ತಿದ್ದಾನೆ. ರಾತ್ರಿ ಹೊತ್ತು ಚಳಿಯಲ್ಲಿ ಫೈಯರ್‌ ಕ್ಯಾಂಪ್‌ ವ್ಯವಸ್ಥೆ ಮಾಡೋದು, ಈಗತಾನೇ ತಲೆಸ್ನಾನ ಮಾಡಿದ ಪತ್ನಿಗೆ ಸಾಮ್ರಾಣಿ ಹೊಗೆಯಿಂದ ತಲೆಕೂದಲು ಒಣಗಿಸೋದು, ಪ್ರೀತಿಯಿಂದ ತಿಂಡಿ ತಿನಿಸೋದು ಹೀಗೆ ಗೌತಮ್‌ ಈಗ ಪತ್ನಿಗೆ ಫುಲ್‌ ಟೈಮ್‌ ಕೊಡ್ತಿದ್ದಾನೆ. ಈಗಾಗಲೇ ವಾಹಿನಿಯು ಪ್ರೋಮೋ ರಿಲೀಸ್‌ ಮಾಡಿದ್ದು, ವೀಕ್ಷಕರಂತೂ ಪದೇ ಪದೇ ವಿಡಿಯೋ ನೋಡ್ತಿದ್ದಾರೆ.

45
Image Credit : zee kannada instagram

ಮೇ 31 ಸಂಜೆ 7 ಗಂಟೆಗೆ ಈ ಹೊಸ ಮನ್ವಂತರ ಎಪಿಸೋಡ್‌ ಪ್ರಸಾರ ಆಗಲಿದೆ. ಈ ಎಪಿಸೋಡ್‌ ನೋಡಿ ವೀಕ್ಷಕರು ಖುಷಿ ಆಗಿದ್ದಲ್ಲದೆ, ಭೂಮಿಕಾಗೆ ಹೊಟ್ಟೆ ಬಂದಿದ್ದು ನೋಡಿ ಮಗು ಗಂಡೋ? ಹೆಣ್ಣೋ ಎಂದು ಚರ್ಚೆ ಶುರು ಮಾಡಿದ್ದಾರೆ.

55
Image Credit : zee kannada instagram

ನಟಿ ಛಾಯಾ ಸಿಂಗ್‌ ಅವರು ಭೂಮಿಕಾ ಆಗಿ, ರಾಜೇಶ್‌ ನಟರಂಗ ಅವರು ಗೌತಮ್‌ ದಿವಾನ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೈಸೂರು ಮಾಲತಿ, ಸ್ವಾತಿ ರಾಯಲ್‌, ಸಿಲ್ಲಿ ಲಲ್ಲಿ ಆನಂದ್‌, ಕರಣ್‌ ಕೆ ಆರ್‌, ಅಪೇಕ್ಷಾ, ಅನ್ವಿತಾ ಸಾಗರ್‌ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
ಛಾಯಾ ಸಿಂಗ್
ರಾಜೇಶ್ ನಟರಂಗ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved