MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial Update: ಮಲ್ಲಿ ಮಾಡಿದ ಮಹಾಪ್ಲ್ಯಾನ್‌ಗೆ‌ ತತ್ತರಿಸಿ, ಬೀದಿಯಲ್ಲಿ ಬಿದ್ದ ಜಯದೇವ್

Amruthadhaare Serial Update: ಮಲ್ಲಿ ಮಾಡಿದ ಮಹಾಪ್ಲ್ಯಾನ್‌ಗೆ‌ ತತ್ತರಿಸಿ, ಬೀದಿಯಲ್ಲಿ ಬಿದ್ದ ಜಯದೇವ್

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ಗೆ ಈಗ ರೆಕ್ಕೆ ಕತ್ತರಿಸಿದಂತಾಗಿದೆ. ಅವನ ಬ್ಯಾಂಕ್‌ ಅಕೌಂಟ್‌ಗಳೆಲ್ಲವೂ ಈಗ ಫ್ರೀಜ್‌ ಆಗಿದೆ. ಅವನು ಮಲ್ಲಿಯನ್ನು ಹುಡುಕಿಕೊಂಡು ವಠಾರಕ್ಕೆ ಬಂದಿದ್ದಾನೆ. ಆದರೆ ಅವನಿಗೆ ಮಂಗಳಾರತಿ ಆಗಿದೆ.

1 Min read
Padmashree Bhat
Published : Dec 01 2025, 01:42 PM IST
Share this Photo Gallery
  • FB
  • TW
  • Linkdin
  • Whatsapp
15
ಪುಟಾಣಿಗಳ ಕಣ್ಣಿಗೆ ಬಿದ್ದ ಸತ್ಯವಿದು!
Image Credit : zee kannada

ಪುಟಾಣಿಗಳ ಕಣ್ಣಿಗೆ ಬಿದ್ದ ಸತ್ಯವಿದು!

ಜಯದೇವ್‌ ಈಗ ಮಲ್ಲಿಯ ಫೋನ್‌ ಟ್ರ್ಯಾಪ್‌ ಮಾಡಿದಾಗ, ಅವಳು ಎಲ್ಲಿದ್ದಾಳೆ ಎನ್ನುವ ಲೊಕೇಶನ್‌ ಸಿಕ್ಕಿದೆ. ಅದನ್ನು ಹುಡುಕಿಕೊಂಡು ಅವನು ವಠಾರಕ್ಕೆ ಬಂದಿದ್ದಾನೆ. ಮಲ್ಲಿಯನ್ನು ಹುಡುಕಿಕೊಂಡು ಜಯದೇವ್‌ ಬಂದಿದ್ದಾನೆ ಎಂದು ಆಕಾಶ್, ಮಿಂಚುಗೆ ಗೊತ್ತಾಗಿದೆ. ಅದನ್ನು ಅವರು ಮಲ್ಲಿಗೆ ತಿಳಿಸಿದರು. 

25
ಮಲ್ಲಿಗೆ ಬಂದ ಸಮಸ್ಯೆ ಬಗೆಹರಿದಿದೆ
Image Credit : zee kannada

ಮಲ್ಲಿಗೆ ಬಂದ ಸಮಸ್ಯೆ ಬಗೆಹರಿದಿದೆ

ಆಕಾಶ್‌ ಹಾಗೂ ಮಿಂಚುವಿನಿಂದ ವಿಷಯ ತಿಳಿದ ಮಲ್ಲಿ, ಆ ವಠಾರದ ಮನೆಯ ಮಾಲೀಕರ ಬಳಿ ಹೋಗಿ, “ಅವನು ಹೆಣ್ಣು ಮಕ್ಕಳ ವಿಷಯದಲ್ಲಿ ಸರಿ ಇಲ್ಲ” ಎನ್ನೋ ಥರ ಮಾತನಾಡಿದ್ದಳು. ಆಮೇಲೆ ಅವರು ಜಯದೇವ್‌ ಬಳಿ ಕೂಗಾಡಿದ್ದಾರೆ. ಜಯದೇವ್‌ ಕೂಡ ಬಾಯಿಗೆ ಬಂದ ಹಾಗೆ ಮಾತನಾಡಿದ್ದನು. ಎಲ್ಲರೂ ಸೇರಿಕೊಂಡು ಅವನನ್ನು ಕಾರ್‌ ಬಳಿ ನೂಕಿದ್ದಾರೆ. ಅಲ್ಲಿಗೆ ಮಲ್ಲಿಗೆ ಬಂದ ಸಮಸ್ಯೆ ಬಗೆಹರಿದಿದೆ.

Related Articles

Related image1
Amruthadhaare Serial: ಇದೇನಾಗೋಯ್ತು? ವಿಲನ್​ ಜೈದೇವ್​ ಕೈಯಲ್ಲಿ ಸಿಕ್ಕಿಬಿದ್ದ ಆಕಾಶ್​, ಮಿಂಚು- ಮುಂದೇನು?
Related image2
Amruthadhaare Serial: ಕೊನೆಗೂ ಅಪ್ಪನ ಬಗ್ಗೆ ವಿಚಾರಿಸಿಯೇಬಿಟ್ಟ ಆಕಾಶ್​: ಆಗಬಾರದ್ದು ಆಗೋಯ್ತು! ಭೂಮಿಕಾ ನಡೆ ಏನು?
35
ದೇವಸ್ಥಾನದಲ್ಲಿ ಗೌತಮ್‌, ಭೂಮಿಕಾ
Image Credit : zee kannada

ದೇವಸ್ಥಾನದಲ್ಲಿ ಗೌತಮ್‌, ಭೂಮಿಕಾ

ಮಗ-ಸೊಸೆ ದೂರ ಆಗಿದ್ದಾರೆ ಎಂದು ತಿಳಿದು, ಅದನ್ನು ನಾನೇ ಸರಿ ಮಾಡಬೇಕು ಎಂದು ಭಾಗ್ಯಮ್ಮ ಮನೆಯಿಂದ ಹೊರಬಂದಿದ್ದಾಳೆ. ಈ ಮೂವರು ಏಕಕಾಲಕ್ಕೆ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬಂಡಿಕಾಳಿ ದೇವಸ್ಥಾನದಲ್ಲಿ ಗೌತಮ್‌ ಹಾಗೂ ಭೂಮಿಕಾ, ಭಾಗ್ಯಮ್ಮ ಇದ್ದಾರೆ. ಭೂಮಿಕಾಳನ್ನು ಭಾಗ್ಯಮ್ಮನಿಗೆ ಮಾತು ಬಂದಿದೆ, ಭೂಮಿಕಾ ಎಂದು ಅವಳು ಕರೆದಿದ್ದಾಳೆ.

45
ಪ್ಲ್ಯಾನ್‌ ಮಾಡುತ್ತಲಿರುವ ಜಯದೇವ್‌
Image Credit : zee kannada

ಪ್ಲ್ಯಾನ್‌ ಮಾಡುತ್ತಲಿರುವ ಜಯದೇವ್‌

ಈ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾ ಒಂದಾಗಬೇಕಿದೆ. ಇನ್ನೊಂದು ಕಡೆ ಜಯದೇವ್‌ ಈಗ ಮತ್ತೆ ಗೌತಮ್‌ಗೆ ಮರಳು ಮಾಡಿ ಮತ್ತೆ ಆಸ್ತಿಯನ್ನು ಪಡೆದುಕೊಳ್ಳೋ ಪ್ಲ್ಯಾನ್‌ನಲ್ಲಿದ್ದಾನೆ, ಮಲ್ಲಿ ಜೀವನ ಹಾಳಾಗಬೇಕು, ಅವಳು ಖುಷಿ ಆಗಿರಲಬಾರದು ಎಂದು ಬಯಸುತ್ತಿದ್ದಾನೆ.

55
ಪಾತ್ರಧಾರಿಗಳು ಯಾರು?
Image Credit : zee kannada

ಪಾತ್ರಧಾರಿಗಳು ಯಾರು?

ಗೌತಮ್‌, ಭೂಮಿಕಾ ಬಾಳಲ್ಲಿ ಜಯದೇವ್‌ ಮತ್ತೆ ಆಟ ಆಡುವ ಸಾಧ್ಯತೆ ಇದೆ. ಹೀಗಾಗಿ ಈ ಧಾರಾವಾಹಿ ಕತೆ ಏನಾಗಲಿದೆಯೋ ಏನೋ! 

ಗೌತಮ್‌ ಪಾತ್ರದಲ್ಲಿ ರಾಜೇಶ್‌ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್‌, ಜಯದೇವ್‌ ಪಾತ್ರದಲ್ಲಿ ರಾಣವ್‌ ಗೌಡ, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು ಅವರು ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
Latest Videos
Recommended Stories
Recommended image1
ಜೀನ್ಸ್ ಜೊತೆ ಬಿಂದಿ… ಸೋಲೋ ಟ್ರಿಪ್ ಮಾಡ್ತಿರೋ Bhoomi Shetty ಲುಕ್ ಮೆಚ್ಚಿಕೊಂಡ ಫ್ಯಾನ್ಸ್
Recommended image2
Amruthadhaare: ಬಂಡಿಕಾಳಿ ದೇವಸ್ಥಾನದಲ್ಲಿ ಗೌತಮ್, ಭೂಮಿಕಾ, ಭಾಗ್ಯ; ನಿರ್ದೇಶಕರಿಗೆ ಅವಾರ್ಡ್‌ ಕೊಡಿ ಎಂದ ವೀಕ್ಷಕರು
Recommended image3
BBK 12: ಗಿಲ್ಲಿ ನಟ, ಹೆಣ್ಣು ಮಕ್ಕಳ ಜೊತೆ ಬೆಳೆದಿಲ್ವಾ? - ವೀಕ್ಷಕರ ಕೆಂಗಣ್ಣಿಗೆ ಗುರಿಯಾದ Kavya Shaiva
Related Stories
Recommended image1
Amruthadhaare Serial: ಇದೇನಾಗೋಯ್ತು? ವಿಲನ್​ ಜೈದೇವ್​ ಕೈಯಲ್ಲಿ ಸಿಕ್ಕಿಬಿದ್ದ ಆಕಾಶ್​, ಮಿಂಚು- ಮುಂದೇನು?
Recommended image2
Amruthadhaare Serial: ಕೊನೆಗೂ ಅಪ್ಪನ ಬಗ್ಗೆ ವಿಚಾರಿಸಿಯೇಬಿಟ್ಟ ಆಕಾಶ್​: ಆಗಬಾರದ್ದು ಆಗೋಯ್ತು! ಭೂಮಿಕಾ ನಡೆ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved