MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial Update: ಲಡ್ಡು ಬಂದು ಬಾಯಿಗೆ ಬಿತ್ತು ಅನ್ಕೊಂಡಿದ್ದ ಶಕುಂತಲಾಗೆ ಶಾಕ್ ಕೊಟ್ಟ ಗೌತಮ್!

Amruthadhaare Serial Update: ಲಡ್ಡು ಬಂದು ಬಾಯಿಗೆ ಬಿತ್ತು ಅನ್ಕೊಂಡಿದ್ದ ಶಕುಂತಲಾಗೆ ಶಾಕ್ ಕೊಟ್ಟ ಗೌತಮ್!

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಜೀವಕ್ಕೆ ಅಪಾಯ ಬಂದಿತ್ತು. ಇನ್ನೊಂದು ಕಡೆ ಭೂಮಿಕಾ ಗರ್ಭಿಣಿ. ಶಕುಂತಲಾ, ರಾಜೇಂದ್ರ ಭೂಪತಿಯಂತಹ ದುಷ್ಟರಿಂದ ಇವರು ಬಚಾವ್‌ ಆಗ್ತಾರಾ ಎನ್ನೋ ಪ್ರಶ್ನೆ ಇನ್ನೊಂದು ಕಡೆಯಾಗಿದೆ.

1 Min read
Padmashree Bhat
Published : Jun 06 2025, 12:32 PM IST| Updated : Jun 06 2025, 12:56 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : zee5

ಗೌತಮ್‌ ದಿವಾನ್‌ನಿಂದಲೇ ನನ್ನ ಮನೆ ಹಾಳಾಯ್ತು ಅಂತ ರಾಜೇಂದ್ರ ಭೂಪತಿ ಅಂದುಕೊಂಡಿದ್ದಾನೆ. ಹೀಗಾಗಿ ಅವನು ಗೌತಮ್‌ ವಿರುದ್ಧ ಕಿಡಿಕಾರುತ್ತಿದ್ದನು. ಗೌತಮ್‌ನನ್ನು ನಾಶ ಮಾಡಬೇಕು ಅಂತ ಈಗ ಒಳ್ಳೆಯವನು ಎನ್ನೋ ಥರ ಮುಖವಾಡ ಹಾಕಿಕೊಂಡು ಅವನೀಗ ಗೌತಮ್‌ಗೆ ಅಪಾಯ ತಂದಿದ್ದನು.

27
Image Credit : zee5

ಗೌತಮ್‌ ಈಗ ಅಪಾಯದಿಂದ ಬಚಾವ್‌ ಆಗಿದ್ದಾನೆ. ಈಗ ಅವನಿಗೆ ತನಗೇನಾದರೂ ಆಗಿದ್ರೆ ಏನು ಮಾಡೋದು ಎನ್ನುವ ಭಯ ಶುರುವಾಗಿದೆ. ಗಂಡನಿಗೆ ಯಾರೋ ಹೊಡೆದರು, ಕೊಲ್ಲೋಕೆ ಟ್ರೈ ಮಾಡಿದರು ಅಂತ ಗರ್ಭಿಣಿ ಭೂಮಿಕಾ ಚಿಂತೆಯಲ್ಲಿದ್ದಾಳೆ.

Related Articles

Related image1
Amruthadhaare Serial: ಅಂತೂ ಇಂತೂ ಭೂಮಿಕಾಗೆ ಹೊಟ್ಟೆ ಬಂತು! ಗೌತಮ್‌ ಕೇರ್‌ ನೋಡಿ ಕಳೆದುಹೋದ ಪ್ರೇಕ್ಷಕರು!
Related image2
Amruthadhaare Serial: ಪಂಕಜಾ ಬಗ್ಗೆ ಆನಂದ್‌ಗೆ ಸತ್ಯ ಗೊತ್ತಾಗೋಯ್ತು! ಇನ್ನು ಅಸಲಿ ಕಥೆ ಶುರು!
37
Image Credit : zee5

ಹೀಗಿರುವಾಗ ಗೌತಮ್‌ ತನ್ನ ಕುಟುಂಬಕ್ಕೆ ಒಳ್ಳೆಯದು ಮಾಡಬೇಕು ಎಂದು ನಿರ್ಧಾರಕ್ಕೆ ಬಂದಿದ್ದಾನೆ. ಮಲತಾಯಿ ಶಕುಂತಲಾ ಬಳಿ ಹೋಗಿ ಅವನು ವಿಲ್‌ ಬರೆಯುತ್ತೇನೆ ಎಂದು ಹೇಳಿದ್ದಾನೆ.

47
Image Credit : zee5

ಇಷ್ಟು ವರ್ಷಗಳಿಂದ ಒಳ್ಳೆಯವಳು ಎನ್ನೋ ಥರ ನಾಟಕ ಮಾಡುತ್ತಿದ್ದ ಶಕುಂತಲಾಗೆ ಆಸ್ತಿಯದ್ದೇ ಚಿಂತೆ ಆಗಿತ್ತು. ಇಡೀ ಆಸ್ತಿ ನನ್ನ ಮಕ್ಕಳಿಗೆ ಸಿಗಬೇಕು ಅಂತ ಅವಳು ಗೌತಮ್‌ಗೆ ಮದುವೆ ಆಗೋದನ್ನು ತಡೆದಿದ್ದಳು. ಅಷ್ಟೇ ಅಲ್ಲದೆ ಈಗ ಭೂಮಿಕಾಗೆ ಮಗು ಆಗೋದು ಅವಳಿಗೆ ಇಷ್ಟ ಇರಲಿಲ್ಲ.

57
Image Credit : zee5

ವಿಲ್‌ ಬರೆಯುತ್ತೇನೆ ಅಂತ ಹೇಳಿದ್ದು ಶಕುಂತಲಾಗೆ ಲಡ್ಡು ಬಂದು ಬಾಯಿಗೆ ಬಿತ್ತು ಎನ್ನೋ ಥರ ಆಗಿತ್ತು. ಆದರೆ ಅವಳಿಗೆ ಈಗ ಗೌತಮ್‌ ಶಾಕ್‌ ಕೊಟ್ಟಿದ್ದಾನೆ. ಹೌದು, ಗೌತಮ್‌ ತನ್ನ ಎಲ್ಲ ಆಸ್ತಿಯನ್ನು ಹೆಂಡ್ತಿ ಭೂಮಿಕಾಗೆ, ಮಗುಗೆ ಬರೆಯುವ ಯೋಚನೆ ಮಾಡಿದ್ದಾನೆ. ಇದನ್ನು ಎಲ್ಲರ ಮುಂದೆ ಹೇಳಿದಾಗ ಎಲ್ಲರೂ ಶಾಕ್‌ ಆಗಿದ್ದಾರೆ.

67
Image Credit : zee5

ಪತ್ನಿ ಭೂಮಿಕಾ ಒಳ್ಳೆಯವಳು, ಇಡೀ ಕುಟುಂಬವನ್ನು ನಡೆಸಿಕೊಂಡು ಹೋಗ್ತಾಳೆ ಅಂತ ಅವನು ಎಲ್ಲ ಆಸ್ತಿಯನ್ನು ಪತ್ನಿಗೆ ಬರೆಯಲು ನಿರ್ಧಾರ ಮಾಡಿದ್ದಾನೆ. ಇದು ನಿಜಕ್ಕೂ ಕಾರ್ಯರೂಪಕ್ಕೆ ಬರತ್ತಾ? ಇಲ್ಲವಾ ಎಂದು ಕಾದು ನೋಡಬೇಕಿದೆ.

77
Image Credit : zee5

ಅಂದಹಾಗೆ ಮುಂದೆ ಏನಾಗುವುದು ಎಂಬ ಕುತೂಹಲ ಜಾಸ್ತಿ ಆಗಿದೆ. ಗೌತಮ್‌ ಪಾತ್ರದಲ್ಲಿ ರಾಜೇಶ್‌ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್‌, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು ಅವರು ನಟಿಸುತ್ತಿದ್ದಾರೆ. 

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved